ಮಕ್ಕಳೆದುರು ತಾಂಡವ್​ ಶಾಕಿಂಗ್​ ಸತ್ಯ! ಹೆಣ್ಣಿನ ತಾಳ್ಮೆಗೆ ಬೆಲೆನೇ ಇಲ್ವಾ? ರೊಚ್ಚಿಗೆದ್ದ ಭಾಗ್ಯಲಕ್ಷ್ಮಿ ಫ್ಯಾನ್ಸ್​...

By Suvarna NewsFirst Published Apr 3, 2024, 4:38 PM IST
Highlights

ಕೊನೆಗೂ ತಾಂಡವ್​ ಮಕ್ಕಳ ಎದುರು ಶಾಕಿಂಗ್​ ಸತ್ಯ ಹೇಳಿದ್ದಾನೆ. ಇದನ್ನು ಕೇಳಿ ಮನೆಯಲ್ಲಿ ಇದ್ದವರೆಲ್ಲಾ ದಂಗು ಬಡೆದಿದ್ದಾರೆ. ಇದು ಭಾಗ್ಯಲಕ್ಷ್ಮಿ ಅಭಿಮಾನಿಗಳನ್ನು ಕೆರಳಿಸಿದೆ. ಆಗಿದ್ದೇನು?
 

ಕೊನೆಗೂ ಆ ದಿನ ಬಂದೇ ಬಿಟ್ಟಿತು! ಮಕ್ಕಳೆದುರೇ ತಾಂಡವ್​ ಭಾಗ್ಯಳಿಗೆ ಡಿವೋರ್ಸ್​ ಕೊಡುವ ವಿಷಯ ಹೇಳಿದ್ದಾನೆ. ಇನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ. ಇದಾಗಲೇ ಅವಳಿಗೆ ಡಿವೋರ್ಸ್​ ನೋಟಿಸ್​ ಕೊಟ್ಟಿದ್ದೆ. ಮಕ್ಕಳಿಗಾಗಿ ಸುಮ್ಮನೇ ಇದ್ದೆ. ಆದರೆ ಇದೀಗ ಮಕ್ಕಳೇ ಅಮ್ಮನ ಪರವಾಗಿ ನಿಂತಿದ್ದಾರೆ. ಹಾಗಿದ್ದ ಮೇಲೆ ಸತ್ಯ ಹೇಳದೇ ವಿಧಿಯಿಲ್ಲ ಎಂದಿರುವ ತಾಂಡವ್​, ಭಾಗ್ಯಳಿಗೆ ಡಿವೋರ್ಸ್​ ಕೊಡುತ್ತಿದ್ದೇನೆ ಎಂದಿದ್ದಾನೆ. ಇಷ್ಟೇ ಅಲ್ಲದೇ ಈ ಕೂಡಲೇ ಭಾಗ್ಯ ಮನೆ ಬಿಟ್ಟು ಹೋಗಬೇಕು, ಮಕ್ಕಳು ನನ್ನ ಜೊತೆ ಇರುತ್ತಾರೆ ಎಂದು ಹೇಳಿದ್ದಾನೆ. ಸದ್ಯ ಎಲ್ಲರೂ ಈ ಮಾತನ್ನು ಕೇಳಿ ಗರ ಬಡಿದವರಂತೆ ನಿಂತಿದ್ದಾರೆ. ಯಾರ ಬಾಯಲ್ಲಾದರೂ ಏನಾದರೂ ಡೈಲಾಗ್​ ಬರುತ್ತದೆ ಎಂದು ವೀಕ್ಷಕರು ಕಾದಿದ್ದಾರೆ. ಆದರೆ ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಇಷ್ಟೇ ತೋರಿಸಲಾಗಿದ್ದು, ಇದು ವೀಕ್ಷಕರನ್ನು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರನ್ನು ರೊಚ್ಚಿಗೆಬ್ಬಿಸಿದೆ.

ಡಿವೋರ್ಸ್​ ಅಂದರೇನು ಮಕ್ಕಳಾಟನಾ? ಅಷ್ಟಕ್ಕೂ ಭಾಗ್ಯಳನ್ನು ಈಗಿಂಗಲೇ ಮನೆ ಬಿಟ್ಟು ಹೋಗು ಎನ್ನಲು, ಮಕ್ಕಳು ನನ್ನ ಮನೆಯಲ್ಲಿ ನನ್ನ ಬಳಿ ಇರುತ್ತಾರೆ ಎನ್ನಲು ಇವನ್ಯಾರು? ಅದಕ್ಕೆ ಕೋರ್ಟ್​, ಕಚೇರಿ ಇಲ್ವಾ ಎಂದು ಕೇಳುತ್ತಿರುವ ಭಾಗ್ಯಲಕ್ಷ್ಮಿ ಅಭಿಮಾನಿಗಳು, ಹೆಣ್ಣು ಮಕ್ಕಳು ಹೆಚ್ಚಿನ ತಾಳ್ಮೆ ತೋರಿದರೆ ಇದೇ ಗತಿಯಾಗುವುದು ಎಂದಿದ್ದಾರೆ. ಹೆಣ್ಣಿನ ತಾಳ್ಮೆಗೆ ಬೆಲೆಯೇ ಇಲ್ವಾ ಎಂದು ಹಲವರು ಪ್ರಶ್ನಿಸುತ್ತಿದ್ದರೆ, ತಾಂಡವ್​ನ ಅಕ್ರಮ ಸಂಬಂಧ ಗೊತ್ತಿರುವ ಪೂಜಾ ಯಾಕೆ ಇನ್ನೂ ಸುಮ್ಮನಿದ್ದಾಳೆ ಎಂದು ಪ್ರಶ್ನಿಸುತ್ತಿದ್ದಾರೆ ಹಲವರು. ಒಟ್ಟಿನಲ್ಲಿ ತಾಂಡವ್​ ತನ್ನ ತಪ್ಪನ್ನು ಇಟ್ಟುಕೊಂಡು ಭಾಗ್ಯಳನ್ನು ಮನೆಯಿಂದ ಹೊರಹಾಕುತ್ತಿರುವುದಕ್ಕೆ ಸಕತ್​ ಟೀಕೆಗಳು ಬರುತ್ತಿವೆ. ಇದೊಂದು ಧಾರಾವಾಹಿ ಎನ್ನುವುದನ್ನೂ ಮರೆತು ವೀಕ್ಷಕರು ತಾಂಡವ್​ಗೆ ಶಾಪ್​ ಹಾಕ್ತಿದ್ದಾರೆ.

ರಿಯಲ್​ ಪತಿ ಜೊತೆ ಪುಟ್ಟಕ್ಕನ ಮಕ್ಕಳ ರಾಜಿ ಭರ್ಜರಿ ಡ್ಯಾನ್ಸ್​: ರೀಲ್​ ಪತಿ ಎಲ್ಲಮ್ಮಾ ಕೇಳಿದ ಫ್ಯಾನ್ಸ್​

ಅಷ್ಟಕ್ಕೂ,  ಅಪ್ಪ ತಾಂಡವ್​, ಶ್ರೇಷ್ಠಾಳ ಹಿಂದೆ ಬಿದ್ದಿರೋ ವಿಷ್ಯ ಅವನ ಮಕ್ಕಳು ಗುಂಡ ಮತ್ತು ತನ್ವಿಗಾಗಲೀ, ಅಮ್ಮ ಕುಸುಮಳಿಗಾಗಲೀ, ಪತ್ನಿ ಭಾಗ್ಯಳಿಗಾಗಲೀ ಗೊತ್ತಿಲ್ಲ. ಆದರೆ ಎಲ್ಲೋ ಏನೋ ಎಡವಟ್ಟು ನಡೆಯುತ್ತಿದೆ ಎನ್ನುವುದು ಮಾತ್ರ ಎಲ್ಲರಿಗೂ ಗೊತ್ತು. ಇದೇ ಕಾರಣಕ್ಕೆ ಅಪ್ಪ-ಅಮ್ಮನನ್ನು ಒಂದು ಮಾಡಲು ಮಗ ಗುಂಡ ಚಿಕ್ಕ ಸುಳ್ಳು ಹೇಳಿದ್ದ.  ಶ್ರೇಷ್ಠಾಳ ಜೊತೆಯಲ್ಲಿ ಅಪ್ಪನನ್ನು ನೋಡಿದ್ದ ಮಗ ಗುಂಡಾ, ಏನೋ ಎಡವಟ್ಟಾಗುತ್ತಿದೆ ಎಂದುಕೊಂಡು ತಲೆ ತಿರುಗಿ ಬಿದ್ದವನ ರೀತಿ ಆ್ಯಕ್ಟ್​ ಮಾಡಿದ್ದ. ಇದನ್ನು ತಾಂಡವ್​ ನಿಜವೆಂದು ನಂಬಿದ್ದ. ಮಕ್ಕಳಿಗಾಗಿ  ಭಾಗ್ಯಳ ಜೊತೆ ಚೆನ್ನಾಗಿ ಇರುವಂತೆ ಅವನೂ ಆ್ಯಕ್ಟ್​ ಮಾಡಿದ್ದ.  ಏನೇ ಆದರೂ ತಾಂಡವ್​ ಮತ್ತು ಭಾಗ್ಯ ಒಂದಾಗಲಿ ಎನ್ನುವ ಕಾರಣಕ್ಕೆ ಕುಸುಮಾ ಕೂಡ ಇಬ್ಬರ ವಿವಾಹ ವಾರ್ಷಿಕೋತ್ಸವ ಅದ್ಧೂರಿಯಾಗಿ ಮಾಡಿದ್ದಳು. ಮಕ್ಕಳ ಖುಷಿಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ತಾಂಡವ್​ ಎಲ್ಲವನ್ನೂ ಒಪ್ಪಿಕೊಂಡಿದ್ದ.  ಆದರೆ  ಅವನಿಗೆ ಒಂದು ಚೂರು ಮಕ್ಕಳು ಮತ್ತು ಅಮ್ಮ ಸೇರಿ ಮಾಡುತ್ತಿರುವ ಪ್ಲ್ಯಾನ್​ ಎನ್ನುವುದು ಗೊತ್ತೇ ಆಗಿರಲಿಲ್ಲ. 

ಇನ್ನೊಂದು ಘಟನೆಯಲ್ಲಿಯೂ,  ಕುಸುಮಾ ಮತ್ತು ಮಕ್ಕಳು ಜೊತೆಗೂಡಿ ಪ್ಲ್ಯಾನ್​ ಮಾಡಿ ಇಬ್ಬರನ್ನೂ ಜೊತೆಗೂಡಿಸುವಲ್ಲಿ ಸಕ್ಸಸ್​ ಆಗಿದ್ರು.   ಗುಂಡ ಅಪ್ಪನಿಗೆ ಕಾಲ್​ ಮಾಡಿ ಎಲ್ಲಿ ಇದ್ದಿ ಎಂದು ಕೇಳಿದ್ದ. ಶ್ರೇಷ್ಠಾ ಮನೆಯಲ್ಲಿ ಇರೋ ಆತ ಏನೇನೋ ಸಬೂಬು ಹೇಳಿದ್ದ. ಕುಸುಮಾ ಹೇಳಿಕೊಟ್ಟಂತೆಯೇ ಹೇಳಿರುವ ಗುಂಡಾ, ಕೂಡಲೇ ಶಾಪಿಂಗ್​ ಮಾಲ್​ಗೆ ಬಾ ಎಂದಿದ್ದ. ನನಗೆ ತುರ್ತು ಕೆಲಸ ಇದೆ, ಇದು ಆಗಲ್ಲ ಎಂದು ತಾಂಡವ್​ ಹೇಳಿದರೂ ಸುಳ್ಳು ಹೇಳಿದ ಗುಂಡಾ, ನಾವು ಇದಾಗಲೇ ಆಟೋದಲ್ಲಿ ಹೊರಟಾಗಿದೆ, ನೀನು ಅಲ್ಲಿಯೇ ಬಾ ಎಂದಿದ್ದ.  ಕೊನೆಗೂ ತಾಂಡವ್​ ಬಂದಿದ್ದ. ಅಲ್ಲಿಗೆ ಮಕ್ಕಳ ಪ್ಲ್ಯಾನ್​ ಸಕ್ಸಸ್​ ಆಗಿತ್ತು. ಆದರೆ ಈ ವಿಷಯ ಶ್ರೇಷ್ಠಾಳಿಗೆ ಹೇಗೋ ತಿಳಿದು ಹೋಗಿ, ಎಲ್ಲವನ್ನೂ ತಾಂಡವ್​ ಎದುರು ಹೇಳಿಬಿಟ್ಟಿದ್ದಾಳೆ.

ಇದರಿಂದ ತಾಂಡವ್​ಗೆ ಉರಿದು ಹೋಗಿದೆ. ಅಷ್ಟಕ್ಕೂ ಭಾಗ್ಯಳಿಗೆ ಈ ಎಲ್ಲಾ ಪ್ಲ್ಯಾನ್​ಗಳ ಬಗ್ಗೆ ಗೊತ್ತೇ ಇಲ್ಲ. ಆದರೆ ಎಲ್ಲವನ್ನೂ ಭಾಗ್ಯಳ ಮೇಲೆ ಹೊರಿಸಿದ್ದಾನೆ ತಾಂಡವ್. ನೀನು ಮೋಸಗಾತಿ, ನಿನ್ನನ್ನೇ ಮಗ ಫಾಲೋ ಮಾಡಿದ್ದಾನೆ. ಸುಳ್ಳುಗಾತಿ ಎಂದೆಲ್ಲಾ ಬಾಯಿಗೆ ಬಂದ ಹಾಗೆ ಪತ್ನಿಗೆ ಬೈದಿದ್ದಾನೆ. ಉಳಿದವರಿಗೆ ಏನು ಮಾತನಾಡಬೇಕು ಎಂದು ತಿಳಿಯದೇ ಕಕ್ಕಾಬಿಕ್ಕಿಯಾಗಿದ್ದಾರೆ. ಒಂದು ಹಂತದಲ್ಲಿ ಮಗ ತನ್ನ ಎದುರೇ ನಾಟಕ ಮಾಡಿದನೆಂಬ ಕಾರಣಕ್ಕೆ, ತಾಂಡವ್​ ಮಗನ ಮೇಲೆ ಕೈ ಮಾಡಿದ್ದಾನೆ. ಅಲ್ಲಿಯವರೆಗೆ ಸುಮ್ಮನಿದ್ದ ಭಾಗ್ಯಳ ಕೋಪ ನೆತ್ತಿಗೇರಿ ಮಗನ ಮೇಲೆ ಕೈ ಮಾಡಿದಾಗ, ಅದನ್ನು ಭಾಗ್ಯ ತಡೆದಿದ್ದಳು. ಇದೀಗ ಡಿವೋರ್ಸ್​ ಮಾತನಾಡಿದ್ದಾನೆ ತಾಂಡವ್​. 

ನಟಿ ಮುಟ್ಟಿದಾಕ್ಷಣ ರೋಮಾಂಚನದಿಂದ ಕುಣಿದು ಕುಪ್ಪಳಿಸಲು ಬೆಕ್ಕೇನು ಮನುಷ್ಯರಾ? ಕರಿಷ್ಮಾ ವಿಡಿಯೋಗೆ ಸಕತ್​ ಕಮೆಂಟ್​!


click me!