ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಶ್ರೀಲಂಕಾಕ್ಕೆ ಭಾವನಾಗೆ ಸಿದ್ದೇಗೌಡ್ರು ಪ್ರೇಮ ನಿವೇದನೆ ಮಾಡಿದ್ದಾನೆ. ಇನ್ನೊಂದು ಕಡೆ ಜಯಂತ್ನನ್ನು ಕೊಲ್ಲಲು ಜಾನು ರೆಡಿ ಆಗಿದ್ದಾಳೆ.
‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸಿದ್ದೇಗೌಡ್ರು-ಭಾವನಾ ಹನಿಮೂನ್ಗೆಂದು ಶ್ರೀಲಂಕಾಕ್ಕೆ ಹೋಗಿದ್ದಾರೆ. ಇನ್ನು ಜಾಹ್ನವಿ-ಜಯಂತ್ ಕೂಡ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಅಲ್ಲಿ ಭಾವನಾ-ಸಿದ್ದೇಗೌಡ್ರು ಹನಿಮೂನ್ ಆಚರಿಸಿಕೊಂಡರೆ, ಜಯಂತ್ನನ್ನು ಜಾಹ್ನವಿ ಕೊಲ್ಲಲು ಮುಂದಾಗಿದ್ದಾಳೆ.
ಸಿದ್ದು ಮೇಲೆ ಸಿಟ್ಟಾಗಿದ್ದ ಭಾವನಾ
ಭಾವನಾ, ಸಿದ್ದೇಗೌಡ್ರು ನಡುವೆ ಎಲ್ಲ ಸಮಸ್ಯೆ ಬಗೆಹರಿದಿದೆ. ನನಗೆ ಗೊತ್ತಿಲ್ಲದೆ, ನನ್ನ ಅನುಮತಿ ಇಲ್ಲದೆ ಸಿದ್ದೇಗೌಡ್ರು ತಾಳಿ ಕಟ್ಟಿದ್ದಾರೆ ಅಂತ ಭಾವನಾ ಸಿಟ್ಟುಮಾಡಿಕೊಂಡಿದ್ದಳು. ಇನ್ನು ಭಾವನಾಳನ್ನು ಸೊಸೆ ಅಂತ ಸಿದ್ದು ಮನೆಯವರು ಒಪ್ಪಿಕೊಂಡಿರಲಿಲ್ಲ. ಈಗ ಭಾವನಾ ನನ್ನ ಸೊಸೆ ಅಂತ ಸಿದ್ದು ತಂದೆ, ಅಣ್ಣ ಮಾತ್ರ ಒಪ್ಪಿಕೊಂಡಿದ್ದಾರೆ.
Kannada Tv Serial TRP: 'ಅಣ್ಣಯ್ಯ', 'ಲಕ್ಷ್ಮೀ ನಿವಾಸ' ಬದಿಗೊತ್ತಿ NO 1 ಸ್ಥಾನ ಪಡೆದ ಹೊಸ ಸೀರಿಯಲ್ ಯಾವುದು?
ಪ್ರೇಮ ನಿವೇದನೆ ಮಾಡಿದ ಸಿದ್ದು!
ಸಿದ್ದು ಸಂಸಾರ ಮಾಡಬೇಕು, ಮನೆಗೆ ಮಗು ಬರಬೇಕು ಅಂತ ಇವರಿಬ್ಬರನ್ನು ಶ್ರೀಲಂಕಾಕ್ಕೆ ಕಳಿಸಲಾಗಿದೆ. ಅಲ್ಲಿ ಇವರಿಬ್ಬರು ಮುನಿಸಿ ಮರೆತು ಒಂದಾಗಿದ್ದಾರೆ. ನನಗೆ ನೀವೇ ತಾಳಿ ಹಾಕಿ ಅಂತ ಭಾವನಾ ಸಿದ್ದುಗೆ ಹೇಳಿದ್ದಳು. ಅದರಂತೆ ಮತ್ತೆ ಸಿದ್ದು ತನ್ನ ಹೆಂಡ್ತಿಗೆ ಮತ್ತೊಮ್ಮೆ ಮಾಂಗಲ್ಯಧಾರಣೆ ಮಾಡಿದ್ದಾನೆ. ಇನ್ನು ಈ ಜೋಡಿ ಡ್ಯುಯೆಟ್ ಹಾಡಿದೆ. ಭಾವನಾಗೆ ಸಿದ್ದು ಪ್ರೇಮ ನಿವೇದನೆ ಕೂಡ ಮಾಡಿದ್ದಾರೆ.
ಜಯಂತ್ ಕೊಲ್ಲಲು ರೆಡಿಯಾದ ಚಿನ್ನಿ!
ಜಯಂತ್ ತುಂಬ ಪೊಸೆಸ್ಸಿವ್. ನನ್ನನ್ನು ಅತಿಯಾಗಿ ಪ್ರೀತಿಸಿ ಕಟ್ಟಿಹಾಕಿದ್ದಾನೆ ಅಂತ ಅವಳಿಗೆ ಅರ್ಥ ಆಗಿದೆ. ನಾನು ಯಾರ ಜೊತೆಯೂ ಮಾತನಾಡಬಾರದು, ಎಲ್ಲಿಯೂ ಹೋಗಬಾರದು ಅಂತ ಜಯಂತ್ ಅಂದುಕೊಳ್ಳೋದು ಜಾನುಗೆ ಗೊತ್ತಾಗಿದೆ. ಜಯಂತ್ ಪೊಸೆಸ್ಸಿವ್ನಿಂದ ನನ್ನ ಮಗು ಸತ್ತು ಹೋಯ್ತು ಅಂತ ಜಾನುಗೆ ತುಂಬ ಸಿಟ್ಟಿದೆ. ಹೀಗಾಗಿ ಅವಳು ಶ್ರೀಲಂಕಾದಲ್ಲಿ ಜಯಂತ್ನನ್ನು ಸಾಯಿಸೋಕೆ ರೆಡಿಯಾಗಿದ್ದಾಳೆ. ಜಾನು ಈ ರೀತಿ ಮಾಡ್ತಾಳಾ ಅಂತ ಜಯಂತ್ ಅಚ್ಚರಿಪಟ್ಟಿದ್ದಾನೆ. ಜಯಂತ್ನನ್ನು ಜಾನು ಸಾಯಿಸೋದು ಡೌಟ್. ಆದರೆ ಅವನ ತಪ್ಪನ್ನು ಅರಿವು ಮಾಡಿಕೊಡಬಹುದು. ಇದರಿಂದ ಜಯಂತ್ ತಪ್ಪು ತಿದ್ದಿಕೊಂಡು ಸರಿ ಹೋಗ್ತಾನೆ ಎನ್ನೋದು ಡೌಟ್.
‘ಲಕ್ಷ್ಮೀ ನಿವಾಸ’ ನಟಿ ಶ್ವೇತಾ ದಾಂಪತ್ಯ ಜೀವನಕ್ಕೆ16 ವರ್ಷ... ಮದುವೆಯ ಅಪರೂಪದ ಫೋಟೊಗಳು ಇಲ್ಲಿವೆ
ವೀಕ್ಷಕರು ಏನು ಹೇಳಿದರು?