Su From So Movie Release: ವಾರಾಂತ್ಯದಲ್ಲಿ ಬಿಡುಗಡೆಯಾಗಲಿದೆ ಕರಾವಳಿ ಕಾಮಿಡಿ ಥ್ರಿಲ್ಲರ್

Su From So Movie Release: ವಾರಾಂತ್ಯದಲ್ಲಿ ಬಿಡುಗಡೆಯಾಗಲಿದೆ ಕರಾವಳಿ ಕಾಮಿಡಿ ಥ್ರಿಲ್ಲರ್

Published : Jul 24, 2025, 10:47 AM ISTUpdated : Jul 29, 2025, 03:15 PM IST

ಕರಾವಳಿ ಭಾಷೆಯ ಕಾಮಿಡಿ ಥ್ರಿಲ್ಲರ್ 'ಸು ಫ್ರಂ ಸೋ' ಚಿತ್ರವು ವಾರಾಂತ್ಯದಲ್ಲಿ ತೆರೆಗೆ ಬರಲಿದೆ. ರಾಜ್ ಬಿ ಶೆಟ್ಟಿ ಒಡೆತನದ ಲೈಟರ್ ಬುದ್ಧ ಫಿಲಂಸ್ ನಿರ್ಮಾಣದ ಈ ಚಿತ್ರವು ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. 


ಸು ಫ್ರಂ ಸೋ.. ತನ್ನ ವಿಭಿನ್ನ ಟೈಟಲ್​ನಿಂದಾನೆ ಎಲ್ಲರ ಗಮನ ಸೆಳೆದಿರೋ ಈ ಸಿನಿಮಾ ವಾರಾಂತ್ಯಕ್ಕೆ ತೆರೆಗೆ ಬರಲಿದೆ. ಕರಾವಳಿ ಫ್ಲೆವರ್​ನ ಈ ಕಾಮಿಡಿ ಥ್ರಿಲ್ಲರ್ ಮೂವಿ ಕನ್ನಡದ ಜೊತೆಗೆ ಮಲಯಾಳಂನಲ್ಲೂ ಏಕಕಾಲದಲ್ಲಿ ರಿಲೀಸ್ ಆಗ್ತಾ ಇದೆ.

ಸು ಫ್ರಂ ಸೋ.. ಈ ಟೈಟಲ್​ ಕೇಳಿನೇ ಏನಿದು ವಿಭಿನ್ನವಾಗಿದೆಯಲ್ಲಾ ಅಂತ ಜನ ಕುತೂಹಲದಿಂದ ನೋಡಿದ್ರು. ಸು ಫ್ರಂ ಅಂದ್ರೆ ಸುಲೋಚನ ಫ್ರಂ ಸೋಮೇಶ್ವರ ಅನ್ನೋ ಗುಟ್ಟು ಬಿಟ್ಟುಕೊಟ್ಟಿದ್ದ ತಂಡ, ಇದೊಂದು ಕರಾವಳಿ ಫ್ಲೆವರ್​ ನ ಕಾಮಿಡಿ ಥ್ರಿಲ್ಲರ್ ಕಹಾನಿ ಅನ್ನೊದನ್ನ ಟ್ರೈಲರ್ ಮೂಲಕ ರಿವೀಲ್ ಮಾಡಿತ್ತು.

ರಾಜ್ ಬಿ ಶೆಟ್ಟಿ ಒಡೆತನದ ಲೈಟರ್ ಬುದ್ಧ ಫಿಲಂಸ್ ನಿರ್ಮಾಣ ಮಾಡಿರೋ ಸಿನಿಮಾ ಇದು. ಜೆ.ಪಿ ತುಮ್ಮಿನಾಡು,  ಶನಿಲ್ಗುರು, ದೀಪಕ್ರೈ ಪಣಾಜೆ, ಪ್ರಕಾಶ್ ತುಮ್ಮಿನಾಡು , ಸಂಧ್ಯಾ ಅರೆಕೆರೆ  ತಾರಾಗಣದಲ್ಲಿ ಇದ್ದಾರೆ. ರಾಜ್ಬಿ. ಶೆಟ್ಟಿ  ಜತೆ  ಗರುಡ ಗಮನ ವೃಷಭ ವಾಹನ ಕಥಾ ಸಂಗಮ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಜೆ.ಪಿ ತುಮ್ಮಿನಾಡು ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.

ಸುಮೇದ್ ಸಂಗೀತ ನಿರ್ದೇಶನದಲ್ಲಿ ಬಂದ ಥ್ಯಾಂಕ್ಸ್ ಅಂಥೆಮ್ ಹಾಡು ಮತ್ತು ಚಿತ್ರದ ಚಿನಕುರಳಿ ಟ್ರೈಲರ್​ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿದೆ. ಮಲಯಾಳಂನ  ಖ್ಯಾತ ನಿರ್ಮಾಣ ಸಂಸ್ಥೆಯಾದ  ದುಲ್ಕರ್ ಸಲ್ಮಾನ್ ಒಡೆತನದ wayferar ಫಿಲಂಸ್ ಮಲಯಾಳಂ  ವರ್ಷನ್ ನ ಕೇರಳದಲ್ಲಿ ಬಿಡುಗಡೆ ಮಾಡಲಿದೆ.

ಈ ವಾರಾಂತ್ಯಕ್ಕೆ ಸು ಫ್ರಂ ಸೋ ಥಿಯೇಟರ್ ಅಂಗಳಕ್ಕೆ ಬರಲಿದೆ. ನಕ್ಕು ನಗಿಸೋದ್ರ ಜೊತೆಗೆ ಒಂದು ಥ್ರಿಲ್ಲಿಂಗ್ ಅನುಭವವನ್ನೂ ಕೊಡೋ ಉತ್ಸಾಹದಲ್ಲಿದೆ ಈ ಟೀಂ. ಸೋಮೇಶ್ವರದ ಸುಲೋಚನಳ ಕಥೆ ನೋಡಲಿಕ್ಕೆ ನೀವು ಕೂಡ ಸಜ್ಜಾಗಿ.

04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
Read more