
ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಗುಟ್ಟು ರಟ್ಟು..!?
ಬಿಗ್ ಬಾಸ್ ಕನ್ನಡದ ರಿಯಾಲಿಟಿ ಶೋ ಎಂದರೆ ಅಲ್ಲಿ ಬರೀ ಆಟವಷ್ಟೇ ಇರುವುದಿಲ್ಲ, ಬದಲಾಗಿ ಸಂಬಂಧಗಳ ಜಟಾಪಟಿ, ಸ್ನೇಹದ ನಾಟಕ ಮತ್ತು ಕಿತ್ತಾಟಗಳ ದೊಡ್ಡ ಸರಣಿಯೇ ಇರುತ್ತದೆ. ಮನೆ ಒಳಗಿದ್ದಾಗ ‘ನನ್ನ ಪ್ರಾಣ ನಿನಗೆ, ನಿನ್ನ ಪ್ರಾಣ ನನಗೆ’ ಎನ್ನುವಂತೆ ಇದ್ದವರು ಹೊರಬಂದ ಮೇಲೆ ಅದೇ ಸ್ನೇಹವನ್ನು ಮುಂದುವರಿಸುತ್ತಾರಾ? ಈ ಪ್ರಶ್ನೆಗೆ ಈಗ ಬಿಗ್ ಬಾಸ್ ಖ್ಯಾತಿಯ ನಿರೂಪಕಿ ಜಾಹ್ನವಿ ನೀಡಿರುವ ಹೇಳಿಕೆ ಹೊಸ ಸಂಚಲನ ಮೂಡಿಸಿದೆ.
ಹೌದು, ಬಿಗ್ ಬಾಸ್ ಕನ್ನಡ 12 ಸೀಸನ್ನ ವಿನ್ನರ್ ಆಗಿ ಹೊರಹೊಮ್ಮಿದ ರಕ್ಷಿತಾ ಶೆಟ್ಟಿ (Rakshita Shetty) ಅವರಿಗೆ ಈಗ ಹೊರಗಿನ ಪ್ರಪಂಚದಲ್ಲಿ ಯಾರೂ ಸಾಥ್ ನೀಡುತ್ತಿಲ್ಲವೇ? ಅಂದು ಮನೆಯೊಳಗೆ ರಕ್ಷಿತಾ ಜೊತೆ ಹಗಲಿರುಳು ಅಂಟಿಕೊಂಡಿದ್ದವರು ಇಂದು ಅವರ ಫೋನ್ ಕೂಡ ರಿಸೀವ್ ಮಾಡುತ್ತಿಲ್ಲವಂತೆ! ಈ ಕಹಿ ಸತ್ಯವನ್ನು ಸ್ವತಃ ಜಾಹ್ನವಿ ಮಾಧ್ಯಮವೊಂದರ ಮುಂದೆ ಬಿಚ್ಚಿಟ್ಟಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಕೆಲವರು ರಕ್ಷಿತಾ ಅವರ ಪರವಾಗಿ ನಿಂತು, ಅವರ ಸ್ನೇಹಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದರು. ಆದರೆ ಶೋ ಮುಗಿದು ದಿನಗಳು ಕಳೆಯುತ್ತಿದ್ದಂತೆ ಆ ಸ್ನೇಹವೆಲ್ಲವೂ ಬಣ್ಣಗೆಟ್ಟಿದೆ ಎನ್ನಲಾಗುತ್ತಿದೆ. ಜಾಹ್ನವಿ ಹೇಳುವ ಪ್ರಕಾರ, "ರಕ್ಷಿತಾ ಶೆಟ್ಟಿ ಈಗ ಒಂಟಿಯಾಗಿದ್ದಾರೆ. ಮನೆಯೊಳಗೆ ಆಕೆಯ ಜೊತೆ ತುಂಬಾ ಕ್ಲೋಸ್ ಆಗಿದ್ದವರು ಈಗ ಆಕೆಯ ಕಾಲ್ ಪಿಕ್ ಮಾಡುತ್ತಿಲ್ಲ. ಇದು ನೋಡಲು ಒಂತರಾ ನಾಟಕದಂತೆ ಕಾಣುತ್ತಿದೆ," ಎಂದು ನೇರವಾಗಿ ಕಿಡಿಕಾರಿದ್ದಾರೆ.
ಮಸಾಲಾ ಮತ್ತು ರಿಯಾಲಿಟಿ ಶೋಗಳ ಗುಟ್ಟು:
ಇದೇ ವೇಳೆ ಶೋ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆಯೂ ಜಾಹ್ನವಿ ಮಾತನಾಡಿದ್ದಾರೆ. "ರಿಯಾಲಿಟಿ ಶೋಗಳಿಗೆ ಯಾವಾಗಲೂ ಮಸಾಲಾ ಬೇಕು. ಅದಕ್ಕೆ ತಕ್ಕಂತೆ ಶೋ ಡಿಸೈನ್ ಆಗಿರುತ್ತದೆ. ನಾವು ಅಲ್ಲಿ ಜಗಳ ಆಡಿದರೆ ಜನ ಕ್ಯೂರಿಯಾಸಿಟಿಯಿಂದ ನೋಡುತ್ತಾರೆ. ಆದರೆ ಹೊರಗೆ ಬಂದ ಮೇಲೆ ಪರಿಸ್ಥಿತಿಯೇ ಬೇರೆ ಇರುತ್ತದೆ. ನಾವು ಮನೆಯೊಳಗೆ ವಿಲನ್ಗಳಂತೆ ಕಂಡಿರಬಹುದು, ರಕ್ಷಿತಾಗೆ ಸಿಂಪಥಿ ಸಿಕ್ಕಿರಬಹುದು. ಆದರೆ ಈಗ ಅವಳ ಜೊತೆ ಇದ್ದವರೇ ಫೋನ್ ಎತ್ತುತ್ತಿಲ್ಲ ಎಂದರೆ, ಅಂದು ಅವರು ಮಾಡಿದ್ದೆಲ್ಲವೂ ಕೇವಲ ಜನಗಳ ಕಣ್ಣಿಗೆ ಒಳ್ಳೆಯವರಾಗಲು ಮಾಡಿದ ಡ್ರಾಮಾನಾ?" ಎಂದು ಪ್ರಶ್ನಿಸಿದ್ದಾರೆ.
ಕುತೂಹಲದ ಸಂಗತಿಯೆಂದರೆ, ಬಿಗ್ ಬಾಸ್ ಮನೆಯಲ್ಲಿ ಜಾಹ್ನವಿ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವೆ ಸಿಕ್ಕಾಪಟ್ಟೆ ಜಗಳಗಳು ನಡೆಯುತ್ತಿದ್ದವು. ಅಂದು ಒಬ್ಬರಿಗೊಬ್ಬರು ಮುಖ ನೋಡದ ಹಂತಕ್ಕೆ ಹೋಗಿದ್ದರು. ಆದರೆ ಈಗ ಕಾಲ ಬದಲಾಗಿದೆ. "ನಾನು ಪ್ರಸ್ತುತ ಅಶ್ವಿನಿ ಮತ್ತು ರಾಶಿಕಾ ಜೊತೆ ಮಾತ್ರ ಸಂಪರ್ಕದಲ್ಲಿದ್ದೇನೆ. ನಾವು ಇವತ್ತಿಗೂ ಚೆನ್ನಾಗಿದ್ದೇವೆ. ಆದರೆ ರಕ್ಷಿತಾ ಜೊತೆಗಿದ್ದ ಇತರ ಹುಡುಗಿಯರು ಮಾತ್ರ ಸಂಪರ್ಕಕ್ಕೆ ಸಿಗುತ್ತಿಲ್ಲ," ಎಂದು ಜಾಹ್ನವಿ ತಿಳಿಸಿದ್ದಾರೆ.
ಒಟ್ಟಿನಲ್ಲಿ, ಬಿಗ್ ಬಾಸ್ ಗೆದ್ದ ಖುಷಿಯಲ್ಲಿರುವ ರಕ್ಷಿತಾ ಶೆಟ್ಟಿಗೆ ಅವರ ಹಳೆಯ ‘ಗೆಳೆಯರ’ ವರ್ತನೆ ಸ್ವಲ್ಪ ಬೇಸರ ತರಿಸಿರಬಹುದು. ಆದರೂ ರಕ್ಷಿತಾ ಒಬ್ಬ ಅದ್ಭುತ ಆಟಗಾರ್ತಿ ಎಂಬುದನ್ನು ಒಪ್ಪಿಕೊಂಡಿರುವ ಜಾಹ್ನವಿ, ಶೋ ಯಶಸ್ಸಿಗೆ ತಾವೆಲ್ಲರೂ ಕೊಟ್ಟ ‘ಮಸಾಲಾ’ ಕೂಡ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಸ್ನೇಹಗಳು ಕೇವಲ ಕ್ಯಾಮೆರಾ ಮುಗಿಯುವವರೆಗೆ ಮಾತ್ರವೇ ಎಂಬ ಚರ್ಚೆ ಈಗ ಗಾಂಧಿನಗರದ ಗಲ್ಲಿಗಳಲ್ಲಿ ಜೋರಾಗಿ ಕೇಳಿಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.