News Hour: ಕನಸು ಕಾಣೋಕೆ ಮಿತಿ ಇರಬಾರದು ಎಂದು ತೋರಿಸಿಕೊಟ್ಟವರು ಟಾಟಾ!

News Hour: ಕನಸು ಕಾಣೋಕೆ ಮಿತಿ ಇರಬಾರದು ಎಂದು ತೋರಿಸಿಕೊಟ್ಟವರು ಟಾಟಾ!

Published : Oct 10, 2024, 11:08 PM IST

ಉದ್ಯಮಿ ರತನ್ ಟಾಟಾ ಬಾರದ ಲೋಕಕ್ಕೆ ತೆರಳಿದ್ದಾರೆ. ದೇಶದ ಗೌರವಾನ್ವಿತ ಉದ್ಯಮಿ ಇನ್ನು ನೆನಪು ಮಾತ್ರ. ಗಣ್ಯಾತಿ ಗಣ್ಯರಿಂದ ಉದ್ಯಮ ದಿಗ್ಗಜನಿಗೆ ಇಡೀ ದೇಶ ಅಂತಿಮ ನಮನ ಸಲ್ಲಿಸಿದೆ.

ಬೆಂಗಳೂರು (ಅ.10): 1991ರಲ್ಲಿ 4 ಬಿಲಿಯನ್‌ ಡಾಲರ್‌ ಮೌಲ್ಯದ ಕಂಪನಿಯಾಗಿದ್ದ ಟಾಟಾ ಗ್ರೂಪ್‌, ಪ್ರಸ್ತುತ ಈ ಕಂಪನಿಯ ಮೌಲ್ಯ 400 ಬಿಲಿಯನ್‌ ಯುಎಸ್‌ ಡಾಲರ್‌. ಇಷ್ಟೆಲ್ಲಾ ಇದ್ದರೂ ರತನ್‌ ಟಾಟಾ ಅವರ ಹೆಸರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿಲ್ಲ. 34 ಲಕ್ಷ ಕೋಟಿ ಮೌಲ್ಯದ ಕಂಪನಿಯಲ್ಲಿ ರತನ್‌ ಟಾಟಾ ಅವರ ವೈಯಕ್ತಿಕ ಸಂಪತ್ತು ಇದ್ದಿದ್ದು ಮಾತ್ರ 3800 ಕೋಟಿ.

ಟಾಟಾ ಗ್ರೂಪ್‌ ಸಂಪಾದನೆ ಮಾಡಿವ ಸಂಪತ್ತಿನಲ್ಲಿ ಶೇ. 60ರಷ್ಟು ಸಮಾಜ ಸೇವೆಗಾಗಿ ಟ್ರಸ್ಟ್‌ಗೆ ಹೋಗಬೇಕು ಅನ್ನೋದು ರತನ್‌ ಟಾಟಾ ಅವರ ಮುತ್ತಜ್ಜ ಜೆಮ್‌ಶೇಟ್‌ಜೀ ಟಾಟಾ ಅವರ ಇಂಗಿತಿವಾಗಿತ್ತು. ಅದನ್ನೂ ಇಂದಿಗೂ ಟಾಟಾ ಗ್ರೂಪ್‌ ಪಾಲಿಸಿಕೊಂಡು ಬರುತ್ತಿದೆ.

Explainer: ಟಾಟಾ ಸನ್ಸ್‌-ಟಾಟಾ ಟ್ರಸ್ಟ್‌ ಏನಿದು ಟಾಟಾ ಸಮೂಹದ ಅಂತರಾಳ, ಅಗಲಿದ ದಿಗ್ಗಜನ ಸ್ಥಾನ ತುಂಬುವವರು ಯಾರು?

ಮೇಡ್‌ ಇನ್‌ ಇಂಡಿಯಾ ಕಾರ್‌ ಬೇಕು ಎಂದು ಕನಸು ಕಂಡಿದ್ದ ರತನ್‌ ಟಾಟಾ, 'ಟಾಟಾ ಇಂಡಿಕಾ' ಕಾರ್‌ಅನ್ನು ಅನಾವರಣ ಮಾಡಿದ್ದರು. 1998ರಲ್ಲಿ ಟಾಟಾ ಇಂಡಿಕಾ ಕಾರ್‌ಅನ್ನು ಲಾಂಚ್‌ ಮಾಡಿದಾಗ ನಷ್ಟವೇ ಹೆಚ್ಚಾಗಿತ್ತು. ಇಡೀ ಟಾಟಾ ಮೋಟಾರ್ಸ್‌ ಕಂಪನಿಯನ್ನೇ ಮಾರಾಟ ಮಾಡಬೇಕು ಎಂದುಕೊಂಡು ಅಮೆರಿಕಕ್ಕೆ ಹೋಗಿದ್ದ ರತನ್‌ ಟಾಟಾಗೆ ಅಲ್ಲಿ ಆಗಿದ್ದು ಅವಮಾನ. ಇದರ ಬೆನ್ನಲ್ಲಿಯೇ ಟಾಟಾ ಮೋಟಾರ್ಸ್‌ ಕಂಪನಿಯನ್ನು ದಿಟ್ಟವಾಗಿ ರತನ್‌ ಟಾಟಾ ನಿಲ್ಲಿಸಿ, ಲಾಭದಾಯಕ ಕಂಪನಿಯನ್ನಾಗಿ ಮಾಡಿದ್ದರು.

25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?