ಕಲರ್ಸ್‌ ಕನ್ನಡದ ಅನುಬಂಧ ಅವಾರ್ಡ್‌;ಮಿಸ್ ಮಾಡದೆ ನೋಡಿ!

Suvarna News   | Asianet News
Published : Jan 16, 2021, 10:13 AM ISTUpdated : Jan 16, 2021, 10:27 AM IST
ಕಲರ್ಸ್‌ ಕನ್ನಡದ ಅನುಬಂಧ ಅವಾರ್ಡ್‌;ಮಿಸ್ ಮಾಡದೆ ನೋಡಿ!

ಸಾರಾಂಶ

ಕಲರ್ಸ್‌ ಕನ್ನಡದ ಅನುಬಂಧ ಅವಾರ್ಡ್ಸ್ 2020 ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

ಈ ಬಾರಿಯ ಅನುಬಂಧ ಅವಾರ್ಡ್ಸ್ನಲ್ಲಿ ಮೊದಲ ಬಾರಿಗೆ ಕಿಚ್ಚ ಸುದೀಪ್‌ ಭಾಗವಹಿಸಿದ್ದಾರೆ. ಜೊತೆಗೆ ಕಲರ್ಸ್‌ ಕನ್ನಡದ ನಟನಟಿಯರ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದು ವಿಶೇಷ. ಈ ವೇಳೆ ‘ಮಜಾಭಾರತ’ದ ಕೆಲವು ಕಲಾವಿದರ ಜೀವನದ ಕಥೆಗಳನ್ನು ತಾವೇ ಎಲ್ಲರಿಗೂ ತಿಳಿಹೇಳಿದರು. ಇಷ್ಟೇ ಅಲ್ಲದೆ ಅವರ ನೆರವಿಗೆ ನಿಂತರು. ಇದನ್ನು ನೋಡಿದ ಕಲರ್ಸ್‌ ಕನ್ನಡದ ಕ್ಲಸ್ಟರ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ‘ಒಬ್ಬ ನಟ ಹೀರೋ ಆಗುವುದು ಹೀಗೆ’ ಎಂದು ಕೊಂಡಾಡಿದರು.

ಕಲರ್ಸ್‌ ಕನ್ನಡದ ಎಲ್ಲಾ ಕಾರ್ಯಕ್ರಮಗಳೂ ನನಗೆ ತುಂಬಾ ಇಷ್ಟ. ಆದರೂ ಅವುಗಳಲ್ಲಿ ಒಂದು ಫೇವರಿಟ್‌ ಎಂದು ಆಯ್ಕೆ ಮಾಡಬೇಕಾದರೆ ನಾನು ಹೇಳುವುದು ಅನುಬಂಧ ಅವಾರ್ಡ್ಸ್ ಎಂದು. ಏಕೆಂದರೆ ಇದು ಭಾವನೆಗಳನ್ನು ಸಂಭ್ರಮಿಸುವ ಹಬ್ಬ. - ಪರಮೇಶ್ವರ್‌ ಗುಂಡ್ಕಲ್‌, ಬ್ಯುಸಿನೆಸ್‌ ಹೆಡ್‌, ಕಲರ್ಸ್‌ ಕನ್ನಡ

ಮಗುವಿಗೆ ನಾಮಕರಣ ಮಾಡಿದ ಹಂಸಲೇಖ

ಬೆಳಗಾವಿ ಅಥಣಿಯಿಂದ ಕನ್ನಡತಿ ಸೀರಿಯಲ್‌ನ ಅಭಿಮಾನಿ ಗಂಡ ಹೆಂಡತಿ ತಮ್ಮ ಹಸುಗೂಸಿನ ಜೊತೆಗೆ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಮರಾಠಿ ಭಾಷಿಗರಿಂದ ಸುತ್ತುವರಿದಿರುವ ಪ್ರದೇಶದಲ್ಲಿರುವ ಅವರು ಕನ್ನಡತಿ ಧಾರಾವಾಹಿಯಿಂದ ಪ್ರೇರಣೆ ಪಡೆದು ತಮ್ಮ ಮಗುವಿಗೆ ಅನುಬಂಧ ಕಾರ್ಯಕ್ರಮದಲ್ಲೇ ನಾಮಕರಣ ಮಾಡಿಸಲು ನಿರ್ಧರಿಸಿದ್ದರು. ನಾದಬ್ರಹ್ಮ ಹಂಸಲೇಖ ಹಾಗೂ ಕನ್ನಡ ಪುರೋಹಿತ ಹಿರೇಮಗಳೂರ್‌ ಕಣ್ಣನ್‌ ಮಗುವಿಗೆ ‘ಕನ್ನಡ’ ಎಂದೇ ಹೆಸರಿಟ್ಟರು.

ತೋಟದ ಮನೆಯಲ್ಲಿ ಕರು, ಕುರಿ ಮರಿಗಳನ್ನು ಮುದ್ದಾಡಿದ ರಕ್ಷಿತಾ ಪ್ರೇಮ್ 

ತಾರೆಗಳ ಸಮಾಗಮ

ಸುದೀಪ್‌, ಹಂಸಲೇಖ, ರಚಿತಾರಾಮ್‌, ಪ್ರಿಯಾಂಕಾ ಉಪೇಂದ್ರ, ಹರ್ಷಿಕಾ ಪೂಣಚ್ಚ, ಡಾರ್ಲಿಂಗ್‌ ಕೃಷ್ಣ, ಮಿಲನಾ ನಾಗರಾಜ್‌, ವಿಜಯ ರಾಘವೇಂದ್ರ, ಶ್ರೀಮುರಳಿ, ಅದಿತಿ ಪ್ರಭುದೇವ, ದೊಡ್ಡಣ್ಣ ಮತ್ತಿತರರ ಜೊತೆಗೆ ಕಲರ್ಸ್‌ ಕನ್ನಡದ ಕಲಾವಿದರು ನಕ್ಕು ನಲಿದರು. ಇಂಪಾದ ಸಂಗೀತದಿಂದ ರಂಜಿಸಲು ರಘು ದೀಕ್ಷಿತ್‌, ವಾಸುಕಿ ವೈಭವ್‌ ಇದ್ದರು. ಕುರಿ ಪ್ರತಾಪ್‌ ಹಾಸ್ಯವಿತ್ತು. ರಾಜಕೀಯದಿಂದ ಯುವ ಸಂಸದ ತೇಜಸ್ವಿ ಸೂರ್ಯ, ಕ್ರೀಡಾ ಕ್ಷೇತ್ರದಿಂದ ಅಂತಾರಾಷ್ಟ್ರೀಯ ಕ್ರಿಕೆಟರ್‌ ವೇದಾ ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?