ಪದ್ಮ ಪ್ರಶಸ್ತಿ ಸಿಕ್ಕ ಬೆನ್ನಲ್ಲೆ ಹೀರಾ ವಿವಾದದಲ್ಲಿ ತಗ್ಲಾಕ್ಕೊಂಡ ನಟ ಅಜಿತ್!‌

ಪದ್ಮ ಪ್ರಶಸ್ತಿ ಸಿಕ್ಕ ಬೆನ್ನಲ್ಲೆ ಹೀರಾ ವಿವಾದದಲ್ಲಿ ತಗ್ಲಾಕ್ಕೊಂಡ ನಟ ಅಜಿತ್!‌

Published : May 01, 2025, 01:32 PM ISTUpdated : May 02, 2025, 12:12 PM IST

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು,  ಈ ಬಾರಿ ಪದ್ಮಭೂಷಣ ಪ್ರಶಸ್ತಿ ಪಡೆದಿರೋ ಅಜಿತ್ ಪ್ರೆಸಿಡೆಂಟ್ ಕೈಯಿಂದ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಅತ್ತ ಪದ್ಮಪ್ರಶಸ್ತಿ ಪಡೆದು ಹೆಮ್ಮೆ ಪಡುವ ಹೊತ್ತಲ್ಲೇ ಇತ್ತ ಕಾಲಿವುಡ್​ನಲ್ಲಿ ಅಜಿತ್ ಕುರಿತ ವಿವಾದವೊಂದು ಹುಟ್ಟಿಕೊಂಡಿದೆ.

ನಟಿ ಹೀರಾ, ಅಜಿತ್ ಬಗ್ಗೆ ಮಾಡಿರೋ ಹಳೆಯ ಆರೋಪಗಳು ಮತ್ತೆ ಸದ್ದು ಮಾಡ್ತಾ ಇದ್ದು ಪದ್ಮಪ್ರಶಸ್ತಿ ವಿಜೇತ ಅಜಿತ್​ಗೆ ಮುಜುಗರ ಸೃಷ್ಟಿಸಿವೆ. ಕಾಲಿವುಡ್ ಸ್ಟಾರ್ ನಟ , ತಲಾ ಅಜಿತ್​ ಕುಮಾರ್ ಪದ್ಮಭೂಷಣ ಪ್ರಶಸ್ತಿಯನ್ನ ಸ್ವೀಕಾರ ಮಾಡಿದ್ದಾರೆ. ಸೋಮವಾರ ರಾಷ್ಟ್ರಪ್ರಶಸ್ತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಉಳಿದೆಲ್ಲಾ ಸಾಧಕರ ಜೊತೆಗೆ ಅಜಿತ್ ಕೂಡ ರಾಷ್ಟ್ರಪತಿಗಳಿಂದ ಪ್ರಶಸ್ವಿಯನ್ನ ಸ್ವೀಕಾರ ಮಾಡಿದ್ದಾರೆ. ಹೌದು ಪ್ರಶಸ್ತಿ ಸಿಕ್ಕಿರೋ ಈ ಸಮಯವನ್ನ ಸಂಭ್ರಮಿಸುವ ಪರಿಸ್ಥಿತಿಯಲ್ಲಿ ಅಜಿತ್ ಇಲ್ಲ. ಸದ್ಯ ತಲಾ ವಿಚಿತ್ರ ತಳಮಳದಲ್ಲಿ ಸಿಲುಕಿದ್ದಾರೆ. ಒಂದು ಕಡೆ ಗೌರವ ಮತ್ತೊಂದು ಕಡೆಗೆ ವಿವಾದ ಎರಡನ್ನೂ ಹೇಗೆ ಸ್ವೀಕರಿಸೋದು ಅಂತ ಗೊತ್ತಾಗದೇ ಅಜಿತ್ ಕಂಗಾಲಾಗಿದ್ದಾರೆ. ಅಷ್ಟಕ್ಕೂ ಅಜಿತ್​ನ ಹೀಗೆ ಅಡಕತ್ತರಿಯಲ್ಲಿ ಸಿಲುಕಿಸಿರೋದು ಅವರದ್ದೇ ಹಳೆಯ ಪ್ರೇಮಪ್ರಕರಣ.

ಹೀರಾ ರಾಜಗೋಪಾಲ್ ಹೆಸರು ಕೇಳಿದ್ರೆ 1990ರ ದಶಕದ ಸಿನಿಪ್ರಿಯರ ಕಿವಿ ನೆಟ್ಟಗಾಗುತ್ವೆ. ಹೀರಾ ತಂದೆ ಮಿಲಿಟರಿಯಲ್ಲಿ ಇದ್ದವರು.ದೇಶದ ಬೇರೆ ಬೇರೆ ಕಡೆ ವಿಧ್ಯಾಭ್ಯಾಸ ಮಾಡಿದ್ದ ಹೀರಾ ಮಾಡೆಲಿಂಗ್ ಮಾಡ್ತಾ ಇದ್ರು. ಬಳಿಕ ಸಿನಿಇಂಡಸ್ಟ್ರಿಗೆ ಬಂದು ಕಿಚ್ಚು ಹಚ್ಚಿದ್ರು. ತಮಿಳು, ತೆಲುಗು, ಮಲಯಾಳಂ, ಹಿಂದಿಯ ಹಲವು ಹಿಟ್ ಚಿತ್ರಗಳಲ್ಲಿ ಮಿಂಚಿರೋ ಈ ಬ್ಯೂಟಿ ಕನ್ನಡದಲ್ಲೂ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ನಟನೆ ನಿರ್ದೇಶನದ ಕಲಾವಿದ ಚಿತ್ರದಲ್ಲಿ ನಟಿಸಿದ್ದು ಇದೇ ಹೀರಾ. ರವಿಮಾಮ ‘ಓ ತುಂಟಿಯೇ ಗೋರಂಟಯೇ ಅಂತ ವರ್ಣಿಸಿದ್ದು ಈಕೆಯನ್ನೇ.
 

02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
Read more