ಸಾವು ಬದುಕಿನ ನಡುವೆ ರಾಮ್​: ಸೀತಾಳಿಗೆ ತಪ್ಪಿನ ಅರಿವಾಗೋ ಹೊತ್ತಲ್ಲೇ ಹಳೆಯ ಲವರ್​ ಎಂಟ್ರಿ! ಏನಿದು ಟ್ವಿಸ್ಟ್​?

Published : Feb 21, 2024, 02:13 PM ISTUpdated : Feb 21, 2024, 02:19 PM IST
ಸಾವು ಬದುಕಿನ ನಡುವೆ ರಾಮ್​: ಸೀತಾಳಿಗೆ ತಪ್ಪಿನ ಅರಿವಾಗೋ  ಹೊತ್ತಲ್ಲೇ  ಹಳೆಯ ಲವರ್​ ಎಂಟ್ರಿ! ಏನಿದು ಟ್ವಿಸ್ಟ್​?

ಸಾರಾಂಶ

ಅಪಘಾತದಲ್ಲಿ ರಾಮ್​ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಂದರ್ಭದಲ್ಲಿಯೇ ಅವನ ಮಾಜಿ ಪ್ರೇಯಸಿಯ ಎಂಟ್ರಿ ಆಗಿದೆ. ಮುಂದೇನು?  

ಪ್ರೀತಿಯನ್ನು ಹೇಳಿಕೊಂಡು ಬಂದ ರಾಮ್​ನನ್ನು ಬೈದು ಸೀತಾ ಮನೆಯಿಂದ ಹೊರಕ್ಕೆ ಕಳಿಸಿದ್ದಾಳೆ. ಇದೇ ಅವಮಾನದಲ್ಲಿ ರಾಮ್​ ಏನು ಮಾಡಬೇಕು ಎಂದು ತಿಳಿಯುವಷ್ಟರಲ್ಲಿಯೇ ಭಯಾನಕ ಅಪಘಾತ ಸಂಭವಿಸಿದೆ. ಅಷ್ಟಕ್ಕೂ ಈ ಆ್ಯಕ್ಸಿಡೆಂಟ್​ ಮಾಡಿಸಿದ್ದು, ಖುದ್ದು ಆತನ ಚಿಕ್ಕಮ್ಮ. ಸೀತಾಳಿಗೆ ಮೋಸ ಮಾಡುವ ಉದ್ದೇಶದಿಂದ ಮದುವೆಯಾಗಲು ಹೊರಟಿದ್ದ ರುದ್ರಪ್ರತಾಪ್​ನ ಕೈಜೋಡಿಸಿ ಚಿಕ್ಕಮ್ಮ ಅಪಘಾತ ಮಾಡಿಸಿದ್ದಾಳೆ. ಜೈಲು ಸೇರಿದ್ದ ರುದ್ರಪ್ರತಾಪ್​ನಿಗೆ ಜಾಮೀನು ಕೊಡಿಸಿ ಹೊರಕ್ಕೆ ಕರೆದುಕೊಂಡು ಬಂದಿರುವ ಚಿಕ್ಕಮ್ಮ, ರುದ್ರಪ್ರತಾಪ್​ ಕೈಯಲ್ಲಿ ಅಪಘಾತ ಮಾಡಿಸಿದ್ದಾಳೆ. ಭೀಕರ ಅಪಘಾತದಲ್ಲಿ ರಾಮ್​ ಆಸ್ಪತ್ರೆಗೆ ಸೇರಿದ್ದಾನೆ. ಆದರೆ ಆತ ಉಳಿಯುವುದು ಕಷ್ಟ ಎಂದಿದ್ದಾರೆ ವೈದ್ಯರು. ತುರ್ತಾಗಿ ಓ ಪಾಸಿಟಿವ್​ ರಕ್ತ ಬೇಕು ಎಂದಿದ್ದಾರೆ.

ಅದೇ ಇನ್ನೊಂದೆಡೆ ಸೀತಾಳಿಗೆ ಅಪಘಾತದ ವಿಷಯ ತಿಳಿದು ಗಾಬರಿಯಾಗಿದ್ದಾಳೆ. ಜೋರಾಗಿ ಅಳುತ್ತಾ ಆಸ್ಪತ್ರೆಗೆ ಧಾವಿಸಿದ್ದಾಳೆ. ತನ್ನಿಂದ ತಪ್ಪಾಯ್ತು ಎಂದು ಗೋಳೋ ಎಂದಿದ್ದಾಳೆ. ಆಸ್ಪತ್ರೆಗೆ ಧಾವಿಸುತ್ತಿರುವ ಹೊತ್ತಿನಲ್ಲಿಯೇ ಸೀರಿಯಲ್​ಗೆ ಭಾರಿ ಟ್ವಿಸ್ಟ್​ ಬಂದಿದೆ. ರಾಮ್​ನ ಮಾಜಿ ಪ್ರೇಯಸಿಯ ಎಂಟ್ರಿ ಆಗಿದೆ. ಹೂಗುಚ್ಛ ಹಿಡಿದುಕೊಂಡು ಬಂದಿದ್ದಾಳೆ. ಇದು ಕೂಡ ಚಿಕ್ಕಮ್ಮನ ತಂತ್ರವೇ ಎನ್ನುವುದರಲ್ಲಿ ಸಂದೇಹವಿಲ್ಲ. ಅಷ್ಟಕ್ಕೂ ಇದು ಸೀರಿಯಲ್​ ಆಗಿರುವ ಕಾರಣ, ರಾಮ್​ ಅಂತೂ ಸಾಯಲ್ಲ ಎನ್ನುವುದು ದಿಟ. ಆದರೆ ಮುಂದೇನಾಗುತ್ತದೆ ಎನ್ನುವ ಕುತೂಹಲ ಈಗ. 

ಮದ್ವೆಯಾಗ್ತೇನಂತ ಪ್ರತಾಪ್​ ಬಳಿ ಹೊಸಪೇಟೆ ಯುವತಿಯರು! ನಾಚಿ ನೀರಾದ ಡ್ರೋನ್​ ಮಾಡಿದ್ದೇನು ನೋಡಿ...

ಒಂದೆಡೆ ಸೀತಾಳಿಗೆ ಪ್ರೀತಿ ತಿಳಿಯುವ ಹೊತ್ತು, ಇನ್ನೊಂದೆಡೆ ಮಾಜಿ ಪ್ರೇಯಸಿಯ ಎಂಟ್ರಿ. ಇದೀಗ ರಾಮ್​ಗೆ ಏನಾಗುತ್ತದೆ? ಓ ಪಾಸಿಟಿವ್​ ರಕ್ತ ಸೀತಾ ಕೊಡುತ್ತಾಳೋ ಇಲ್ಲವೇ ಮಾಜಿ ಪ್ರೇಯಸಿನಾ? ರಾಮ್​ಗೆ ಒಂದೆಡೆ ಈಗ ತಾನೇ ಲವ್​ ಶುರುವಾಗಿರುವ ಸೀತಾ, ಇನ್ನೊಂದೆಡೆ ಮಾಜಿ ಪ್ರೇಯಸಿ. ಇಷ್ಟು ವರ್ಷಗಳ ಕಾಲ ಮಾಜಿ ಪ್ರೇಯಸಿಯ ನೆನಪಿನಲ್ಲಿಯೇ ಇದ್ದ ರಾಮ್​ ಈಗ ತಾನೇ ಆಕೆಯ ನೆನಪಿನಿಂದ ಹೊರ ಬರಲು ಶುರು ಮಾಡಿದ್ದಾನೆ. ಮುಂದೆ ಎಂದಿಗೂ ಪ್ರೀತಿ, ಮದುವೆಯ ಜಂಜಾಟದಲ್ಲಿ ಬೀಳುವುದಿಲ್ಲ ಎಂದುಕೊಂಡಿದ್ದ ಆತ ಈಗ ಸೀತಾಳ ಪ್ರೀತಿಯಲ್ಲಿ ಬಿದ್ದಿದ್ದಾನೆ. 

ಈಗ ಮಾಜಿ ಪ್ರೇಯಸಿಯ ಎಂಟ್ರಿ ಆಗಿರೋ ಹೊತ್ತಿನಲ್ಲಿ ಮುಂದೇನಾಗುತ್ತದೆ? ಕುತೂಹಲದ ಕ್ಷಣದಲ್ಲಿ ಸೀತಾರಾಮ ಸೀರಿಯಲ್​ ತಲುಪಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಈ ಸೀರಿಯಲ್​ನ ಪ್ರೊಮೋ ಬಿಡುಗಡೆಯಾಗಿದೆ. ಎಲ್ಲರೂ ರಾಮ್​ ಇರುವುದೇ ಸೀತೆಗಾಗಿ. ನೀನು ಸೀತಾಳನ್ನೇ ಮದುವೆಯಾಗು ಎಂದು ರಾಮ್​ಗೆ ಸಲಹೆ ಕೊಡುತ್ತಿದ್ದಾರೆ. ಮಾಜಿ ಪ್ರೇಯಸಿ ಕುತಂತ್ರ ಬುದ್ಧಿಯಿಂದ ಬಂದಿದ್ದಾಳೆ. ಅವಳ ಮಾತನ್ನು ಕೇಳಬೇಡ ಎಂದೂ ಹೇಳುತ್ತಿದ್ದಾರೆ. ಹಾಗಿದ್ದರೆ ಮುಂದೇನಾಗುತ್ತದೆ? 

ದಾದಾಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಕಟ; ಅತ್ಯುತ್ತಮ ನಟ, ನಟಿ, ವಿಲನ್​ ಯಾರು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!