ಪತ್ನಿಯನ್ನು ಪ್ರಾಣಿಗೆ ಹೋಲಿಸಿದ ತಾಂಡವ್​: ಭಾಗ್ಯಲಕ್ಷ್ಮಿ ಸೀರಿಯಲ್​ ವಿರುದ್ಧ ನೆಟ್ಟಿಗರ ಭಾರಿ ಆಕ್ರೋಶ

Published : May 28, 2024, 05:11 PM IST
ಪತ್ನಿಯನ್ನು ಪ್ರಾಣಿಗೆ ಹೋಲಿಸಿದ ತಾಂಡವ್​: ಭಾಗ್ಯಲಕ್ಷ್ಮಿ ಸೀರಿಯಲ್​ ವಿರುದ್ಧ ನೆಟ್ಟಿಗರ ಭಾರಿ ಆಕ್ರೋಶ

ಸಾರಾಂಶ

ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಹೆಂಡತಿಯನ್ನು ಪ್ರಾಣಿಗೆ ಹೋಲಿಸಿರುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದ್ದು, ಪ್ರೇಕ್ಷಕರು ಏನು ಹೇಳಿದ್ದಾರೆ ಕೇಳಿ...  

ಕಲರ್ಸ್​  ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ ನಾಯಕಿಯ ಅಳುಮುಂಜಿ ಪಾತ್ರಕ್ಕೆ ಇದಾಗಲೇ ಅಭಿಮಾನಿಗಳು ರೋಸಿ ಹೋಗಿದ್ದಾರೆ. ಆರಂಭದಲ್ಲಿ ಅತ್ತೆ-ಸೊಸೆಯ ಮಧುರ ಬಾಂಧವ್ಯದ ಕುರಿತು ತೋರಿಸಲಾಗಿತ್ತು. ಇದನ್ನು ಫ್ಯಾನ್ಸ್​ ಅಪಾರವಾಗಿ ಮೆಚ್ಚಿಕೊಂಡು ಇದ್ದರೆ ಇಂಥ ಸೀರಿಯಲ್​ ಇರಬೇಕು ಎನ್ನುತ್ತಿದ್ದರು. ಮಗ ತಾಂಡವ್​ನನ್ನು ಎದುರು ಹಾಕಿಕೊಂಡು ಸೊಸೆಯ ಪರವಾಗಿ ನಿಂತ ಕುಸುಮಾಳು ಎಲ್ಲರಿಗೂ ಮಾದರಿ ಎನ್ನುತ್ತಿದ್ದರು. ಆದರೆ ಇತ್ತೀಚಿನ ಕೆಲವು ಎಪಿಸೋಡ್​ಗಳಲ್ಲಿ ಭಾಗ್ಯಳ ವಿಪರೀತ ಪೆದ್ದುತನ ಒಂದೆಡೆಯಾದರೆ, ತಾಂಡವ್​ ಮಾತು ಮಾತಿಗೂ ಪತ್ನಿಯನ್ನು ಹೀಯಾಳಿಸುವುದನ್ನು ವೀಕ್ಷಕರು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ಸಹಿಸುತ್ತಿಲ್ಲ.

ಇದೀಗ, ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ತಾಂಡವ್​ ಭಾಗ್ಯಳನ್ನು ಎಮ್ಮೆ ಎಂದು ಜರಿದಿದ್ದಾನೆ. ಭಾಗ್ಯ ಹೋಟೆಲ್​ನಲ್ಲಿ ಇದ್ದುದನ್ನು ತಾಂಡವ್​ ನೋಡಿದ್ದ. ಇತ್ತ ಭಾಗ್ಯ ಮನೆಯಲ್ಲಿ ಎಲ್ಲರಲ್ಲಿಯೂ ಸುಳ್ಳಿ ಹೇಳಿ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೋಟೆಲ್​ಗೆ ಕೆಲಸಕ್ಕೆ ಹೋಗಿದ್ದಳು. ಅತ್ತ ಮಗ ಗುಂಡ ಕೈಸುಟ್ಟುಕೊಂಡಿದ್ದಾನೆ. ಭಾಗ್ಯ ಆತನಿಗೆ ಚಿಕಿತ್ಸೆ ನೀಡುತ್ತಿರುವಾಗ, ಭಾಗ್ಯ ಮನೆಯಲ್ಲಿ ಇಲ್ಲದ್ದನ್ನು ಕಂಡು ತಾಂಡವ್​ ಜೊತೆ ಹೋಗಿರುವ ಭಾಗ್ಯಳ ಅಮ್ಮ, ಮಗಳ ಮೇಲೆ ರೇಗಾಡಿದ್ದಾಳೆ. ಬೆಳಿಗ್ಗೆಯಿಂದ ಎಲ್ಲಿಗೆ ಹೋಗಿದ್ದಿ ಎಂದು ಕೇಳಿದ್ದಾಳೆ. ಭಾಗ್ಯಳಿಗೆ ಏನು ಹೇಳಬೆಕೋ ಗೊತ್ತಾಗುತ್ತಿಲ್ಲ.

ಅಲ್ಲೇ ಡ್ರಾ ಅಲ್ಲೇ ಬಹುಮಾನ: ಅತ್ತೆ ಚಾಪೆ ಕೆಳಗೆ ನುಸುಳಿದ್ರೆ ಈ ಸೊಸೆಗೆ ರಂಗೋಲಿ ಕೆಳಗೆ ನುಸುಳೋದು ಗೊತ್ತಿಲ್ವಾ?

ಅದೇ ಇನ್ನೊಂದೆಡೆ, ಭಾಗ್ಯಳನ್ನು ಹೋಟೆಲ್​ನಲ್ಲಿ ನೋಡಿದ್ದ ತಾಂಡವ್​, ಏ ಎಮ್ಮೆ... ಅಮ್ಮ ಮಾತನಾಡಿಸುವುದು ಕೇಳಿಸ್ತಿಲ್ವಾ? ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿದ್ಯೋ ಅಥವಾ ಎಂದಿದ್ದಾನೆ. ಇದನ್ನು ಕೇಳಿ ಭಾಗ್ಯಳಿಗೆ ಗಾಬರಿಯಾಗಿದೆ. ತನ್ನ ಗಂಡ ಹೋಟೆಲ್​ನಲ್ಲಿ ನೋಡಿಬಹುದು ಎಂಬ ಸಂದೇಹ ಮೂಡಿದೆ. ಅಷ್ಟರಲ್ಲಿಯೇ ಮಧ್ಯೆ ಪ್ರವೇಶಿಸುವ ಕುಸುಮಾ, ನೀನು ದೇವಸ್ಥಾನಕ್ಕೆ ಹೋಗಿರುವುದು ನನಗೆ ಗೊತ್ತು. ಯಾರಿಗೂ ಉತ್ತರ ಕೊಡಬೇಕಾಗಿಲ್ಲ. ಪಕ್ಕದ ಮನೆಯವರು ನಮ್ಮ ಮನೆಯ ತಂಟೆಗೆ ಬರಬೇಡಿ ಎಂದಿದ್ದಾಳೆ. ಅಷ್ಟರ ಮಟ್ಟಿಗೆ ಭಾಗ್ಯ ಬಚಾವ್​ ಆಗಿದ್ದಾಳೆ.  ಆದರೆ ಪತ್ನಿಯನ್ನು ಎಮ್ಮೆ ಎಂದು ಕರೆದಿರುವುದಕ್ಕೆ ಈಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಹೆಣ್ಣಿನ ಪಾತ್ರವನ್ನು ಅಳುಮುಂಜಿ ರೀತಿ ತೋರಿಸ್ತಿರೋದು ಸಾಲದು ಎಂಬುದಕ್ಕೆ ಈಗ ಹೆಂಡ್ತಿಯನ್ನು ಪ್ರಾಣಿಗಳಿಗೆ ಹೋಲಿಸಿ ಕರೆಯುವ ಸಂಸ್ಕಾರವನ್ನು ಕಲಿಸುತ್ತಿದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಇಂಥ ಸೀರಿಯಲ್​ಗಳನ್ನು ಬೈಕಾಟ್​ ಮಾಡಬೇಕು ಎನ್ನುತ್ತಿದ್ದಾರೆ ಹೆಚ್ಚಾಗಿ ಮಹಿಳಾ ಫ್ಯಾನ್ಸ್​.

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಭಾಗ್ಯಳಿಗೆ ಯಾರದ್ದೋ ಹೆಸರಿನಲ್ಲಿ ಕೆಲಸ ಸಿಕ್ಕಿತ್ತು. ಅದು ತಿಳಿದು ಅವಳು ಕೆಲಸ ಕಳೆದುಕೊಂಡಿದ್ದಾಳೆ. ಅತ್ತೆ ಕುಸುಮಾ ಕೂಡ ಚಿಕ್ಕ ವಿಷಯಕ್ಕೆ ಗಲಾಟೆ ಮಾಡಿಕೊಂಡು ಹೋಟೆಲ್​ನಿಂದ ಹೊರಕ್ಕೆ ಬಂದಿದ್ದಾಳೆ. ಸದ್ಯ ಅತ್ತೆ-ಸೊಸೆ ನಿರುದ್ಯೋಗಿಗಳಾಗಿದ್ದಾರೆ. ಅದೇ ಇನ್ನೊಂದೆಡೆ ಕಪಾಟಿನಲ್ಲಿ ಮದುವೆಯ ಕಾರ್ಡ್​ ಹುಡುಕುತ್ತಿದ್ದ ತಾಂಡವ್​ ಸಿಕ್ಕಿ ಬಿದ್ದಿದ್ದಾನೆ. ತಂದೆ ಕೇಳಿದಾಗ ಚಿನ್ನದ ರಿಂಗ್​ ಇಟ್ಟಿದ್ದೆ. ಅದನ್ನೇ ಹುಡ್ತಾ ಇದ್ದೆ ಎಂದು ಸುಳ್ಳು ಹೇಳಿದ್ದಾನೆ. ತಾಂಡವ್​-ಶ್ರೇಷ್ಠಾ ಲಗ್ನ ಪತ್ರಿಕೆ ಮನೆಯವರ ಕೈಸೇರತ್ತಾ ನೋಡಬೇಕಿದೆ. 

ಇಂಥ ಹೆಂಡ್ತಿ ಇದ್ರೆ ಯಾವ ಗಂಡ ತಾನೇ ಸಹಿಸ್ತಾನೆ? ಅಯ್ಯೋ ಪಾಪ ಅಂತಿದ್ದವರೇ ಉಲ್ಟಾ ಹೊಡೆದುಬಿಟ್ರಲ್ಲಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶೂವೊಳಗಡೆ ಊಟ ಇಟ್ಟು ತಿಂತೀನಿ ಎನ್ನೋನಿಗೆ Bigg Boss ಸ್ಟ್ಯಾಂಡರ್ಟ್‌ ಗೊತ್ತಾ? ಧ್ರುವಂತ್‌ ಚಳಿ ಬಿಡಿಸಿದ ರಜತ್
Karna Serial: ತೇಜಸ್‌ ತಪ್ಪಿಸ್ಕೊಂಡು ಹೊರಬಂದಾಯ್ತು; ಈಗ ಸಮಸ್ಯೆ ಬಗೆಹರಿಯೋದಿಲ್ಲ, ಅಸಲಿಗೆ ಶುರುವಾಗತ್ತೆ