ಆಹಾ! ವೀಕ್ಷಕರು ಕಾತರದಿಂದ ಕಾಯ್ತಿರೋ ಆ ಅಣಿ ಮುತ್ತುಗಳು ಕೊನೆಗೂ ಉದುರಿಯೇ ಬಿಟ್ಟವು....

Published : May 22, 2024, 12:34 PM IST
ಆಹಾ! ವೀಕ್ಷಕರು ಕಾತರದಿಂದ ಕಾಯ್ತಿರೋ ಆ ಅಣಿ ಮುತ್ತುಗಳು ಕೊನೆಗೂ ಉದುರಿಯೇ ಬಿಟ್ಟವು....

ಸಾರಾಂಶ

ಕೊನೆಗೂ ಗೌತಮ್​, ಪತ್ನಿ ಭೂಮಿಕಾಗೆ ತನ್ನ ಪ್ರೀತಿಯ ನಿವೇದನೆಯನ್ನು ಮಾಡಿಕೊಂಡಿದ್ದಾನೆ. ಇದನ್ನು ನೋಡಿ ಫ್ಯಾನ್ಸ್​ ಫುಲ್​ ಖುಷ್​.   

ಬೇಗ ಐ ಲವ್​ ಯೂ ಹೇಳಪ್ಪಾ ಗೌತಮ್​. ಎಷ್ಟೂ ಅಂತ ಕಾಯಿಸ್ತಿಯಾ... ಅದೂ ನಿನ್ನ ಪತ್ನಿಗೆ ಹೇಳೋಕೂ ಇಷ್ಟು ನಾಚಿಕೆನಾ? ಅದ್ಯಾಕೆ ಲವ್​ ಅಂದ್ರೆ ಬೆವರುತ್ತೀಯಾ ಎಂದೆಲ್ಲಾ ಪ್ರಶ್ನಿಸಿ ಪ್ರಶ್ನಿಸಿ ಅಮೃತಧಾರೆ ಫ್ಯಾನ್ಸ್​ಗೆ ಸಾಕಾಗಿ ಹೋಗಿತ್ತು. ಆದರೆ ಈಗ ಆ ಕ್ಷಣ ಬಂದೇ ಬಿಟ್ಟಿತು. ಬೆಟ್ಟದ ಮೇಲೆ ಭೂಮಿಕಾಳನ್ನು ಕರೆದುಕೊಂಡು ಹೋಗಿರುವ ಗೌತಮ್​, ನೇರವಾಗಿ ಭೂಮಿಕಾ ಮುಖ ನೋಡಿ ಪ್ರೀತಿಯ ನಿವೇದನೆ ಮಾಡಿಕೊಳ್ಳದಿದ್ದರೂ ಬೆನ್ನು ಹಿಂದಕ್ಕೆ ಮಾಡಿ ಐ ಲವ್​ ಯೂ ಅಂದೇ ಬಿಟ್ಟಿದ್ದಾನೆ. ಗೌತಮ್​ ಬಾಯಲ್ಲಿ ಈ ಅಣಿಮುತ್ತುಗಳನ್ನು ಕೇಳಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ನನಗೆ ಗೊತ್ತಿಲ್ಲದ ಹಾಗೆಯೇ ನಿಮ್ಮ ಮೇಲೆ ನನಗೆ ಪ್ರೀತಿ ಹುಟ್ಟಿದೆ. ಎಂಥ ಪ್ರೀತಿ ಎಂದು ನನಗೆ  ಹೇಳಿಕೊಳ್ಳಲು ಆಗ್ತಿಲ್ಲ. ನನ್ನಲ್ಲಿ ಆಗಿರೋ ಚೇಂಜಸ್​ ಹೇಳಿಕೊಳ್ಳಲು ನನಗೆ ಆಗ್ತಿಲ್ಲ. ಐ ಲವ್​ ಯೂ ಎಂದು ಹೇಳಿದ್ದಾನೆ. ಇದನ್ನು ಕೇಳಿ ಭೂಮಿಕಾಗಿಂತಲೂ ಹೆಚ್ಚು ಖುಷಿ ಸೀರಿಯಲ್​ ಫ್ಯಾನ್ಸ್​ಗೆ ಆಗಿದೆ. 

ಅಷ್ಟಕ್ಕೂ,  ಭೂಮಿಕಾ ಮತ್ತು ಗೌತಮ್​ ಹನಿಮೂನ್​ ಟೂರ್​ನಲ್ಲಿದ್ದಾರೆ.  ಇದುವರೆಗೂ ಮನಸ್ಸು ಬಿಚ್ಚಿ ಐ ಲವ್​ ಯೂ ಎಂದು ಹೇಳದ ಈ ಜೋಡಿ ಹನಿಮೂನ್​ನಲ್ಲಿ ಏನು ಮಾಡಬಹುದು ಎನ್ನೋ ಕುತೂಹಲ ವೀಕ್ಷಕರದ್ದಾಗಿತ್ತು.   ಚಿಕ್ಕಮಗಳೂರಿನ ಮಲೆನಾಡಿನ ಸೌಂದರ್ಯವನ್ನು ಅವರು ಸವಿಯುತ್ತಿದ್ದಾರೆ. ಸದಾ ಜಗಳವಾಡುತ್ತಲೇ ಮದುವೆಯಾಗಿ, ಇದೀಗ ಒಬ್ಬರನ್ನೊಬ್ಬರು ಸಕತ್​ ಲವ್​ ಮಾಡ್ತಿರೋ ಜೋಡಿ ಇದು.  ಸದಾ ಕಿತ್ತಾಡುತ್ತಲೇ ಇದ್ದ ಈ ದಂಪತಿ ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿದ್ದಾರೆ. ಇದುವರೆಗೂ ಪರಸ್ಪರ ಪ್ರೀತಿಯ ವಿಷಯವನ್ನು ಹಂಚಿಕೊಳ್ಳದಿದ್ದರೂ, ನೇರವಾಗಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳದಿದ್ದರೂ, ಇವರ ಪ್ರೀತಿಗೆ ಇವರೇ ಸಾಟಿ. ಇದೀಗ ಈ ಜೋಡಿ ಹನಿಮೂನ್​ಗೆ ನಾಚಿಕೊಳ್ಳುತ್ತಲೇ ಜೋಡಿ ಹೋಗಿದೆ.

ಹಿರಿಯರು ಬಂದಾಗ ಕೂತ್ಕೋಳಿ ಎನ್ನೋ ಕನಿಷ್ಠ ಪ್ರಜ್ಞೆ ಯಾರಲ್ಲೂ ಇಲ್ವಾ? ಡೈರೆಕ್ಟರ್​ಗೂ ನೆಟ್ಟಿಗರ ಕ್ಲಾಸ್​

ಇತ್ತ ಈ ಜೋಡಿ ಹೀಗೆ ಪ್ರೀತಿಯ ವಿಷಯ ಹೇಳುವುದೇ ಇಲ್ಲ ಎಂದು ತಿಳಿದಿರುವ ಆನಂದ್​ ದಂಪತಿ ಗೌತಮ್​ಗೆ ಪಾನೀಯದಲ್ಲಿ ಮದ್ಯ ಸೇರಿಸಿ ಕೊಟ್ಟಿದ್ದಾರೆ. ಇದಾಗಲೇ ಇದೇ ರೀತಿಯ ಪ್ರಯೋಗ ಭೂಮಿಕಾ ಮೇಲೆ ಮಾಡಿಯಾಗಿತ್ತು. ಆಗ ಭೂಮಿಕಾ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿದ್ದಳು. ಇಷ್ಟಾದರೂ ಗೌತಮ್​ಗೆ ಅದರ ಅರಿವೇ ಇರಲಿಲ್ಲ. ಆದರೆ ಈಗ ಕಾಲ ಸ್ವಲ್ಪ ಡಿಫರೆಂಟ್​ ಆಗಿದೆ. ಪತ್ನಿಯ ಮೇಲೆ ಅವನಿಗೂ ಪ್ರೀತಿ ಮೊಳಗಿದೆ, ಆದರೆ ಹೇಳಿಕೊಳ್ಳೋ ಧೈರ್ಯ ಇಲ್ಲವಷ್ಟೇ. ಇದೇ ಕಾರಣಕ್ಕೆ ಆನಂದ್​ ದಂಪತಿ ಮದ್ಯ ಬೆರೆಸಿದ ಪಾನೀಯ ಕೊಟ್ಟಿದ್ದು, ಅದನ್ನು ಗೌತಮ್​ ಕುಡಿದಿದ್ದಾನೆ. ಆದರೂ ಪ್ರೀತಿಯ ನಿವೇದನೆ ಮಾಡಿಕೊಳ್ಳಲು ಗೌತಮ್​ ತಡಕಾಡುತ್ತಿದ್ದ.

ಇದೀಗ ಆ ಕ್ಷಣ ಬಂದೇ ಬಿಟ್ಟಿದೆ. ಪತಿ-ಪತ್ನಿಯ ಮುಂದಿನ ನಡೆ ಏನು ಎನ್ನುವುದು ಈಗಿರುವ ಪ್ರಶ್ನೆ. ಆದಷ್ಟು ಬೇಗ ಮರಿ ಡುಮ್ಮನ ಕೊಡಿ ಅಂತಿದ್ದಾರೆ ಫ್ಯಾನ್ಸ್​. ಇಬ್ಬರೂ ನೂರ್ಕಾಲ ಚೆನ್ನಾಗಿ ಬಾಳಿ ಅಂತನೂ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. 

ಜೋಪಾನ ಕಣೋ ಅಶೋಕಾ... ಭಾರ್ಗವಿ ಆಂಟಿ ನಿನ್​ ಮೇಲೆ ಕಣ್ಣು ಹಾಕಿದ್ದಾಳೆ ಅಂತಿರೋದ್ಯಾಕೆ ನೆಟ್ಟಿಗರು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?