
ಜನಪ್ರಿಯ ಧಾರವಾಹಿ ಕನ್ನಡತಿಗೆ ಒಂದು ವರ್ಷ ಪೂರ್ತಿಯಾಗುವಾಗ ಹರ್ಷ ಮತ್ತು ಭುವಿ ಮಧ್ಯೆ ಪ್ರೀತಿ ಹುಟ್ಟುವುದರಲ್ಲಿದೆ. ಭುವಿಯನ್ನು ಸತಾಯಿಸೋಕೆ ಮಣ್ಣಿನ ಗುಂಡಿಗೆ ಇಳಿದ ಹರ್ಷ ಮತ್ತು ಭುವಿಯ ನಡುವಿನ ರೊಮ್ಯಾಂಟಿಕ್ ಸೀನ್ ಮತ್ತಷ್ಟು ಇಂಟ್ರೆಸ್ಟಿಂಗ್ ರೀತಿಯಲ್ಲಿ ಮೂಡಿಬರುವುದರಲ್ಲಿದೆ.
ತಂದೆಯ ಅಂತ್ಯ ಸಂಸ್ಕಾರ ಮುಗಿಸಿ ಭುವಿ ಹರ್ಷ ಮತ್ತು ಬಿಂದು ಬೆಂಗಳೂರಿನ ಕಡೆ ಹೋಗೋ ದಾರಿ ಮಧ್ಯೆ ಮಣ್ಣಗುಂಡಿಗೆ ಇಳಿದಿದ್ದಾರೆ ಇವರು. ಬಿಂದು ಮತ್ತು ಹರ್ಷ ಈಗಾಗಲೇ ನೀರಿಗೆ ಇಳಿದಿದ್ದು, ಭುವಿ ಮಾತ್ರ ತೀರದಲ್ಲೇ ನಿಂತಿದ್ದರು.
ಜೈಲೊಳಗೆ ಕುಳಿತು ಎಂಥ ಸಂದರ್ಭದಲ್ಲೂ ನಗುತಿರಿ ಎಂದ ನಟಿ
ಹರ್ಷ ಭುವಿ ನಡುವಿನ ಫೀಲಿಂಗ್ಸ್ ರಿವೀಲ್ ಆಗುತ್ತಾ..? ಭುವಿಗೆ ಹರ್ಷ ಪ್ರಪೋಸ್ ಮಾಡ್ತಾನಾ..? ನೀರ ಮಧ್ಯೆ ಭುವಿಯನ್ನು ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ನೋಡೋ ಕರ್ಷ ಪ್ರೀತಿಯನ್ನು ತಿಳಿಸ್ತಾನಾ..? ಇವೆಲ್ಲವೂ ಸಸ್ಪೆನ್ಸ್
ನೀರಿನ ಮಧ್ಯೆ ಭುವಿಯನ್ನು ಹರ್ಷ ತೋಳಲ್ಲಿ ಬಳಸಿ ಹಿಡಿದುಕೊಂಡಿರೋ ರೊಮ್ಯಾಂಟಿಕ್ ಫೋಟೋ ಒಂದು ವೈರಲ್ ಆಗಿದೆ. ಇಬ್ಬರ ಲವ್ ಸ್ಟೋರಿಯಲ್ಲಿ ಇಂಟ್ರೆಸ್ಟಿಂಗ್ ಬೆಳವಣಿಗೆಗಳು ಆಗಲಿದೆಯಾ..? ಕಾದು ನೋಡಬೇಕು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.