ಅಲ್ಲಿ ಜೈಲುಪಾಲಾಗಿದ್ರೆ ಇಲ್ಲಿ ಡ್ಯಾನ್ಸ್​ ಮಾಡ್ತಿದ್ದೀರಾ? 'ಪುಟ್ಟಕ್ಕನ ಮಕ್ಕಳು' ವಿಲನ್ಸ್​ಗೆ ಕಾಲೆಳೆದ ನೆಟ್ಟಿಗರು

Published : Oct 01, 2023, 12:02 PM IST
ಅಲ್ಲಿ ಜೈಲುಪಾಲಾಗಿದ್ರೆ ಇಲ್ಲಿ ಡ್ಯಾನ್ಸ್​ ಮಾಡ್ತಿದ್ದೀರಾ? 'ಪುಟ್ಟಕ್ಕನ ಮಕ್ಕಳು' ವಿಲನ್ಸ್​ಗೆ ಕಾಲೆಳೆದ ನೆಟ್ಟಿಗರು

ಸಾರಾಂಶ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ವಿಲನ್ಸ್​ ರಾಜೇಶ್ವರಿ ಮತ್ತು ಕಾಳಿ ಅಕ್ಕ-ಅಮ್ಮ ಚಂದನ್​ ಶೆಟ್ಟಿಯವರ ಚೂ ಮಂತರ್​ ಹಾಡಿಗೆ ಸಕತ್ ಸ್ಟೆಪ್​ ಮಾಡಿದ್ದರೆ, ಫ್ಯಾನ್ಸ್​ ಇವರ ಕಾಲೆಯುತ್ತಿದ್ದಾರೆ.   

ಟಿಆರ್​ಪಿಯಲ್ಲಿ ಟಾಪ್​ ಸ್ಥಾನವನ್ನು ಕಾಯ್ದುಕೊಂಡು ಬಂದಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್​ ಇದೀಗ ಕುತೂಹಲದ ಘಟ್ಟ ತಲುಪಿದೆ. ಪುಟ್ಟಕ್ಕನ ಮೆಸ್​ಗೆ ಬೆಂಕಿ ಹಾಕಿದ್ದು ಕಂಠಿಯ ಅಮ್ಮ ಬಂಗಾರಮ್ಮ ಎನ್ನುವ ಆರೋಪದಿಂದ ಆಕೆ ಮುಕ್ತಳಾಗಿದ್ದಾಳೆ. ಪೊಲೀಸಪ್ಪನ ಬಾಯಿ ಬಿಡಿಸಿರೋ ಕಂಠಿಯಿಂದ ಮೆಸ್ಸಿಗೆ ಬೆಂಕಿ ಹಾಕಿದ್ದು ವಿಲನ್​ ಆಗಿರೋ ಕಾಳಿ ಎಂದು ಗೊತ್ತಾಗಿದ್ದು, ಆತನನ್ನು ಪೊಲೀಸರು ಹಿಡಿದುಕೊಂಡು ಹೋಗಿದ್ದಾರೆ. ಪುಟ್ಟಕ್ಕನ ಮೆಸ್​ಗೆ ಬೆಂಕಿ ಬಿದ್ದಿದ್ದರಿಂದ ಖುಷಿಯಿಂದ ಕುಣಿದಾಡುತ್ತಿದ್ದ ಆಕೆಯ ಸವತಿ ರಾಜೇಶ್ವರಿಗೆ ತನ್ನ ತಮ್ಮದೇ ಬೆಂಕಿ ಹಾಕಿದ್ದು ಎಂದು ಕೇಳಿ ಶಾಕ್​ ಆಗಿದೆ. ತಮ್ಮನನ್ನು ಪೊಲೀಸರು ಕರೆದುಕೊಂಡು ಹೋಗಿದ್ದನ್ನು ಜೀರ್ಣಿಸಿಕೊಳ್ಳಲಾಗದೇ ಕೊತ ಕೊತ ಕುದಿಯುತ್ತಿದ್ದಾಳೆ ಆಕೆ. ಅದೇ ಇನ್ನೊಂದೆಡೆ ಗಂಡನನ್ನು ಕಂಡರೆ ಉರಿದು ಬೀಳುತ್ತಿದ್ದ ಸ್ನೇಹಾಗೆ ಕಂಠಿಯ ಮೇಲೆ ಪ್ರೀತಿ ಚಿಗುರೊಡೆಯುತ್ತಿದೆ. ಹಾವು-ಮುಂಗುಸಿಯಂತಿರೋ ಬಂಗಾರಮ್ಮ ಮತ್ತು ಸ್ನೇಹಾ ಅತ್ತೆ-ಸೊಸೆ ಹತ್ತಿರವಾಗುವ ಕಾಲವೂ ಹತ್ತಿರ ಬರುತ್ತಿದೆ. ಧಾರಾವಾಹಿಯಲ್ಲಿ ಇಷ್ಟೆಲ್ಲಾ ನಡೆಯುತ್ತಿರುವಾಗ ಇತ್ತ ಇದರ ಪಾತ್ರಧಾರಿಗಳು ಶೂಟಿಂಗ್ ಮಧ್ಯೆಯೇ ಸಕತ್​ ರೀಲ್ಸ್​ ಮಾಡಿ ಎಂಜಾಯ್​ ಮಾಡುತ್ತಿದ್ದಾರೆ.

ರಾಜೇಶ್ವರಿ ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಈ ಪುಟ್ಟಕ್ಕನ ಮಕ್ಕಳ ಧಾರಾವಾಹಿಯ ವಿಲನ್​ ಪಾತ್ರವೇ ಹಾದುಹೋಗುವಷ್ಟರ ಮಟ್ಟಿಗೆ ರಾಜೇಶ್ವರಿ (Rajeshwari) ಪಾತ್ರ ಜೀವ ತುಂಬಿದೆ. ಗಂಡ ಇಲ್ಲದಿದ್ದರೂ ಕ್ಷಣ ಕ್ಷಣಕ್ಕೂ ನೋವನ್ನೇ ಪುಟ್ಟಕ್ಕ ಅನುಭವಿಸುತ್ತಿದ್ದರೂ ಅವರ ಮನೆಯ ಸಮೀಪವೇ ಇದ್ದು, ಕ್ಷಣ ಕ್ಷಣಕ್ಕೂ ಆಕೆಗೆ ತೊಂದರೆ ಕೊಡುವಲ್ಲಿ ಈ ಸವತಿ ರಾಜೇಶ್ವರಿಯದ್ದು ಎತ್ತಿದ ಕೈ. ಪುಟ್ಟಕ್ಕನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದರೂ ಪುಟ್ಟಕ್ಕನಿಗೆ ತೊಂದರೆ ಕೊಡುವುದು ಎಂದರೆ ಈಕೆಗೆ ಅದೇನೋ ಖುಷಿ. ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ಥೇಟ್​ ವಿಲನ್​ನಂತೆ ಪಾತ್ರ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ರಾಜೇಶ್ವರಿಯವರ ನಿಜವಾದ ಹೆಸರು ಹಂಸ ನಾರಾಯಣಸ್ವಾಮಿ @ ಹಂಸ ಪ್ರತಾಪ್​ (Hamsa Pratap). 

ರಾಣಿಯ ರೂಪದಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ: ವಿಡಿಯೋ ನೋಡಿ ನೀವೇ ಶೀರ್ಷಿಕೆ ಕೊಡಿ ಎಂದ ನಟಿ

ಅದೇ ಇನ್ನೊಂದೆಡೆ, ಪುಟ್ಟಕ್ಕನ ದೊಡ್ಡ ಮಗಳ ಮೇಲೆ ಕಣ್ಣು ಹಾಕಿ, ಆಕೆಯ ಮದುವೆ ಬೇರೆ ಕಡೆ ಆಯಿತೆಂದು ಸಿಟ್ಟಿನಿಂದ ಮೆಸ್ಸಿಗೇ ಬೆಂಕಿ ಇಟ್ಟು ಜೈಲುಪಾಲಾಗಿರೋ ಕಾಳಿಯ ನಿಜವಾದ ಹೆಸರು ಅನಿರಿಶ್​. ಈ ಧಾರಾವಾಹಿಯಲ್ಲಿ ರಾಜೇಶ್ವರಿ ಹಾಗೂ ಅನಿರಿಶ್​ ಅವರದ್ದು ಅಕ್ಕ-ತಮ್ಮನ ಪಾತ್ರ. ಇದೀಗ ಈ ಅಕ್ಕ-ತಮ್ಮ ಸೇರಿ ಸಕತ್​ ರೀಲ್ಸ್​ ಮಾಡಿದ್ದಾರೆ. ಸಿನಿಮಾ ನಿರ್ದೇಶಕ ಚಂದನ್​  ಶೆಟ್ಟಿ ಅವರ ಚೂ ಮಂತರ್ ಹಾಡಿಗೆ ಇವರಿಬ್ಬರಿಗೂ ರೀಲ್ಸ್​ ಮಾಡಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ. ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿದೆ.

ಕೆಲವರು   ಧಾರಾವಾಹಿಯ ಅಕ್ಕ-ತಮ್ಮನಿಗೆ ಕಾಲೆಳೆಯುತ್ತಿದ್ದಾರೆ. ಕಾಳಿ ಜೈಲು ಪಾಲಾಗಿದ್ದು, ಅಕ್ಕ ನೋವಿನಿಂದ ಇರಬೇಕು. ಇಲ್ಲಿ ನೋಡಿದ್ರೆ ಇಬ್ಬರೂ ಸೇರಿ ಡ್ಯಾನ್ಸ್​ ಮಾಡ್ತಾ ಇದ್ದೀರಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವರು ನಿಮ್ಮಿಬ್ಬರ ಪಾತ್ರ, ಆ್ಯಕ್ಟಿಂಗ್​ ಸೂಪರೋ ಸೂಪರ್​ ಎನ್ನುತ್ತಿದ್ದಾರೆ. ಖಳನಾಯಕ- ನಾಯಕಿಯಾಗಿ ಸಕತ್​ ಪಾತ್ರ ಮಾಡಿರುವಿರಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಬಾಕ್ಸಿಂಗ್​ ಪಟು ಪುಟ್ಟಕ್ಕನ ಮಕ್ಕಳು ವಿಲನ್​ ರಾಜೇಶ್ವರಿ: ಪಂಚ್​ ನೋಡಿ ಉಫ್​ ಎಂದ ಫ್ಯಾನ್ಸ್​!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆಯಾದ್ಮೇಲೆ ನಟನೆ ಬಿಟ್ಟಿದ್ದೆ; ಪತಿ ಬೆಂಬಲಕ್ಕೆ ಕೊನೆಗೂ ಮಣಿದೆ: Nandagokula Serial ಪ್ರಿಯಾ Interview
Muddu Sose Serial: ವಿದ್ಯಾಗೆ ಸಂಕಟ ತಂದಿಟ್ಟ ವಿನೋದಿನಿ; ಈಗ ಸೋತರೆ ಮಾತ್ರ ಭದ್ರನಿಂದ ಶಾಶ್ವತವಾಗಿ ದೂರ!