ಸಿರಿಯಲ್​ನಲ್ಲೂ ಮಿಸ್ಸು, ಜೀ ಕುಟುಂಬ ಅವಾರ್ಡ್‌ನಲ್ಲೂ ನಾಪತ್ತೆ! ಗಟ್ಟಿಮೇಳದ ವೇದಾಂತ್ ಎಲ್ಲಿ?

Published : Nov 17, 2023, 05:03 PM IST
ಸಿರಿಯಲ್​ನಲ್ಲೂ ಮಿಸ್ಸು, ಜೀ ಕುಟುಂಬ ಅವಾರ್ಡ್‌ನಲ್ಲೂ ನಾಪತ್ತೆ! ಗಟ್ಟಿಮೇಳದ ವೇದಾಂತ್ ಎಲ್ಲಿ?

ಸಾರಾಂಶ

ಗಟ್ಟಿಮೇಳದ ವೇದಾಂತ್​ ಪಾತ್ರಧಾರಿ ರಕ್ಷ್​ ಅವರು ಸೀರಿಯಲ್​ ಮತ್ತು ಜೀ ಕುಟುಂಬ ಅವಾರ್ಡ್​ನಲ್ಲಿ ಕಾಣಿಸಿಕೊಳ್ಳದೇ ಇರುವುದಕ್ಕೆ ಸೀರಿಯಲ್​ ಪ್ರಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.  

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಗಟ್ಟಿಮೇಳ ಧಾರಾವಾಹಿ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ ಎನ್ನಲಾಗುತ್ತಿದೆ. ಹೊಸ ಸೀರಿಯಲ್​ನ ಪ್ರೋಮೋ ಕೂಡ ರಿಲೀಸ್​  ಆಗುತ್ತಿದ್ದು, ಇದು ಗಟ್ಟಿಮೇಳದ ಜಾಗಕ್ಕೆ ಬರಲಿದೆ ಎಂದೇ ಹೇಳಲಾಗುತ್ತಿದೆ. ಧಾರಾವಾಹಿಯ ವಿಲನ್​ ಸುಹಾಸಿನಿ ತನ್ನ ಅಕ್ಕನ ಇಬ್ಬರು ಮಕ್ಕಳನ್ನು ಕೊಲೆ ಮಾಡಲು ಪ್ರಯತ್ನಿಸಿರುವುದು ಸೇರಿದಂತೆ ಅಗ್ನಿ ಎಂಬ ವಿಲನ್​ ಕೊಲೆ ಮಾಡಿದ್ದರೂ ಸಿಕ್ಕಿಬಿದ್ದಿಲ್ಲ. ಅದೇ ಇನ್ನೊಂದೆಡೆ, ತನ್ನ ಮನೆಯಲ್ಲಿಯೇ ತಾಯಿಯಾಗಿರುವ ವೈದೇಹಿ ಕೆಲಸದವಳ ರೀತಿ ಇದ್ದು, ಮಕ್ಕಳ ಪ್ರೀತಿಗೆ ಪಾತ್ರಳಾಗಿದ್ದಾಳೆ. ಈಕೆಯ ಕಳೆದು ಹೋಗಿರುವ ಗಂಡ ಸೂರ್ಯನಾರಾಯಣ ಸಿಕ್ಕಿದ್ದರೂ ಆತನನ್ನು ವೈದೇಹಿ ಎಲ್ಲಿಯೋ ಮುಚ್ಚಿಟ್ಟಿದ್ದಾಳೆ. ಕೊನೆಗೂ ಈ ರಹಸ್ಯ ಬಯಲಾದರೆ ಅಲ್ಲಿಯೇ ಧಾರಾವಾಹಿ ಕೊನೆಗೊಳ್ಳುವುದು ದಿಟ. ಆದರೆ ಈ ನಡುವೆಯೇ ಧಾರಾವಾಹಿಯ ನಾಯಕ ವೇದಾಂತ್​ ಮಾತ್ರ ಮಿಸ್ಸಿಂಗ್​ ಆಗಿಬಿಟ್ಟಿದ್ದು, ಫ್ಯಾನ್ಸ್​ ಚಿಂತಾಕ್ರಾಂತರಾಗಿದ್ದಾರೆ.

ಹೌದು. ವೇದಾಂತ್​ ಪಾತ್ರಧಾರಿಯಾಗಿರುವ ರಕ್ಷ್‌ ಅವರು ಧಾರಾವಾಹಿಯಿಂದ ನಾಪತ್ತೆಯಾಗಿದ್ದಾರೆ. ಅವರಿಲ್ಲದೇ ಧಾರಾವಾಹಿಯನ್ನು ಹೇಗೋ ಮ್ಯಾನೇಜ್​ ಮಾಡಲಾಗುತ್ತಿದೆ.ಆದರೆ ಮೊನ್ನೆ ನಡೆದ ಜೀ ಕುಟುಂಬ ಅವಾರ್ಡ್​ನಲ್ಲಿಯೂ ಅವರು ಬರದೇ ಇದ್ದುದು ಮಾತ್ರ ಅಭಿಮಾನಿಗಳಿಗೆ ತುಂಬಾ ಬೇಸರ ತಂದಿದೆ. ಜೀ ಕುಟುಂಬ ಅವಾರ್ಡ್ಸ್​ನಲ್ಲಿ ಗಟ್ಟಿಮೇಳದ ಅಮೂಲ್ಯ ಮತ್ತು ವೇದಾಂತ್​ ಜೋಡಿಗೆ ಬೆಸ್ಟ್​ ಜೋಡಿ ಅವಾರ್ಡ್​ ಸಿಕ್ಕಿದೆ. ಆದರೆ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಇಬ್ಬರ ಪರವಾಗಿ ಕೇವಲ ಅಮೂಲ್ಯ ಅರ್ಥಾತ್​, ನಿಶಾ ರವಿಕೃಷ್ಣನ್​ ಅವರು ಪ್ರಶಸ್ತಿ ಸ್ವೀಕರಿಸಿದರು. ನನ್ನ ಪೇರ್​ ಈ ಕ್ಷಣದಲ್ಲಿ ಇಲ್ಲ, ಆದ್ದರಿಂದ ನಾನೊಬ್ಬಳೇ ಅವಾರ್ಡ್​ ಸ್ವೀಕರಿಸುತ್ತಿರುವುದಾಗಿ ಅವರು ಹೇಳಿದರು.

ಸೊಸೆಯೆಂದ್ರೆ ಹೀಗಿರ್ಬೇಕು: ಜೀ ಕುಟುಂಬ ಅವಾರ್ಡ್​ ಗೆದ್ದ ಸತ್ಯಾ, ಹಿಟ್ಲರ್​ ಕಲ್ಯಾಣದ ಲೀಲಾ ಹೇಳಿದ್ದೇನು?

ಇದೀಗ  ರಕ್ಷ್​ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಫೋಟೋ ಶೇರ್​ ಮಾಡಿಕೊಂಡಿದ್ದು, ಕಮೆಂಟ್​ ಬಾಕ್ಸ್​ ತುಂಬ ಇದರ ಪ್ರಶ್ನೆಗಳದ್ದೇ ಸುರಿಮಳೆಯಾಗುತ್ತಿದೆ. ವೇದಾಂತ್​ ಅವರು ಸೀರಿಯಲ್​ನಲ್ಲಿಯೂ ಮಿಸ್ಸಿಂಗ್​  ಆಗಿದ್ದು, ಕೊನೆಯ ಪಕ್ಷ ಅವಾರ್ಡ್​ಗೂ ಬರದೇ ಇದ್ದುದಕ್ಕೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಹಲವು ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದಾರೆ. ಆದರೂ ಯಾಕೆ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದು, ಯಾವ ಪ್ರಶ್ನೆಗೂ ರಕ್ಷ್​ ಅವರು ಉತ್ತರಿಸಿಲ್ಲ. 
 
ಅದೇ ಇನ್ನೊಂದೆಡೆ,  ರಕ್ಷ್‌ ಅವರು ರಕ್ಷ್​ ರಾಮ್‌ (Rakksh Raam) ಎಂದು ಹೆಸರು ಬದಲಿಸಿಕೊಂಡು ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದಾರೆ.  ಗಟ್ಟಿಮೇಳ ಮಾತ್ರವಲ್ಲದೇ 'ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕವೂ ಮಿಂಚಿದ್ದಾರೆ ರಕ್ಷ್‌. ಇದೀಗ ಇವರು ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.  ಈ ಚಿತ್ರದ ಹೆಸರು ಬರ್ಮ. ಈ ಚಿತ್ರವನ್ನು ಚೇತನ್‌ ಕುಮಾರ್‌ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಬಹದ್ದೂರ್, ಭರ್ಜರಿ, ಭರಾಟೆ ಹಾಗೂ ಜೇಮ್ಸ್ ಸಿನಿಮಾಗಳಿಗೆ ನಿರ್ದೇಶನ ಮಾಡಿ ಕಮರ್ಷಿಯಲ್‌ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಚೇತನ್‌ ಕುಮಾರ್‌, ಬರ್ಮ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದರ ಶೂಟಿಂಗ್​  ಕಾರಣದಿಂದ ಬಹುಶಃ ಸೀರಿಯಲ್​  ಮತ್ತು ಅವಾರ್ಡ್​ ಫಂಕ್ಷನ್​ಗೆ ಬರಲಿಲ್ಲ ಎನ್ನಲಾಗುತ್ತಿದೆ. ಕಾರಣ ಮಾತ್ರ ಅವರೇ ಹೇಳಬೇಕಿದೆ. 

ಅಂಕಲ್​ ನಿಮ್ಗೆ ಯಾವ ಪಟಾಕಿ ಇಷ್ಟ? ಸೀತಾರಾಮ ಪುಟಾಣಿ ಸಿಹಿ ಪ್ರಶ್ನೆಗೆ ಡಿಕೆಶಿ ಹೇಳಿದ್ದೇನು?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?