ಸೂಪರ್​ ಜೋಡಿಯ ಫ್ಯೂಚರ್ ಹೇಗಿರುತ್ತೆ ಸ್ವಾಮಿ..? ವಿಜಯ್-ರಶ್ಮಿಕಾರ ಭವಿಷ್ಯ ನುಡಿದ ವೇಣುಸ್ವಾಮಿ!

ಸೂಪರ್​ ಜೋಡಿಯ ಫ್ಯೂಚರ್ ಹೇಗಿರುತ್ತೆ ಸ್ವಾಮಿ..? ವಿಜಯ್-ರಶ್ಮಿಕಾರ ಭವಿಷ್ಯ ನುಡಿದ ವೇಣುಸ್ವಾಮಿ!

Published : Oct 09, 2025, 04:25 PM IST

ರಶ್ಮಿಕಾ ಅಂಡ್ ವಿಜಯ್ ದೇವರಕೊಂಡ ಎಂಗೇಜ್​ಮೆಂಟ್ ವಿಷ್ಯ ಈಗ ಸಿನಿಲೋಕದಲ್ಲಿ ಹಾಟ್ ಟಾಪಿಕ್. ಆದ್ರೆ ಎಂಗೇಜ್​ಮೆಂಟ್ ಬೆನ್ನಲ್ಲೇ ವಿಜಯ್ ದೇವರಕೊಂಡ ಕಾರು ಅಪಘಾತ ಆಗಿದ್ದನ್ನ ನೋಡಿ ಫ್ಯಾನ್ಸ್ ಆತಂಕಿತರಾಗಿದ್ರು.

ರಶ್ಮಿಕಾ ಅಂಡ್ ವಿಜಯ್ ದೇವರಕೊಂಡ ಎಂಗೇಜ್​ಮೆಂಟ್ ವಿಷ್ಯ ಈಗ ಸಿನಿಲೋಕದಲ್ಲಿ ಹಾಟ್ ಟಾಪಿಕ್. ಆದ್ರೆ ಎಂಗೇಜ್​ಮೆಂಟ್ ಬೆನ್ನಲ್ಲೇ ವಿಜಯ್ ದೇವರಕೊಂಡ ಕಾರು ಅಪಘಾತ ಆಗಿದ್ದನ್ನ ನೋಡಿ ಫ್ಯಾನ್ಸ್ ಆತಂಕಿತರಾಗಿದ್ರು. ಈ ನಡುವೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ ಈ ಜೋಡಿ ಬಗ್ಗೆ  ಭವಿಷ್ಯ ನುಡಿದಿದ್ದಾರೆ. ಏನುದು ಜ್ಯೋತಿಷಿ ಹೇಳಿದ ಭವಿಷ್ಯ ಈ ಸ್ಟೋರಿ ನೋಡಿ. ಯೆಸ್ ವಿಜಯ್ ದೇವರಕೊಂಡ ಅಂಡ್ ರಶ್ಮಿಕಾ ಕಳೆದ 7 ವರ್ಷಗಳಿಂದಲೂ ಸಿನಿಲೋಕದಲ್ಲಿ ಲವ್ ಬರ್ಡ್ಸ್ ಅನ್ನಿಸಿಕೊಂಡಿದ್ರು. ಇಷ್ಟು ದಿನ ಕದ್ದು ಮುಚ್ಚಿ ಡೇಟಿಂಗ್ ಮಾಡ್ತಾ ಇದ್ದ ಈ ಜೋಡಿ ಕಳೆದ ವಾರ ಕುಟುಂಬದಸ್ಥರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಲವ್ ಗಾಸಿಪ್ ಶುರುವಾಗಿ 7 ವರ್ಷಗಳೇ ಆದವು.

ಗೀತಗೋವಿಂದಂ ಸೆಟ್​ನಲ್ಲಿ ಮೀಟ್ ಆದ ಈ ಜೋಡಿ ಮುಂದೇ ಡೇಟ್ ಮಾಡೋದಕ್ಕೆ ಶುರುಮಾಡಿದ್ರು. ಇದೀಗ ಇವರ ನಂಟಿಗೆ ಅಧಿಕೃತ ಮುದ್ರೆ ಬಿದ್ದಿದೆ. ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರೋ ಜೋಡಿ ಫೆಬ್ರುವರಿಯಲ್ಲಿ ಮದುವೆಯಾಗಲಿದೆ. ಯೆಸ್ ತೆಲುಗು ಸಿನಿರಂಗದಲ್ಲಿ ವೇಣುಸ್ವಾಮಿ ಶ್ಯಾನೇ ಫೇಮಸ್. ಅಸಲಿಗೆ ಈತ ಮೊದಲು ಚಾನೆಲ್​ಗಳಲ್ಲಿ ಭವಿಷ್ಯ ಹೇಳ್ತಾ ಇದ್ದ. ಈತನ ಭವಿಷ್ಯವನ್ನ ಯಾರೂ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದ್ರೆ ಟಾಲಿವುಡ್​ನ ತಾರಾಜೋಡಿ ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ಆಗುತ್ತೆ ಅಂತ ಈತ ಭವಿಷ್ಯ ನುಡಿದಿದ್ದ. ಟಾಲಿವುಡ್​​ನ ಈ ಲವ್ಲಿ ಕಪಲ್ ಬೇರೆ ಯಾಗ್ತಾರೆ ಅಂತ ಯಾರೂ ನಂಬೋದಕ್ಕೆ ರೆಡಿ ಇರಲಿಲ್ಲ. ಪ್ರೀತಿಸಿ ಮದುವೆ ಆದ ಈ ಜೋಡಿ ಅತ್ಯಂತ ಅನ್ಯೋನ್ಯವಾಗಿ ಇತ್ತು. ಆದ್ರೆ ಅಚ್ಚರಿ ಅಂದ್ರೆ 2021ರಲ್ಲಿ ಈ ಜೋಡಿ ಡಿವೋರ್ಸ್​ಗೆ ಅಪ್ಲೈ ಮಾಡ್ತು.

ಚೈತನ್ಯ-ಸಮಂತಾ ವಿಚಾರದಲ್ಲಿ ವೇಣುಸ್ವಾಮಿ ಭವಿಷ್ಯ ನಿಜವಾದದನ್ನ ನೋಡಿ ಜನ ಈತನನ್ನ  ನಂಬೋದಕ್ಕೆ ಶುರುಮಾಡಿದ್ರು. ಅದೇನು ಕಾಕತಾಳೀಯವೋ ಏನೋ ಈತ ನುಡಿದ ಕೆಲ ಭವಿಷ್ಯಗಳು ನಿಜವಾದವು. ಸೆಲೆಬ್ರಿಟಿಗಳು ಈತನನ್ನ ನಂಬೋದಕ್ಕೆ ಶುರುಮಾಡಿದ್ರು. ಹೌದು ರಶ್ಮಿಕಾ ಟಾಲಿವುಡ್​ಗೆ ಎಂಟ್ರಿ ಕೊಟ್ಟ ಸಮಯದಲ್ಲೇ ಇದೇ ವೇಣುಸ್ವಾಮಿ ಬಳಿ  ಹೋಗಿ ‘ರಾಜಶ್ಯಾಮಲ' ಪೂಜೆ ಮಾಡಿಸಿದ್ರು. ಸೋಷಿಯಲ್ ಮಿಡಿಯಾದಲ್ಲಿ ಆ ಪೂಜೆಯ ವಿಡಿಯೋಸ್ ವೈರಲ್ ಆಗಿದ್ವು. ಟಾಲಿವುಡ್​ನಲ್ಲಿ ಸೂಪರ್ ಸಕ್ಸಸ್ ಕಂಡ ರಶ್ಮಿಕಾ ಮುಂದೆ ಬಾಲಿವುಡ್​ನಲ್ಲೂ ಕ್ವೀನ್ ಆದ್ರು. ನ್ಯಾಷನಲ್ ಕ್ರಶ್ ಪಟ್ಟ ಪಡೆದ್ರು. ರಶ್ಮಿಕಾಳ ಈ ಯಶಸ್ಸಿಗೆ ತಾನು ಪೂಜೆ ಮಾಡಿಸಿದ್ದೇ ಕಾರಣ ಅಂತ ವೇಣುಸ್ವಾಮಿ ಎಲ್ಲೆಡೆ ಪ್ರಚಾರ ಗಿಟ್ಟಿಸಿದ್ದ.

ಹೌದು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಬಗ್ಗೆ ಗಾಸಿಪ್ ಹರಿದಾಡ್ತಾ ಇದ್ದ ಟೈಂನಲ್ಲಿ ಆ ಬಗ್ಗೆಯೂ ವೇಣುಸ್ವಾಮಿ ಭವಿಷ್ಯ ನುಡಿದಿದ್ದ. ಇವರಿಬ್ಬರೂ ಎಂಗೇಜ್​ಮೆಂಟ್ ಮಾಡಿಕೊಳ್ತಾರೆ ಅಂದಿದ್ದ. ಇದೀಗ ವಿಜಯ್-ರಶ್ಮಿಕಾ ಎಂಗೇಜ್ ಆಗಿದ್ದಾರೆ.  ಅವರು ಒಂದಾಗ್ತಾರೆ ಅಂತ ಹೇಳಿರೋ ಈ ಸ್ವಾಮಿ, ಅವರಿಗೆ ದೂರವಾಗೋ ಯೋಗ ಇದೆ.. ಕಂಟಕ ಇದೆ ಅಂತಲೂ ಹೇಳಿದ್ದಾನೆ. ಅದು ಸರಿಹೋಗಬೇಕು ಅಂದರೆ ತನ್ನ ಬಳಿ ಬಂದು ಪೂಜೆ ಮಾಡಿಸಬೇಕು ಅಂತಾನೂ ಪ್ರಮೋಷನ್ ಶುರುಮಾಡಿದ್ದಾನೆ. ಹಿಂದೊಮ್ಮೆ ಇವನ ಬಳಿ ಹೋಗಿ ಪೂಜೆ ಮಾಡಿಸಿದ್ದ ರಶ್ಮಿಕಾ ಮತ್ತೆ ಈತನ ಮೊರೆ ಹೋಗ್ತಾರೆ. ಅಥವಾ ಇವನೊಬ್ಬ ನಕಲಿ ಜ್ಯೋತಿಷಿ ಅಂತ ದೂರವಿಡ್ತಾರಾ ಗೊತ್ತಿಲ್ಲ... ಒಟ್ನಲ್ಲಿ ಈ ಸ್ಟಾರ್ ಜೋಡಿ ಬಗ್ಗೆ ಈ ಸೆಲೆಬ್ರಿಟಿ ಜ್ಯೋತಿಷಿ ಚಿತ್ರವಿಚಿತ್ರ ಭವಿಷ್ಯ ಹೇಳಿ ಫ್ಯಾನ್ಸ್​ಗೆ ಟೆನ್ಶನ್ ಕೊಡ್ತಾ ಇದ್ದಾನೆ.

05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
Read more