ರಾಮ್​ನನ್ನು ಬಿಟ್ಟುಬಿಡು ಎಂದ ಚಾಂದನಿಗೆ ಮಾತಿನಿಂದಲೇ ಚಾಟಿ ಏಟು ಕೊಟ್ಟ ಸೀತಾ: ಭೇಷ್​ ಎಂದ ಫ್ಯಾನ್ಸ್​...

By Suvarna NewsFirst Published Mar 29, 2024, 12:09 PM IST
Highlights

ರಾಮ್ ನನ್ನವನು, ಅವ​ನನ್ನು ಬಿಟ್ಟುಬಿಡು ಎಂದ ಚಾಂದನಿಗೆ ಮಾತಿನಿಂದಲೇ ಚಾಟಿ ಏಟು ಕೊಟ್ಟಿದ್ದಾಳೆ ಸೀತಾ. ಅಷ್ಟಕ್ಕೂ ಇವರಿಬ್ಬರ ನಡುವೆ ನಡೆದ ಸಂಭಾಷಣೆ ಏನು? 
 

ಒಂದು ಕಡೆ ಚಾಂದನಿ, ಇನ್ನೊಂದು ಕಡೆ ಸೀತಾ. ಇವರಿಬ್ಬರೂ ಈಗ ರಾಮ್​ ಬಾಳಿಗೆ ಬಂದಾಗಿದೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಚಾಂದನಿ ರಾಮ್​ಗೆ ಮೋಸ ಮಾಡಿ ತಿರಸ್ಕರಿಸಿ ಹಣದ ಹಿಂದೆ ಹೋದಾಕೆ. ಆಕೆಯ ನೆನಪಿನಲ್ಲಿಯೇ ಕೊರಗಿ ಹೋಗಿದ್ದ ರಾಮ್​ಗೆ ಪ್ರೀತಿಯನ್ನು ಉಣಬಡಿಸಿದವಳು ಸೀತಾ. ಸಿಹಿಯ ಕಾರಣದಿಂದ ಸೀತಾಳ ಮೇಲೆ ರಾಮ್​ಗೆ ಪ್ರೀತಿ ಹುಟ್ಟಿದೆ. ಸೀತಾಳನ್ನು ಪಡೆಯಲು ಒಂದು ರೀತಿಯಲ್ಲಿ ಹರಸಾಹಸವನ್ನೇ ಮಾಡಿದ್ದಾನೆ. ಕಷ್ಟಪಟ್ಟು ಚಾಂದನಿಯನ್ನು ಮರೆಯಬೇಕು ಎನ್ನುವಾಗಲೇ ಚಾಂದನಿಯ ಎಂಟ್ರಿ ಆಗಿದೆ. ಏನೋ ದುರುದ್ದೇಶ ಇಟ್ಟುಕೊಂಡು ವಾಪಸ್​ ಆಗಿದ್ದಾಳೆ. ಅವಳಿಗೆ ಬೇರೆ ರಾಮ್​ನ ಕುತಂತ್ರಿ ಚಿಕ್ಕಮ್ಮನ ಸಾಥ್​. ಚಿಕ್ಕಮ್ಮನಿಗೆ ಹೇಗಾದರೂ ಮಾಡಿ ರಾಮ್​ ಮತ್ತು ಸೀತಾರನ್ನು ದೂರ ಮಾಡುವ ಆಸೆ. ರಾಮ್​ ನೆಮ್ಮದಿಯಿಂದ  ಇರುವುದನ್ನು ನೋಡಲು ಅವಳಿಗೆ ಸಾಧ್ಯವಿಲ್ಲ.

ಹೀಗಿರುವಾಗಲೇ ಚಾಂದನಿಯ ಸೀತಾ ಮತ್ತು ರಾಮ್​ ಲವ್​ ವಿಷಯ ತಿಳಿದಿದೆ. ರಾಮ್​ನನ್ನು ಬಿಟ್ಟುಬಿಡು ಎಂದು ಸೀತಾಳಿಗೆ ಬುದ್ಧಿ ಹೇಳಿದ್ದಾಳೆ. ಪ್ರೀತಿ ಎಂದರೆ ತ್ಯಾಗ, ಅದಕ್ಕಾಗಿ ನೀನು ರಾಮ್​ನನ್ನು ನನಗೆ ಕೊಡು. ನಾವಿಬ್ಬರೂ ತುಂಬಾ ಲವ್​ ಮಾಡುತ್ತಿದ್ದೇವೆ ಎಂದಿದ್ದಾಳೆ. ಆದರೆ ಸೀತಾಳಿಗೆ ಚಾಂದನಿಯ ಪೂರ್ವಪರ ಎಲ್ಲವೂ ಚೆನ್ನಾಗಿ ಗೊತ್ತಿದೆ. ಅವಳು ರಾಮ್​ಗೆ ಹೇಗೆ ಮೋಸ ಮಾಡಿದ್ದಾಳೆ ಎನ್ನುವುದೂ ಗೊತ್ತಿದೆ. ಮಾತ್ರವಲ್ಲದೇ ರಾಮ್​ ಮನಸ್ಸಿನಲ್ಲಿ ಆಕೆಯ ಮೇಲೆ ಎಳ್ಳಷ್ಟೂ ಪ್ರೀತಿ ಇಲ್ಲ ಎನ್ನುವ ಸತ್ಯವೂ ತಿಳಿದಿದೆ. ಇದೇ ಕಾರಣಕ್ಕೆ ಅವಳು ಚಾಂದನಿಗೆ ಮಾತಿನಿಂದಲೇ ಚಾಟಿ ಏಟು ನೀಡಿದ್ದಾಳೆ. ತ್ಯಾಗ ಮಾಡಬೇಕು ಎನ್ನುವುದು ಸರಿಯೇ. ಆದರೆ ರಾಮ್​ ನಿಮ್ಮನ್ನು ಪ್ರೀತಿಸುತ್ತಲೇ ಇಲ್ಲವಲ್ಲ, ಇನ್ನೆಲ್ಲಿಯ ತ್ಯಾಗ ಎಂದು ಪ್ರಶ್ನಿಸಿದ್ದಾಳೆ. ರಾಮ್​  ನನ್ನನ್ನು ಮತ್ತುನಾನ್​ ರಾಮ್​ನನ್ನು ಪ್ರೀತಿಸುತ್ತಿದ್ದೇವೆ. ಅವರ ಮನಸ್ಸಿನಲ್ಲಿ ನಿಮಗೆ ಜಾಗವೇ ಇಲ್ಲವೆಂದ ಮೇಲೆ ಇನ್ನೇನು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ವೀಕ್ಷಕರು ಭೇಷ್​ ಭೇಷ್​ ಎನ್ನುತ್ತಿದ್ದಾರೆ. 

ನಾನು ನಂದಿನಿ, ಬ್ಲ್ಯಾಕ್​ಮೇಲ್​ ಮಾಡ್ತೀನಿ... ಎನ್ನುತ್ತಲೇ ಭಾಗ್ಯಳ ಭರ್ಜರಿ ಎಂಟ್ರಿ! 'ಕಳ್ಳಿ' ಕನ್ನಿಕಾ ಮಿಸ್​ ಸುಸ್ತೋ ಸುಸ್ತು..

ಸೀತಾ- ರಾಮ ಕಲ್ಯಾಣ ಇನ್ನೇನು ಆಗುತ್ತಿದೆ ಎಂದು ಪ್ರೇಕ್ಷಕರು ಖುಷಿ ಪಡುವ ಹೊತ್ತಿನಲ್ಲಿಯೇ ಏನೇನೋ ಸಮಸ್ಯೆಗಳು ನಡೆಯುತ್ತಲೇ ಇವೆ. ಅತ್ತ ರಾಮ್​ನ ಚಿಕ್ಕಮ್ಮ ತಾತನ ಎದುರು ಚಾಂದನಿ ಮತ್ತು ರಾಮ್​ನ ಮದುವೆಯ ಬಗ್ಗೆ ಮಾತನಾಡಿದ್ದಾಳೆ. ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪ ಹುಡುಕುವುದು ಯಾಕೆ ಎಂದು ಪ್ರಶ್ನಿಸಿದ್ದಾಳೆ. ತಾತನೂ ಅದಕ್ಕೆ ಸಮ್ಮತಿ ಸೂಚಿಸಿದಂತೆ ತೋರುತ್ತಿದೆ. ಚಿಕ್ಕಮ್ಮಗೆ ಸೀತಾ ಮತ್ತು ರಾಮ್​ ಪ್ರೀತಿ ಮಾಡುತ್ತಿರುವ ವಿಷಯ ತಿಳಿದಿದ್ದರೂ, ಅದನ್ನು ತಪ್ಪಿಸುವುದಕ್ಕಾಗಿ ಕುತಂತ್ರ ರೂಪಿಸುತ್ತಿದ್ದಾಳೆ. ಆದರೆ ಸೀತಾ-ರಾಮರ ಲವ್​ ಸ್ಟೋರಿ ಏನೋ ಶುರುವಾಗಿಬಿಟ್ಟಿದೆ. ತನ್ನ ಹಿಂದಿನ ಕಥೆ ನಿಮಗೆ ಗೊತ್ತಿಲ್ಲ ಎಂದು ಅದನ್ನು ಹೇಳಲು ಹೋದಾಗ ರಾಮ್​ ತಡೆದಿದ್ದಾನೆ. ನನ್ನ ಹಿಂದಿನ ಕಥೆಯೂ ಚೆನ್ನಾಗಿಲ್ಲ, ಅದೆಲ್ಲಾ ನನಗೆ ಬೇಡ... ನೀವು ಬೇಕು, ನಿಮ್ಮ ಪ್ರೀತಿ ಬೇಕು ಎಂದು ಹೇಳುವ ಮೂಲಕ ಸೀತಾಳಿಗೆ ತನ್ನ ಹಿಂದಿನ ಕಥೆಯನ್ನು ಹೇಳಲು ರಾಮ್​ ಕೊಟ್ಟಿಲ್ಲ. ಆಗ ಸೀತಾ ಸುಮ್ಮನಾಗಿದ್ದಳು. ರಾಮ್​ನನ್ನು ಪ್ರೀತಿ ಮಾಡುವುದಾಗಿ ಒಪ್ಪಿಕೊಂಡಿದ್ದಳು. ಇದೀಗ ಇಬ್ಬರೂ ಲವ್​ನಲ್ಲಿ ಬಿದ್ದಿದ್ದಾರೆ.  

 

ಇದೀಗ, ಸಿಹಿ ಕೂಡ ನನ್ನ ಮಗಳೇ ಎಂದು ರಾಮ್​ ಹೇಳಿದ್ದಾನೆ. ಆದರೆ ಸಿಹಿಯ ಹುಟ್ಟಿನ ರಹಸ್ಯದ ಬಗ್ಗೆ ನಿಮಗೆ ಹೇಳಲೇಬೇಕು ಎಂದು ಸೀತಾ ಹಠ ಮಾಡಿದ್ದಾಳೆ. ರೆಸ್ಟೋರೆಂಟ್​ ಒಂದರಲ್ಲಿ ಹಿಂದಿನ ಘಟನೆಗಳ ಕುರಿತು ಸೀತಾ ಹೇಳುತ್ತಿರುವಾಗಲೇ, ಇವರಿಬ್ಬರೂ ಹೋಗಿದ್ದನ್ನು ನೋಡಿ ಹಿಂಬಾಲಿಸಿಕೊಂಡು ಬಂದಿರುವ ಚಾಂದನಿ ಅಷ್ಟರಲ್ಲಿಯೇ ಎಂಟ್ರಿ ಕೊಟ್ಟಿದ್ದಾಳೆ. ರಾಮ್​ನನ್ನು ಬಿಟ್ಟುಬಿಡುವಂತೆ ಹೇಳಿದ್ದಾಳೆ. ಇವೆಲ್ಲವುಗಳ ನಡುವೆ ರಾಮ್​  ಮತ್ತು ಸೀತಾ ಒಂದಾಗುತ್ತಾರಾ ಎನ್ನುವುದು ಈಗಿರುವ ಪ್ರಶ್ನೆ. 

'ದರ್ಶನ್'​ ನಟಿ ನವನೀತ್​ ಕೌರ್​ಗೆ ಬಿಜೆಪಿಯಿಂದ ಟಿಕೆಟ್​: ಹನುಮಾನ್​ ಚಾಲೀಸಾದಿಂದ ಸುದ್ದಿಯಾಗಿದ್ದ ಸಂಸದೆ
 

click me!