BBK9 ನಕ್ಕರೆ ಬೈಯುತ್ತಿದ್ದರು, ಆಗ ತಾಯಿಗೆ ಆಗೋ ನೋವು ಅಷ್ಟಿಷ್ಟಲ್ಲ: ವಿನೋದ್ ಗೊಬ್ಬರಗಾಲ

Published : Nov 03, 2022, 04:37 PM IST
BBK9 ನಕ್ಕರೆ ಬೈಯುತ್ತಿದ್ದರು, ಆಗ ತಾಯಿಗೆ ಆಗೋ ನೋವು ಅಷ್ಟಿಷ್ಟಲ್ಲ: ವಿನೋದ್ ಗೊಬ್ಬರಗಾಲ

ಸಾರಾಂಶ

ಮನೆಯಲ್ಲಿ ಟಿವಿ ಇದ್ದರೆ ಅವರೇ ದೊಡ್ಡವರು. ಬಾಗಿಲು ಬಳಿ ಕುಳಿತು ಟಿವಿ ನೋಡಬೇಕಿತ್ತು....ಆ ದಿನಗಳನ್ನು ನೆನಪಿಸಿಕೊಂಡ ವಿನೋದ್.....

ಕಲರ್ಸ್‌ ಕನ್ನಡ ಬಿಗ್ ಬಾಸ್ ಸೀಸನ್ 9ರಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಗಿತ್ತು. ಆಗ ವಿನೋದ್ ಗೊಬ್ಬರಗಾಲ ತಾಯಿ ಬಗ್ಗೆ ಮಾತನಾಡಿದ್ದಾರೆ. ಕಷ್ಟ ದಿನಗಳ ಬಗ್ಗೆ ನೆನಪಿಸಿಕೊಂಡಿದ್ದಾರೆ.

'ನನಗೆ ಹೊಸ ಪ್ರಪಂಚ ತೋರಿಸಿಕೊಟ್ಟಿದ್ದು ತಾಯಿ. ತಂದೆ ದುಡಿಯಲು ಹೋದಾಗ ಮಕ್ಕಳನ್ನು ಇಲ್ಲ  ಪ್ರಪಂಚ ಹೀಗಿದೆ ಈ ರೀತಿ ಇರಬೇಕು ಈ ರೀತಿ ಬದುಕಬೇಕು ಎಂದು ತೋರಿಸಿ ಕೊಡುವುದೇ ತಾಯಿ. ಮನೆಗೆ ಬಂದಾಗ ಸ್ಲೇಟು ಬಳಪ ಹಿಡಿಯಲು ಹೇಳಿಕೊಟ್ಟಿದ್ದು ತಾಯಿ. ಮಜಾ ಏನೆಂದರೆ ಶನಿವಾರ ಮತ್ತು ಭಾನುವಾರ ಅಂದ್ರೆ ಕವಲೆಗೆ ಕರೆದುಕೊಂಡು ಹೋಗುವವರು. ಕವಲೆ ಏನೆಂದರೆ  ಸಣ್ಣದಾಗಿ ನೀರು ಹರಿಯುತ್ತಿತ್ತು. ಬಟ್ಟೆ ಒಗೆಯುವ ಕಾರ್ಯಕ್ರಮ ಇತ್ತು ಅವತ್ತು ಸೋಪ್ ಹಾಕಿಕೊಡು ಅಂದ್ರೆ ನಾವು ಮೂರು ಜನ - ಅಣ್ಣ, ತಂಗಿ ಮತ್ತು ನಾನು. ಮೂರು ಜನಕ್ಕೂ ಸೋಪ್ ಹಾಕಿ ಬಡೀರಿ ಅಂತ ಹೇಳುತ್ತಿದ್ದರು. ತಾಯಂದಿರು ಕೆಲಸ ಮಾಡುವಾಗ ಒಂದು ಸೌಂಡ್ ಮಾಡುತ್ತಾರೆ...ಶ್ ಶ್ ಶ್ ಅಂತ. ಅದು ಬಟ್ಟೆ ಒಗೆಯುವ ಟ್ರೈನಿಂಗ್ ಇರಬೇಕು ಎಂದು ನಾವು ಹಾಗೇ ಮಾಡುತ್ತಿದ್ದೆವು.  ನಮ್ಮದೊಂದು ಫನ್ನಿ ಜೀವನ ..ಈ ರೀತಿ ಕಾಲವನ್ನು ಕಳೆಯುವುದು ಹೇಗೆ ಎಂದು ತಾಯಿ ಹೇಳಿಕೊಡುತ್ತಿದ್ದಳು' ಎಂದು ಬಾಲ್ಯದ ದಿನಗಳಲ್ಲಿ ವಿನೋದ್ ನೆನಪಿಸಿಕೊಂಡಿದ್ದಾರೆ.

'ಒಂದು ಸಮಯದಲ್ಲಿ ಟಿವಿ ಜಗತ್ತು ಶುರುವಾಯ್ತು. ಆಗ  ಯಾರ ಮನೆಯಲ್ಲಿ ಟಿವಿ ಇತ್ತು ಅವರನ್ನು ದೊಡ್ಡವರ ಮನೆ ಎಂದು ಕರೆಯುತ್ತಿದ್ದರು. ಸೈಕಲ್ ಇದ್ದವರ ಮನೆ ದೊಡ್ಡವರ ಮನೆ ಎಂದು ಹೇಳುತ್ತಿದ್ದರು.  ನಾವು ಮಕ್ಕಳ ಒಬ್ಬರ ಮನೆಯಲ್ಲಿ ಟಿವಿ ನೋಡಬೇಕು ಅಂದ್ರೆ ಅವರ ಮನೆ ಬಾಗಿಲು ಇರುತ್ತೆ ಅಲ್ವಾ ಅಲ್ಲಿ ಕೂರಬೇಕಿತ್ತು. ನಾವು ಜೋರಾಗಿ ನಗುವಂತಿಲ್ಲ ಅಪ್ಪಿ ತಪ್ಪಿ ನಕ್ಕಿದ್ದರೂ ಅವರಿಗೆ ತೊಂದರೆ ಆಗುತ್ತೆ ಅವರಿನಿಂದ ಒಂದು ಮಾತು ಹೇಳಿದ್ದರೆ ಅಥವಾ ಬೈದರೆ ಅಲ್ಲಿ ತಾಯಿಗೆ ತುಂಬಾ ನೋವಾಗುತ್ತದೆ. ಏನು ನನ್ನ ಮಕ್ಕಳು ನಕ್ಕರೆ ಬೈಯುತ್ತಾರೆ ಅಂತ. ಎಲ್ಲಾ ರೀತಿ ಅವಮಾನಗಳು ಇರುತ್ತೆ ಅದನೆಲ್ಲಾ ಮೌನವಾಗಿ ಸಹಿಸಿಕೊಂಡು ಅನುಭವಿಸುತ್ತಾಳೆ ತಾಯಿ' ಎಂದು ಮಾತನಾಡಿದ್ದಾರೆ.

BBK9; ಅವನ ಮನೆ ಆಳಾ, ಕಪಿ, ಬಿಗ್ ಮನೆಯಲ್ಲಿ ತಾರಕಕ್ಕೇರಿದ ಮರ್ಯಾದೆ ಜಗಳ, ಕಣ್ಣೀರಿಟ್ಟ ಕಾವ್ಯಶ್ರೀ

'ನನ್ನ ತಾಯಿಗಾಗಿ ಒಂದೇ ಒಂದು ಸಾಲು ಹೇಳಬೇಕು. ಹುಟ್ಟಿದ್ದಾಗ ಹೆಚ್ಚು ಖುಷಿ ಪಟ್ಟವಳು ಅವ್ವ, ನಾನು ಅತ್ತಾಗ ಹೊಟ್ಟೆ ಹಸಿದಾಗ ಎದೆಹಾಲು ಉಣಿಸಿದವಳು ಅವ್ವ, ನಾನು ಬಿದ್ದಾಗ ನೋವು ಮರೆಸಿದವಳು ಅವ್ವ, ನಾನು ಸೋತಾಗ ಜೊತೆಗೆ ನಿಲ್ಲುವವಳು ಅವ್ವ. ನಾನು ಅವಳಗಿಂತ ಮೊದಲು ಸತ್ತರೆ ಬೇಗ ಅಳುವುವಳು ನನ್ನ ಅವ್ವ . ಅವ್ವ ಇರೋ ಜಗತ್ತು ಸುಂದರವಾಗಿರುವ ಜಗತ್ತು. ಎಷ್ಟೋ ಜನಕ್ಕೆ ಅವ್ವನ ಪ್ರೀತಿ ಸಿಕ್ಕಿರುವುದಿಲ್ಲ ತಂದೆ ಪ್ರೀತ ಸಿಗುವುದಿಲ್ಲ. ಎರಡೂ ಪ್ರೀತಿ ಪಡೆಯುತ್ತಿರುವವರು ಆದಷ್ಟು ಪ್ರೀತಿ ಕೊಟ್ಟು ನೋಡಿಕೊಳ್ಳಿ' ಎಂದು ಹೇಳಿದ್ದಾರೆ. 

ಈ ವಾರ ವಿನೋದ್ ಆರೋಗ್ಯದಲ್ಲಿ ಏರುಪೇರು ಕಂಡಿತ್ತು. ವಿಪರೀತ ಜ್ವರ ಇದ್ದ ಕಾರಣ ವೈದ್ಯರನ್ನು ಸಂಪರ್ಕಿಸಿ ವಿನೋದ್‌ಗೆ ಚಿಕಿತ್ಸೆ ನೀಡಲಾಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?