ಸೊರಗಿದ್ದ ಸ್ಯಾಂಡಲ್​ವುಡ್​ಗೆ ಸಿರಿತನ ತಂದ ಎಕ್ಕ: ಬ್ಯಾಂಗಲ್ ಬಂಗಾರಿಗೆ ದಿಲ್​​​ಖುಷ್ ಎಂದ ಸಿನಿ ಭಕ್ತ

ಸೊರಗಿದ್ದ ಸ್ಯಾಂಡಲ್​ವುಡ್​ಗೆ ಸಿರಿತನ ತಂದ ಎಕ್ಕ: ಬ್ಯಾಂಗಲ್ ಬಂಗಾರಿಗೆ ದಿಲ್​​​ಖುಷ್ ಎಂದ ಸಿನಿ ಭಕ್ತ

Published : Jul 19, 2025, 11:20 AM IST

ಸ್ಯಾಂಡಲ್​ವುಡ್​ ಬೆಳ್ಳಿತೆರೆ ಮೇಲೆ ಬ್ಯಾಂಗಲ್ ಬಂಗಾರಿಯ ಸೌಂಡು ಸಖತ್ ಆಗಿದೆ. ದೊಡ್ಮನೆ ಯುವರಾಜ್​ ಕುಮಾರ ಎಕ್ಕ ಮಾರ್ ಮಾರ್​​ ಅಂತ ಮಸ್ತ್​​ ಆಗಿ ಎಂಟರ್​​​ಟೈನ್ ಮಾಡುತ್ತಿದ್ದಾರೆ.

ಸ್ಯಾಂಡಲ್​ವುಡ್​ ಬೆಳ್ಳಿತೆರೆ ಮೇಲೆ ಬ್ಯಾಂಗಲ್ ಬಂಗಾರಿಯ ಸೌಂಡು ಸಖತ್ ಆಗಿದೆ. ದೊಡ್ಮನೆ ಯುವರಾಜ್​ ಕುಮಾರ ಎಕ್ಕ ಮಾರ್ ಮಾರ್​​ ಅಂತ ಮಸ್ತ್​​ ಆಗಿ ಎಂಟರ್​​​ಟೈನ್ ಮಾಡುತ್ತಿದ್ದಾರೆ. ಅಣ್ಣಾವ್ರ ಮೊಮ್ಮಗನ ಎಕ್ಕ ಸಿನಿಮಾ ನೋಡಿ ಪ್ರೇಕ್ಷಕ ಬಗೆ ಬಗೆಯಾಗಿ ಮತನಾಡಿದ್ದಾರೆ. ಹಾಗಾದ್ರೆ ಎಕ್ಕಾ ಹೇಗಿದೆ..? ಎಕ್ಕ ಗೆಲ್ತಾ..? ನೋಡೋಣ ಬನ್ನಿ. ಕನ್ನಡದ ಬೆಳ್ಳಿತೆರೆ ಮೇಲೆ ಎಕ್ಕ ಬ್ಯಾಂಡು ಸೌಂಡು ಜೋರಾಗಿದೆ. ಒಂದ್​ ಕಡೆ ಜ್ಯೂನಿಯರ್ ಪವರ್ ಸ್ಟಾರ್ ಅಂತಲೇ ಕರೆಸಿಕೊಳ್ಳಿತ್ತಿರೋ ಯುವ ರಾಜ್​​ ಕುಮಾರ್​ ಎಕ್ಕಾ ಮಾರ್ ಮಾರ್​ ಅಂತ ಮಾಸ್​ ಆಗಿ ಅಬ್ಬರಿಸುತ್ತಿದ್ರೆ, ಈ ಕಡೆ ಸಂಜನಾ ಆನಂದ್ ಬ್ಯಾಂಗಲ್ ಬಂಗಾರಿ ಆಗಿ ಸಿನಿ ಭಕ್ತ ಗಣಕ್ಕೆ ಕಿಕ್ ಕೊಟ್ಟಿದ್ದಾರೆ. ಬೆಳ್ಳಿ ಭೂಮಿ ಮೇಲೆ ಬಂದಿರೋ ಎಕ್ಕ ಸಿನಿಮಾ ಜನ ಮನ ಸೂರೆಗೊಳ್ಳುತ್ತಿದೆ.

ಈ ವರ್ಷ ದೊಡ್ಡ ಸಿನಿಮಾಗಳಿಲ್ಲದೇ ಸೊರಗಿದ್ದ ಕನ್ನಡ ಚಿತ್ರರಂಗದಲ್ಲೀಗ 'ಎಕ್ಕ' ಸಿನಿಮಾ ಸಿರಿತನ ತಂಡಿದೆ. ಯುವ ರಾಜ್ಕುಮಾರ್ ನಟನೆಯ ಆಕ್ಷನ್ ಥ್ರಿಲ್ಲರ್ ಎಕ್ಕ ಗೆದ್ದು ಬೀಗಿದೆ. ರೋಹಿತ್ ಪದಕಿ ನಿರ್ದೇಶನದ ಸಿನಿಮಾದಲ್ಲಿ ಸಂಜನಾ ಆನಂದ್​, ಸಂಪದ ಸಖತ್ ಆಗಿ ಮೋಡಿ ಮಾಡಿದ್ದಾರೆ. ಮಗು ಮತ್ತು ಮೃಗದ ವ್ಯಕ್ತಿತ್ವ ಇರೋ ಮುತ್ತು ಕತೆ ಸಿನಿಮಾಭಿಮಾನಿಗಳ ಮನ ಮುಟ್ಟಿದೆ. ಎಕ್ಕ ಬಗ್ಗೆ ಎಲ್ಲರು ಮೆಚ್ಚಿದ್ದಾರೆ. ಪಕ್ಕಾ ಲೆಕ್ಕ ಹಾಕಿಕೊಂಡು ಥಿಯೇಟರ್​ಗೆ ಬರೋ ಪ್ರೇಕ್ಷಕರಿಗೆ ಎಕ್ಕ ಮೋಸ ಮಾಡಲ್ಲ.  ಈ ಸಿನಿಮಾದ ಕತೆ ಕನ್ನಡಿಗರಿಗೆ ಫ್ರೆಶ್ ಎನಿಸುತ್ತೆ. ಯುವ ರಾಜ್​ಕುಮಾರ್ ಮುತ್ತು ಮಾತ್ರ ಮನ ತುಂಬುತ್ತೆ. ಈ ಮುತ್ತುನಲ್ಲಿ ಮಗು ಮತ್ತು ಮೃಗ ಎರಡೂ ಇರುತ್ತೆ. ಮಗುವಾಗಿದ್ದ ಮುತ್ತು ಮೃಗ ಆಗೋದು ಯಾಕೆ ಅನ್ನೋದೆ ಎಕ್ಕದ ಲೆಕ್ಕ.. ಮುತ್ತು ತಾಯಿ ರತ್ನನಾಗಿ ಶೃತಿ  ನಟಿಸಿದ್ದಾರೆ.

ಹಳ್ಳಿಯಲ್ಲಿದ್ದ ಅಮಾಯಕ ಮುತ್ತು ಜೀವನೋಪಾಯಕ್ಕೆ ಕೆಲಸ ಅರಸಿ ಬೆಂಗಳೂರಿಗೆ ಬರುತ್ತಾನೆ. ಒಳ್ಳೆ ದಾರಿಯಲ್ಲಿ ದುಡಿದು ಜೀವನ ನಡೆಯೋ ಮುತ್ತು ಕೈಗೆ ರಕ್ತ ಅಂಟಿಕೊಳ್ಳಿತ್ತೆ. ಮುಂದೇನಾಗುತ್ತೆ ಅನ್ನೋದು ಸಿನಿಮಾದಲ್ಲಿ ನೋಡ್ಬೇಕು. 'ರತ್ನನ್ ಪ್ರಪಂಚ' ಕಟ್ಟಿದ್ದ ನಿರ್ದೇಶಕ ರೋಹಿತ್ ಪದಕಿ ಈ ಬಾರಿ ಯುವ ರಾಜ್ಕುಮಾರ್ಗಾಗಿ 'ಎಕ್ಕ'ದ ಎಲೆ ಹಾಕಿದ್ದಾರೆ. ಇದೊಂದು ಪಕ್ಕಾ ಲೋಕಲ್ ಸ್ಟೋರಿ. ಸಂಜನಾ ಆನಂದ್​, ಸಂಪದಾ, ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ, ಅತುಲ್ ಕುಲಕರ್ಣಿ, ಶ್ರುತಿ ಪಾತ್ರಗಳು ಮನದಲ್ಲಿ ಉಳಿಯುತ್ತೆ. ಚರಣ್ ರಾಜ್ ಮ್ಯೂಸಿಕ್​ಗೆ ಮಾಸ್ತಿ ಡೈಲಾಗ್, ಸತ್ಯ ಹೆಗಡೆ ಕ್ಯಾಮೆರಅ ಕುಸುರಿಯಲ್ಲಿ 99 ಪರಸೆಂಟ್ ಸ್ಕೋರ್ ಮಾಡಿದ್ದಾರೆ. ಹೀಗಾಗಿ ಎಕ್ಕ ಸಿನಿಮಾ ನೋಡಿದೋರೆಲ್ಲಾ ನಾನು ನೋಡಿರೋದು ಎಕ್ಕ ಸೂಪರ್​ ಹಿಟ್ ಪಕ್ಕಾ ಎನ್ನುತ್ತಿದ್ದಾರೆ.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more