ಈ ವಿಚಾರಕ್ಕೆ ‘ಅಶ್ವಿನಿ ನಕ್ಷತ್ರ’ ಬೇಡವೆಂದಿದ್ದ ಜೆಕೆ: ಅದೇ ಧಾರಾವಾಹಿ ಬದಲಿಸಿತು ಅವರ ಬದುಕು!

Published : Aug 26, 2026, 08:18 PM IST
Karthik Jayaram

ಸಾರಾಂಶ

Kannada Seriel Actor Karthik Jayaram ‘ಜೆಕೆ’ ಎಂದೇ ಖ್ಯಾತರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ನಟನಾ ಪಯಣದ ಆರಂಭದ ದಿನಗಳ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿರುವ ಅವರು, ‘ಅಶ್ವಿನಿ ನಕ್ಷತ್ರ’ದ ನಾಯಕನ ಪಾತ್ರವನ್ನು ಆರಂಭದಲ್ಲಿ ಒಪ್ಪಿಕೊಳ್ಳಲು ತಮಗೆ ಆಸಕ್ತಿಯೇ ಇರಲಿಲ್ಲ.

ಕಿರುತೆರೆಯ ಜನಪ್ರಿಯ ನಟ ಹಾಗೂ ‘ಜೆಕೆ’ ಎಂದೇ ಖ್ಯಾತರಾಗಿರುವ ಕಾರ್ತಿಕ್‌ ಜಯರಾಮ್, ತಮ್ಮ ಸಿನಿ-ಕಿರುತೆರೆ ಪಯಣದ ಆರಂಭದ ದಿನಗಳ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಎಂಜಿನಿಯರಿಂಗ್‌ ಬಳಿಕ ಕಾರ್ಪೊರೇಟ್‌ ಜಗತ್ತಿನಲ್ಲಿ ಉತ್ತಮ ಉದ್ಯೋಗದಲ್ಲಿದ್ದ ತಾವು, ಆರಂಭದಲ್ಲಿ ಜನಪ್ರಿಯ ಕನ್ನಡ ಧಾರಾವಾಹಿ ‘ಅಶ್ವಿನಿ ನಕ್ಷತ್ರ’ದಲ್ಲಿ ನಾಯಕನಾಗಿ ನಟಿಸುವ ಅವಕಾಶವನ್ನೇ ತಿರಸ್ಕರಿಸಲು ಯೋಚಿಸಿದ್ದೆ ಎಂದು ಹೇಳಿದ್ದಾರೆ.

ರ್ಯಾಪಿಡ್‌ ರಶ್ಮಿ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಕಾರ್ತಿಕ್‌ ಜಯರಾಮ್, ಕಾರ್ಪೊರೇಟ್‌ ಕೆಲಸದ ಜೊತೆಗೆ ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಚಿತ್ರೀಕರಣವನ್ನೂ ಹೇಗೆ ನಿಭಾಯಿಸುತ್ತಿದ್ದೆ ಎಂಬುದನ್ನು ನೆನಪಿಸಿಕೊಂಡಿದ್ದಾರೆ. ತಮ್ಮಲ್ಲಿದ್ದ ನಟನಾ ಸಾಮರ್ಥ್ಯವನ್ನು ಮೊದಲು ಗುರುತಿಸಿದ್ದು ತಮ್ಮ ಕಂಪನಿಯ HR ಎಂದು ಅವರು ಹೇಳಿದ್ದಾರೆ.

‘ನೀವು ಫೇಮಸ್‌ ಆಗ್ತೀರಾ, ಕೆಲಸ ಬಿಟ್ಟುಬಿಡಿ ಎಂದಿದ್ದರು!’

‘ಅಶ್ವಿನಿ ನಕ್ಷತ್ರ’ ಚಿತ್ರೀಕರಣವನ್ನು ಹಗಲಿನಲ್ಲಿ ಮುಗಿಸಿಕೊಂಡು, ರಾತ್ರಿ ಕಾರ್ಪೊರೇಟ್‌ ಕೆಲಸ ಮಾಡುತ್ತಿದ್ದೆ. ಆಗ ನನ್ನ HR, ನಾನು ಮುಂದೆ ಫೇಮಸ್‌ ಆಗುತ್ತೇನೆ ಎಂದು ಹೇಳಿ, ಕೆಲಸ ಬಿಟ್ಟು ನಟನೆಯಲ್ಲಿ ಮುಂದುವರಿಯುವಂತೆ ಸಲಹೆ ನೀಡಿದ್ದರು. ಆದರೆ ಅದೇ ಸಮಯದಲ್ಲಿ ಉದ್ಯೋಗದಲ್ಲೂ ನಾನು ಉತ್ತಮವಾಗಿ ಮಾಡುತ್ತಿದ್ದೆ ಎಂದು ಕಾರ್ತಿಕ್‌ ಜಯರಾಮ್‌ ಹೇಳಿದ್ದಾರೆ.

ಆದರೆ ಆರಂಭದಲ್ಲಿ ಧಾರಾವಾಹಿಯ ಆಫರ್‌ ಸ್ವೀಕರಿಸಲು ಕಾರ್ತಿಕ್‌ ಸಿದ್ಧರಿರಲಿಲ್ಲವಂತೆ. ಕಾರ್ಪೊರೇಟ್‌ ಕ್ಷೇತ್ರದಲ್ಲಿ ಉತ್ತಮ ಸಂಬಳದ ಜೊತೆಗೆ ಸ್ಥಿರವಾದ 9ರಿಂದ 5ರ ಕೆಲಸ, ವಾರಾಂತ್ಯ ರಜೆ ಎಲ್ಲವೂ ಇದ್ದಾಗ ನಟನೆಯತ್ತ ಯಾಕೆ ಹೋಗಬೇಕು ಎಂಬ ಯೋಚನೆ ಅವರಲ್ಲಿತ್ತು.

‘ಕಾರ್ಪೊರೇಟ್‌ನಲ್ಲಿ ಚೆನ್ನಾಗಿ ಸಂಪಾದಿಸುತ್ತಿದ್ದಾಗ ಈ ಅವಕಾಶ ಯಾಕೆ ಬೇಕು ಎನಿಸಿತ್ತು!’

ತಮ್ಮ ಆರಂಭಿಕ ಮನಸ್ಥಿತಿಯನ್ನು ನೆನಪಿಸಿಕೊಂಡ ಕಾರ್ತಿಕ್‌, ಮೊದಲು ‘ಅಶ್ವಿನಿ ನಕ್ಷತ್ರ’ ಬೇಡ ಎಂದು ಹೇಳಲು ಪ್ರಯತ್ನಿಸಿದ್ದೆ. ನನಗೆ ಅದನ್ನು ಮಾಡಲು ಆಸಕ್ತಿಯೇ ಇರಲಿಲ್ಲ. ಕಾರ್ಪೊರೇಟ್‌ ಕ್ಷೇತ್ರದಲ್ಲಿ ನಾನು ಚೆನ್ನಾಗಿ ಸಂಪಾದಿಸುತ್ತಿದ್ದೆ. ಹಾಗಿದ್ದಾಗ ಈ ಅವಕಾಶ ಯಾಕೆ ಬೇಕು ಎನಿಸಿತ್ತು. ನನಗೆ 9ರಿಂದ 5ರ ಕೆಲಸ, ವಾರಾಂತ್ಯದಲ್ಲಿ ರಜೆ ಇತ್ತು ಎಂದು ಹೇಳಿದ್ದಾರೆ. ಆದರೆ ಮುಂದೆ ಇದೇ ಧಾರಾವಾಹಿ ತಮ್ಮ ಜೀವನದ ದಿಕ್ಕನ್ನೇ ಬದಲಿಸಿತು ಎಂದು ಕಾರ್ತಿಕ್‌ ಒಪ್ಪಿಕೊಂಡಿದ್ದಾರೆ.

‘ಸಿವಿಲ್‌ ಎಂಜಿನಿಯರ್‌ ಆಗಬೇಕು ಅನ್ನೋದು ಬಾಲ್ಯದ ಕನಸಾಗಿತ್ತು!’

ಕಾರ್ತಿಕ್‌ ಜಯರಾಮ್‌ ಬಾಲ್ಯದಿಂದಲೂ ಸಿವಿಲ್‌ ಎಂಜಿನಿಯರ್‌ ಆಗಬೇಕೆಂದು ಕನಸು ಕಂಡಿದ್ದರಂತೆ. ಎಂಜಿನಿಯರಿಂಗ್‌ ಶಿಕ್ಷಣದ ಬಳಿಕ ಕಾರ್ಪೊರೇಟ್‌ ವೃತ್ತಿಯಲ್ಲೂ ತಮ್ಮದೇ ಆದ ನೆಲೆ ಕಂಡುಕೊಂಡಿದ್ದರು. ಆದರೆ ‘ಅಶ್ವಿನಿ ನಕ್ಷತ್ರ’ ಅವರ ವೃತ್ತಿಜೀವನಕ್ಕೆ ನಿರೀಕ್ಷೆಯೇ ಇಲ್ಲದ ತಿರುವು ನೀಡಿತು.

ಸಿವಿಲ್‌ ಎಂಜಿನಿಯರ್‌ ಆಗುವುದು ನನ್ನ ಬಾಲ್ಯದ ಕನಸಾಗಿತ್ತು. ಆದರೆ ‘ಅಶ್ವಿನಿ ನಕ್ಷತ್ರ’ ನನಗೆ ಸಿಕ್ಕ ಒಂದು ಅದ್ಭುತ ಅವಕಾಶವಾಗಿತ್ತು ಎಂದು ಅವರು ಹೇಳಿದ್ದಾರೆ. ಆ ಕಾಲದಲ್ಲಿ ಕಿರುತೆರೆಯಲ್ಲಿ ಪುರುಷ ನಟರು ದೊಡ್ಡ ಮಟ್ಟದ ಜನಪ್ರಿಯತೆ ಗಳಿಸುವುದು ಅಪರೂಪವಾಗಿತ್ತು. ಬಹುತೇಕ ಧಾರಾವಾಹಿಗಳು ಮಹಿಳಾ ಪ್ರಧಾನವಾಗಿದ್ದವು. ಆದರೆ ‘ಅಶ್ವಿನಿ ನಕ್ಷತ್ರ’ ಕಾರ್ತಿಕ್‌ ಜಯರಾಮ್‌ಗೆ ದೊಡ್ಡ ಮಟ್ಟದ ಗುರುತನ್ನು ತಂದುಕೊಟ್ಟಿತು.

‘ಫೇಮ್‌ ಯಾವತ್ತೂ ಶಾಶ್ವತ ಅಲ್ಲ ಎಂದು ನನಗೆ ಗೊತ್ತಿತ್ತು!’

ಕಿರುತೆರೆಯಿಂದ ಸಿಕ್ಕ ಜನಪ್ರಿಯತೆಯ ಬಗ್ಗೆಯೂ ಕಾರ್ತಿಕ್‌ ಜಯರಾಮ್‌ ಮುಕ್ತವಾಗಿ ಮಾತನಾಡಿದ್ದಾರೆ. ಖ್ಯಾತಿ ಎಷ್ಟೇ ದೊಡ್ಡದಾಗಿದ್ದರೂ ಅದು ಶಾಶ್ವತವಲ್ಲ ಎಂಬ ನಂಬಿಕೆ ತಮ್ಮಲ್ಲಿತ್ತು ಎಂದು ಹೇಳಿದ್ದಾರೆ. ಫೇಮ್‌ ಅದ್ಭುತವಾಗಿತ್ತು. ಆದರೆ ಖ್ಯಾತಿ ತಾತ್ಕಾಲಿಕ ಎಂಬ ಭಾವನೆ ನನಗೆ ಯಾವಾಗಲೂ ಇತ್ತು. ಜೀವನದ ಹಲವು ಹಂತಗಳನ್ನು ದಾಟಿದಾಗ ಈ ವಿಚಾರ ಅರ್ಥವಾಗುತ್ತದೆ ಎಂದು ಕಾರ್ತಿಕ್‌ ಹೇಳಿದ್ದಾರೆ. ಎಂಜಿನಿಯರಿಂಗ್‌ ಮತ್ತು ಕಾರ್ಪೊರೇಟ್‌ ವೃತ್ತಿಯ ಸಮಯದಲ್ಲಿ ತಾವು ಕಟ್ಟಿಕೊಂಡಿದ್ದ ಅನುಭವ ಹಾಗೂ ಆರ್ಥಿಕ ನೆಲೆ, ನಂತರ ನಟನೆಯಲ್ಲಿ ರಿಸ್ಕ್‌ ತೆಗೆದುಕೊಳ್ಳಲು ಆತ್ಮವಿಶ್ವಾಸ ನೀಡಿತು ಎಂದು ಅವರು ತಿಳಿಸಿದ್ದಾರೆ.

‘ನನ್ನ ಫೌಂಡೇಶನ್‌ ಆಗಲೇ ಸಿದ್ಧವಾಗಿತ್ತು!’

ಎಂಜಿನಿಯರಿಂಗ್‌ ದಿನಗಳಲ್ಲೇ ನಾನು ನನ್ನ ಫೌಂಡೇಶನ್‌ ಕಟ್ಟಿಕೊಂಡಿದ್ದೆ. ಹೀಗಾಗಿ ಮುಂದೆ ನಟನೆಯಲ್ಲಿ ರಿಸ್ಕ್‌ ತೆಗೆದುಕೊಳ್ಳಲು ನಾನು ಸಿದ್ಧನಾಗಿದ್ದೆ ಎಂದು ಕಾರ್ತಿಕ್‌ ಜಯರಾಮ್‌ ಹೇಳಿದ್ದಾರೆ. ಒಟ್ಟಿನಲ್ಲಿ, ಸಿವಿಲ್‌ ಎಂಜಿನಿಯರ್‌ ಆಗಬೇಕೆಂಬ ಕನಸಿನಿಂದ ಕಾರ್ಪೊರೇಟ್‌ ಉದ್ಯೋಗದವರೆಗೆ ಸಾಗಿದ್ದ ಕಾರ್ತಿಕ್‌ ಜಯರಾಮ್‌ ಅವರನ್ನು ‘ಅಶ್ವಿನಿ ನಕ್ಷತ್ರ’ ಕಿರುತೆರೆಯ ಜನಪ್ರಿಯ ನಟನನ್ನಾಗಿ ರೂಪಿಸಿತು. ಆರಂಭದಲ್ಲಿ ಬೇಡವೆಂದುಕೊಂಡಿದ್ದ ಅದೇ ಧಾರಾವಾಹಿ ಮುಂದೆ ಅವರ ವೃತ್ತಿಜೀವನದ ಬಹುದೊಡ್ಡ ತಿರುವಾಗಿ ಪರಿಣಮಿಸಿದ್ದು, ಒಂದು ಅವಕಾಶ ಜೀವನದ ದಿಕ್ಕನ್ನೇ ಹೇಗೆ ಬದಲಿಸಬಹುದು ಎಂಬುದಕ್ಕೆ ಜೆಕೆ ಅವರ ಪಯಣ ಉತ್ತಮ ಉದಾಹರಣೆಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಂಡೋರ ಮೆಚ್ಚಿಸೋಕೆ ಹೋಗ್ಬೇಡಿ' ಟಾಕ್ಸಿಕ್‌ ಬಗ್ಗೆ ನೆಗೆಟಿವ್‌ Review ಮಾಡುವವರ ಜನ್ಮ ಜಾಲಾಡಿದ All OK
ಅಂದೂ ಜೊತೆಯಾಗಿದ್ವಿ, ಇಂದೂ ಇದ್ದೇವೆ, ಮುಂದೇನು? ಸಂಗೀತಾ ಶೃಂಗೇರಿ ಫೋಟೋ ಶೇರ್​ ಮಾಡಿದ ವಿನಯ್​ ಗೌಡ