ಬಿಗ್‌ ಬಾಸಲ್ಲೂ ಇಲ್ಲ, ಶನಿ ಖ್ಯಾತಿಯ ಸುನೀಲ್‌ ಏಕಾಏಕಿ ಎಲ್ಲಿ ನಾಪತ್ತೆ ಆದ್ರು?

By Suvarna NewsFirst Published Oct 5, 2022, 11:54 AM IST
Highlights

ಶನಿ ಸೀರಿಯಲ್ ಖ್ಯಾತಿಯ ಸುನೀಲ್‌ ಅವರ ಪಾತ್ರದ ಅಧ್ಯಾಯ 'ಕೆಂಡಸಂಪಿಗೆ' ಸೀರಿಯಲ್‌ನಲ್ಲಿ ಮುಕ್ತಾಯವಾಗಿದೆ. ಇದಕ್ಕೆ ಸುನೀಲ್‌ ಬಿಗ್‌ಬಾಸ್‌ಗೆ ಹೋಗ್ತಿರೋದು ಮುಖ್ಯ ಕಾರಣ ಎಂದು ಹೇಳಲಾಗಿತ್ತು. ಆದರೆ ಅವರು ಬಿಗ್‌ಬಾಸ್‌ನಲ್ಲೂ ಸುನೀಲ್ ಕಾಣಿಸಿಕೊಂಡಿಲ್ಲ. ಹಾಗಿದ್ರೆ ಇವ್ರು ಮತ್ತೆಲ್ಲಿ ಹೋದ್ರು?

ಕಲಾವಿದ ಸುನೀಲ್ ಅವರದ್ದು ವೈಯುಕ್ತಿಕವಾಗಿ ಸಿನಿಮಾ ಮಾಡಬಹುದಾದಷ್ಟು ದೊಡ್ಡ ಕಥೆ. ಇವರು ಚಾಮರಾಜನಗರದ ಅನಾಥಾಶ್ರಮದಲ್ಲಿ ಬೆಳೆದ ಪ್ರತಿಭೆ. ಹತ್ತನೇ ತರಗತಿವರೆಗೂ ಚಾಮರಾಜನಗರದ 'ದೀನಬಂಧು' ಎಂಬ ಆಶ್ರಮದಲ್ಲೇ ಬೆಳೆದಿದ್ದರು. ಈತನ ಬಾಲ್ಯ ಇನ್ನೂ ಕಷ್ಟದಲ್ಲಿತ್ತು. ಅಪ್ಪ ಅಮ್ಮ ದೂರಾದರು. ಸೋದರಿಯನ್ನು ಮಾರಾಟ ಮಾಡಲಾಯ್ತು. ಈ ಹುಡುಗ ಬೀದಿಯಲ್ಲಿ ಬಿದ್ದಿದ್ದ ತಿಂಡಿಯನ್ನೇ ತಿಂದು ಜೀವ ಉಳಿಸಿಕೊಳ್ಳುವ ಸ್ಥಿತಿಗೂ ತಲುಪಿದ್ದರು. ಮುಂದೆ ಚಾಮರಾಜನಗರದ ಆಶ್ರಮಕ್ಕೆ ಸೇರಿದರು. ಸಿನಿಮಾ ಕಿರುತೆರೆ ಬಗ್ಗೆ ಅಪಾರ ಪ್ರೀತಿಯಿದ್ದ ಈ ಹುಡುಗನಿಗೆ ಈ ಎರಡು ಕ್ಷೇತ್ರಗಳಲ್ಲಿ ಮಿಂಚಬೇಕು ಅನ್ನೋ ಆಸೆ. ಹೀಗಾಗಿ ಕಲರ್ಸ್ ಕನ್ನಡದ ತಕಧಿಮಿತಾ ಅನ್ನೋ ಡಾನ್ಸಿಂಗ್ ಶೋನಲ್ಲಿ ಭಾಗವಹಿಸಿದ್ರು. ಅಲ್ಲಿ ತಮ್ಮ ಕಷ್ಟದ ದಿನಗಳನ್ನು ನೆನೆಸಿಕೊಂಡಿದ್ದರು. ಈ ಪ್ರತಿಭೆಗೆ ನೀರೆರೆದದ್ದು ಶನಿ ಅನ್ನೋ ಸೀರಿಯಲ್. ಈ ಧಾರಾವಾಹಿ ಇವರಿಗೆ ಹೆಸರು, ಕೀರ್ತಿ ಎಲ್ಲ ತಂದುಕೊಟ್ಟಿತು. ಶನಿ ಅನ್ನೋ ಹೆಸರಿಂದಲೇ ಈ ಹುಡುಗ ಮನೆಮಾತಾದರು. ಆಮೇಲೆ ಕೆಂಡಸಂಪಿಗೆ ಅನ್ನೋ ಸೀರಿಯಲ್‌ನಲ್ಲಿ ನಟಿಸಿದರು. ಅಷ್ಟೊತ್ತಿಗಾಗಲೇ ಕೊಂಚ ದೊಡ್ಡವರಾದ ಇವರಿಗೆ ನಾಯಕಿಯ ತಮ್ಮನ ಬಹುಮುಖ್ಯ ಪಾತ್ರ ಸಿಕ್ಕಿತ್ತು. ಆದರೆ ಏಕಾಏಕಿ ಈ ಪಾತ್ರಕ್ಕೆ ಸಾವು ಬಂದೆರಗಿತ್ತು.

ಸುನೀಲ್ ಅವರ ಪಾತ್ರದ ಈ ಕೊನೆ ಅನಿರೀಕ್ಷಿತವಾಗಿತ್ತು. ಅಕ್ಕ ತಮ್ಮ ಬದುಕಿನ ಸುತ್ತವೇ ನಿಂತಿರುವ ಈ ಸೀರಿಯಲ್‌ನಲ್ಲಿ ಹೀಗೆ ಏಕಾಏಕಿ ತಮ್ಮ ಸಾವು ಕತೆಯ ತಿರುವಿಗೂ ಕಾರಣವಾಗಿತ್ತು. ಬಡತನ, ಸಾಲದ ಬಾಧೆಯಿಂದ ತತ್ತರಿಸಿರುವ ತನ್ನ ಕುಟುಂಬಕ್ಕೆ ನೆರವಾಗಬೇಕು ಅನ್ನೋ ಉದ್ದೇಶದಿಂದ ಈ ಸೀರಿಯಲ್‌ನಲ್ಲಿ ತಮ್ಮ ರಾಜೇಶ ಪ್ರತಿಭಟನೆಯಲ್ಲಿ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳುವ ನಟನೆ ಮಾಡಲು ಹೊರಡುತ್ತಾನೆ. ಆದರೆ ವಿಲನ್ ಕಾಳಿಯ ಕ್ರೂರ ಮನಸ್ಸಿಂದ ಆತ ನಿಜಕ್ಕೂ ಸಾವನ್ನಪ್ಪುವಂತಾಗುತ್ತದೆ. ಕಾಳಿಯ ಹುಡುಗರು ಆತನಿಗೆ ನಿಜಕ್ಕೂ ಬೆಂಕಿ ಹಚ್ಚುತ್ತಾರೆ. ರಾಜೇಶ್ ಜೀವನ್ಮರಣದ ಮಧ್ಯೆ ಹೋರಾಟ ಮಾಡಿಯಾದರೂ ಉಳಿಯಬಹುದು ಅಂತ ಈ ಸೀರಿಯಲ್‌ ನೋಡುವ ವೀಕ್ಷಕರು ಅಂದುಕೊಳ್ಳುತ್ತಾರೆ. ಆದರೆ ರಾಜೇಶ್ ಸಾವನ್ನಪ್ಪುತ್ತಾನೆ. ಆತನ ಸಾವಿನೊಂದಿಗೆ ಸುನೀಲ್ ನಿರ್ವಹಿಸುತ್ತಿದ್ದ ರಾಜೇಶ್ ಪಾತ್ರವೂ ಕೊನೆಯಾಗುತ್ತದೆ.

BBK9; ಅನ್ನ ಹಾಕೋಕೆ ಯೋಗ್ಯತೆ ಇಲ್ಲ, ಪುರಾಣ ಮಾತಾಡ್ತಾರೆ, ಸ್ಪರ್ಧಿಗಳ ವಿರುದ್ಧ ಸಿಡಿದೆದ್ದ ಆರ್ಯವರ್ಧನ್

ರಾಜೇಶ್ ಪಾತ್ರ ಕೊನೆಯಾದಾಗ ಸೋಷಿಯಲ್ ಮೀಡಿಯಾ(Social media)ದಲ್ಲಿ ಸುನೀಲ್ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಸುನೀಲ್ ಬಿಗ್‌ಬಾಸ್‌(Bigboss)ಗೆ ಎಂಟ್ರಿ ಕೊಡ್ತಿದ್ದಾರೆ. ಅದಕ್ಕೋಸ್ಕರ ಈ ಸೀರಿಯಲ್‌ನಿಂದ ಹೊರಬರುತ್ತಿದ್ದಾರೆ ಅನ್ನೋ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡಿದವು. ಬಿಗ್‌ಬಾಸ್ ಸೀಸನ್ ಶುರುವಾದಾಗ ಮನೆ ಒಳಗೆ ಹೋಗುವ ಸ್ಫರ್ಧಿಗಳಲ್ಲಿ ಇವರು ಇರುತ್ತಾರೆ ಅಂತಲೇ ಭಾವಿಸಲಾಗಿತ್ತು. ಆದರೆ ಇದೀಗ ಈ ನಿರೀಕ್ಷೆ ಸುಳ್ಳಾಗಿದೆ. ಬಿಗ್‌ಬಾಸ್ ಸ್ಫರ್ಧಿಗಳ ಅಂತಿಮ ಲೀಸ್ಟ್ ನಲ್ಲಿ ಇವರ ಹೆಸರಿರಲಿಲ್ಲ. ಜೊತೆಗೆ ಬಿಗ್‌ಬಾಸ್‌ ಶುರುವಾಗಿ ಇಷ್ಟುದಿನವಾಯ್ತು. ಸುನೀಲ್ ವೈಲ್ಡ್‌ಕಾರ್ಡ್ ಎಂಟ್ರಿ(Wildcard entry) ಕೊಡೋ ಸೂಚನೆಗಳೂ ಇಲ್ಲ.

Jothe jotheyali: ಅನು ಜೀವ ತೆಗೆಯುವ ಝೇಂಡೆ ಪ್ರಯತ್ನ ವಿಫಲ, ಅನು ಜೀವ ಉಳಿಸಿದ ಆರ್ಯ

ಹಾಗಿದ್ದರೆ ಸುನೀಲ್ ಎಲ್ಲಿ ಹೋದರು ಅನ್ನೋದು ಸದ್ಯ ವೀಕ್ಷಕರ ಮುಂದಿರುವ ಪ್ರಶ್ನೆ. ಅವರು ಬೇರೆ ಯಾವ ಪ್ರಾಜೆಕ್ಟ್‌ನಲ್ಲೂ ಕಾಣಿಸಿಕೊಂಡಿಲ್ಲ. ಬೇರೆ ಸೀರಿಯಲ್ (Serial) ಅಥವಾ ಸಿನಿಮಾಗಳಲ್ಲಿ ಇಲ್ಲಾ ರಿಯಾಲಿಟಿ ಶೋ(Reality show)ಗಳಲ್ಲೂ ಅವರ ಹೆಸರು ಕೇಳಿಸಿಲ್ಲ. ಹಾಗಿದ್ದರೆ ಮರಳಿ ಓದನ್ನು ಮುಂದುವರಿಸುತ್ತಿದ್ದಾರಾ ಅಥವಾ ಯಾವುದಾದರೂ ಹೊಸ ಪ್ರಾಜೆಕ್ಟ್‌ನಲ್ಲಿ ಬ್ಯುಸಿ ಆಗಿದ್ದಾರ ಅನ್ನೋ ಪ್ರಶ್ನೆ ಅವರ ಫ್ಯಾನ್ಸ್(Fans) ಮುಂದಿದೆ. ಆದರೆ ಸುನೀಲ್ ಎಲ್ಲೂ ಇದಕ್ಕೆ ಸ್ಪಷ್ಟನೆ ಕೊಟ್ಟಿಲ್ಲ. ಈ ಪಾತ್ರ ಮುಗಿಯುವಾಗ ಸೀರಿಯಲ್ ಟೀಮ್‌ನಿಂದಲೂ ಯಾವ ಮಾತೂ ಬಂದಿಲ್ಲ. ಸದ್ಯಕ್ಕೀಗ ಸುನೀಲ್ ಅವರ ಮುಂದಿನ ನಡೆಯೇನು ಅನ್ನೋದು ಸಸ್ಪೆನ್ಸ್ ಆಗಿಯೇ ಉಳಿದಿದೆ.

 

 

click me!