ಲವರ್​ ಜೊತೆ ಹನಿಮೂನ್​ಗೆ ಹೊರಟ ಪತಿಗೆ, ಪತ್ನಿಯದ್ದೇ ಅಡುಗೆ! ಹೀಗಿದೆ ನೋಡಿ ಭಾಗ್ಯಳ ಭಾಗ್ಯ....

Published : Nov 05, 2024, 03:23 PM IST
ಲವರ್​ ಜೊತೆ ಹನಿಮೂನ್​ಗೆ ಹೊರಟ ಪತಿಗೆ, ಪತ್ನಿಯದ್ದೇ ಅಡುಗೆ! ಹೀಗಿದೆ ನೋಡಿ ಭಾಗ್ಯಳ ಭಾಗ್ಯ....

ಸಾರಾಂಶ

ಭಾಗ್ಯಳಿಗೆ ಸಿಕ್ಕಿರೋ ಲಾಟರಿ ಟಿಕೆಟ್​ನಲ್ಲಿ ಲವರ್​ ಶ್ರೇಷ್ಠಾ ಜೊತೆ ಹನಿಮೂನ್​ ಪ್ಲ್ಯಾನ್​ ಮಾಡಿದ್ದಾನೆ ತಾಂಡವ್​. ಮುಂದೇನಾಗುತ್ತೆ?   

ತನ್ನ ಸಂಬಳದಲ್ಲಿ ಭಾಗ್ಯ ಮನೆಗೆ ಹೊಸ ಫ್ರಿಜ್​ ತಂದಿದ್ದಾಳೆ. ಆ ಫ್ರಿಜ್​ ಖರೀದಿ ಸಂದರ್ಭದಲ್ಲಿ ಇಟ್ಟ ಲಾಟರಿ ಭಾಗ್ಯಳಿಗೇ ಹೊಡೆದಿದೆ. ದಂಪತಿ ಪ್ರವಾಸಕ್ಕೆ ಹೋಗುವ ಒಂದು ಟಿಕೆಟ್​ ಅವಳಿಗೆ ಸಿಕ್ಕಿದೆ. ಮನೆಯವರೆಲ್ಲರೂ ಸೇರಿ ಭಾಗ್ಯ ಮತ್ತು ತಾಂಡವ್​ನನ್ನು ಪ್ರಯಾಣಕ್ಕೆ ಕಳುಹಿಸುವ ಯೋಚನೆಯಲ್ಲಿ ಇದ್ದಾರೆ. ತಾಂಡವ್​ನ ಬುದ್ಧಿ ಗೊತ್ತಿದ್ದರೂ ತಾಂಡವ್​, ಭಾಗ್ಯಳನ್ನು ಒಪ್ಪಿಕೊಳ್ತಾನೆ ಎನ್ನುವ ಹುಚ್ಚು ಕಲ್ಪನೆ ಕುಸುಮಳದ್ದು. ಇದೇ ಕಾರಣಕ್ಕೆ ಇಬ್ಬರೂ ಟ್ರಿಪ್​ಗೆ ಹೋಗುವಂತೆ ಹೇಳಿದ್ದಾಳೆ. ಆ ಟಿಕೆಟ್​ ಪಡೆದುಕೊಂಡಿರೋ ತಾಂಡವ್​, ಭಾಗ್ಯಳ ಜೊತೆ ಹೋಗಲು ಸುತರಾಂ ಒಪ್ಪಲಿಲ್ಲ. ಅವಳನ್ನು ಮನಸೋ ಇಚ್ಛೆ ಮಾಮೂಲಿನಂತೆ ಬೈದು, ಈ ಟಿಕೆಟ್​ ಅನ್ನು ಬೇರೆ ಯಾರಿಗಾದ್ರೂ ಕೊಡುವಂತೆ ಹೇಳುತ್ತೇನೆ ಎಂದು ತೆಗೆದುಕೊಂಡು ಹೋಗಿದ್ದಾನೆ.

ಇತ್ತ ಹೋಟೆಲ್​ನಲ್ಲಿ, ಓನರ್​ ಬಂದು ಭಾಗ್ಯಳಿಗೆ ನಮಗೆ ಒಂದು ಒಳ್ಳೆಯ ಆಫರ್​ ಬಂದಿದೆ. ಟೂರ್​ ಪ್ಯಾಕೇಜ್​ನವರಿಗೆ ನಮ್ಮದೇ ಹೋಟೆಲ್​ ಅಡುಗೆ, ನೀವೇ ಹೋಗಬೇಕು ಎಂದಿದ್ದಾನೆ. ಆಗ ಮಾತುಮಾತಿನಲ್ಲಿ ಭಾಗ್ಯಳಿಗೆ ಇದು ತನಗೆ ಸಿಕ್ಕಿರುವ ಲಾಟರಿ ಟಿಕೆಟ್​ ಟೂರ್​ ಪ್ಯಾಕೇಜ್​ ಎನ್ನುವುದು ತಿಳಿದಿದೆ. ಆ ಅದೃಷ್ಟ ತನಗಂತೂ ಸಿಕ್ಕಿಲ್ಲ.  ಆದರೆ ತನಗೆ ಸಿಕ್ಕಿರುವ ಲಾಟರಿಯಲ್ಲಿ ಬೇರೆ ಯಾರೋ ದಂಪತಿ ಹೋಗುತ್ತಿದ್ದಾರಲ್ಲ, ಅವರನ್ನು ನೋಡುವ ಭಾಗ್ಯ ಆದರೂ ತನಗೆ ಸಿಗಲಿ ಎನ್ನುವ ಕಾರಣಕ್ಕೆ ಅಲ್ಲಿ ತಾನೇ ಹೋಗುವುದಾಗಿ ಹೇಳಿದ್ದಾಳೆ. ಆದರೆ ಇಲ್ಲಿ ಇರುವುದೇ ಟ್ವಿಸ್ಟ್​. ಅಷ್ಟಕ್ಕೂ ಭಾಗ್ಯಳಿಗೆ ಸಿಕ್ಕಿರುವ ಟಿಕೆಟ್​ ಪಡೆದು ಲವರ್​ ಜೊತೆ ಹನಿಮೂನ್​ ಪ್ಲ್ಯಾನ್​ ಮಾಡಿದ್ದಾನೆ ಭಾಗ್ಯಳಾ ಪತಿದೇವ! ಹೌದು. ಆ ಟಿಕೆಟ್​ ಅನ್ನು ಬೇರೆ ಯಾರಿಗೂ ಕೊಡದೇ ಶ್ರೇಷ್ಠಾಳ ಜೊತೆ ತಾನೇ ಗಂಡ-ಹೆಂಡತಿ ರೂಪದಲ್ಲಿ ಪ್ರವಾಸಕ್ಕೆ ಹೋಗುವ ಪ್ಲ್ಯಾನ್​ ಮಾಡಿದ್ದಾನೆ. ಮುಂದೇನಾಗುತ್ತೆ ಎನ್ನುವುದು ಈಗಿರುವ ಕುತೂಹಲ.

ಸತ್ತು ಮಲಗಿದ್ರೂ ಕಣ್ಣೀರು ತಡೆಯಲಾಗಲಿಲ್ಲ: ಶೂಟಿಂಗ್​ನಲ್ಲಿ ನಡೆದ ಆ ಘಟನೆ ನೆನಪಿಸಿಕೊಂಡ ನಟಿ ಸಂಜನಾ

ಈಗಲಾದರೂ ನಿರ್ದೇಶಕರು ಗಂಡನ ರಾಸಲೀಲೆಯನ್ನು ಭಾಗ್ಯಳಿಗೆ ತೋರಿಸಿ, ಇದ್ಯಾಕೋ ಅತಿಯಾಯ್ತು ಎಂದು ಕಿಡಿ ಕಾರುತ್ತಿದ್ದಾರೆ. ಇಂಥ ಗಂಡ ಇದ್ದರೆಷ್ಟು, ಬಿಟ್ಟರೆಷ್ಟು? ಈ ದೃಶ್ಯ ನೋಡಿದ ಮೇಲಾದರೂ ಭಾಗ್ಯ ಅವನನ್ನು ಬಿಟ್ಟು ಹೋಗುವ ಮನಸ್ಸು ಮಾಡಬೇಕು ಎಂದೆಲ್ಲಾ ಕಮೆಂಟ್​  ಮೂಲಕ ತಿಳಿಸುತ್ತಿದ್ದಾರೆ. ಆದರೆ ಕುಸುಮಾ ಅಷ್ಟು ಸುಲಭಕ್ಕೆ ಬಿಟ್ಟಾಳೆಯೆ? ರಾತ್ರೋರಾತ್ರಿ ಬದಲಾದ ತಾಂಡವ್​ನನ್ನು ನಂಬಿದವಳು ಆಕೆ.  ಪತ್ನಿ ಭಾಗ್ಯಳನ್ನು ಹೊಗಳುವುದೇನು, ಮಕ್ಕಳನ್ನು ಮುದ್ದಿಸೋದೇನು, ಅಪ್ಪ-ಅಮ್ಮ, ಪೂಜಾಳ ಮೇಲೆ ಪ್ರೀತಿಯ ಧಾರೆ ಹರಿಸೋದೇನು... ಅಬ್ಬಬ್ಬಾ ಒಂದಾ ಎರಡಾ? ಹೀಗೆಲ್ಲಾ ಮಾಡಿದ್ದನ್ನು ನೋಡಿ  ಕುಸುಮಾ ಇಂಥ ಮಗನನ್ನು ನಂಬಿರುವ ಬಗ್ಗೆ ಇದಾಗಲೇ ವೀಕ್ಷಕರು ಕುಸುಮಾಳನ್ನು ಬೈಯುತ್ತಿದ್ದಾರೆ.  

 ಎಸ್​ಎಸ್​ಎಲ್​ಸಿ ಬರೆದಳು, ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಳು, ಕಾರು ಕಲಿತಳು, ಡಾನ್ಸ್​ ಮಾಡಿದಳು, ಚೆನ್ನಾಗಿ ಡ್ರೆಸ್​ ಮಾಡಿಕೊಂಡಲು... ಹೂಂ ಹೂಂ... ಯಾವುದೂ ತಾಂಡವ್​ ಮನಸ್ಸನ್ನು ಬದಲಾಯಿಸಲೇ ಇಲ್ಲ. ಕೊನೆಗೆ ಭಾಗ್ಯಳನ್ನು ಇನ್​ಸಲ್ಟ್​ ಮಾಡಲು ಶ್ರೇಷ್ಠಾ ಡಾನ್ಸ್​ ಟೀಚರ್​ ಮೊರೆ ಹೋದಳು. ಆರಂಭದಲ್ಲಿ ಭಾಗ್ಯಳನ್ನು ಸಾಕಷ್ಟು ಕೆಟ್ಟ ಪದಗಳಿಂದ ನಿಂದಿಸಿದಳು ಟೀಚರ್​. ಕೊನೆಗೆ ಅತ್ತೆ ಕುಸುಮಾ ಬಿಡಬೇಕಲ್ಲ. ಆ ಟೀಚರ್​ ಅನ್ನು ಕರೆಸಿ, ಭಾಗ್ಯಳಿಂದ ಭರತನಾಟ್ಯ ಮಾಡಿಸಿ, ಟೀಚರ್​ ಕ್ಷಮೆ ಕೇಳುವ ಹಾಗೆ ಮಾಡಿದಳು. ಇದರಿಂದ ತಾಂಡವ್​ ಮತ್ತು ಶ್ರೇಷ್ಠಾಗೆ ಶಾಕ್​ ಆಯಿತು. ಆದರೆ ಇದ್ದಕ್ಕಿಂತೆಯೇ ತಾಂಡವ್​ ಬದಲಾಗಿ ಬಿಟ್ಟರೂ ಎಲ್ಲರೂ ನಂಬಿರೋದು ಮಾತ್ರ ಹಾಸ್ಯಾಸ್ಪದ ಎನ್ನಿಸುವ ಮಧ್ಯೆಯೇ ಹೇಗಾದ್ರೂ ಮಾಡಿ ಸೊಸೆಯ ಜೀವನ ಸರಿ ಮಾಡುವ ಆಸೆ ಕುಸುಮಾಗೆ! 

ಹೆಬ್ಬಾವು, ಇಗ್ವಾನಾ ಜೊತೆ ಬಿಗ್​ಬಾಸ್​ ಸಂಗೀತಾ ಶೃಂಗೇರಿ ಸರಸ- ವಿಡಿಯೋ ವೈರಲ್​- ಬೆಚ್ಚಿ ಬಿದ್ದ ಅಭಿಮಾನಿಗಳು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?