ಮೈಸೂರಿನ ಫಾರ್ಮ್​ಹೌಸ್​ನಲ್ಲಿ ಸುಗ್ಗಿ ಸಂಭ್ರಮ:  ಕಿಚ್ಚು ಹಾಯಿಸಿ ಹೊಸದಾರಿ ಹಿಡಿಲು ದರ್ಶನ್ ಪ್ಲಾನ್

ಮೈಸೂರಿನ ಫಾರ್ಮ್​ಹೌಸ್​ನಲ್ಲಿ ಸುಗ್ಗಿ ಸಂಭ್ರಮ: ಕಿಚ್ಚು ಹಾಯಿಸಿ ಹೊಸದಾರಿ ಹಿಡಿಲು ದರ್ಶನ್ ಪ್ಲಾನ್

Published : Jan 14, 2025, 11:26 AM IST

ಪ್ರತಿವರ್ಷ ದರ್ಶನ್ ಮೈಸೂರಿನ ಫಾರ್ಮ್​ಹೌಸ್​​ನಲ್ಲಿ ಸಂಕ್ರಾಂತಿ ಸೆಲೆಬ್ರೇಷನ್ ಜೋರಾಗಿರುತ್ತೆ. ಈ ಸಾರಿ ಕೂಡ ದಾಸನಿಗೆ ಮೈಸೂರಿಗೆ ಹೋಗೋದಕ್ಕೆ ಕೋರ್ಟ್ ಅನುಮತಿ ಕೊಟ್ಟಿದ್ದು, ಫಾರ್ಮ್​ ಹೌಸ್​ನಲ್ಲಿ ಸುಗ್ಗಿ ಮಾಡೋಕೆ ದರ್ಶನ್ ಪಡೆ ಸಜ್ಜಾಗಿದೆ.

ಪ್ರತಿವರ್ಷ ದರ್ಶನ್ ಮೈಸೂರಿನ ಫಾರ್ಮ್​ಹೌಸ್​​ನಲ್ಲಿ ಸಂಕ್ರಾಂತಿ ಸೆಲೆಬ್ರೇಷನ್ ಜೋರಾಗಿರುತ್ತೆ. ಈ ಸಾರಿ ಕೂಡ ದಾಸನಿಗೆ ಮೈಸೂರಿಗೆ ಹೋಗೋದಕ್ಕೆ ಕೋರ್ಟ್ ಅನುಮತಿ ಕೊಟ್ಟಿದ್ದು, ಫಾರ್ಮ್​ ಹೌಸ್​ನಲ್ಲಿ ಸುಗ್ಗಿ ಮಾಡೋಕೆ ದರ್ಶನ್ ಪಡೆ ಸಜ್ಜಾಗಿದೆ. ಸಂಕ್ರಾಂತಿಗೆ ಕಿಚ್ಚು ಹಾಯಿಸಿ ಇಲ್ಲಿಂದ ಹೊಸದಾರಿ ಹಿಡಿಯೋಕೆ ದಾಸ ಸಜ್ಜಾಗಿದ್ದಾನೆ.  ಯೆಸ್ ಈ ಸಾರಿ ದರ್ಶನ್ ಫಾರ್ಮ್ ಹೌಸ್​ನಲ್ಲಿ ಭರ್ಜರಿ ಸಂಕ್ರಾಂತಿ ಸೆಲೆಬ್ರೇಷನ್ ನಡೆಯಲಿದೆ. ಜೈಲಿಂದ ಹೊರಬಂದ ಮೇಲೆ ದರ್ಶನ್​ಗೆ ಮೊದಲ ಹಬ್ಬ ಇದು. ಹೊಸ ವರ್ಷದ ಮೊದಲ ಹಬ್ಬವನ್ನ ಭರ್ಜರಿಯಾಗಿ ಸೆಲೆಬ್ರೇಟ್ ಮಾಡಬೇಕು ಅಂತ ದಾಸನ ಪಡೆ ಸಜ್ಜಾಗಿದೆ. ಅಸಲಿಗೆ ಪ್ರತಿವರ್ಷ ದರ್ಶನ್ ಫಾರ್ಮ್ ಹೌಸ್ ನಲ್ಲಿ ಸಂಕ್ರಾಂತಿ ಆಚರಣೆ ಜೋರಾಗಿರುತ್ತೆ. ಇಡೀ ಫಾರ್ಮ್​ ಹೌಸ್​ನ ಸಿಂಗರಿಸಿ, ಪ್ರಾಣಿಗಳಿಗೆ ಕಿಚ್ಚು ಹಾಯಿಸಲಾಗುತ್ತೆ. ಕಳೆದ ವರ್ಷವಂತೂ ಕಾಟೇರ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದ ದರ್ಶನ್ ಭರ್ಜರಿ ಸೆಲೆಬ್ರೇಷನ್ ಮಾಡಿದ್ರು.  ತಮ್ಮ ನೆಚ್ಚಿನ ಕುದುರೆಯನ್ನ ಹಿಡಿದು ಖುದ್ದು ಕಿಚ್ಚು ಹಾಯಿಸಿದ್ರು. ಫಾರ್ಮ್ ಹೌಸ್​ನಲ್ಲಿರೋ ಪ್ರಾಣಿಗಳನ್ನೆಲ್ಲಾ ಸಿಂಗರಿಸಿದ್ರು. ಇಡೀ ಫಾರ್ಮ್ ಹೌಸ್​​ನಲ್ಲಿ ಸುಗ್ಗಿ ಸಂಭ್ರಮ ಮನೆ ಮಾಡಿತ್ತು. ಈ ಸಾರಿ ಕೂಡ ಇದೇ ರೀತಿ ಜೋರಾಗಿ ಸೆಲೆಬ್ರೇಷನ್ ಮಾಡೋಣ ಅಂತ ಪ್ಲಾನ್ ಮಾಡಲಾಗಿದೆ. ಅದಕ್ಕಾಗಿ ಜೋರು ತಯಾರಿ ನಡೀತಾ ಇದೆ.

ಅಸಲಿಗೆ ದರ್ಶನ್​ಗೆ ಕೋರ್ಟ್ ಬೇಲ್ ಕೊಟ್ಟಿದ್ರೂ ನಾನಾ ಷರತ್ತುಗಳನ್ನ ವಿಧಿಸಿದೆ. ಅದ್ರಲ್ಲೂ ಸಿಟಿ ಸೆಷೆನ್ಸ್ ಕೋರ್ಟ್ ಲಿಮಿಟ್ಸ್​​ನಿಂದ ಆಚೆ ಹೋಗೋದಕ್ಕೆ ಅನುಮತಿ ಪಡೆಯಬೇಕಾಗುತ್ತೆ. ಕಳೆದ ಶುಕ್ರವಾರ ಕೋರ್ಟ್ ಎದುರು ಹಾಜರಾಗಿ 5 ದಿನಗಳ ಕಾಲ ಮೈಸೂರಿಗೆ ಹೋಗೋದಕ್ಕೆ ಅನುಮತಿ ಪಡೆದುಕೊಂಡಿರೋ ದರ್ಶನ್, ನಿರಾತಂಕವಾಗಿ ಹಬ್ಬ ಮಾಡ್ಲಿಕ್ಕೆ ಸಜ್ಜಾಗಿದ್ದಾರೆ. ಹೌದು ಹಬ್ಬ ಸೆಲೆಬ್ರೇಟ್ ಮಾಡಿ 15ನೇ ತಾರೀಖು ಹಾಸ್ಪಿಟಲ್​ಗೆ ಹೋಗಿ ಮತ್ತೊಮ್ಮೆ ಸ್ಕ್ಯಾನಿಂಗ್ ಮಾಡಿಸಲಿರೋ ದರ್ಶನ್, ಸರ್ಜರಿ ಬಗ್ಗೆ ಅಂತಿಮ ತೀರ್ಮಾನ ಮಾಡಲಿದ್ದಾರೆ. ವೈದ್ಯರು ಸರ್ಜರಿ ಮಾಡಿಸಲೇಬೇಕು ಅಂದರೆ ಸದ್ಯದಲ್ಲೇ ಸರ್ಜರಿ ಮಾಡಿಸೋಕೆ ಪ್ಲಾನ್ ಮಾಡಿದ್ದಾರೆ. ಇನ್ನೂ ಸರ್ಜರಿ ಮಾಡಿಸಿದ್ರೆ ಎರಡು ತಿಂಗಳು ವಿಶ್ರಾಂತಿ ಪಡೆಯಬೇಕಾಗುತ್ತೆ. ಸೋ ಮಾರ್ಚ್​ನಿಂದ ತಾನು ಶೂಟಿಂಗ್​ಗೆ​ ಬರ್ತೀನಿ ಅಂತ ಡೆವಿಲ್ ಟೀಂಗೆ ದರ್ಶನ್ ಕಡೆಯಿಂದ ಸೂಚನೆ ಹೋಗಿದೆ. ಸೋ ಡೆವಿಲ್ ತಂಡ ಕೂಡ ತಯಾರಿ ಮಾಡಿಕೊಳ್ತಾ ಇದೆ.

ಒಟ್ಟಾರೆ ಆಗಿದ್ದು ಆಗಿ ಹೋಯಿತು, ಸಂಕ್ರಾಂತಿಯಿಂದ ಹೊಸ ಬದುಕು ಆರಂಭಿಸೋಣ ಅಂತ ದರ್ಶನ್ ಸಿದ್ದವಾದಂತಿದೆ. ಆದ್ರೆ ಕಾನೂನಿನ ಕುಣಿಕೆಯಿಂದ ಅಷ್ಟು ಸುಲಭವಾಗಿ ಬಚಾವ್ ಆಗೋದಕ್ಕೆ ಸಾಧ್ಯನಾ..? ಕಿಚ್ಚ ಹಾಯಿಸಿ ಎಳ್ಳು ಬೆಲ್ಲ ತಿಂದ ಮಾತ್ರ ಮಾಡಿದ ಪಾಪ ಮುಚ್ಚಿ ಹೋಗುತ್ತಾ..

12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?