ಬರೀ ಮುತ್ತು ಕಣೋ.. ಅದ್ಯಾಕೆ ಅಷ್ಟು ಬೆವರ್ತಿದ್ದಿಯಾ? ಗೌತಮ್​ ಕಾಲೆಳೀತಿರೋ ನೆಟ್ಟಿಗರು...

Published : May 20, 2024, 03:22 PM IST
 ಬರೀ ಮುತ್ತು ಕಣೋ.. ಅದ್ಯಾಕೆ ಅಷ್ಟು ಬೆವರ್ತಿದ್ದಿಯಾ? ಗೌತಮ್​ ಕಾಲೆಳೀತಿರೋ ನೆಟ್ಟಿಗರು...

ಸಾರಾಂಶ

ಹನಿಮೂನ್​ನಲ್ಲಿರೋ ಭೂಮಿಕಾ, ಪತಿ ಗೌತಮ್​ಗೆ ಕೀಟಲೆ ಮಾಡಿ ಸುಳ್ಳು ಹೇಳಿದ್ದಾಳೆ. ಇದನ್ನು ಕೇಳಿ ಗೌತಮ್​ ಶಾಕ್​ ಆಗಿದ್ದು, ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.   

ಪ್ರೀತಿಯ ವಿಷಯ ನಿವೇದನೆ ಸಮಯದಲ್ಲಿ ಹೆಣ್ಣುಮಕ್ಕಳು ನಾಚಿಕೊಳ್ಳುವುದು ಮಾಮೂಲಾದರೂ ಗಂಡು ಮಕ್ಕಳಿಗಿಂತ ಸ್ವಲ್ಪ ಧೈರ್ಯ ಇವರಿಗೇ ಹೆಚ್ಚು ಎಂದು ಹೇಳುವುದು ಉಂಟು. ಪ್ರೀತಿ, ಪ್ರೇಮ, ಪ್ರಯಣ ಈ ವಿಷಯಗಳಲ್ಲಿಯೂ ಹೆಣ್ಣುಮಕ್ಕಳೇ ಒಂದು ಕೈ ಮೇಲೆ ಎನ್ನುವ ಅಭಿಮತವೂ ಸಾಕಷ್ಟು ಇದೆ. ಪ್ರೇಮ ಪಕ್ಷಿಗಳು ಪಾರ್ಕ್​ಗಳಲ್ಲಿ, ರಸ್ತೆ ಬದಿಗಳಲ್ಲಿ ಮೈಮರೆತ ಸಂದರ್ಭಗಳನ್ನು ಉಲ್ಲೇಖಿಸುವ ಕೆಲವರು ಇಂಥ ದೃಶ್ಯಗಳನ್ನು ನೋಡಿದಾಗ ಯಾಕೋ ಹೆಣ್ಣುಮಕ್ಕಳೇ ಸ್ವಲ್ಪ ಓವರ್​ ಆಗಿ ಆಡುವಂತೆ ಕಾಣಿಸುತ್ತದೆ ಎಂಬ ಆರೋಪವನ್ನೂ ಮಾಡುವುದು ಉಂಟು. ಇನ್ನು ಮದುವೆಯಾದ ಮಹಿಳೆಯರಿಗಂತೂ ಪ್ರೀತಿಯ ವಿಷಯದಲ್ಲಿ ಗಂಡನನ್ನು ಗೋಳು ಹೊಯ್ದುಕೊಳ್ಳುವುದು ಎಂದರೆ ತುಂಬಾ ಇಷ್ಟ ಎನ್ನಲಾಗುತ್ತದೆ. ಇದೀಗ ಅಮೃತಧಾರೆಯ ಭೂಮಿಕಾ  ಮತ್ತು ಗೌತಮ್​ ವಿಚಾರದಲ್ಲಿಯೂ ಹಾಗೆಯೇ ಆಗಿದೆ!   

ಸದ್ಯ ಭೂಮಿಕಾ ಮತ್ತು ಗೌತಮ್​ ಹನಿಮೂನ್​ ಮೂಡ್​ನಲ್ಲಿದ್ದಾರೆ. ಇದುವರೆಗೂ ಮನಸ್ಸು ಬಿಚ್ಚಿ ಐ ಲವ್​ ಯೂ ಎಂದು ಹೇಳದ ಈ ಜೋಡಿ ಹನಿಮೂನ್​ನಲ್ಲಿ ಏನು ಮಾಡಬಹುದು ಎನ್ನೋ ಕುತೂಹಲ ವೀಕ್ಷಕರದ್ದಾಗಿತ್ತು.   ಚಿಕ್ಕಮಗಳೂರಿನ ಮಲೆನಾಡಿನ ಸೌಂದರ್ಯವನ್ನು ಅವರು ಸವಿಯುತ್ತಿದ್ದಾರೆ. ಸದಾ ಜಗಳವಾಡುತ್ತಲೇ ಮದುವೆಯಾಗಿ, ಇದೀಗ ಒಬ್ಬರನ್ನೊಬ್ಬರು ಸಕತ್​ ಲವ್​ ಮಾಡ್ತಿರೋ ಜೋಡಿ ಇದು.  ಸದಾ ಕಿತ್ತಾಡುತ್ತಲೇ ಇದ್ದ ಈ ದಂಪತಿ ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿದ್ದಾರೆ. ಇದುವರೆಗೂ ಪರಸ್ಪರ ಪ್ರೀತಿಯ ವಿಷಯವನ್ನು ಹಂಚಿಕೊಳ್ಳದಿದ್ದರೂ, ನೇರವಾಗಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳದಿದ್ದರೂ, ಇವರ ಪ್ರೀತಿಗೆ ಇವರೇ ಸಾಟಿ. ಇದೀಗ ಈ ಜೋಡಿ ಹನಿಮೂನ್​ಗೆ ನಾಚಿಕೊಳ್ಳುತ್ತಲೇ ಜೋಡಿ ಹೋಗಿದೆ.

ಭಾಗ್ಯ ಆದ್ಲು ಭಗಾಯಾ: ಸ್ಟಾರ್​ ಹೋಟೆಲ್​ನಲ್ಲಿ ಫುಲ್​ ಡಿಮಾಂಡ್​! ಇದೇನಪ್ಪಾ ಹೊಸ ಅಗ್ನಿ ಪರೀಕ್ಷೆ?
 

ಇತ್ತ ಈ ಜೋಡಿ ಹೀಗೆ ಪ್ರೀತಿಯ ವಿಷಯ ಹೇಳುವುದೇ ಇಲ್ಲ ಎಂದು ತಿಳಿದಿರುವ ಆನಂದ್​ ದಂಪತಿ ಗೌತಮ್​ಗೆ ಪಾನೀಯದಲ್ಲಿ ಮದ್ಯ ಸೇರಿಸಿ ಕೊಟ್ಟಿದ್ದಾರೆ. ಇದಾಗಲೇ ಇದೇ ರೀತಿಯ ಪ್ರಯೋಗ ಭೂಮಿಕಾ ಮೇಲೆ ಮಾಡಿಯಾಗಿತ್ತು. ಆಗ ಭೂಮಿಕಾ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿದ್ದಳು. ಇಷ್ಟಾದರೂ ಗೌತಮ್​ಗೆ ಅದರ ಅರಿವೇ ಇರಲಿಲ್ಲ. ಆದರೆ ಈಗ ಕಾಲ ಸ್ವಲ್ಪ ಡಿಫರೆಂಟ್​ ಆಗಿದೆ. ಪತ್ನಿಯ ಮೇಲೆ ಅವನಿಗೂ ಪ್ರೀತಿ ಮೊಳಗಿದೆ, ಆದರೆ ಹೇಳಿಕೊಳ್ಳೋ ಧೈರ್ಯ ಇಲ್ಲವಷ್ಟೇ. ಇದೇ ಕಾರಣಕ್ಕೆ ಆನಂದ್​ ದಂಪತಿ ಮದ್ಯ ಬೆರೆಸಿದ ಪಾನೀಯ ಕೊಟ್ಟಿದ್ದು, ಅದನ್ನು ಗೌತಮ್​ ಕುಡಿದಿದ್ದಾನೆ.

ಮಾಮೂಲಿನಂತೆ ಇಬ್ಬರೂ ಬೇರೆ ಬೇರೆ ಮಲಗಲು ಹೋಗಿದ್ದಾರೆ. ಭೂಮಿಕಾ ತಾನು ಕೆಳಗೆ ಮಲಗುವುದಾಗಿ ಹೇಳಿದ್ದಾಳೆ. ಅಷ್ಟರಲ್ಲಿ ಮದ್ಯದ ಅಮಲಿನಲ್ಲಿ ಪ್ರೀತಿಯ ಅಮಲೂ ಸೇರಿರೋ ಗೌತಮ್​, ಭೂಮಿಕಾಗೆ ಐ ಅಷ್ಟೇ ಹೇಳಿದ್ದಾನೆ. ಆದರೆ ಏನೂ ಹೇಳದೇ ಗೌತಮ್​ ಮಲಗಿದ್ದಾನೆ. ಬೆಳಿಗ್ಗೆ ಎದ್ದು ನೋಡಿದ್ರೆ ಗೌತಮ್​ ಭೂಮಿಕಾ ಹಾಸಿಗೆ ಮೇಲೆ ಮಲಗಿದ್ದ. ಇದನ್ನು ನೋಡಿ ಅವನಿಗೆ ಶಾಕ್​ ಆಯಿತು. ಅದಕ್ಕೆ ನಾನು ಹೇಗೆ ಇಲ್ಲಿಗೆ ಬಂದೆ ಎಂದು ಕೇಳಿದಾಗ, ತರ್ಲೆ ಭೂಮಿಕಾ ನೀವು ಮುತ್ತು ಬೇಕು ಎಂದು ಕೇಳಿದ್ರಿ, ಅದಕ್ಕೇ ಹತ್ತಿರ ಬಂದೆ ಎಂದಾಗ ಖುಷಿಯಾಗುವ ಬದಲು ಗೌತಮ್​ ಏನೋ  ಆಗಬಾರದ್ದು ಆದವರಂತೆ ಬೆಚ್ಚಿ ಬಿದ್ದಿದ್ದಾನೆ! ಇದರ ಪ್ರೊಮೋ ಜೀ ಕನ್ನಡ ವಾಹಿನಿ ರಿಲೀಸ್​ ಮಾಡಿದೆ. ಇದಕ್ಕೆ ಹಲವರು ಬರೀ ಮುತ್ತು ಕಣೋ ಅದ್ಯಾಕೆ ಅಷ್ಟು ಬೆವರ್ತಿದ್ದಿಯಾ ಎಂದು ಪ್ರಶ್ನಿಸುತ್ತಿದ್ದಾರೆ. ಅದೇ ಇನ್ನೊಂದೆಡೆ, ಮಲ್ಲಿಯನ್ನು ಮುಗಿಸುವ ಪ್ಲ್ಯಾನ್​ ಮಾಡಿದ್ದ ಶಕುಂತಲಾ ದೇವಿಯ ಪ್ಲ್ಯಾನ್​ ಅನ್ನು ಹನಿಮೂನ್​ನಲ್ಲಿ ಇದ್ದುಕೊಂಡೇ ಭೂಮಿಕಾ ಠುಸ್​ ಮಾಡಿದ್ದಾಳೆ! 

ನೋಡ್ರೋ... ನಮ್ಮಕ್ಕ ಅದೃಷ್ಟ ಕಣ್ರೋ... ಅಪಶಕುನ ಅಲ್ಲ... ಅಶ್ವಿನಿ ಪರ ಫ್ಯಾನ್ಸ್​ ಬ್ಯಾಟಿಂಗ್​...

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ