ಹೆಣ್ಣುಮಕ್ಳು ಬೇಡ ಅಂದ್ರೆ ಬೇಕು ಅಂತ... ಆನಂದ್​ ಕೊಟ್ಟ ಟಿಪ್ಸ್​ನಿಂದ ಗೌತಮ್​-ಭೂಮಿ ರಂಗಿನಾಟ...

By Suvarna NewsFirst Published Mar 29, 2024, 1:20 PM IST
Highlights

ಗೌತಮ್​ ಮತ್ತು ಭೂಮಿಕಾ ನಡುವೆ ಹೋಳಿಯ ರಂಗಿನಾಟ ಶುರುವಾಗಿದೆ. ಇವರ ಪ್ರೀತಿಗೆ ಅಭಿಮಾನಿಗಳು ಮೆಚ್ಚುಗೆ ಮಹಾಪೂರ ಹರಿಸುತ್ತಿದ್ದಾರೆ. 
 

ಹೋಳಿ ಹಬ್ಬ ಮುಗಿದರೂ, ಸೀರಿಯಲ್​ಗಳಲ್ಲಿ ಹೋಳಿಯ ಸಡಗರ ಮುಂದುವರೆದಿದೆ. ಇದಾಗಲೇ ಹಲವಾರು ಸೀರಿಯಲ್​ಗಳಲ್ಲಿ ಹೋಳಿಯ ಸಂಭ್ರಮ ಶುರುವಾಗಿದೆ. ಅದೇ ರೀತಿ ಅಮೃತಧಾರೆಯಲ್ಲಿಯೂ ಗೌತಮ್​ ಮತ್ತು ಭೂಮಿಕಾ ನಡುವೆ ಹೋಳಿಯ ಸಡಗರ ಮನೆ ಮಾಡಿದೆ. ಗೌತಮ್​ ಏಳುವ ಮೊದಲೇ ಆತನ ಕೆನ್ನೆಗೆ ಬಣ್ಣ ಸವರಿದ್ದಾಳೆ ಭೂಮಿಕಾ. ಗೌತಮ್​ ಎದ್ದು ಮುಖ ನೋಡಿಕೊಂಡಾಗ ಏನ್ರಿ ಇದು ಎಂದು ಕೇಳಿದ್ದಾನೆ. ನಾನು ಬಣ್ಣ ಹಚ್ಚಿದೆ ಎಂದು ಮನಸ್ಸಿನಲ್ಲಿ ಇಟ್ಟುಕೊಂಡು ನನಗೂ ಬಣ್ಣ ಹಾಕಬೇಡಿ ಮತ್ತೆ ಎಂದಿದ್ದಾಳೆ ಭೂಮಿಕಾ. ಆಗ ಗೌತಮ್​ಗೆ ಗೆಳೆಯ ಆನಂದ್​ ಮಾತು ನೆನಪಾಗಿದೆ. ಹೆಣ್ಣುಮಕ್ಕಳು ಬೇಡ ಅಂದ್ರೆ ಬೇಕು ಅಂತ, ಬೇಕು ಅಂದ್ರೆ ಬೇಡ ಅಂತ ಅರ್ಥ ಎಂದು. ಇದೇ ಕಾರಣಕ್ಕೆ ಭೂಮಿಕಾ ಕೆನ್ನೆಗೂ ಬಣ್ಣ ಹಚ್ಚಿದ್ದಾನೆ. ಇವರಿಬ್ಬರ ರಂಗಿನಾಟಕ್ಕೆ ವೀಕ್ಷಕರು ಮನಸೋತಿದ್ದಾರೆ.


ಅಷ್ಟಕ್ಕೂ ಇದಾಗಲೇ ಗೌತಮ್​ ಮತ್ತು ಭೂಮಿಕಾ ನಡುವೆ ಪ್ರೀತಿ ಒಂದು ಹೆಜ್ಜೆ ಮುಂದಕ್ಕೇ ಹೋಗಿದೆ.  ಇಲ್ಲಿಯವರೆಗೆ ಮಲ್ಲಿಗೆ ಹೂವು ಎಂದ್ರೆ ಅಲರ್ಜಿ ಅಂತಿದ್ದ ಗೌತಮ್​ ಪತ್ನಿ ಭೂಮಿಕಾಗೆ ಇಷ್ಟ ಎಂದು ಮಲ್ಲಿಗೆ ಹೂವನ್ನು ತಂದು ಕೊಟ್ಟಿದ್ದಾನೆ. ನಿಮಗೆ ಇದು ಎಂದ್ರೆ ಅಲರ್ಜಿ ಅಲ್ವಾ ಎಂದು ಭೂಮಿಕಾ ಕೇಳಿದಾಗ, ಈಗೀಗ ನಿಮಗೆ ಏನು ಇಷ್ಟವೋ, ಅದು ನನಗೂ ಇಷ್ಟ ಆಗ್ತಿದೆ, ಯಾಕೋ ಗೊತ್ತಿಲ್ಲ ಎಂದಿದ್ದಾನೆ. ಭೂಮಿಕಾ ನಾಚಿ ನೀರಾಗಿದ್ದಾಳೆ. ಮಲ್ಲಿಗೆ ಹೂವನ್ನು ಮುಡಿಸುವಂತೆ ಕೇಳಿದಾಗ, ಅಂಜುತ್ತಲೇ ಅದನ್ನು ಮುಡಿಸಿದ್ದಾನೆ ಗೌತಮ್​. ಒಟ್ಟಿನಲ್ಲಿ ಡುಮ್ಮ ಸರ್​ಗೆ ಕೊನೆಗೂ ಲವ್​ ಅಂದ್ರೇನು ಅಂತ ಗೊತ್ತಾಗೋಕೆ ಶುರುವಾಗಿದೆ ಅಂತಿದ್ದಾರೆ ಫ್ಯಾನ್ಸ್​. ಮಲ್ಲಿಗೆ ಹೂವಿನ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ನಿಮ್ಮಿಬ್ಬರ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಿ ಅಂತಿದ್ದಾರೆ ಅಭಿಮಾನಿಗಳು. 

ನಾನು ಮಹಾನಟಿಯಾಗಿದ್ದು ಹೇಗೆ? ಸೀರಿಯಲ್​ ನಾಯಕಿಯರು ಏನೆಲ್ಲಾ ಹೇಳಿದ್ರು ಕೇಳಿ...

ಹಾಗೆಂದು ಗೌತಮ್​ಗೆ ಇದೇ ಮೊದಲು ಬಾರಿಯಲ್ಲ. ಹಿಂದೆಯೂ ತಾನು ಪ್ರೀತಿ ಮಾಡ್ತಿರೋದು ತಿಳಿದಿತ್ತು. ಆದರೂ ಪ್ರೀತಿ-ಗೀತಿ ಅನ್ನೋದೇ ಗೊತ್ತಿಲ್ಲದ ಗೌತಮ್​ಗೆ ಇವೆಲ್ಲಾ ಹೊಸತಾಗಿತಲ್ಲಾ!  ಅತ್ತ ಭೂಮಿಕಾ ಅಂತೂ ತನ್ನ ಪ್ರೀತಿಯನ್ನು ಪತಿಗೆ ಹೇಗೆ ತಿಳಿಸಬೇಕು ಎನ್ನುವುದನ್ನು ತಿಳಿಯದೇ ಕಸಿವಿಸಿಯಲ್ಲಿಯೇ ಇದ್ದಳು, ಈಗೂ ಆಕೆ ನೇರವಾಗಿ ಪ್ರೀತಿಯ ಬಗ್ಗೆ ಹೇಳಿಯೇ ಇಲ್ಲ.  ಅವಳು ಪ್ರೀತಿಯನ್ನು ತಿಳಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಪೆದ್ದು ಗೌತಮ್​ಗೆ ಗೊತ್ತೇ ಆಗುತ್ತಿಲ್ಲ. ಸ್ನೇಹಿತ ಆನಂದ್​, ಗೌತಮ್​ಗೆ ಚಾಲೆಂಜ್​ ಕೊಟ್ಟಿದ್ದ. ಪತ್ನಿಗೆ ಕಿಸ್​ ಮಾಡ್ಲೇಬೇಕು ಎನ್ನುವ ಚಾಲೆಂಜ್​ ಇದಾಗಿತ್ತು. ಇಲ್ಲದಿದ್ದರೆ ಪಾರ್ಟಿಯಲ್ಲಿ ಕುಡಿದ ವಿಷಯವನ್ನು ಅಜ್ಜಿಗೆ ತಿಳಿಸುವುದಾಗಿ ಹೇಳಿದ್ದ. ಗೌತಮ್​ಗೆ ಬೇರೆ ದಾರಿಯೇ ಇರಲಿಲ್ಲ. ಪತ್ನಿಗೆ ಕಿಸ್​ ಕೊಡಲೇಬೇಕು ಎಂದು ಹೋಗಿದ್ದ. ಅಷ್ಟರಲ್ಲಿಯೇ ಭೂಮಿಕಾ ಸಮೀಪ ಹಲ್ಲಿ ಬಂದು ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.  

ಹಾಗೆಂದು ಗೆಳೆಯ ಆನಂದ್​ ಬಿಟ್ಟಾನೆಯೆ? ಅಷ್ಟಕ್ಕೂ ಅಮೃತಧಾರೆಯ ಆನಂದ್​ ಮತ್ತು ಗೌತಮ್​ ಫ್ರೆಂಡ್​ಷಿಪ್​ ಎಲ್ಲರಿಗೂ ತಿಳಿದದ್ದೇ. ಇದ್ದರೆ ಇರಬೇಕು ಇಂಥ ಸ್ನೇಹಿತರು ಎನ್ನುವಂಥ ಸ್ನೇಹ ಅಮೃತಧಾರೆ ಸೀರಿಯಲ್​ ಗೌತಮ್​ ಮತ್ತು ಆನಂದ್​ ಅವರದ್ದು. ಇದು ಧಾರಾವಾಹಿಯಾದರೂ ನಿಜ ಜೀವನದಲ್ಲಿ ಇಂಥ ಸ್ನೇಹಿತರು ಸಿಕ್ಕರೆ ಅವರೆಷ್ಟು ಪುಣ್ಯವಂತರು ಎನ್ನುತ್ತಿದ್ದಾರೆ ಪ್ರೇಕ್ಷಕರು. ಯಾರೇ ಕೈಬಿಟ್ಟರೂ ಕೊನೆಯವರೆಗೆ ಇರುವವರು, ನೋವಿನ ಕಾಲಕ್ಕೆ ಆಗುವವರು ಸ್ನೇಹಿತರೇ ಎನ್ನುವ ಮಾತಿದೆ. ಆದರೆ ಇದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಹುತೇಕ ಮಂದಿ ಬೆನ್ನಿಗೆ ಚೂರಿ ಹಾಕುವವರೇ ಇರುವ ಸಮಯದಲ್ಲಿ ಗೌತಮ್​ ಮತ್ತು ಆನಂದ್​ ಸ್ನೇಹ ಮಾತ್ರ ಸೀರಿಯಲ್​ ವೀಕ್ಷಕರಿಗೆ ಖುಷಿ ಕೊಡುವುದಂತೂ ಸುಳ್ಳಲ್ಲ. ರೊಮ್ಯಾನ್ಸ್​, ಪ್ರೀತಿ, ಪ್ರಣಯದ ಗಂಧ ಗಾಳಿಯೇ ಇಲ್ಲದ ಗೌತಮ್​ಗೆ ಇವೆಲ್ಲವನ್ನೂ ಹೇಳಿಕೊಡುವ ಆನಂದ್​ನ ಸ್ನೇಹದ ಪರಿಯೇ ಕುತೂಹಲವಾದದ್ದು. ತಮಾಷೆಯ ಧಾಟಿಯಲ್ಲಿ ಪತ್ನಿಯ ಮೇಲೆ ಮೋಹ ಹುಟ್ಟುವಂತೆ ಮಾಡುವಲ್ಲಿ ಆನಂದ್​ ಪಾಲು ಬಹುದೊಡ್ಡದಿದೆ.

ರಾಮ್​ನನ್ನು ಬಿಟ್ಟುಬಿಡು ಎಂದ ಚಾಂದನಿಗೆ ಮಾತಿನಿಂದಲೇ ಚಾಟಿ ಏಟು ಕೊಟ್ಟ ಸೀತಾ: ಭೇಷ್​ ಎಂದ ಫ್ಯಾನ್ಸ್​...
 

click me!