ಗಂಟಲಲ್ಲಿ ಸಿಲುಕಿಕೊಂಡ ಆಹಾರ, ಸಾವಿನ ದವಡೆಯಿಂದ ಪಾರಾದ ಪ್ರಖ್ಯಾತ ಸೀರಿಯಲ್‌ ನಟ

Published : Jul 22, 2026, 11:03 PM IST
Sumeet Sachdev

ಸಾರಾಂಶ

'ಕ್ಯೋಂಕಿ ಸಾಸ್ ಭೀ ಕಭಿ ಬಹು ಥಿ' ಖ್ಯಾತಿಯ ನಟ ಸುಮೀತ್ ಸಚ್‌ದೇವ್ ಅವರು ಊಟ ಮಾಡುವಾಗ ಆಹಾರ ಗಂಟಲಿನಲ್ಲಿ ಸಿಲುಕಿ ಸಾವಿನಂಚಿಗೆ ತಲುಪಿದ್ದರು. ಅವರ ಸಹೋದರನಿಗೆ ತಿಳಿದಿದ್ದ 'ಹೈಮ್ಲಿಚ್ ಮ್ಯಾನ್ಯೂವರ್' ಎಂಬ ಪ್ರಥಮ ಚಿಕಿತ್ಸಾ ತಂತ್ರದಿಂದಾಗಿ ಅವರ ಪ್ರಾಣ ಉಳಿಯಿತು.

ಮುಂಬೈ (ಜು.23): ಕಿರುತೆರೆಯ ಜನಪ್ರಿಯ ಹಾಗೂ ಹಳೆಯ ಸೂಪರ್ ಹಿಟ್ ಧಾರಾವಾಹಿ ‘ಕ್ಯೋಂಕಿ ಸಾಸ್ ಭೀ ಕಭಿ ಬಹು ಥಿ’ಯಲ್ಲಿ (Kyunki Saas Bhi Kabhi Bahu Thi) 'ಗೌತಮ್' ಎಂಬ ಪಾತ್ರದ ಮೂಲಕ ದೇಶದಾದ್ಯಂತ ಮನೆಮಾತಾಗಿದ್ದ ಪ್ರಸಿದ್ಧ ನಟ ಸುಮೀತ್ ಸಚ್‌ದೇವ್ (Sumeet Sachdev) ಅವರ ಜೀವನದಲ್ಲಿ ಇತ್ತೀಚೆಗೆ ಸಂಭವಿಸಿದ ಅತ್ಯಂತ ಆಘಾತಕಾರಿ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಊಟ ಮಾಡುವಾಗ ಆಹಾರ ಗಂಟಲಿನಲ್ಲಿ ಸಿಲುಕಿ, ಕೆಲವೇ ಕ್ಷಣಗಳಲ್ಲಿ ಅವರು ಸಾವು-ಬದುಕಿನ ನಡುವೆ ಹೋರಾಡುವಂತಾಗಿತ್ತು. ತಮ್ಮ ಸಹೋದರನ ಸಮಯಪ್ರಜ್ಞೆಯಿಂದ ತಮಗೆ ಮರುಜೀವ ಸಿಕ್ಕಿದೆ ಎಂದು ಸ್ವತಃ ಸುಮೀತ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಈ ಅನುಭವ ಬಿಚ್ಚಿಟ್ಟಿದ್ದಾರೆ.

ತಮಗಾದ ಆಘಾತಕಾರಿ ಘಟನೆಯನ್ನು ವಿವರಿಸಿರುವ ಸುಮೀತ್ ಸಚ್‌ದೇವ್, 'ಇದೆಲ್ಲವೂ ಕೇವಲ ಕೆಲವೇ ಸೆಕೆಂಡುಗಳಲ್ಲಿ ನಡೆದುಹೋಯಿತು. ನಾನು ರೆಸ್ಟೋರೆಂಟ್ ಒಂದರಲ್ಲಿ ನನ್ನ ಪತ್ನಿ ಮತ್ತು ಸಹೋದರನ ಜೊತೆ ಡಿನ್ನರ್ ಮಾಡುತ್ತಿದ್ದೆ. ಆ ವೇಳೆ ದಿಢೀರನೆ ಆಹಾರದ ತುಂಡೊಂದು ನನ್ನ ಶ್ವಾಸಕೋಶದ ನಳಿಕೆಯಲ್ಲಿ (Airway) ಸಿಲುಕಿಕೊಂಡಿತು. ಆಹಾರ ಗಂಟಲಿನಲ್ಲಿ ಸಿಲುಕುತ್ತಿದ್ದಂತೆ ನನ್ನ ಉಸಿರಾಟ ಸಂಪೂರ್ಣವಾಗಿ ನಿಂತುಹೋಯಿತು. ಅದನ್ನು ಕೆಮ್ಮಿ ಹೊರಹಾಕಲು ಶಕ್ತಿಮೀರಿ ಪ್ರಯತ್ನಿಸಿದೆ, ಆದರೆ ಎಲ್ಲವೂ ವ್ಯರ್ಥವಾಯಿತು. ಕೇವಲ ಕೆಲವೇ ಸೆಕೆಂಡುಗಳಲ್ಲಿ ದೇಹದಲ್ಲಿ ಆಮ್ಲಜನಕದ (Oxygen) ಕೊರತೆಯಾಗಿ, ಇನ್ನು ಎಲ್ಲವೂ ಮುಗಿಯಿತು, ನಾನು ಬದುಕುವುದಿಲ್ಲ ಎಂದೇ ಭಾವಿಸಿದ್ದೆ. ಅದು ನಿಜಕ್ಕೂ ಅತ್ಯಂತ ಭಯಾನಕ ಅನುಭವವಾಗಿತ್ತು ಎಂದು ಹೇಳಿದ್ದಾರೆ.

ಪ್ರಾಣ ಉಳಿಸಿದ 'ಫಸ್ಟ್-ಏಡ್' ಟ್ರಿಕ್

ಆದರೆ, ನಟ ಸುಮೀತ್ ಅವರ ಪುಣ್ಯಕ್ಕೆ ಅವರ ಸಹೋದರನಿಗೆ ಪ್ರಥಮ ಚಿಕಿತ್ಸೆಯ (First-Aid) ಜೀವ ರಕ್ಷಕ ತಂತ್ರವಾದ 'ಹೈಮ್ಲಿಚ್ ಮ್ಯಾನ್ಯೂವರ್' (Heimlich Maneuver) ಪ್ರಕ್ರಿಯೆಯ ಸರಿಯಾದ ಜ್ಞಾನವಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅವರ ಸಹೋದರ, ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಸುಮೀತ್ ಅವರ ಬೆನ್ನು ಹಾಗೂ ಹೊಟ್ಟೆಯ ಮೇಲ್ಭಾಗದ ಮೇಲೆ ಸೂಕ್ತ ಒತ್ತಡ ಹೇರುವ ಮೂಲಕ ಈ ತಂತ್ರವನ್ನು ಸರಿಯಾಗಿ ಪ್ರಯೋಗಿಸಿದರು. ತಕ್ಷಣವೇ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಆಹಾರದ ತುಂಡು ಹೊರಬಂದು, ಸುಮೀತ್ ಅವರ ನಿಂತುಹೋಗಿದ್ದ ಉಸಿರಾಟ ಮತ್ತೆ ಯಥಾಸ್ಥಿತಿಗೆ ಮರಳಿತು.

ಪ್ರತಿಯೊಬ್ಬರೂ ಈ ತಂತ್ರವನ್ನು ಕಲಿಯಬೇಕು – ಸುಮೀತ್‌ ಮನವಿ

ಈ ಘಟನೆಯ ನಂತರ ಅಭಿಮಾನಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ವಿಶೇಷ ಜಾಗೃತಿ ಮೂಡಿಸಿರುವ ಸುಮೀತ್ ಸಚ್‌ದೇವ್, "ಪ್ರತಿಯೊಬ್ಬ ವ್ಯಕ್ತಿಯೂ 'ಹೈಮ್ಲಿಚ್ ಮ್ಯಾನ್ಯೂವರ್' ನಂತಹ ಪ್ರಥಮ ಚಿಕಿತ್ಸಾ ತಂತ್ರಗಳನ್ನು ಖಂಡಿತವಾಗಿ ಕಲಿಯಬೇಕು ಎಂದು ನಾನು ಮನಃಪೂರ್ವಕವಾಗಿ ನಂಬುತ್ತೇನೆ. ಇಂತಹ ಮೆಡಿಕಲ್ ಎಮರ್ಜೆನ್ಸಿ ಯಾವಾಗ ಮತ್ತು ಯಾರಿಗೆ ಎದುರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ತುರ್ತು ಸಂದರ್ಭದಲ್ಲಿ ನಾವು ಹೊಂದುವ ಸರಿಯಾದ ಮಾಹಿತಿಯೊಂದೇ ಮತ್ತೊಬ್ಬರ ಅಮೂಲ್ಯ ಜೀವವನ್ನು ಉಳಿಸಬಲ್ಲದು" ಎಂದಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜೈಲಿನ ಸೀರೆ ಬಿಟ್ಟು ಬೋಲ್ಡ್​ ಅವತಾರದಲ್ಲಿ 'ರಾಣಿ' ಸೀರಿಯಲ್​ ಕಾವೇರಿ: ಮದ್ವೆಯಾಗದೇ ಮಗು ಪಡೆದ ನಟಿ ಸ್ಟೋರಿ ಕೇಳಿ
ದಾಂಪತ್ಯ ಜೀವನಕ್ಕೆ ಕಾಲಿಟ್ಟ MrBeast… ಪ್ರಪಂಚದ ಶ್ರೀಮಂತ ಯೂಟ್ಯೂಬರ್ ಕೈಹಿಡಿದ ಬ್ಯೂಟಿ ಯಾರು?