ಯಶ್​ ರಾಮಾಯಣ ಟೀಸರ್ ಸಾವಿರ ಕೋಟಿ ಕಲೆಕ್ಷನ್​ ಕಂಡು ಷೇರು ಮಾರುಕಟ್ಟೆ ಶೇಕ್​!

ಯಶ್​ ರಾಮಾಯಣ ಟೀಸರ್ ಸಾವಿರ ಕೋಟಿ ಕಲೆಕ್ಷನ್​ ಕಂಡು ಷೇರು ಮಾರುಕಟ್ಟೆ ಶೇಕ್​!

Published : Jul 10, 2025, 05:27 PM IST

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಯಣ' ಚಿತ್ರದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಶೇರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ. ಚಿತ್ರ ನಿರ್ಮಾಣ ಸಂಸ್ಥೆ ಪ್ರೈಮ್ ಫೋಕಸ್‌ಗೆ ಸಾವಿರ ಕೋಟಿ ಲಾಭವಾಗಿದ್ದು, ಷೇರು ದರ ಶೇ.30 ರಷ್ಟು ಏರಿಕೆಯಾಗಿದೆ. ಯಶ್​ ಖದರ್​ ಶೇರು ಮಾರುಕಟ್ಟೆಯಲ್ಲೂ ಸಿಡಿಲಬ್ಬರ ಎಬ್ಬಿಸಿದೆ.

ರಾಮಾಯಣ.. ರಾಕಿಂಗ್ ಸ್ಟಾರ್​ ಯಶ್​​​ ರಾವಣನಾಗಿ ನಟಿಸುತ್ತಿರೋ ಸಿನಿಮಾ.. ಯಶ್​​ ತನ್ನ ಮಾನ್​ಸ್ಟಾರ್​ ಮೈಂಡ್​ ಕ್ರಿಯೇಷನ್ಸ್​ ಮೂಲಕ ಬಂಡವಾಳ ಹೂಡಿರೋ ಚಿತ್ರ. ಈ ರಾಮಾಯಣದ ಫಸ್ಟ್ ಗ್ಲಿಮ್ಸ್ ಬಂದಿದೆ. ಇದೊಂದು ಟೀಸರ್​ ಶೇರು ಮಾರುಕಟ್ಟೆಯಲ್ಲಿ ಹೊಸ ರಾಮಾಯಣವನ್ನೇ ಸೃಷ್ಟಿದಿದೆ.

ರಾಮಾಯಣ ಟೀಸರ್ ಬಂದಿದ್ದೇ ತಡ ಶೇರು ಮಾರುಕಟ್ಟೆ ಶೇಕ್ ಆಗಿದೆ. ಒಂದೇ ಒಂದು ಟೀಸರ್​ ಸಾವಿರ ಕೋಟಿ ಕಲೆಕ್ಷನ್ ಮಾಡೋ ಹಾಗೆ ಮಾಡಿದೆ. ಯಶ್​ ಹೊಸ ರೆಕಾರ್ಡ್ ಬರೆಯೋ ಹಾಗಾಗಿದೆ. 1500 ಕೋಟಿ ಬಂಡವಾಳದಲ್ಲಿ ಎರಡು ಪಾರ್ಟ್​​ನಲ್ಲಿ ಬರ್ತಾ ಇರೋ ಈ ಸಿನಿಮಾದಲ್ಲಿ ಯಶ್​ ರಾವಣನಾಗಿ ನಸಿಸ್ತಾ ಇದ್ದಾರೆ. ಇದೀಗ ರಾಮಾಯಣ ಟೀಸರ್​​​​ನಿಂದ ಸಿನಿಮಾ ನಿರ್ಮಾಣ ಮಾಡುತ್ತಿರೋ ಪ್ರೈಂ ಫೋಕಸ್ ಸಂಸ್ಥೆಗೆ 1000 ಕೋಟಿ ಬಂದಂತಾಗಿದೆ.

ನಿಮಿತ್ ಮಲ್ಹೋತ್ರಾ ತಮ್ಮ ಪ್ರೈಂ ಫೋಕಸ್ ಸಂಸ್ಥೆ ಬ್ಯಾನರ್ ಅಡಿಯಲ್ಲಿ 'ರಾಮಾಯಣ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇವರ ಜೊತೆ ಯಶ್ ಕೂಡ ಜೊತೆಯಾಗಿದ್ದಾರೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಪಟ್ಟಿ ಮಾಡಲಾದ ಪ್ರೈಮ್ ಫೋಕಸ್ ಲಿಮಿಟೆಡ್ ಕಳೆದೊಂದು ವಾರದಿಂದ ಸುದ್ದಿಯಲ್ಲಿದೆ. 'ರಾಮಾಯಣ' ಟೀಸರ್ ರಿಲೀಸ್ ಬೆನ್ನಲ್ಲೇ ಈ ಕಂಪನಿ ಮೇಲೆ ಹೂಡಿಕೆ ಹೆಚ್ಚಾಗಿದೆ. ಇದರಿಂದ ಪ್ರೈಮ್ ಫೋಕಸ್ ಷೇರು ದರ 30% ಏರಿಕೆಯಾಗಿದ್ದು, ಸಾವಿರ ಕೋಟಿ ಗಳಿಕೆ ಕಂಡಿದೆ. ಇದು ಯಶ್​ರ ರಾಮಾಯಣ ಸಿನಿಮಾ ಮೇಲಿರೋ ಕ್ರೇಜ್​ಗೆ ದೊಡ್ಡ ಸಾಕ್ಷಿ

ಎರಡು ಪಾರ್ಟ್​​ನಲ್ಲಿ ಬರುತ್ತಿರೋ ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಬಜೆಟ್ 1500 ಕೋಟಿ ಎನ್ನಲಾಗ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಈ ಟೀಸರ್ ನೋಡಿದ ಯಶ್​ ಫ್ಯಾನ್ಸ್​ ಹಿಂದಿಯಲ್ಲಿರೋ ಕಾನ್​, ಕಪೂರ್​ ಕಾನ್​​​​ದಾನ್​​ ಎಲ್ಲರೂ ಗಂಟು ಮೂಟೆ ಕಟ್ಟಿ ಇನ್ನುಂದೆ ಬಾಲಿವುಡ್​ ನಮ್ಮ ರಾಕಿದು ಅಂತ ವಿಜೃಂಭಿಸಿದ್ರು. ಈಗ ರಾಮಾಯಣ ಟೀಸರ್​ ನಿಂದ ಪ್ರೈಮ್ ಫೋಕಸ್ ಷೇರುಗಳು ಬಿಸ್ಕೆಟ್​ನಂತೆ ಬಿಕರಿ ಆಗುತ್ತಿವೆ. ಸ್ವತಃ ನಟ ರಣ್‌ಬೀರ್ ಕಪೂರ್ ಈ ಪ್ರೈಂ ಫೋಕಸ್ ಕಂಪನಿ ಮೇಲೆ 20 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ಯಶ್​ ಖದರ್​ ಶೇರು ಮಾರುಕಟ್ಟೆಯಲ್ಲೂ ಸಿಡಿಲಬ್ಬರ ಎಬ್ಬಿಸಿದೆ.

 

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more