ತನ್ನ ಗಂಡನ ಮದುವೆಗೇ ಸಹನಾಗೆ ಊಟ ಕಾಂಟ್ರಾಕ್ಟ್, ಮದುಮಗನ ಹತ್ರ ಎಲ್ಲ ಇದೆ, ಆದ್ರೆ ಅದೇ ಇಲ್ಲ ಅಂತಿರೋ ಕಂಠಿ!

Published : Sep 04, 2024, 08:57 AM ISTUpdated : Sep 04, 2024, 09:06 AM IST
ತನ್ನ ಗಂಡನ ಮದುವೆಗೇ ಸಹನಾಗೆ ಊಟ ಕಾಂಟ್ರಾಕ್ಟ್, ಮದುಮಗನ ಹತ್ರ ಎಲ್ಲ ಇದೆ, ಆದ್ರೆ ಅದೇ ಇಲ್ಲ ಅಂತಿರೋ ಕಂಠಿ!

ಸಾರಾಂಶ

 ಸಹನಾ ತನ್ನ ಗಂಡನ ಮದುವೆಗೆ ತಾನೇ ಊಟ ಸಪ್ಲೈ ಮಾಡುವ ಕ್ಷಣ ಬಂದಿದೆ. ಈ ನಡುವೆ ಎಲ್ಲ ಇದೆ ಮೇಷ್ಟ್ರೇ, ಆದ್ರೆ ಅದೇ ಇಲ್ಲ ಅಂತ ಕಂಠಿ ಹೇಳ್ತಿರೋದೇನು?

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸದ್ಯ ಇಂಟರೆಸ್ಟಿಂಗ್ ಎಪಿಸೋಡ್ ನಡೀತಿದೆ. ಸಹನಾ ದೊಡ್ಡ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾಳೆ. ಇದು ಯಾರಿಗೂ ಬರಬಾರದ ಪರೀಕ್ಷೆ ಅಂತ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ಪುಟ್ಟಕ್ಕಳ ಹಿರಿಯ ಮಗಳು ಸಹನಾ ಸತ್ತಿದ್ದಾಳೆ ಅಂತ ಎಲ್ಲರೂ ಭಾವಿಸಿದ್ದರು. ಈ ಕಾರಣಕ್ಕೆ ಇನ್ನೊಂದು ಕಡೆ ಸಹನಾಳ ಗಂಡ ಇನ್ನೊಂದು ಮದುವೆಯಾಗಲು ರೆಡಿ ಆಗಿದ್ದಾನೆ. ಹಾಗೆಯೇ ಸಹನಾ ಬದುಕಿರುವ ವಿಷಯ ಕಾಳಿಗೆ ಗೊತ್ತಾಗಿದೆ. ಈಗ ಸಹನಾ ಬದುಕಿರೋದು ಮುರಳಿಗೂ ಗೊತ್ತಾಗುತ್ತಾ.. ತನ್ನ ಹೆಂಡತಿಯೇ ತನ್ನ ಮದುವೆಯ ಊಟ ಕಾಂಟ್ರಾಕ್ಟ್ ತಗೊಂಡಿದ್ದಾಳೆ ಅಂದಾಗ ಮುರಳಿ ರಿಯಾಕ್ಷನ್ ಹೇಗಿರಬಹುದು, ಅಷ್ಟಕ್ಕೂ ಈ ಮದುವೆ ನಡೆಯುತ್ತಾ ಅಥವಾ ನಿಲ್ಲುತ್ತಾ ಅನ್ನುವುದು ಸದ್ಯದ ಕುತೂಹಲ. ಆದರೆ ಈ ಮದುವೆ ನಿಂತರೆ ಸಹನಾ ಯಾವ ಲೆವೆಲ್‌ಗೆ ಸ್ಟ್ರಾಂಗ್ ಇದ್ದಾಳೆ ಅಂತ ತೋರಿಸೋ ಅವಕಾಶ ತಪ್ಪಿಹೋಗುತ್ತೆ. ಕಥೆಯ ಡೆವೆಲಪ್‌ಮೆಂಟ್‌ಗೆ ಹೆಚ್ಚು ಅವಕಾಶ ಇರಲಿಕ್ಕಿಲ್ಲ. ಅದೇ ತನ್ನ ಗಂಡನ ಮದುವೆಯನ್ನು ಕಣ್ಣೆದುರೇ ನೋಡುತ್ತಾ, ಆತನ ಮದುವೆಗೆ ತಾನೇ ಊಟ ಬಡಿಸೋ ಸೀನ್ ಬೇರೆ ಥರ ಫೀಲ್ ಕೊಡುತ್ತೆ. ಬಹುಶಃ ಸೀರಿಯಲ್ ಕಥೆ ಈ ರೀತಿಯೇ ಸಾಗಬಹುದು ಅನಿಸುತ್ತೆ.

ಹಾಗೆ ನೋಡಿದರೆ ಮುರಳಿಗೆ ಮರು ಮದುವೆ ಮಾಡಿಸ್ತಿರೋದೇ ಪುಟ್ಟಕ್ಕ. ಸಹನಾ ಸತ್ತು ಹೋದಳು ಎಂಬ ದುಃಖದಲ್ಲಿದ್ದ ಮುರಳಿ ಕುಡಿದು, ಕುಡಿದು ತನ್ನ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದನು. ಮುರಳಿಯನ್ನು ಈ ರೀತಿ ನೋಡಲಾಗದೆ ಪುಟ್ಟಕ್ಕಳೇ, ಮುಂದೆ ನಿಂತು ಅವನಿಗೆ ಇನ್ನೊಂದು ಮದುವೆ ಮಾಡಲು ರೆಡಿ ಆಗಿದ್ದಾಳೆ.

ಲಕ್ಷ್ಮೀ ನಿವಾಸದಲ್ಲಿ ಪುಟ್ಟ ಖುಷಿಯೊಂದಿಗೆ ಸೈಕೋ ಜಯಂತ್, ಈ ಹುಚ್ಚನಿಂದ ಮಗುವನ್ನು ಕಾಪಾಡು ದೇವ್ರೇ ಅಂತಿರೋ ನೆಟ್ಟಿಗರು!

ಮುರಳಿ ಜೊತೆ ಕೆಲಸ ಮಾಡುತ್ತಿದ್ದ ಟೀಚರ್‌ಗೂ, ಮುರಳಿಗೂ ಮದುವೆ ಮಾಡಲು ಸಕಲ ತಯಾರಿ ನಡೆದಿದೆ. ಇನ್ನೊಂದು ಕಡೆ ಸಹನಾ ತನ್ನದೇ ಆದ ಸ್ವಂತ ಫುಡ್ ಟ್ರಕ್ ಆರಂಭಿಸಿದ್ದಾಳೆ. ತನಗೋಸ್ಕರ ತನ್ನ ತಾಯಿ ಬೆಂಗಳೂರಿಗೆ ಬಂದು ಊರೂರು ಅಲೆದರೂ ಕೂಡ ಸಹನಾ ಮಾತ್ರ ತಾನು ಬದುಕಿರುವ ವಿಷಯವನ್ನು ರಿವೀಲ್ ಮಾಡಲೇ ಇಲ್ಲ. ಇನ್ನೊಂದು ಕಡೆ ಕಾಳಿ ಕಂಡರೂ ಕೂಡ ಅವನಿಗೂ ಅವಳು ಈ ವಿಷಯವನ್ನು ಯಾರಿಗೂ ಹೇಳಬೇಡ ಅಂತ ಹೇಳಿದ್ದಾಳೆ.

ಹಾಗಂತ ಮುರಳಿಗೆ ಸಹನಾಳನ್ನು ಮರೆತು ಇನ್ನೊಂದು ಮದುವೆ ಆಗಲು ಇಷ್ಟವಿಲ್ಲ. ಆದರೆ ಪುಟ್ಟಕ್ಕನ ಒತ್ತಾಯಕ್ಕೆ ಮಣಿದು ಅವನು ಇನ್ನೊಂದು ಮದುವೆ ಆಗೋಕೆ ರೆಡಿ ಆಗಿದ್ದಾನೆ. ಈಗ ಮುರಳಿ ಮದುವೆಯ ಊಟದ ಕಾಂಟ್ರ್ಯಾಕ್ಟ್ ಸಹನಾಗೆ ಸಿಕ್ಕಿದೆ. ಸಹನಾಳೇ ಈ ಮದುವೆ ಮಂಟಪಕ್ಕೆ ಬಂದಿದ್ದಾಳೆ. ಆಗ ಕಂಠಿ ಅವಳಿಗೆ ನಿನ್ನ ಗಂಡನ ಮದುವೆ ಆಗ್ತಿದೆ ಅಂತ ಹೇಳುತ್ತಾಳೆ. ಅದನ್ನು ಕೇಳಿ ಸಹನಾ ಕುಸಿದು ಬೀಳ್ತಾಳೆ.

ಸಿಹಿಯ ಜನ್ಮರಹಸ್ಯ ಬಯಲು: ಡಾ.ಮೇಘಶ್ಯಾಮನೇ ಸಿಹಿಯ ಅಪ್ಪ, ಆದ್ರೆ ಸೀತಾಳ ಮೊದಲ ಗಂಡನಲ್ಲ!

ಮದುಮಗನನ್ನು ಕಂಠಿಯೇ ರೆಡಿ ಮಾಡಿಸ್ತಾ ಇದ್ದಾನೆ. ಮದುಮಗ ಏನೋ ಚೆನ್ನಾಗಿಯೇ ರೆಡಿ ಆಗಿದ್ದಾನೆ. ಆದರೆ ಮದುಮದುನಿಗೆ ಇರಬೇಕಾದ ಮುಖ್ಯ ಅಂಶವೇ ಮಿಸ್ಸಿಂಗ್ ಅಂತ ಕಾಳಿ ಹೇಳ್ತಿದ್ದಾನೆ. ಆ ಮುಖ್ಯ ಅಂಶ ಮತ್ತೇನೂ ಅಲ್ಲ. ಮದುಮಗನ ಕಳೆ, ನಗು ಮುಖ. ಆ ಎರಡೂ ಮುರಳಿಂದ ಸದ್ಯ ಮಿಸ್ ಆಗಿದೆ. ಆತನಿಗೆ ಮದುವೆ ಆಗೋಕೆ ಸ್ವಲ್ಪವೂ ಮನಸ್ಸು ಇಲ್ಲ. 'ಕೆಲವೊಂದು ವಿಚಾರಗಳೆಲ್ಲ ಜೀವನದಲ್ಲಿ ಒಂದೇ ಸಲ ಆಗೋದು. ಅದು ಹಾಗಾದ್ರೇ ಚಂದ. ಮತ್ತೊಂದು ಸಲ ಆಗ್ಬೇಕು ಅಂದರೆ ಬಲವಂತದಲ್ಲಿ ಇದನ್ನೆಲ್ಲ ತರಲು ಸಾಧ್ಯ ಇಲ್ಲ' ಅನ್ನೂ ಮಾತನ್ನು ಮುರಳಿ ಹೇಳ್ತಿದ್ದಾನೆ. ಆತನನ್ನ ಸಮಾಧಾನ ಮಾಡೋ ಕಂಠಿ, 'ಬಲವಂತದಲ್ಲಾದರೂ ಹಿಂದಿನದನ್ನೆಲ್ಲ ಮರೀಬೇಕು. ಮನಸ್ಸಿಗೆ ಆ ಶಕ್ತಿ ಇದೆ' ಎಂದು ಸಮಾಧಾನ ಮಾಡ್ತಿದ್ದಾನೆ. ಸೋ ಮದುಮಗನ ಹತ್ರ ಎಲ್ಲ ಇದ್ದರೂ ಮದುಮಗನ ಕಳೆಯೇ ಮಿಸ್ಸಿಂಗ್ ಆಗಿರೋದು ಸದ್ಯಕ್ಕೆ ಎದ್ದು ಕಾಣ್ತಿರೋ ಸಂಗತಿ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ
BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!