ಸೊರಗಿದ್ದ ಸ್ಯಾಂಡಲ್​ವುಡ್​ಗೆ ಸಿರಿತನ ತಂದ ಎಕ್ಕ: ಬ್ಯಾಂಗಲ್ ಬಂಗಾರಿಗೆ ದಿಲ್​​​ಖುಷ್ ಎಂದ ಸಿನಿ ಭಕ್ತ

ಸೊರಗಿದ್ದ ಸ್ಯಾಂಡಲ್​ವುಡ್​ಗೆ ಸಿರಿತನ ತಂದ ಎಕ್ಕ: ಬ್ಯಾಂಗಲ್ ಬಂಗಾರಿಗೆ ದಿಲ್​​​ಖುಷ್ ಎಂದ ಸಿನಿ ಭಕ್ತ

Published : Jul 19, 2025, 11:20 AM IST

ಸ್ಯಾಂಡಲ್​ವುಡ್​ ಬೆಳ್ಳಿತೆರೆ ಮೇಲೆ ಬ್ಯಾಂಗಲ್ ಬಂಗಾರಿಯ ಸೌಂಡು ಸಖತ್ ಆಗಿದೆ. ದೊಡ್ಮನೆ ಯುವರಾಜ್​ ಕುಮಾರ ಎಕ್ಕ ಮಾರ್ ಮಾರ್​​ ಅಂತ ಮಸ್ತ್​​ ಆಗಿ ಎಂಟರ್​​​ಟೈನ್ ಮಾಡುತ್ತಿದ್ದಾರೆ.

ಸ್ಯಾಂಡಲ್​ವುಡ್​ ಬೆಳ್ಳಿತೆರೆ ಮೇಲೆ ಬ್ಯಾಂಗಲ್ ಬಂಗಾರಿಯ ಸೌಂಡು ಸಖತ್ ಆಗಿದೆ. ದೊಡ್ಮನೆ ಯುವರಾಜ್​ ಕುಮಾರ ಎಕ್ಕ ಮಾರ್ ಮಾರ್​​ ಅಂತ ಮಸ್ತ್​​ ಆಗಿ ಎಂಟರ್​​​ಟೈನ್ ಮಾಡುತ್ತಿದ್ದಾರೆ. ಅಣ್ಣಾವ್ರ ಮೊಮ್ಮಗನ ಎಕ್ಕ ಸಿನಿಮಾ ನೋಡಿ ಪ್ರೇಕ್ಷಕ ಬಗೆ ಬಗೆಯಾಗಿ ಮತನಾಡಿದ್ದಾರೆ. ಹಾಗಾದ್ರೆ ಎಕ್ಕಾ ಹೇಗಿದೆ..? ಎಕ್ಕ ಗೆಲ್ತಾ..? ನೋಡೋಣ ಬನ್ನಿ. ಕನ್ನಡದ ಬೆಳ್ಳಿತೆರೆ ಮೇಲೆ ಎಕ್ಕ ಬ್ಯಾಂಡು ಸೌಂಡು ಜೋರಾಗಿದೆ. ಒಂದ್​ ಕಡೆ ಜ್ಯೂನಿಯರ್ ಪವರ್ ಸ್ಟಾರ್ ಅಂತಲೇ ಕರೆಸಿಕೊಳ್ಳಿತ್ತಿರೋ ಯುವ ರಾಜ್​​ ಕುಮಾರ್​ ಎಕ್ಕಾ ಮಾರ್ ಮಾರ್​ ಅಂತ ಮಾಸ್​ ಆಗಿ ಅಬ್ಬರಿಸುತ್ತಿದ್ರೆ, ಈ ಕಡೆ ಸಂಜನಾ ಆನಂದ್ ಬ್ಯಾಂಗಲ್ ಬಂಗಾರಿ ಆಗಿ ಸಿನಿ ಭಕ್ತ ಗಣಕ್ಕೆ ಕಿಕ್ ಕೊಟ್ಟಿದ್ದಾರೆ. ಬೆಳ್ಳಿ ಭೂಮಿ ಮೇಲೆ ಬಂದಿರೋ ಎಕ್ಕ ಸಿನಿಮಾ ಜನ ಮನ ಸೂರೆಗೊಳ್ಳುತ್ತಿದೆ.

ಈ ವರ್ಷ ದೊಡ್ಡ ಸಿನಿಮಾಗಳಿಲ್ಲದೇ ಸೊರಗಿದ್ದ ಕನ್ನಡ ಚಿತ್ರರಂಗದಲ್ಲೀಗ 'ಎಕ್ಕ' ಸಿನಿಮಾ ಸಿರಿತನ ತಂಡಿದೆ. ಯುವ ರಾಜ್ಕುಮಾರ್ ನಟನೆಯ ಆಕ್ಷನ್ ಥ್ರಿಲ್ಲರ್ ಎಕ್ಕ ಗೆದ್ದು ಬೀಗಿದೆ. ರೋಹಿತ್ ಪದಕಿ ನಿರ್ದೇಶನದ ಸಿನಿಮಾದಲ್ಲಿ ಸಂಜನಾ ಆನಂದ್​, ಸಂಪದ ಸಖತ್ ಆಗಿ ಮೋಡಿ ಮಾಡಿದ್ದಾರೆ. ಮಗು ಮತ್ತು ಮೃಗದ ವ್ಯಕ್ತಿತ್ವ ಇರೋ ಮುತ್ತು ಕತೆ ಸಿನಿಮಾಭಿಮಾನಿಗಳ ಮನ ಮುಟ್ಟಿದೆ. ಎಕ್ಕ ಬಗ್ಗೆ ಎಲ್ಲರು ಮೆಚ್ಚಿದ್ದಾರೆ. ಪಕ್ಕಾ ಲೆಕ್ಕ ಹಾಕಿಕೊಂಡು ಥಿಯೇಟರ್​ಗೆ ಬರೋ ಪ್ರೇಕ್ಷಕರಿಗೆ ಎಕ್ಕ ಮೋಸ ಮಾಡಲ್ಲ.  ಈ ಸಿನಿಮಾದ ಕತೆ ಕನ್ನಡಿಗರಿಗೆ ಫ್ರೆಶ್ ಎನಿಸುತ್ತೆ. ಯುವ ರಾಜ್​ಕುಮಾರ್ ಮುತ್ತು ಮಾತ್ರ ಮನ ತುಂಬುತ್ತೆ. ಈ ಮುತ್ತುನಲ್ಲಿ ಮಗು ಮತ್ತು ಮೃಗ ಎರಡೂ ಇರುತ್ತೆ. ಮಗುವಾಗಿದ್ದ ಮುತ್ತು ಮೃಗ ಆಗೋದು ಯಾಕೆ ಅನ್ನೋದೆ ಎಕ್ಕದ ಲೆಕ್ಕ.. ಮುತ್ತು ತಾಯಿ ರತ್ನನಾಗಿ ಶೃತಿ  ನಟಿಸಿದ್ದಾರೆ.

ಹಳ್ಳಿಯಲ್ಲಿದ್ದ ಅಮಾಯಕ ಮುತ್ತು ಜೀವನೋಪಾಯಕ್ಕೆ ಕೆಲಸ ಅರಸಿ ಬೆಂಗಳೂರಿಗೆ ಬರುತ್ತಾನೆ. ಒಳ್ಳೆ ದಾರಿಯಲ್ಲಿ ದುಡಿದು ಜೀವನ ನಡೆಯೋ ಮುತ್ತು ಕೈಗೆ ರಕ್ತ ಅಂಟಿಕೊಳ್ಳಿತ್ತೆ. ಮುಂದೇನಾಗುತ್ತೆ ಅನ್ನೋದು ಸಿನಿಮಾದಲ್ಲಿ ನೋಡ್ಬೇಕು. 'ರತ್ನನ್ ಪ್ರಪಂಚ' ಕಟ್ಟಿದ್ದ ನಿರ್ದೇಶಕ ರೋಹಿತ್ ಪದಕಿ ಈ ಬಾರಿ ಯುವ ರಾಜ್ಕುಮಾರ್ಗಾಗಿ 'ಎಕ್ಕ'ದ ಎಲೆ ಹಾಕಿದ್ದಾರೆ. ಇದೊಂದು ಪಕ್ಕಾ ಲೋಕಲ್ ಸ್ಟೋರಿ. ಸಂಜನಾ ಆನಂದ್​, ಸಂಪದಾ, ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ, ಅತುಲ್ ಕುಲಕರ್ಣಿ, ಶ್ರುತಿ ಪಾತ್ರಗಳು ಮನದಲ್ಲಿ ಉಳಿಯುತ್ತೆ. ಚರಣ್ ರಾಜ್ ಮ್ಯೂಸಿಕ್​ಗೆ ಮಾಸ್ತಿ ಡೈಲಾಗ್, ಸತ್ಯ ಹೆಗಡೆ ಕ್ಯಾಮೆರಅ ಕುಸುರಿಯಲ್ಲಿ 99 ಪರಸೆಂಟ್ ಸ್ಕೋರ್ ಮಾಡಿದ್ದಾರೆ. ಹೀಗಾಗಿ ಎಕ್ಕ ಸಿನಿಮಾ ನೋಡಿದೋರೆಲ್ಲಾ ನಾನು ನೋಡಿರೋದು ಎಕ್ಕ ಸೂಪರ್​ ಹಿಟ್ ಪಕ್ಕಾ ಎನ್ನುತ್ತಿದ್ದಾರೆ.

05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more