ಮತ್ತೆ ಮದುಮಕ್ಕಳಾದ ತಾಂಡವ್​-ಭಾಗ್ಯ: ಮದ್ವೆ ಫೋಟೋದಲ್ಲಿ ನಾನ್ಯಾಕೆ ಇಲ್ಲ ಎಂದು ಪ್ರಶ್ನಿಸಿದ ಗುಂಡ!

By Suvarna NewsFirst Published Mar 16, 2024, 1:09 PM IST
Highlights

ತಾಂಡವ್​ ಮತ್ತು ಭಾಗ್ಯ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ತಿರೋ ಹೊತ್ತಿನಲ್ಲೇ ಶ್ರೇಷ್ಠಾಳ ಎಂಟ್ರಿಯಾಗಿದೆ. ಮುಂದೇನು?
 

ಭಾಗ್ಯಳ ಮನೆಯಲ್ಲೀಗ ಮದುವೆಯ ಸಂಭ್ರಮ. ಅಂದಹಾಗೆ ಇದೇನೂ ತಾಂಡವ್​ ಮತ್ತು ಶ್ರೇಷ್ಠಾಳ ಮದುವೆಯಲ್ಲ. ಬದಲಿಗೆ ಭಾಗ್ಯ ಮತ್ತು ತಾಂಡವ್​ ಅವರ ಮದುವೆಯ ವಾರ್ಷಿಕೋತ್ಸವ. ಹೇಗಾದರೂ ಮಾಡಿ ಅಪ್ಪ-ಅಮ್ಮನನ್ನು ದೂರ ಮಾಡಬಾರದು ಎಂದುಕೊಂಡಿರೋ ಮಗ ಗುಂಡ ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವ ಅದ್ಧೂರಿಯಾಗಿ ಮಾಡಲು ರೆಡಿ ಮಾಡಿಕೊಂಡಿದ್ದಾನೆ. ಒಲ್ಲದ ಮನಸ್ಸಿನಿಂದ ತಾಂಡವ್​ ಇದನ್ನು ಒಪ್ಪಿಕೊಂಡಿದ್ದಾನೆ. ಮಕ್ಕಳ ಖುಷಿಗೆ ಇದು ಅವನಿಗೆ ಅನಿವಾರ್ಯ ಕೂಡ. ಅವನ ಒಲ್ಲದ ಮನಸ್ಸು ಭಾಗ್ಯಳಿಗೂ ತಿಳಿಯದ್ದು ಏನಲ್ಲ. ಆದರೂ ಅವಳೂ ಮಕ್ಕಳ ಖುಷಿಗಾಗಿ ಎಲ್ಲವೂ ಸರಿಯಾಗಿದೆ ಎನ್ನುವಂತೆ ಆ್ಯಕ್ಟ್​ ಮಾಡುತ್ತಿದ್ದಾಳೆ.

ಇದೇ ವೇಳೆ ಅಪ್ಪ-ಅಮ್ಮನ ಮದುವೆ ಫೋಟೋ ತಂದ ಗುಂಡ ಇದರಲ್ಲಿ ನಾನು ಯಾಕೆ ಇಲ್ಲ ಎಂದು ಪ್ರಶ್ನಿಸಿದ್ದಾನೆ. ಆಗ ಅಕ್ಕ, ಪೆದ್ದು ನೀನಿನ್ನೂ ಹುಟ್ಟೇ ಇರಲಿಲ್ಲ ಆಗ ಎಂದಿದ್ದಾಳೆ. ಹಾಗಿದ್ರೆ ನೀನೂ ಯಾಕೆ ಇಲ್ಲ ಎಂದು ಪ್ರಶ್ನಿಸಿದ್ದಾನೆ. ಇದನ್ನು ಕೇಳಿ ಏನು ಉತ್ತರ ಕೊಡುವುದು ಎಂದು ಭಾಗ್ಯ ಮತ್ತು ತಾಂಡವ್​ಗೆ ಗೊತ್ತಾಗದೇ ಪೇಚಿಗೆ ಸಿಲುಕಿದ್ದಾರೆ. ಇದೇ ವೇಳೆ ಅಪ್ಪ-ಅಮ್ಮ ಇಬ್ಬರಿಗೂ ನೀರು ಕೊಟ್ಟಿರೋ ಗುಂಡ, ಇಬ್ಬರನ್ನೂ ಮದುಮಕ್ಕಳಂತೆ ರೆಡಿ ಮಾಡಲು ಸಿದ್ಧನಾಗಿದ್ದಾನೆ. ತನ್ನ ಭಾವನ ಎಲ್ಲಾ ಕಿತಾಪತಿಗಳನ್ನು ಬಲ್ಲ ಪೂಜಾ ಕೂಡ ಭಾವನಿಗೆ ಟಾಂಟ್​ ಕೊಡುತ್ತಲೇ ಅಕ್ಕನ ಜೊತೆ ಇರುವಂತೆ  ಮಾಡಿದ್ದಾಳೆ. 

Latest Videos

ಆಲಿಯಾಗೆ ಹುಟ್ಟುಹಬ್ಬದ ಸಂಭ್ರಮ: 30 ವರ್ಷಕ್ಕೇ 550 ಕೋಟಿ ರೂ. ಒಡತಿಯ ಇಂಟರೆಸ್ಟಿಂಗ್​ ಕಹಾನಿ....

ಎಲ್ಲರೂ ಖುಷಿಯಾಗಿರುವುದನ್ನು ನೋಡಿದ ಭಾಗ್ಯಳ ಅಮ್ಮ, ಈ ಖುಷಿಗೆ ಯಾರ ಕಣ್ಣೂ ಬೀಳದಿರಲಿಲ್ಲ ಎನ್ನುತ್ತಿದ್ದಂತೆಯೇ ಶ್ರೇಷ್ಠಾಳ ಎಂಟ್ರಿಯಾಗಿದೆ. ಮದುವೆ ವಾರ್ಷಿಕೋತ್ಸವಕ್ಕೆಂದು ಮನೆಯಲ್ಲಿ ಹಾಕಿರೋ ಹೂವಿನ ಹಾರ ಅಪಶಕುನದಂತೆ ಬಿದ್ದು ಹೋಗಿದೆ. ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಮುಂದೇನು ಎನ್ನುವ ಆತಂಕ ಅಭಿಮಾನಿಗಳಿಗೆ. ಏಕೆಂದರೆ, ಇದಾಗಲೇ ಶ್ರೇಷ್ಠಾಳಿಗೆ ತಾಂಡವ್​ ಯಾಕೋ ಮಕ್ಕಳು ಮಕ್ಕಳು ಎಂದುಕೊಂಡು ಕುಟುಂಬದ ಸಮೀಪ ಆಗುತ್ತಿರುವುದು ತಿಳಿದಿದೆ.

ಸಾಲದು ಎಂಬುದಕ್ಕೆ, ಮಕ್ಕಳ ಹಟಕ್ಕೆ ಬಿದ್ದು ತಾಂಡವ್​ ಭಾಗ್ಯ ಸಹಿತ ಎಲ್ಲರನ್ನೂ ಹೊರಗೆ ಕರೆದುಕೊಂಡು ಹೋಗಿದ್ದ.  ಶ್ರೇಷ್ಠಾಳಿಗೆ ಏನೋ ಒಂದು ಸುಳ್ಳು ಹೇಳಿ ಅಂತೂ ಮಕ್ಕಳನ್ನು ಕರೆದುಕೊಂಡು ಹೋಗಿದ್ದ. ಅಪ್ಪ ಎಲ್ಲಿ ಅಮ್ಮನಿಗೆ ಡಿವೋರ್ಸ್​ ಕೊಟ್ಟುಬಿಡುತ್ತಾನೋ ಎನ್ನುವ ಭಯದಲ್ಲಿ ಇರುವ ಮಕ್ಕಳು ಅಜ್ಜಿಯ ಸಲಹೆಯ ಮೇರೆಗೆ ಅಪ್ಪ-ಅಮ್ಮನನ್ನು ಒಂದು ಮಾಡಲು ಸರ್ಕಸ್​ ಮಾಡುತ್ತಿದ್ದಾರೆ.  ಉದ್ದೇಶಪೂರ್ವಕವಾಗಿ ಪಾನೀಪುರಿ ತಿನ್ನಲು ಅಪ್ಪನನ್ನು ಕರೆದುಕೊಂಡು ಹೋಗಿದ್ದರು. ಇದೆಲ್ಲಾ ನಿಮಗೆ ಯಾರು ಹೇಳಿದ್ರು ಎಂದು ತಾಂಡವ್​ ಕೇಳಿದ್ದ. ನಮ್ಮ ಸ್ಕೂಲ್​ನಲ್ಲಿ ಎಲ್ಲಾ ಅಪ್ಪ-ಅಮ್ಮನೂ ಹೀಗೆ ಔಟಿಂಗ್​ಗೆ ಮಕ್ಕಳನ್ನು ಕರ್ಕೊಂಡು ಹೋಗ್ತಾರೆ. ನಮಗೂ ಆಸೆ ಆಗಲ್ವಾ ಅಂತ ಕೇಳಿದ್ದ ಗುಂಡ. ಇನ್ಮುಂದೆ ಸದಾ ಹೀಗೆಯೇ ಕರ್ಕೊಂಡು ಹೋಗಬೇಕು ಎಂದಿದ್ದ. ಇದೇ ವೇಳೆ ಡಿವೋರ್ಸ್​ ಅಂತೆಲ್ಲಾ ಇನ್ನೊಮ್ಮೆ ಮಾತಾಡಲ್ಲ ಅಲ್ವಾ ಎಂದು ಅಪ್ಪನಿಗೆ ಗುಂಡಾ ಪ್ರಶ್ನೆ ಮಾಡಿದ್ದ. ಇದನ್ನು ಕೇಳಿ ತಾಂಡವ್​ ಪೇಚಿಗೆ ಸಿಲುಕಿದ್ದಾನೆ. ಮಧ್ಯೆ ಪ್ರವೇಶಿಸಿದ ಭಾಗ್ಯ, ಹಾಗೇನೂ ಇಲ್ಲ. ನಿಮಗೆ ಪ್ರಾಮಿಸ್​ ಮಾಡಿದ್ದಾರೆ ಅಲ್ವಾ? ಎಲ್ಲರೂ ಒಟ್ಟಿಗೇ ಇರ್ತೇವೆ ಎಂದಿದ್ದಳು. ಈ ಫ್ಯಾಮಿಲಿ ಖುಷಿಯಿಂದ ಪಾನೀಪುರಿ ತಿನ್ನುತ್ತಿರುವುದನ್ನು ಸುಂದರಿ ರೆಕಾರ್ಡ್ ಮಾಡಿಕೊಂಡು ಶ್ರೇಷ್ಠಾಳಿಗೆ ತೋರಿಸಿದ್ದು, ಅವಳಿಗೆ ಉರಿ ಹತ್ತಿದೆ. ಮುಂದೇನು? 

ಪ್ರೇಯಸಿಯ ಬಿಟ್ಟು ಪತ್ನಿಗೆ ಪಾನೀಪುರಿ ತಿನ್ನಿಸಿದ ತಾಂಡವ್​- ಮುಂದೈತೆ ಮಾರಿಹಬ್ಬ ಎಂದ ನೆಟ್ಟಿಗರು!

click me!