ಕಥೆ ಲೀಕ್ ಮಾಡಿದ ಆರೋಪದ ಮಧ್ಯೆಯೇ ದೀಪಿಕಾ ಪಡುಕೋಣೆಗೆ ಪ್ಯಾನ್ ಇಂಡಿಯಾ ಸಿನೆಮಾ ಆಫರ್!

ಕಥೆ ಲೀಕ್ ಮಾಡಿದ ಆರೋಪದ ಮಧ್ಯೆಯೇ ದೀಪಿಕಾ ಪಡುಕೋಣೆಗೆ ಪ್ಯಾನ್ ಇಂಡಿಯಾ ಸಿನೆಮಾ ಆಫರ್!

Published : Jun 09, 2025, 04:13 PM IST
ಪ್ರಭಾಸ್​ ಜೊತೆಗಿನ ಸಿನಿಮಾಗಳಿಂದ ಹೊರಬಿದ್ದ ನಂತರ, ದೀಪಿಕಾ ಪಡುಕೋಣೆ ಅವರ ಬೇಡಿಕೆ ಕುಗ್ಗುತ್ತಿದೆ ಎಂಬ ವದಂತಿಗಳ ನಡುವೆ, ಅವರು ಅಲ್ಲು ಅರ್ಜುನ್​ರ ಹೊಸ ಪ್ಯಾನ್-ಇಂಡಿಯಾ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಟ್ಲಿ ನಿರ್ದೇಶನದ ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ.

ಇತ್ತೀಚಿಗೆ ದೀಪಿಕಾ ಪಡುಕೋಣೆ,  ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾದಿಂದ ಹೊರಬಿದ್ದಿದ್ರು. ದುಬಾರಿ ಸಂಭಾವನೆ, ಅನ್​ಪ್ರೊಪೇಷನಲ್ ಕಂಡೀಷನ್ಸ್ ಹಾಕಿದ್ದಾರೆ ಅಂತ ದೀಪಿಕಾ ಮೇಲೆ ಆರೋಪ ಮಾಡಲಾಗಿತ್ತು. ಈ ನಡುವೆ ದೀಪಿಕಾ ತಮ್ಮ ಸಿನಿಮಾ ಕಥೆ ಲೀಕ್ ಮಾಡಿದ್ದಾರೆ ಅಂತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಗರಂ ಆಗಿದ್ರು. ಜೊತೆಗೆ ಪ್ರಭಾಸ್ ನಟನೆಯ ಕಲ್ಕಿ ಸಿನಿಮಾದಿಂದಲೂ ದೀಪಿಕಾ ಹೊರನಡೆದ ಸುದ್ದಿ ಬಂತು. ಅಲ್ಲಿಗೆ ಮಗು ಆದ ಮೇಲೆ ದೀಪಿಕಾ ಬೇಡಿಕೆ ಕುಗ್ಗಿತಾ. ಸ್ಟಾರ್ ನಟಿಯ ಕಾಲ ಮುಗೀತಾ ಅನ್ನೋ ಚರ್ಚೆ ಶುರುವಾಗಿದ್ವು. ಆದ್ರೆ ನನ್ನ ಟೈಂ ಇನ್ನೂ ಮುಗಿದಿಲ್ಲ ಅಂತ ದೊಡ್ಡದಾಗಿ ಸೂಚನೆ ಕೊಟ್ಟಿದ್ದಾರೆ ದೀಪಿಕಾ.

ಪ್ರಭಾಸ್ ಪ್ರಾಜೆಕ್ಟ್​​ಗಳಿಂದ ಹೊರಬಿದ್ದರೇನಂತೆ ದೀಪಿಕಾ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಗೆ ಜೋಡಿಯಾಗಿದ್ದಾರೆ. ಹೌದು ಅಟ್ಲಿ ನಿರ್ದೇಶನದ ಅಲ್ಲು ಅರ್ಜುನ್ ನಟನೆಯ ಮೆಗಾ ಪ್ರಾಜೆಕ್ಟ್​​ಗೆ ದೀಪಿಕಾ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದೊಂದು ಹೈ ಬಜೆಟ್ ಸಿನಿಮಾ ಆಗಿದ್ದು ಸನ್ ಪಿಕ್ಚರ್ಸ್ ಬಂಡವಾಳ ಹೂಡ್ತಾ ಇದೆ. ಪುಷ್ಪ-2 ಗ್ಲೋಬಲ್ ಸಕ್ಸಸ್ ಬಳಿಕ ಐಕಾನ್ ಸ್ಟಾರ್ ನಟನೆಯ ಈ ಸಿನಿಮಾ ಬಗ್ಗೆ ವರ್ಲ್ಡ್​ ವೈಡ್ ಕುತೂಹಲ ಇದೆ. ಅಂಥಾ ಮೆಗಾ ಪ್ರಾಜೆಕ್ಟ್​ಗೆ ದೀಪಿಕಾ ನಾಯಕಿ ಆಗಿದ್ದಾರೆ.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more