Bigg Boss 15: ಪ್ಯಾಂಟ್‌ನಲ್ಲೇ ಸುಸ್ಸೂ ಮಾಡಿದ ನಟಿ

Published : Jan 05, 2022, 02:38 PM ISTUpdated : Jan 05, 2022, 02:49 PM IST
Bigg Boss 15: ಪ್ಯಾಂಟ್‌ನಲ್ಲೇ ಸುಸ್ಸೂ ಮಾಡಿದ ನಟಿ

ಸಾರಾಂಶ

Bigg Boss 15:ಪ್ಯಾಂಟ್‌ನಲ್ಲೇ ಸುಸ್ಸೂ ಮಾಡಿದ ಕಿರುತೆರೆ ನಟಿ ಟಾಸ್ಕ್‌ಗೋಸ್ಕರ ಏನ್ ಬೇಕಾದ್ರೂ ಮಾಡ್ತಾರೆ ಡಿವೋಲಿನಾ

ಬಿಗ್ ಬಾಸ್ 15(Biggboss 15) ಅದರ ಅಂತಿಮ ಹಂತಕ್ಕೆ ಹತ್ತಿರವಾಗುತ್ತಿದ್ದಂತೆ, ಚಾಲೆಂಜರ್‌ಗಳಾದ ಸುರ್ಭಿ ಚಂದನಾ, ಮುನ್‌ಮುನ್ ದತ್ತಾ, ಆಕಾಂಕ್ಷಾ ಪುರಿ ಮತ್ತು ವಿಶಾಲ್ ಸಿಂಗ್ ನೀಡಿದ ಟಿಕೆಟ್ ಟು ಫಿನಾಲೆ ಟಾಸ್ಕ್ ಅನ್ನು ಗೆಲ್ಲಲು ಭಾರೀ ಪ್ರಯತ್ನ ಮಾಡುತ್ತಿದ್ದಾರೆ. ಸ್ಪರ್ಧಿಗಳು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಟಾಸ್ಕ್ ಗೆಲ್ಲುವುಕ್ಕೆ ಬಳಸುತ್ತಿದ್ದಾರೆ. ತೇಜಸ್ವಿ ಪ್ರಕಾಶ್ ವಿರುದ್ಧ ಐಸ್ ಟಾಸ್ಕ್ ನಲ್ಲಿ ಉಮರ್ ರಿಯಾಜ್ ಗೆದ್ದಿದ್ದನ್ನು ನಾವು ಇತ್ತೀಚೆಗೆ ನೋಡಿದ್ದೇವೆ. ಇಂದಿನ ಸಂಚಿಕೆಯಲ್ಲಿ, ರಶ್ಮಿ ದೇಸಾಯಿ ಮತ್ತು ದೇವೋಲೀನಾ ಭಟ್ಟಾಚಾರ್ಯ (Devoleena)ಅವರು ಟಿಕೆಟ್ ಟು ಫಿನಾಲೆ ಗೆಲ್ಲಲು ಪರಸ್ಪರ ಪೈಪೋಟಿ ನಡೆಸಿದ್ದಾರೆ.

ಟಾಸ್ಕ್ ಸಮಯದಲ್ಲಿ, ಅವರನ್ನು ಪೂಲ್ ಪ್ರದೇಶದ ಬಳಿ ಕಂಬಗಳ ಮೇಲೆ ನಿಲ್ಲುವಂತೆ ಕೇಳಲಾಯಿತು. ಟಾಸ್ಕ್‌ನ ಸಂದರ್ಭ ರಾಖಿ ಸಾವಂತ್, ಕರಣ್ ಕುಂದ್ರಾ ಮತ್ತು ಉಮರ್ ರಿಯಾಜ್ ಇದ್ದರು. ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಬೆಂಬಲಿಸುವ ಅಥವಾ ದಾಳಿ ಮಾಡುವ ಹಕ್ಕನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. ಪ್ರತೀಕ್ ಸೆಹಜ್‌ಪಾಲ್ ದೇವೋಲೀನಾ ಪರ ಆಡಿದರೆ, ಉಮರ್ ತನ್ನ ಆಪ್ತ ಗೆಳತಿ ರಶ್ಮಿ ದೇಸಾಯಿಯನ್ನು ಬೆಂಬಲಿಸುತ್ತಿದ್ದರು. ದೇವೋ ಮತ್ತು ರಶ್ಮಿಯ ಹಿಡಿತವನ್ನು ಸಡಿಲಿಸಲು ಸ್ಪರ್ಧಿಗಳು ತೈಲಗಳು, ಶಾಂಪೂಗಳು ಮತ್ತು ಇತರ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬಂದಿತು, ಆದರೆ ಪಟ್ಟು ಬಿಡದೆ ಸ್ಪರ್ಧೆ ಸ್ಟ್ರಾಂಗ್ ಆಗಿಯೇ ಇತ್ತು.

ಶಿಲ್ಪಾ ಶೆಟ್ಟಿ ತಂಗಿಗೆ ಕೆಂಪು ಗುಲಾಬಿ ಕೊಟ್ಟು ಪ್ರೀತಿ ಹೇಳಿದ ರಾಖಿ ಸಾವಂತ್ ಗಂಡ

ದೇವೋ ಮತ್ತು ರಶ್ಮಿ ಇಬ್ಬರೂ ತಮ್ಮ ಚೈತನ್ಯಕ್ಕಾಗಿ ಬಿಗ್ ಬಾಸ್‌ನಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಅವರು ಟಾಸ್ಕ್ ಗೆಲ್ಲಲು 13 ಗಂಟೆಗಳ ಕಾಲ ನಿಂತು ಪರಸ್ಪರ ಕಠಿಣ ಸ್ಪರ್ಧೆಯನ್ನು ನೀಡಿದರು. ಇದರ ಮಧ್ಯೆ, ದೇವೋಲೀನಾ ಪ್ರತೀಕ್ ಮತ್ತು ಉಮರ್‌ಗೆ ತಾನು ಮೂತ್ರ ವಿಸರ್ಜಿಸಬೇಕೆಂದು ಹೇಳುತ್ತಿದ್ದಳು. ಆದರೆ ಬಿಟ್ಟುಕೊಟ್ಟು ಕೆಳಗಿಳಿಯುವ ಬದಲು, ಪ್ರತೀಕ್‌ಗೆ ಬಕೆಟ್‌ಗಳನ್ನು ನೀರನ್ನು ಎಸೆಯುವಂತೆ ಕೇಳಿದಳು. ಆದ್ದರಿಂದ ಅವಳು ತನ್ನ ಪ್ಯಾಂಟ್‌ಗೆ ಮೂತ್ರ ವಿಸರ್ಜಿಸುತ್ತಾಳೆ. ಉಮರ್ ದೇವೋಲೀನಾ ಅವರನ್ನು ಶ್ಲಾಘಿಸಿದರು.

ಬಿಗ್ ಬಾಸ್ ಕಷ್ಟದ ಟಾಸ್ಕ್ ಒಂದು ಹಂತಕ್ಕೆ ಏರಿಸಲು ನಿರ್ಧರಿಸಿದರು. ಯಾವುದೇ ವಸ್ತುವಿನ ಬೆಂಬಲವಿಲ್ಲದೆ ನಟಿಯರನ್ನು ಕಂಬದ ಮೇಲೆ ನಿಲ್ಲುವಂತೆ ಹೇಳಿದರು. ಆ ನಂತರವೂ ಗಂಟೆಗಟ್ಟಲೆ ಕಂಬದ ಮೇಲೆಯೇ ನಿಂತಿದ್ದರು. ನಂತರ ಇತರರ ಸಹಾಯವಿಲ್ಲದೆ ಬರಿಗಾಲಿನಲ್ಲಿ ನಿಲ್ಲಬೇಕು. ತಮ್ಮ ಪಾದರಕ್ಷೆಗಳನ್ನು ತೆಗೆಯಬೇಕು ಎಂದು ಬಿಗ್ ಬಾಸ್ ಘೋಷಿಸಿದರು.

ನಿಶಾಂತ್ ಮತ್ತು ಶಮಿತಾ ದೇವೋ ಮೇಲೆ ನೀರು ಮತ್ತು ಸಾಬೂನು ಸುರಿದಾಗ, ಆಕೆಯ ಉಸಿರಾಟದ ಸಮಸ್ಯೆಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಅವರು ಅವರನ್ನು ದೂಷಿಸಿದರು. ನೀವು ನನ್ನನ್ನು ಕೊಲ್ಲಬೇಕೆಂದು ಇದ್ದೀರಾ ಎಂದು ಕೇಳಿದಾಗ ಕೋಪಗೊಂಡ ನಿಶಾಂತ್, ಹಾಗಾದ್ರೆ ಕೆಳಗಿಳಿ. ಇಲ್ಲಿ ಯಾರೂ ಮರ್ಡರ್ ಮಾಡೋಕೆ ಬಂದಿಲ್ಲ ಎನ್ನುತ್ತಾರೆ.

ಟಾಸ್ಕ್ ಸಮಯದಲ್ಲಿ, ಉಮರ್ ಮತ್ತು ಪ್ರತೀಕ್ ಜಗಳವನ್ನು ಸಹ ನಾವು ನೋಡಿದ್ದೇವೆ. ಅದು ದೈಹಿಕವಾಗಿ ಕೂಡಾ ಬದಲಾಗಿತ್ತು. ದೇವೋ ಮತ್ತು ರಶ್ಮಿಗೆ ನೀರು ಚಿಮುಕಿಸುವಾಗ ತೀವ್ರ ವಾಗ್ವಾದಕ್ಕಿಳಿದರು. ಮನೆಯಲ್ಲಿ ಉಮರ್ ಹಿಂಸಾತ್ಮಕ ವರ್ತನೆಗಾಗಿ ಬಿಸ್ ಬಾಸ್ ಅವರನ್ನು ತರಾಟೆಗೆ ತೆಗೆದುಕೊಂಡರು. 14ನೇ ವಾರದಲ್ಲಿ ಉಮರ್ ಅವರನ್ನು ಕಾರ್ಯಕ್ರಮದಿಂದ ಹೊರಹಾಕುವ ಬದಲು ಅದನ್ನು ಪ್ರೇಕ್ಷಕರಿಗೆ ಬಿಡುವುದಾಗಿ ಹೇಳಿದರು. ಉಮರ್ ಶಿಕ್ಷೆಯನ್ನು ವೀಕೆಂಡ್ ಕಾ ವಾರ್ ನಲ್ಲಿ ವೀಕ್ಷಕರು ನಿರ್ಧರಿಸುತ್ತಾರೆ. ಸದ್ಯಕ್ಕೆ ಕರಣ್ ಕುಂದ್ರಾ, ಉಮರ್ ರಿಯಾಜ್ ಮತ್ತು ರಶ್ಮಿ ದೇಸಾಯಿ ಟಿಕೆಟ್ ಟು ಫಿನಾಲೆ ಗೆದ್ದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!
ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್