ಜೀರೋ ಟು ಹೀರೋ: ‘ಬಿಂದು’ವಿನಿಂದ ಆರಂಭಿಸಿ ಬಂಧುವಾದ ಸತ್ಯಶಂಕರ್‌!

ಜೀರೋ ಟು ಹೀರೋ: ‘ಬಿಂದು’ವಿನಿಂದ ಆರಂಭಿಸಿ ಬಂಧುವಾದ ಸತ್ಯಶಂಕರ್‌!

Published : Apr 18, 2021, 12:18 PM ISTUpdated : Apr 18, 2021, 04:20 PM IST

ನಾವೇನು ಕುಬೇರನ ಮಕ್ಕಳಲ್ಲ. ನಾವಿರುವ ಈ ಹಳ್ಳಿಯಲ್ಲಿದ್ದು ಏನೂ ಸಾಧಿಸಲಿಕ್ಕೆ ಸಾಧ್ಯವಿಲ್ಲ. ಅಪ್ಪ ಆಸ್ತಿ ಮಾಡಿಟ್ಟಿದ್ರೆ ನಾನೂ ಮೆರೀತಾ ಇದ್ದೆ! ಇಂಥ ಗೊಣಗಾಟ ಅಪರೂಪ ಅಲ್ಲ. ಆದರೆ ಹೀಗೆ ಮಾತಾಡುವ ಬದಲು ತಳಮಟ್ಟದಿಂದ ಎದ್ದು ನಿಲ್ಲುತ್ತೇನೆ ಎನ್ನುವ ಛಲದಂಕ ಮಲ್ಲರಿಗೇನೂ ಕಮ್ಮಿಯಿಲ್ಲ. ಹಾಗೆ ಹೋರಾಡಿ ಗೆದ್ದವರ, ತಲೆಯೆತ್ತಿ ನಿಂತವರ, ತಮ್ಮ ಪರಿಸರವನ್ನೇ ಗೆದ್ದವರ ಕಥಾ ಸರಣಿ ಇದು. ಝೀರೋ ಟು ಹೀರೋ!

ಮಂಗಳೂರು(ಏ.18) ನಾವೇನು ಕುಬೇರನ ಮಕ್ಕಳಲ್ಲ. ನಾವಿರುವ ಈ ಹಳ್ಳಿಯಲ್ಲಿದ್ದು ಏನೂ ಸಾಧಿಸಲಿಕ್ಕೆ ಸಾಧ್ಯವಿಲ್ಲ. ಅಪ್ಪ ಆಸ್ತಿ ಮಾಡಿಟ್ಟಿದ್ರೆ ನಾನೂ ಮೆರೀತಾ ಇದ್ದೆ! ಇಂಥ ಗೊಣಗಾಟ ಅಪರೂಪ ಅಲ್ಲ. ಆದರೆ ಹೀಗೆ ಮಾತಾಡುವ ಬದಲು ತಳಮಟ್ಟದಿಂದ ಎದ್ದು ನಿಲ್ಲುತ್ತೇನೆ ಎನ್ನುವ ಛಲದಂಕ ಮಲ್ಲರಿಗೇನೂ ಕಮ್ಮಿಯಿಲ್ಲ. ಹಾಗೆ ಹೋರಾಡಿ ಗೆದ್ದವರ, ತಲೆಯೆತ್ತಿ ನಿಂತವರ, ತಮ್ಮ ಪರಿಸರವನ್ನೇ ಗೆದ್ದವರ ಕಥಾ ಸರಣಿ ಇದು. ಝೀರೋ ಟು ಹೀರೋ!

ಹಳ್ಳಿಯೊಂದರಲ್ಲಿ ಆಟೋ ಓಡಿಸುತ್ತಿದ್ದ ಯುವಕ, ದಿಲ್ಲಿಯಲ್ಲಿ ಕೂತವರ ಗಮನವನ್ನು ತನ್ನತ್ತ ಸೆಳೆದ ಕತೆ ಈ ಸಲದ ಯಶೋಗಾಥೆ. ಶೂನ್ಯದಿಂದ ಆರಂಭಿಸಿದ ಅವರ ಸಂಸ್ಥೆ ಇದೀಗ ಐನೂರು ಕೋಟಿ ರುಪಾಯಿ ವಹಿವಾಟು ನಡೆಸುವ ಬಿಸಿನೆಸ್‌ ಹೌಸ್‌. ತಡಕಜೆ ಎಂಬ ಪುಟ್ಟಗ್ರಾಮ ಇರುವುದು ಕರುನಾಡಿನ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪ. ಈ ಪುಟ್ಟಗ್ರಾಮದ ಯುವಕ ಸತ್ಯಶಂಕರ್‌ ನಮ್ಮ ಕಥಾನಾಯಕ.

ಈ ಯುವಕ ಅಪ್ಪಟ ಮಹತ್ವಾಕಾಂಕ್ಷಿ. ಓದು ಅಷ್ಟಾಗಿ ತಲೆಗೆ ಹತ್ತದಿದ್ದರೂ ಏನಾದರೂ ದೊಡ್ಡದು ಸಾಧಿಸಬೇಕು ಎಂಬ ಛಲದಿಂದ ತನ್ನ ಕುಲಕ್ಕೆ ಒಗ್ಗದ ಕೆಲಸಕ್ಕೆ ಕೈ ಹಾಕುತ್ತಿದ್ದ ತರುಣ. ಓದಿಗಿಂತ ಕನಸು ದೊಡ್ಡದಾಗಿತ್ತು. ತನ್ನೂರಿನ ನೂರಾರು ಮಂದಿಗೆ ಕೆಲಸ ಕೊಡಬೇಕು ಎಂಬ ಆಶಯ ಮನದಲ್ಲಿತ್ತು. ಅದಕ್ಕಾಗಿ ಸತ್ಯಶಂಕರ ಮಾಡಿದ ಹೋರಾಟ ಅಷ್ಟಿಷ್ಟಲ್ಲ. ಹುಡುಕಿದ ದಾರಿ ಒಂದೆರಡರಲ್ಲ. ಕೊನೆಗೂ ಅವರ ಧ್ಯೇಯೋದ್ದೇಶ ಈಡೇರಿದ್ದು ನೀರಿನಿಂದ. ನೀರಿನ ಋುಣ ಅಂದರೆ ಅದೇ ಅಲ್ಲವೇ!

19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?
41:38ಟ್ರಂಪ್ ತೆರಿಗೆ ನೀತಿಯಿಂದ ಭಾರತದ ಷೇರುಮಾರುಕಟ್ಟೆಯಲ್ಲಿ ತಲ್ಲಣ, 13 ಲಕ್ಷ ಕೋಟಿ ನಷ್ಟ
18:03ವಿಶ್ವ ಆರ್ಥಿಕತೆಯಲ್ಲಿ ಭಾರತ ಸೃಷ್ಟಿಸಿದೆ ಹೊಸ ಮೈಲಿಗಲ್ಲು, 4 ಟ್ರಿಲಿಯನ್ ಡಾಲರ್ ಆರ್ಥಿಕತೆ!
ನಂದಿನಿ ಹಾಲಿನ ದರ 4 ರೂಪಾಯಿ ಏರಿಕೆ
ಲೀಟರ್‌ ಹಾಲಿನ ದರ 4 ರೂಪಾಯಿಗೆ ಏರಿಕೆ