ವಾಹನ ಸವಾರರಿಗೆ ಗುಡ್‌ ನ್ಯೂಸ್: ಕರ್ನಾಟಕದಲ್ಲೂ ದುಬಾರಿ ದಂಡಕ್ಕೆ ಬ್ರೇಕ್?

Sep 11, 2019, 1:34 PM IST

ಬೆಂಗಳೂರು[ಸೆ.11]: ಗುಜರಾತ್ ಸರ್ಕಾರ ಈಗಾಗಲೇ ದುಬಾರಿ ದಂಡಕ್ಕೆ ಶೇ. 50ರಷ್ಟು ಬ್ರೇಕ್ ಹಾಕಲಾಗಿದೆ. ಇದೀಗ ವಾಹನ ಸವಾರರ ತೀವ್ರ ವಿರೋಧದ ಬೆನ್ನಲ್ಲಿ ಕರ್ನಾಟಕವೂ ದುಬಾರಿ ದಂಡಕ್ಕೆ ಮುಕ್ತಿ ನೀಡುವ ಸಾಧ್ಯತೆಗಳಿವೆ. ದಂಡದ ಮೊತ್ತದಲ್ಲಿ ಗಣನೀಯ ಕಡಿತ ಮಾಡಲು ಸರ್ಕಾರ ನಿರ್ಧರಿಸುವ ಎಲ್ಲಾ ಸಾಧ್ಯತೆಗಳು ಇವೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ದಂಡ ಕಡಿತಗೊಳಿಸಲು ಮನವಿ ಮಾಡಿಕೊಂಡಿದ್ದು, ಸದ್ಯ ರಾಜ್ಯ ಕಾನೂನು ಸಾರಿಗೆ ಹಾಗೂ ಗೃಹ ಸಚಿವ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಈ ಕುರಿತು ಮಾತುಕತೆ ನಡೆಸುತ್ತಿದ್ದಾರೆ.