ಪ್ಲೀಸ್​... ಇಷ್ಟೆಲ್ಲಾ ಶಾಕ್​ ಒಂದೇ ಸಲ ಕೊಡ್ಬೇಡಮ್ಮಾ... ಹೃದಯನೇ ಕಿತ್ತು ಬರ್ತಿದೆ ಅಂತಿರೋದ್ಯಾಕೆ ಫ್ಯಾನ್ಸ್​?

Published : Jun 17, 2024, 12:11 PM IST
ಪ್ಲೀಸ್​... ಇಷ್ಟೆಲ್ಲಾ ಶಾಕ್​ ಒಂದೇ ಸಲ ಕೊಡ್ಬೇಡಮ್ಮಾ... ಹೃದಯನೇ ಕಿತ್ತು ಬರ್ತಿದೆ ಅಂತಿರೋದ್ಯಾಕೆ ಫ್ಯಾನ್ಸ್​?

ಸಾರಾಂಶ

ಶ್ರೀರಸ್ತು ಶುಭಮಸ್ತು ತುಳಸಿ ಒಂದರ ಮೇಲೊಂದರಂತೆ ಶಾಕ್​ ಕೊಡುತ್ತಿದ್ದಾಳೆ. ಡ್ರೈವಿಂಗ್​, ಭರತನಾಟ್ಯದ ಬಳಿಕ ಈಗ ಕೊಟ್ಟ ಇನ್ನೊಂದು ಶಾಕ್​ ಏನು?  

ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ನಾಯಕಿ ಎಂದರೆ ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವಳು ಹಾಗೂ ಮನೆಯಲ್ಲಿರುವ ಎಲ್ಲರ ಟಾರ್ಚರ್​ಗಳನ್ನು ಸಹಿಸಿಕೊಂಡವಳು ಎಂದೇ ಬಿಂಬಿಸಲಾಗುತ್ತದೆ. ಇದೇ ಕಾರಣಕ್ಕೆ ಹಲವು ಕಡೆಗಳಲ್ಲಿ ಆಕೆ ಅಳುಮುಂಜಿಯೇ, ಏಕೆಂದರೆ ಅಷ್ಟೊಂದು ನೋವಿನ ಭಾರವನ್ನು ಹೊತ್ತು ಯಾರ ಮುಂದೆಯೂ ಹೇಳಿಕೊಳ್ಳುವುದಿಲ್ಲವಲ್ಲ! ಇದೇ ಕಾರಣಕ್ಕೆ ಸೀರಿಯಲ್​ ಪ್ರೇಮಿಗಳಿಗೆ ಅದರಲ್ಲಿಯೂ ಧಾರಾವಾಹಿಗಳನ್ನು ಹೆಚ್ಚಾಗಿ ನೋಡುವ ಮಹಿಳೆಯರಿಗೆ ಯಾಕೋ ತುಂಬಾ ಬೇಸರ. ಆದರೆ ನಾಯಕಿ ವಿಲನ್​ಗೆ ಸೆಡ್ಡು ಹೊಡೆತು ಎತ್ತರಕ್ಕೆ ಬೆಳೆದು ನಿಂತಾಗ, ಹೆಜ್ಜೆ ಹೆಜ್ಜೆಗೂ ಆಕೆಯ ಹೆಡೆಮುರಿ ಕಟ್ಟುತ್ತಲೇ ಹೋದಾಗ ಅಂಥ ಸೀರಿಯಲ್​ಗಳನ್ನು ನೋಡುವುದೇ ರೋಚಕ. 

ಜೀ ಟಿ.ವಿಯಲ್ಲಿ ಪ್ರಸಾರ  ಆಗ್ತಿರೋ ಅಮೃತಧಾರೆ ಸೀರಿಯಲ್​ ಜನರಿಗೆ ಇಷ್ಟವಾಗಲೂ ಇದೇ ಕಾರಣ. ಅದೇ ರೀತಿ ಕಲರ್ಸ್​  ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಅಳುಮುಂಜಿ ನಾಯಕಿ ಈಗ ಸಂಪಾದನೆ ಮಾಡಲು ಶುರು ಮಾಡಿದಾಗ ಕಮೆಂಟಿಗರಿಂದ ಭಾರಿ ಶ್ಲಾಘನೆ ವ್ಯಕ್ತವಾಗಿರುವುದನ್ನು ನೋಡಿದರೆ ಪ್ರೇಕ್ಷಕರಿಗೆ ಯಾವ ರೀತಿಯ ನಾಯಕಿ ಬೇಕು ಎನ್ನುವುದು ಅರ್ಥವಾಗುತ್ತದೆ. ಇದೀಗ ಜೀ ಕನ್ನಡದ ಶ್ರೀರಸ್ತು ಶುಭಮಸ್ತು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಇದೊಂದು ರೀತಿಯಲ್ಲಿ ಭಿನ್ನ ಕಥೆ. ತುಳಸಿ ಎಂಬ ವಿಧವೆ, ಮದುವೆಯಾದ ಮಕ್ಕಳ ತಾಯಿ ಇನ್ನೊಂದು ಮದ್ವೆಯಾಗಿ ಬೇರೊಬ್ಬರ ಮನೆಗೆ ಬಂದಾಗ ಅನುಭವಿಸುವ ನೋವು. ಇದರಲ್ಲಿ ಗಂಡ ಸೇರಿದಂತೆ ಇನ್ನು ಸದಸ್ಯರು ಈಕೆಯನ್ನು ತುಂಬಾ ಇಷ್ಟಪಟ್ಟರೆ ವಿಲನ್​ಗಳ ಕೈ ಮೇಲಾಗುತ್ತಿತ್ತು. ಇದರಿಂದ ತುಳಸಿಯ ಗೋಳು ನೋಡಲು ಆಗ್ತಿಲ್ಲ ಎನ್ನುತ್ತಿದ್ದರು. ಆದರೆ ಈಗ ಸೀನೇ ಚೇಂಜ್​  ಆಗಿದೆ.

ಮಹಾನಟಿ ಫೈನಲ್​ಗೂ ಮುನ್ನವೇ ವಿನ್ನರ್​ ಘೋಷಿಸಿದ ಅಭಿಮಾನಿಗಳು! ಅಬ್ಬಬ್ಬಾ ಎಂಥ ಪ್ರತಿಭೆ...

ಸೀರಿಯಲ್ ಪ್ರೇಮಿಗಳ ಮನಸ್ಸನ್ನು ಅರಿತಿರುವಂತೆ ತೋರುತ್ತಿರುವ ನಿರ್ದೇಶಕರು ಸೀರಿಯಲ್​ ಅಭಿಮಾನಿಗಳಿಗೆ ಒಂದರ ಮೇಲೊಂದರಂತೆ ಶಾಕ್​ ನೀಡುತ್ತಿದ್ದಾರೆ. ಮಾಧವ್​ ಕಿರಿಯ ಮಗ ಅಭಿಯ ಮನಸ್ಸು ಒಲಿಸಿಕೊಳ್ಳಲು ತುಳಸಿ ಡ್ರೈವಿಂಗ್ ಕಲಿತು ಶಾಕ್​ ನೀಡಿದಳು, ನಂತರ ಕಂಪೆನಿಯ ವಾರ್ಷಿಕೋತ್ಸವದಲ್ಲಿ ಭರತನಾಟ್ಯ ಮಾಡಿ ಶಾಕ್​ ನೀಡಿದಳು. ಇವೆಲ್ಲವನ್ನೂ ಅಭಿಮಾನಿಗಳು ಅರಗಿಸಿಕೊಳ್ಳುವ ಮೊದಲೇ ತುಳಸಿ ಈಗ ಇಂಗ್ಲಿಷ್​ ಮಾತನಾಡಿದ್ದಾಳೆ! ಮಾಧವ್​ ಮನೆಗೆ ಬಂದಿರುವ ಇಂಗ್ಲಿಷ್​ ಮಾತನಾಡುವವನೊಬ್ಬರು ಇಂಗ್ಲಿಷ್​ನಲ್ಲಿ ಮಾತನಾಡುತ್ತಾ ತುಳಸಿಗೆ ಪ್ರಶ್ನೆ ಕೇಳುತ್ತಾರೆ. ​ ಅದಕ್ಕೆ ಶಾರ್ವರಿ ತುಳಸಿಗೆ ಎಲ್ಲಿ ಇಂಗ್ಲಿಷ್​ ಬರುತ್ತೆ ಎಂದು ಹಂಗಿಸುತ್ತಾಳೆ. ಆಗ ತುಳಸಿ ಇಂಗ್ಲಿಷ್​ನಲ್ಲಿಯೇ ಉತ್ತರ ಕೊಟ್ಟು ಎಲ್ಲರಿಗೂ ಶಾಕ್​  ಕೊಡುತ್ತಾಳೆ.

ಗೃಹಿಣಿಯೊಬ್ಬಳು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎನ್ನುತ್ತಲೇ ಕಮೆಂಟಿಗರು ತುಳಸಿ ಪಾತ್ರಕ್ಕೆ ಫಿದಾ ಆಗಿಬಿಟ್ಟಿದ್ದಾರೆ. ಈ ಸೀರಿಯಲ್​ನನ್ನು ನೋಡಲೇಬಾರದು ಎಂದುಕೊಂಡಿದ್ದೆ. ಈಗ ತುಳಸಿ ಪಾತ್ರಕ್ಕೆ ಬೆಲೆ ಬಂದಿದೆ. ಎಲ್ಲಾ ಗೃಹಿಣಿಯರಿಗೂ ಈಕೆ ಮಾದರಿ. ಒಂದು ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ತುಳಸಿಯೇ ಸಾಕ್ಷಿ ಎಂಬಿತ್ಯಾದಿಯಾಗಿ ಕಮೆಂಟ್​ಗಳ ಸುರಿಮಳೆಯೇ ಆಗುತ್ತಿದೆ. ಯಾವುದೇ ಕಲಿಕೆಗೆ ವಯಸ್ಸಿನ ಹಂಗಿಲ್ಲ, ಹೆಣ್ಣು ಗೃಹಿಣಿಯ ಜೊತೆಗೆ ಅವಳಿಗೆ ಅವಕಾಶ ಸಿಕ್ಕರೆ ಎಲ್ಲವನ್ನೂ ಸಾಧಿಸಿ ತೋರಿಸಿಯಾಳು ಎಂದು ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ತುಳಸಿ ಪಾತ್ರವನ್ನು ಈಗ ಅಭಿಮಾನಿಗಳು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇಷ್ಟೆಲ್ಲಾ ಶಾಕ್​ ಒಟ್ಟಿಗೇ ಕೊಟ್ಟುಬಿಟ್ಟರೆ ಹಾರ್ಟ್​ ಒಡೆದೇ ಹೋಗುತ್ತೆ ಅನ್ನುತ್ತಿದ್ದಾರೆ. 

ಸತ್ಯ ಸೀರಿಯಲ್​ ದಿವ್ಯಾಗೆ ಹುಟ್ಟುಹಬ್ಬವಿಂದು: ಕಮೆಂಟ್ಸ್​ ನೋಡಿ ಅಳ್ತಿದ್ದ ನಟಿಯ ಇಂಟರೆಸ್ಟಿಂಗ್​ ವಿಷ್ಯ ಇಲ್ಲಿದೆ...


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪತ್ನಿ, ಮಗಳ ಜೊತೆ ಹೋಗಿ ಮನೆಗೆ ಹೊಸ ಕಾರ್‌ ತಂದ Amruthadhaare Serial ನಟ ರಾಜೇಶ್‌ ನಟರಂಗ!
BBK 12: ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್‌ ಕೊಟ್ಟ ಗಿಲ್ಲಿ ನಟ