ಭಾಗ್ಯಳ ಕೋಣೆಗೇ ಕನ್ನ ಹಾಕಿದ ತಾಂಡವ್​! ದಂಪತಿ ಬಾಳಲ್ಲಿ ಮೂರು ದಿನಗಳ ರೋಚಕ ತಿರುವು

Published : May 12, 2024, 11:19 AM IST
ಭಾಗ್ಯಳ ಕೋಣೆಗೇ ಕನ್ನ ಹಾಕಿದ ತಾಂಡವ್​!  ದಂಪತಿ ಬಾಳಲ್ಲಿ ಮೂರು ದಿನಗಳ ರೋಚಕ ತಿರುವು

ಸಾರಾಂಶ

ಶ್ರೇಷ್ಠಾ ಮತ್ತು ತಾಂಡವ್​ ಲಗ್ನಪತ್ರಿಕೆ ಭಾಗ್ಯಳ ಬ್ಯಾಗ್​ನಲ್ಲಿ ಭದ್ರವಾಗಿದೆ. ಮೂರು ದಿನಗಳಲ್ಲಿ ತಾಂಡವ್​-ಭಾಗ್ಯಳ ದಾಂಪತ್ಯದಲ್ಲಿ ರೋಚಕ ಟ್ವಿಸ್ಟ್​ ಸಿಗಲಿದೆ.  ಏನದು?  

ತಾಂಡವ್​ ಮತ್ತು ಶ್ರೇಷ್ಠಾ ಮದುವೆಗೆ ರೆಡಿಯಾಗಿದ್ದಾರೆ. ತಾಂಡವ್​ಗೆ ಗೊತ್ತಿಲ್ಲದೇ ಶ್ರೇಷ್ಠಾ ಮದುವೆ ಪತ್ರವನ್ನೂ ರೆಡಿ ಮಾಡಿಸಿದ್ದಾಳೆ. ಅದರ ಮೇಲೆ ಫೋಟೋ ಕೂಡ ಹಾಕಿಸಿದ್ದಾಳೆ. ಆದರೆ ಅದು ಭಾಗ್ಯಳ ಕೈಸೇರಿದೆ. ಆದರೆ ಭಾಗ್ಯ ಅದನ್ನು ಗಮನಿಸಿಯೇ ಇಲ್ಲ, ಇನ್​ವಿಟೇಷನ್​ ಕಾರ್ಡ್​ ಅನ್ನು ತನ್ನ ಬ್ಯಾಗ್​ನಲ್ಲಿ ಹಾಕಿಕೊಂಡಿದ್ದಾಳೆ. ಆದರೆ ಅದನ್ನು ಅವಳು ಗಮನಿಸಿಲ್ಲ. ಅದರ ಬದಲು ಭಾಗ್ಯಳಿಗೆ ಇನ್​ವಿಟೇಷನ್​ ಕಾರ್ಡ್​ ಸಿಕ್ಕಿರುವುದು ತಾಂಡವ್​ ಮತ್ತು ಶ್ರೇಷ್ಠಾಳಿಗೆ ತಿಳಿದಿದೆ. ಆ ಕಾರ್ಡ್​ ಅನ್ನು ಭಾಗ್ಯ ಯಾವುದೇ ಕಾರಣಕ್ಕೂ ಓಪನ್​ ಮಾಡಬಾರದು ಎಂದು ತಾಂಡವ್​ ಅದನ್ನು ಬ್ಯಾಗ್​ನಿಂದ ತೆಗೆಯಲು ಪ್ಲ್ಯಾನ್​ ರೂಪಿಸುತ್ತಿದ್ದಾನೆ.

ರಾತ್ರಿ ಎಲ್ಲರೂ ಮಲಗಿದ ಸಮಯದಲ್ಲಿ ಭಾಗ್ಯಳ ರೂಮ್​ಗೆ ತಾಂಡವ್​ ಬಂದಿದ್ದಾನೆ. ಆದರೆ ಗುಂಡನಿಗೆ ಶಬ್ದವಾಗಿ ಕಳ್ಳ ಕಳ್ಳ ಎಂದಿದ್ದಾನೆ. ತಾಂಡವ್​ ಹೆದರಿ ಅಡಗಿಕೊಂಡಿದ್ದಾನೆ. ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಮೂರು ದಿನಗಳ ಮಹಾ ತಿರುವಿನ ಸಂಚಿಕೆ ಎಂದು ಇದನ್ನು ಹೇಳಲಾಗಿದೆ. ಇನ್​ವಿಟೇಷನ್​ ಕಾರ್ಡ್​ ತೆಗೆಯುವಲ್ಲಿ ತಾಂಡವ್​ ಸಕ್ಸಸ್​ ಆಗ್ತಾನಾ ಅಥವಾ ಕಳ್ಳ ಸಿಕ್ಕಿ ಬೀಳ್ತಾನಾ ಎನ್ನುವುದು ಮುಂದಿರುವ ಪ್ರಶ್ನೆ. ಮೂರು ದಿನಗಳ ಮಹಾ ರೋಚಕ ಟ್ವಿಸ್ಟ್​ ಎನ್ನುವ ಶೀರ್ಷಿಕೆ ಕೊಟ್ಟು ಇದರ ಪ್ರೊಮೋ ರಿಲೀಸ್ ಮಾಡಲಾಗಿದೆ. 

ಅಂತೂ ಕರ್ನಾಟಕದ ಹಣೆಬರಹ ಇಲ್ಲಿ ತೋರಿಸ್ತಾ ಇದ್ದೀರಿ ಬಿಡಿ ಅಂತಿದ್ದಾರೆ ಭಾಗ್ಯಲಕ್ಷ್ಮಿ ಫ್ಯಾನ್ಸ್​...

ಇನ್ನು, ಭಾಗ್ಯಲಕ್ಷ್ಮಿ ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಭಾಗ್ಯ ಹಲವಾರು ಅಡೆತಡೆಗಳನ್ನು ಮೀರಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ಬರೆದಿದ್ದಾಳೆ. ಆದರೆ ನಂತರ ಪರಿಸ್ಥಿತಿ ಚಿಂತಾಜನಕವಾಗಿದೆ. ಗಂಡ- ಹೆಂಡತಿ ನಡುವೆ ಬಿರುಕು ಮೂಡಿದೆ. ಮನೆ ಎರಡು ಭಾಗವಾಗಿದೆ. ಅಷ್ಟಕ್ಕೂ ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್​ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಮಗಳು ತನ್ವಿ ನಿನ್ನ ಅಡುಗೆ ಸಕತ್​ ರುಚಿಯಾಗಿರುತ್ತದೆ ಎಂದಿದ್ದಾಳೆ. ಹಾಗಿದ್ದರೆ ನಾನು ಯಾವುದಾದರೂ ಹೋಟೆಲ್​ನಲ್ಲಿ ಅಡುಗೆಗೆ ಸೇರಿಕೊಳ್ಳಬೇಕು ಎಂದು ಭಾಗ್ಯ ಮನಸ್ಸು ಮಾಡುತ್ತಾಳೆ. ಧೈರ್ಯ ಮಾಡಿ ಒಂದು ಹೋಟೆಲ್​ಗೆ ಹೋದಾಗ ಅವಳನ್ನು ಹೋಟೆಲ್​ ಮಾಲೀಕ ಕೆಲಸ ಇಲ್ಲ ಎಂದು ಹೇಳಿ ಕಳುಹಿಸುತ್ತಾನೆ. ಸಾಲದು ಎನ್ನುವುದಕ್ಕೆ ಆಕೆಗೆ ಅಲ್ಲಿ ಒಂದಿಷ್ಟು ಅವಮರ್ಯಾದೆಯೂ ಆಗುತ್ತದೆ.  

ಕೊನೆಗೂ ಯಶಸ್ವಿಯಾಗಿ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಬ್ರೋಕರ್​ ಯಾವುದೋ ಹೋಟೆಲ್​ಗೆ ಹೋಗಲು ಹೇಳಿದ್ದರೆ ಭಾಗ್ಯ ಸ್ಟಾರ್​ ಹೋಟೆಲ್​ಗೆ ವಿಳಾಸ ತಪ್ಪಿ ಹೋಗಿದ್ದಳು. ಅಲ್ಲಿ ಇಂಗ್ಲಿಷ್​ನಲ್ಲಿ ಸಂದರ್ಶನ ಮಾಡಿದರೂ ಹಾಗೋ ಹೀಗೋ ಅಲ್ಪ ಸ್ವಲ್ಪ ತಿಳಿವಳಿಕೆಯಲ್ಲಿ ಕನ್ನಡದಲ್ಲಿಯೇ ಉತ್ತರ ಕೊಟ್ಟು ಅಂತೂ ಸಂದರ್ಶನ ಗೆದ್ದಿದ್ದಾಳೆ. ಇತ್ತ ಅತ್ತೆ ಕುಸುಮಾಗೂ ಹೋಟೆಲ್​ನಲ್ಲಿ ಉದ್ಯೋಗ ಸಿಕ್ಕಿದೆ. ಆದರೆ ಅತ್ತೆ- ಸೊಸೆ ಇಬ್ಬರೂ ತಮಗೆ ಕೆಲಸ ಸಿಕ್ಕಿರುವ ವಿಷಯವನ್ನು ಪರಸ್ಪರ ಹೇಳಿಕೊಂಡಿಲ್ಲ. ಇನ್ನು ದಾಂಪತ್ಯದ ವಿಷಯಕ್ಕೆ ಬರುವುದಾದರೆ ಇನ್ನೇನಾಗುತ್ತದೆಯೋ ಕಾದು ನೋಡಬೇಕಿದೆ. 

ಐಶ್ವರ್ಯ- ಕತ್ರಿನಾ ಇಬ್ಬರಲ್ಲಿ ಸುಂದರಿಯರು ಯಾರು ಎಂದಾಗ ಮಾಜಿ ಲವರ್​ ಸಲ್ಮಾನ್​ ಖಾನ್​ ಹೇಳಿದ್ದೇನು?


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!