ಜೀವದ ಬೆಲೆ ಇಷ್ಟೆನಾ? ಕರೀನಾ ಪತಿ ಇಷ್ಟೊಂದು ಕಂಜೂಸ್ ಮನುಷ್ಯನಾ: ಸೈಫ್ ಜಿಪುಣತನದ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್!

ಜೀವದ ಬೆಲೆ ಇಷ್ಟೆನಾ? ಕರೀನಾ ಪತಿ ಇಷ್ಟೊಂದು ಕಂಜೂಸ್ ಮನುಷ್ಯನಾ: ಸೈಫ್ ಜಿಪುಣತನದ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್!

Published : Jan 25, 2025, 01:01 PM IST

ಸೈಫ್​ನ ರೋಸ್ಟ್ ಮಾಡಿ ಹೊತ್ತಿದ ಟೋಸ್ಟ್ ಮಾಡಿಹಾಕ್ತಾ ಇದ್ದಾರೆ. ಸೈಫ್ ಮನೆ ಮೇಲೆ ದುರ್ಷರ್ಮಿ ಅಟ್ಯಾಕ್ ಮಾಡಿ ಚಾಕು ಇರಿದಾಗ ಮರುಕ ಪಟ್ಟವರಿಗಿಂತ ಕಾಲೆಳೆದವರೇ ಹೆಚ್ಚು. ನೂರಾರು ಕೋಟಿ ಬಾಳುವ ಸೈಫ್ ಮನೆಗೆ ಇಷ್ಟು ಸೆಕ್ಯೂರಿಟಿ ಕೂಡ ಇಲ್ವಾ ಅಂತ ಟ್ರೋಲ್ ಮಾಡಲಾಯ್ತು.

ಸೈಫ್ ಅಲಿ ಖಾನ್​ನ ಎಲ್ಲರೂ ಬಾಲಿವುಡ್ ನವಾಬ್ ಅಂತಾನೇ ಕರೀತಾರೆ. ನವಾಬರ ಕುಟುಂಬದಿಂದ ಬಂದ ಸೈಫ್ ಸಾವಿರಾರು ಕೋಟಿಯ ಒಡೆಯ. ಇಂಥಾ ಸೈಫ್ ತಮ್ಮ ಮನೆಗೆ ಸೆಕ್ಯೂರಿಟಿ ಇಟ್ಟುಕೊಳ್ಳದೇ ದುಷ್ಕರ್ಮಿಯಿಂದ ಚಾಕು ಇರಿತಕ್ಕೆ ಒಳಗಾದ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಇದೀಗ ತಮ್ಮನ್ನ ಆಸ್ಪತ್ರೆ ಸೇರಿಸಿ ಜೀವ ಉಳಿಸಿದ ಆಟೋ ಡ್ರೈವರ್​ಗೆ ಸೈಫ್ ಕೊಟ್ಟಿರೋ ಹಣವನ್ನ ನೋಡಿ ಒನ್ಸ್ ಅಗೈನ್ ಎಲ್ಲರೂ ಸೈಫ್​ನ ಟ್ರೋಲ್ ಮಾಡ್ತಾ ಇದ್ದಾರೆ. ಸೈಫ್ ಅಲಿ ಖಾನ್​​ಗೆ ಅದ್ಯಾಕೋ ಅದೃಷ್ಟವೇ ನೆಟ್ಟಗಿಲ್ಲ. ಒಂದು ಕಡೆ ದುಷ್ಕರ್ಮಿಯಿಂದ ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ರು. 15 ಸಾವಿರ ಕೋಟಿ ಬೆಲೆಯ ಮಧ್ಯಪ್ರದೇಶದ ಆಸ್ತಿ ಕೈ ತಪ್ಪುವ ಸನ್ನಿವೇಶ ಎದುರಾಗಿದೆ. ಇಷ್ಟೆಲ್ಲದರ ನಡುವೆ ಸೈಫ್​ನ ನಮ್ಮ ಟ್ರೋಲಿಗರು ಹುರಿದು ಮುಕ್ತಾ ಇದ್ದಾರೆ. 

ಸೈಫ್​ನ ರೋಸ್ಟ್ ಮಾಡಿ ಹೊತ್ತಿದ ಟೋಸ್ಟ್ ಮಾಡಿಹಾಕ್ತಾ ಇದ್ದಾರೆ. ಸೈಫ್ ಮನೆ ಮೇಲೆ ದುರ್ಷರ್ಮಿ ಅಟ್ಯಾಕ್ ಮಾಡಿ ಚಾಕು ಇರಿದಾಗ ಮರುಕ ಪಟ್ಟವರಿಗಿಂತ ಕಾಲೆಳೆದವರೇ ಹೆಚ್ಚು. ನೂರಾರು ಕೋಟಿ ಬಾಳುವ ಸೈಫ್ ಮನೆಗೆ ಇಷ್ಟು ಸೆಕ್ಯೂರಿಟಿ ಕೂಡ ಇಲ್ವಾ ಅಂತ ಟ್ರೋಲ್ ಮಾಡಲಾಯ್ತು. ಇನ್ನೂ ಸೈಫ್ ಬಳಿ ಕೋಟ್ಯಂತರ ಬಾಳುವ ಐಷಾರಾಮಿ ಕಾರುಗಳಿವೆ. ಆದ್ರೆ ಆವತ್ತು ರಾತ್ರಿ ಸೈಫ್​ನ ಆಸ್ಪತ್ರೆ ಸೇರಿಸೋಕೆ ಒಂದು ಕಾರ್ ಕೂಡ ಉಪಯೋಗಕ್ಕೆ ಬರಲಿಲ್ಲ. ಯಾಕಂದ್ರೆ ಚಾಲಕರು ಕೆಲಸ ಮುಗಿಸಿ ಮನೆಗೆ ಹೋಗಿದ್ರು. ಕೊನೆಗೆ ಆಟೋ ಡ್ರೈವರ್ ಒಬ್ಬ ಸೈಫ್​ನ ಆಸ್ಪತ್ರೆ ಸೇರಿಸಿದ್ದ. ಅಷ್ಟೆಲ್ಲಾ ಕೋಟಿಯ ಕಾರಿದ್ದು ಏನು ಪ್ರಯೋಜನ, ನೈಟ್ ಶಿಫ್ಟ್ ಗೆ ಒಬ್ಬ ಟ್ರೈವರ್ ನೇಮಿಸಿಕೊಂಡಿಲ್ವಾ ಅಂತ ಸೈಫ್​ನ ಟ್ರೋಲ್ ಮಾಡಿದ್ರು. ಮತ್ತೀಗ ಒನ್ಸ್ ಅಗೈನ್ ಸೈಫ್ ಟ್ರೋಲ್ ಮಟೀರಿಯಲ್ ಆಗಿದ್ದಾರೆ. 

ಇತ್ತೀಚಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸೈಫ್, ತಮ್ಮನ್ನ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದ ಆಟೋ ಡ್ರೈವರ್​ನ ಭೇಟಿ ಮಾಡಿದ್ರು. ಆತನಿಗೆ ಖುಷಿಯಿಂದ ಒಂದಿಷ್ಟು ಹಣ ಕೊಟ್ಟಿದ್ರು. ತಮ್ಮ ಜೀವ ಉಳಿಸಿದ ವ್ಯಕ್ತಿಗೆ ಸೈಫ್ ಒಂದು ಹತ್ತು ಲಕ್ಷನಾದ್ರೂ ಕೊಟ್ಟಿರಬಹುದು ಅಂತ ಜನ ಅಂದುಕೊಂಡಿದ್ರು. ಆದ್ರೆ ಸೈಫ್ ಕೊಟ್ಟಿದ್ದು ಜುಜುಬಿ 50 ಸಾವಿರ. ಇದನ್ನ ನೋಡಿದ ಟ್ರೋಲಿಗರು ಇವನೆಂಥಾ ಕಂಜೂಸ್ ಖಾನ್ ಅಂತ ಕಾಲೆಳೀತಾ ಇದ್ದಾರೆ. ಸೈಫ್ ನವಾಬರ ವಂಶಕ್ಕೆ ಸೇರಿದವರು. ತನ್ನ ಜೀವ ಉಳಿಸಿದವರಿಗೆ ಒಂದಿಷ್ಟು ಲಕ್ಷ ಕೊಟ್ಟಿದ್ರೆ ಏನ್ ತಾನೇ ಕಳೆದುಕೊಳ್ತಾ ಇದ್ರು. ಇವರ ಜೀವಕ್ಕೆ ಇಷ್ಟೆನಾ ಬೆಲೆ ಅಂತ ಪ್ರಶ್ನೆ ಮಾಡ್ತಾ ಇದ್ದಾರೆ. ಚಿಲ್ಲರೆ ಹಣ ಕೊಟ್ಟಿದ್ದಕ್ಕೆ ಸೈಫ್​ಗೆ ಚಿಲ್ಲರೆ ನವಾಬ ಅಂತ ಬಿರುದು ಕೊಟ್ಟಿದ್ದಾರೆ. ಒಟ್ಬಲ್ಲಿ ಮೊದಲೇ ಚೂರಿ ಚುಚ್ಚಿಸಿಕೊಂಡು ಹೊಲಿಗೆ ಹಾಕಿಸಿಕೊಂಡು ಬಂದಿರೋ ಸೈಫ್​ಗೆ ಈ ಚುಚ್ಚು ಮಾತುಗಳು ಮತ್ತಷ್ಟು ಘಾಸಿ ಮಾಡ್ತಾ ಇವೆ. ಸೈಫ್ ಯಾಕೋ ನನ್ನ ಟೈಮೇ ಸರಿಯಿಲ್ಲ ಅಂತ ಪತ್ನಿ ಕರೀನಾ ಮುಂದೆ ಕಣ್ಣೀರು ಹಾಕ್ತಾ ಇದ್ದಾರಂತೆ..!

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
Read more