ಅಳುವುದರಲ್ಲಿ ಅಮೃತಾಳನ್ನೇ ಮೀರಿಸಿದ ಮಂಗಳ ಗೌರಿ; ಸ್ವಲ್ಪ ದಿನಗಳಲ್ಲಿ 'ಶುಕ್ರ ಗೌರಿ' ಶುರುವಾಗುತ್ತೆ?

Suvarna News   | Asianet News
Published : Dec 29, 2020, 01:10 PM IST
ಅಳುವುದರಲ್ಲಿ ಅಮೃತಾಳನ್ನೇ ಮೀರಿಸಿದ ಮಂಗಳ ಗೌರಿ; ಸ್ವಲ್ಪ ದಿನಗಳಲ್ಲಿ 'ಶುಕ್ರ ಗೌರಿ' ಶುರುವಾಗುತ್ತೆ?

ಸಾರಾಂಶ

ಸೀರಿಯಲ್‌ನಲ್ಲಿ ನಟಿಯರು ಅಳುವುದು ತುಂಬಾ ಕಾಮನ್‌. ಅದರೆ ಅಳುವುದೇ ಸೀರಿಯಲ್‌ನ ಮುಖ್ಯ ಭಾಗವಾದರೆ? ಟ್ರೋಲ್‌ ಪೇಜ್‌ವೊಂದರ ಪೋಸ್ಟ್‌ಗೆ ಬಂದ ಕಮೆಂಟ್ಸ್‌ ನೋಡಿ...

ಕಿರುತೆರೆ ಧಾರಾವಾಹಿಗಳಲ್ಲಿ ಹೆಚ್ಚಾಗಿ ವೀಕ್ಷಕರ ಗಮನ ಸೆಳೆಯುವುದು ನಟ-ನಟಿಯರ ರೊಮ್ಯಾನ್ಸ್‌, ವಸ್ತ್ರ ವಿನ್ಯಾಸ ಹಾಗೂ ವಿಭಿನ್ನ ಕಥೆಗಳು. ಆದರೆ ಇನ್ನೂ ಕೆಲವೊಂದು ಧಾರಾವಾಹಿಗಳಲ್ಲಿ ಅಳುಮುಂಜಿ ಪಾತ್ರಗಳು ಬಿಗ್ ಹಿಟ್ ಆಗುತ್ತದೆ. ಟ್ರೋಲ್‌ ಪೇಜ್‌ವೊಂದರಲ್ಲಿ ಧಾರಾವಾಹಿ ಹಿಸ್ಟರಿಯಲ್ಲಿ ಅತಿ ಹೆಚ್ಚು ಅಳುಮುಂಜಿ ನಟಿ ಯಾರೆಂದು ಗೆಸ್‌ ಮಾಡಿದ್ದಾರೆ...

'ಅಮೃತವರ್ಷಿಣಿ' ನಂತ್ರ ಮಾಯವಾಗಿದ್ದ ರಜನಿ ಈಗ ಫುಲ್ ಮಾಡ್ ಆಗಿ ಬಂದಿದ್ದಾರೆ ನೋಡಿ!

ಟ್ರೋಲ್ ಪೋಸ್ಟ್‌:
ಹಲವು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ 'ಅಮೃತ ವರ್ಷಿಣಿ' ಧಾರಾವಾಹಿಯ ಅಮೃತಾ ತುಂಬು ಕುಟುಂಬಕ್ಕೆ ಸೊಸೆಯಾಗಿ ಹೋಗುತ್ತಾಳೆ. ಅಕ್ಕ-ತಂಗಿ ಒಂದೇ ಮನೆಗೆ ಹಿರಿ ಹಾಗೂ ಕಿರಿ ಸೊಸೆಯಾಗಿ ಎಂಟ್ರಿ ಕೊಟ್ಟರೆ, ಆಸ್ತಿ ಅಥವಾ ಆಭರಣ ವಿಚಾರಕ್ಕೆ ಜಗಳ ಶುರುವಾಗುವುದು ತುಂಬಾ ಕಾಮನ್. ರಿಯಲ್‌ ಲೈಫ್‌ನಲ್ಲಿಯೇ ಇಬ್ಬರೂ ಜಗಳು ಅಡುತ್ತಾರೆ. ಆದರೆ ಈ ರೀಲ್‌ ಲೈಫ್‌ನಲ್ಲಿ ಅಕ್ಕ ಎಲ್ಲಾ ನೋವುಗಳನ್ನೂ ಹೊಟ್ಟೆಗೆ ಹಾಕಿಕೊಳ್ಳುತ್ತಾಳೆ. ಸಂತೋಷಕ್ಕಿಂತ ದುಖಃವನ್ನೇ ಹೆಚ್ಚಾಗಿ ಅನುಭವಿಸುತ್ತಾಳೆ. ಸಿಕ್ಕಾಪಟ್ಟೆ ಅಳುತ್ತಾಳೆ. ಈ ಪಾತ್ರದಲ್ಲಿ ಕಾಣಿಸಿಕೊಂಡ ಅಮೃತಾ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದರು.

ಇನ್ನು ಅಳುಮುಂಜಿ ಅಮೃತಾಗೆ ಬಿಗ್‌ ಕಾಂಪಿಟೇಷನ್‌ ಕೊಡೋಕೆ ನಮ್ಮ ಮಂಗಳ ಗೌರಿ ಬರ್ತಿದ್ದಾಳೆ ಅಂತ ಟ್ರೋಲ್ ಮಾಡಲಾಗುತ್ತಿದೆ. ಮದುವೆಯಾದರೂ ಗಂಡ ಮನೆಯಲ್ಲಿ ಇರಲಾಗುತ್ತಿಲ್ಲ, ಕುಟುಂಬಸ್ಥರಿಂದ ಕಿರುಕುಳ, ವಿಲನ್‌ಗಳ ರಂಪಾಟ ಎಲ್ಲವನ್ನೂ ಸಹಿಸಿಕೊಂಡ ಮಂಗಳ ಗೌರಿ ಅಳುವುದರಲ್ಲಿ ಅಮೃತಾಳನ್ನು ಮೀರಿಸುತ್ತಿದ್ದಾಳೆ.

ಮಂಗಳಗೌರಿಯ ಮಾಡರ್ನ್ ಲುಕ್ ಹೇಗಿದೆ..? ಇಲ್ನೋಡಿ ಫೋಟೋಸ್ 

ನೆಟ್ಟಿಗರ ಕಾಮೆಂಟ್ಸ್:
'ಈ ಮಂಗಳ ಗೌರಿ ಮದುವೆ ಮುಗಿಯುತ್ತಿಲ್ಲ, ಅಕಸ್ಮಾತ್‌ ಮುಗಿದರೂ ಶುಕ್ರ ಗೌರಿ ಮದುವೆ ಶುರು ಆಗುತ್ತೆ. ಹೀಗೆ ಇರೋ ಬರೋ ಗೌರಿಗಳ ಮದುವೆ ಮಾಡ್ತಾರೆ ಇವರು,' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಧಾರಾವಾಹಿ ಹೇಗಿದೆ, ಕತೆಯಲ್ಲಿ ಬರುತ್ತಿರುವ ಟ್ವಿಸ್ಟ್‌ ಬಗ್ಗೆ ಅಭಿಪ್ರಾಯ ಹೇಳಿಕೊಂಡಿದ್ದಾರೆ.

ಈ ಹಿಂದೆ ಪ್ರಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆ ಬಗ್ಗೆಯೂ ಸಾಕಷ್ಟು ಟ್ರೋಲ್ ಆಗುತ್ತಿದ್ದವು. ಕಾಡಿಗೆ ಹೋಗಿ ಹುಲಿಯಿಂದ ತಪ್ಪಿಸಿಕೊಂಡು ಬಂದರೂ ಪುಟ್ಟು ಗೌರಿಗೆ ಏನೂ ಆಗಲ್ಲ. ಹೋಗಲಿ ಆ ಹಿಮಾಳ ಅತ್ತೆ ಈ ಪುಟ್ಟ ಗೌರಿಯನ್ನು ನೆಲದಲ್ಲಿ ಹೂತರೂ ಏನೋ ಆಗದೇ ಇದ್ದಿದ್ದಕ್ಕೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದರು. ಆದರೂ, ಆ ಸೀರಿಯಲ್ ಒಳ್ಳೆಯ ಟಿಆರ್‌ಪಿ ಪಡೆಯುವಲ್ಲಿ ಯಶಸ್ವಿಯಾಗಿತ್ತು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?