ಉದಯ ಟಿವಿಯಲ್ಲಿ ಒಂದೇ ದಿನ 2 ಹೊಸ ಧಾರಾವಾಹಿಗಳು

Suvarna News   | Asianet News
Published : Mar 15, 2021, 09:29 AM IST
ಉದಯ ಟಿವಿಯಲ್ಲಿ ಒಂದೇ ದಿನ 2 ಹೊಸ ಧಾರಾವಾಹಿಗಳು

ಸಾರಾಂಶ

ಉದಯ ಟಿವಿಯಲ್ಲಿ ಒಂದೇ ದಿನ 2 ಹೊಸ ಧಾರಾವಾಹಿಗಳು | ಸಂಜೆ 6:30ಕ್ಕೆ ಗೌರಿಪುರದ ಗಯ್ಯಾಳಿಗಳು, 7:30 ಕ್ಕೆ ನೇತ್ರಾವತಿ

ಉದಯ ಟಿವಿಯಲ್ಲಿ ಎರಡು ಹೊಸ ಧಾರಾವಾಹಿಗಳು ಇಂದಿನಿಂದ ಆರಂಭಗೊಳ್ಳುತ್ತಿವೆ. ಸಂಜೆ 6:30 ಕ್ಕೆ ಹಾಸ್ಯದ ಲೇಪದೊಂದಿಗೆ ಸಸ್ಪೆನ್ಸ್‌ ಕಥೆ ಇರುವ ಗೌರಿಪುರದ ಗಯ್ಯಾಳಿಗಳು ಹಾಗೂ ಸಂಜೆ 7:30ಕ್ಕೆ ಆಶಾ ಕಾರ್ಯಕರ್ತೆಯೊಬ್ಬಳ ಬದುಕನ್ನಾಧರಿಸಿದ ‘ನೇತ್ರಾವತಿ’ ಧಾರಾವಾಹಿಗಳು ಪ್ರಸಾರವಾಗಲಿವೆ.

ಗೌರಿಪುರದ ಗಯ್ಯಾಳಿಗಳು

ಗೌರಿಪುರ ಕಾಲನಿಯ ಮಧ್ಯಮವರ್ಗದ ಗಯ್ಯಾಳಿಗಳ ನಡುವೆ ಗುಲಾಬಿಯಂಥ ಹುಡುಗಿ ತನ್ನ ತಂದೆಯ ನಿಗೂಢ ಸಾವಿಗೆ ಸಾಕ್ಷಿ ಹುಡುಕಿಕೊಂಡು ಬರುವ ಕಥೆ. ಈ ಗಯ್ಯಾಳಿಗಳ ನಡುವೆ ನಡೆಯುವ ಹಾಸ್ಯಮಯ ಪ್ರಸಂಗಗಳು ಹಾಗೂ ಗುಲಾಬಿಯ ನಿಗೂಢ ನಡೆಗಳು ಕಥೆಗೆ ಹೊಸತನದ ಸ್ಪರ್ಶ ನೀಡಿವೆ. ರವಿತೇಜ ನಿರ್ದೇಶನವಿದೆ.

ಡೆಲಿವರಿ ಬಾಯ್‌ ಬೆಂಬಲಕ್ಕೆ ನಿಂತ ನಟಿಯರು..

ನವ್ಯ, ರೋಹಿಣಿ, ದಿವ್ಯ, ವೀಣಾ, ರಚನಾ, ಆರ್ವ ಬಸವಟ್ಟಿ, ರವಿತೇಜ ಮುಖ್ಯಪಾತ್ರಗಳಲ್ಲಿದ್ದಾರೆ. ಹಾಸ್ಯನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ತಮ್ಮ ‘ಸುರಾಗ್‌ ಪ್ರೊಡಕ್ಷನ್ಸ್‌’ ಲಾಂಛನದಲ್ಲಿ ಈ ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಇದು ಕಿರುತೆರೆಯಲ್ಲಿ ಅವರ ಮೊದಲ ಪ್ರಯತ್ನ.

ನೇತ್ರಾವತಿ

ಉತ್ತಮ ಗುಣ ನಡತೆಯ ನೇತ್ರಾವತಿ ಆಶಾ ಕಾರ್ಯಕರ್ತೆಯಾಗಿ ಉದ್ಯೋಗ ಮಾಡುತ್ತಾಳೆ. ಈಗೆ ಮಂಜುನಾಥ ಸ್ವಾಮಿಯ ಭಕ್ತೆ. ವೃತ್ತಿ ಜೀವನದ ಏರಿಳಿತಗಳು ಇವಳನ್ನು ಒಬ್ಬ ಒರಟ ನಾಯಕನ ಮನೆಗೆ ತಂದು ನಿಲ್ಲಿಸುತ್ತದೆ. ಶರೀರದ ಗಾಯಕ್ಕೆ ಮುಲಾಮು ಹಚ್ಚಬಲ್ಲ ನೇತ್ರಾವತಿ, ಆ ಒರಟನ ಮನಸ್ಸಿನ ಗಾಯಕ್ಕೆ ಮದ್ದು ಮಾಡಿ ಅವನಿಗೆ ಸತ್ಯದ ಅರಿವು ಮೂಡಿಸುವುದು ಮುಂದಿನ ಪಯಣ.

"

ಪೂರ್ಣಿಮಾ ಪ್ರೊಡಕ್ಷನ್ಸ್‌ ಲಾಂಛನದಡಿ ‘ನೇತ್ರಾವತಿ’ ಧಾರಾವಾಹಿ ಮೂಡಿಬರಲಿದೆ. ಸಂತೋಷ್‌ಗೌಡ ನಿರ್ದೇಶನದಲ್ಲಿ ದುರ್ಗಾಶ್ರೀ, ಸನ್ನಿ ಮಹಿಪಾಲ್‌, ಸಚಿನ್‌, ಚೈತ್ರಾ ರಾವ್‌, ದಾನಪ್ಪ, ಐಶ್ವರ್ಯ ಮುಂತಾದವರು ಮುಖ್ಯಪಾತ್ರಗಳಲ್ಲಿದ್ದಾರೆ. ಛಾಯಾಗ್ರಹಣ: ದಯಾಕರ್‌, ಸಂಕಲನ: ಗುರುಮೂರ್ತಿ ಹೆಗಡೆ.

ಎರಡು ದಶಕ ನಂತರ ಬಣ್ಣ ಹಚ್ಚುತ್ತಿರುವ ಅಂಜಲಿ

90ರ ದಶಕದಲ್ಲಿ ‘ಅನಂತನ ಆವಾಂತರ’, ‘ತರ್ಲೆ ನನ್ನ ಮಗ’, ‘ನೀನು ನಕ್ಕರೆ ಹಾಲು ಸಕ್ಕರೆ’ ಮುಂತಾದ ಚಿತ್ರಗಳ ನಾಯಕಿಯಾಗಿದ್ದ ಅಂಜಲಿ 22 ವರ್ಷಗಳ ನಂತರ ‘ನೇತ್ರಾವತಿ’ ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ನೇತ್ರಾವತಿಯ ತಾಯಿ ಭಾಗೀರಥಿ ಪಾತ್ರವನ್ನು ಅಂಜಲಿ ನಿರ್ವಹಿಸಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಚೈತ್ರಾ ಕುಂದಾಪುರ, ಸ್ಪಂದನಾ ಸೋಮಣ್ಣ ನಡುವೆ ತಂದಿಟ್ಟು ನಕ್ಕ ವಿಲನ್‌ Bigg Boss; ಯಾಕ್ರೀ ಹೀಗ್‌ ಮಾಡ್ತೀರಾ?
BBK 12: ಗಿಲ್ಲಿ ನಟನ ಜೊತೆ ಅಮಾನವೀಯವಾಗಿ ನಡ್ಕೊಂಡ ರಘು; ಪ್ರತ್ಯಕ್ಷಸಾಕ್ಷಿ ಅಭಿಷೇಕ್‌ ಶ್ರೀಕಾಂತ್‌ ಏನಂದ್ರು?