ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ಬಂದ ಸೀತಾ-ರಾಮ: ಮುಳ್ಳಾಗಿ ಚುಚ್ಚೇ ಬಿಟ್ಳು ಚಾಂದನಿ: ಮುಂದೇನು?

By Suvarna NewsFirst Published Mar 11, 2024, 11:52 AM IST
Highlights

ಪರಸ್ಪರ ಪ್ರೀತಿ ನಿವೇದನೆಗಾಗಿ ಸೀತಾ ಮತ್ತು ರಾಮ್​ ಕೆಂಪು ಗುಲಾಬಿ ಹಿಡಿದು ಬರುವ ಹೊತ್ತಿಗೇ ಮುಳ್ಳಿನಂತೆ ಬಂದಿದ್ದಾಳೆ ಚಾಂದನಿ. ಮುಂದೇನು? 
 

ಇವತ್ತು ಏನಾದ್ರೂ ಆಗ್ಲೇ ಹೋಗಲಿ, ಸೀತಾಳ ಮುಂದೆ ಪ್ರೀತಿ ಹೇಳಿಕೋ ಎಂದು ರಾಮ್​ಗೆ ಅಶೋಕ್​ ಹುರಿದುಂಬಿಸಿದ್ದಾನೆ. ಹೌದು, ಇನ್ನು ಕಾದು ಕುಳಿತರೆ ಪ್ರಯೋಜನ ಇಲ್ಲ ಎಂದುಕೊಂಡ ರಾಮ್​ ಸೀತಾಳಲ್ಲಿ ಪ್ರೀತಿ ನಿವೇದನೆ ಮಾಡಿಕೊಳ್ಳಲು ಗುಲಾಬಿ ಹೂವು ಖರೀದಿಸಿದ್ದಾನೆ. ಒಂದೆಡೆ ರಾಮ್​ ಗುಲಾಬಿ ಹಿಡಿದು ಸೀತಾಳಿಗಾಗಿ ಬರುತ್ತಿದ್ದರೆ, ಇತ್ತ ರಾಮ್​ನ ಬಗ್ಗೆ ಪ್ರೀತಿ ಹುಟ್ಟಿರೋ ಸೀತಾ ಕೂಡ ಕೆಂಪು ಗುಲಾಬಿ ಹಿಡಿದು ರಾಮ್​ಗೋಸ್ಕರ ಬಂದಿದ್ದಾಳೆ. ಇನ್ನೇನು ಇಬ್ಬರೂ ಪ್ರೀತಿ ನಿವೇದನೆ ಮಾಡಿಕೊಳ್ಳಬೇಕು ಎನ್ನುವಷ್ಟರದಲ್ಲಿಯೇ ಚಾಂದನಿ ಹಿಂದಿನಿಂದ ಬಂದು ರಾಮ್​ನನ್ನು ತಬ್ಬಿದ್ದಾಳೆ. ಸೀತಾ ಇದನ್ನು ನೋಡಿ ಬೆಚ್ಚಿಬಿದ್ದಿದ್ದಾಳೆ. ಚಾಂದನಿ ರಾಮ್​ನ ಪ್ರೇಯಸಿಯಾಗಿದ್ದಳು ಎನ್ನುವ ವಿಷಯ ಸೀತಾಗೆ ತಿಳಿದು ಶಾಕ್​ ಆಗಿದ್ದಾಳೆ. ಗುಲಾಬಿ ಹೂವು ಕೆಳಕ್ಕೆ ಬಿದ್ದಿದೆ.

ಚಾಂದನಿ ತನ್ನನ್ನು ತಬ್ಬಿಕೊಂಡಿರುವುದರಿಂದ ಸಿಟ್ಟಿಗೆದ್ದ ರಾಮ್​, ನೀನು ನನ್ನ ಮುಗಿದಿರುವ ಅಧ್ಯಾಯ ಎಂದು ಅವಳ ವಿರುದ್ಧ ಕಿಡಿಕಾರಿ ಬಿಡಿಸಿಕೊಂಡಿದ್ದಾನೆ. ಈಗ ರಾಮ್​ನ ಪ್ರೀತಿಯನ್ನು ವಾಪಸ್​ ಕೊಡಿಸುತ್ತಾಳಾ ಸೀತಾ? ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಾಳಾ? ಸೀತಾಳಿಗಾಗಿ ಮಿಡಿಯುತ್ತಿರುವ ರಾಮ್​ ಮುಂದೇನು ಮಾಡುತ್ತಾನೆ? ಇವರಿಬ್ಬರ ಪ್ರೀತಿ ಏನಾಗುತ್ತದೆ ಎನ್ನುವುದು ಈಗಿರುವ ಕುತೂಹಲ. ರಾಮ್​ ಮತ್ತು ಸೀತಾ ಒಂದಾಗುವುದನ್ನು ನೋಡಬೇಕು, ಪ್ಲೀಸ್​ ಚಾಂದನಿ ಕ್ಯಾರೆಕ್ಟರ್​ ಮುಗಿಸಿ ಎನ್ನುತ್ತಿದ್ದಾರೆ ಫ್ಯಾನ್ಸ್. ಇದು ಸೀರಿಯಲ್​, ಇಷ್ಟು ಬೇಗ ಕಥೆ ಮುಗಿಯುವುದಿಲ್ಲ ಎಂದು ತಿಳಿದಿದ್ದರೂ ಸೀತಾ ಮತ್ತು ರಾಮ ಯಾವಾಗ ಒಂದಾಗುತ್ತಾರೆ ಎಂದು ನೋಡುವ ಕಾತರ ವೀಕ್ಷಕರದ್ದು.

ಬೆಳ್ಳುಳ್ಳಿ ಕಬಾಬ್​ ಮಾಲೀಕಂಗೂ ವಿಕ್ಕಿಪಿಡಿಯಾಗೂ 'ಸಂಧಾನ'! ಗಿಫ್ಟ್ ನೋಡಿ ಚಂದ್ರು ಏನಂದ್ರು?

ಹೌದು. ಸದ್ಯ ಜೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ ಸೀತಾ ರಾಮ ಸೀರಿಯಲ್​ ಇದೀಗ ಕುತೂಹಲದ ಘಟ್ಟ ತಲುಪಿದೆ. ಇತ್ತ ಸೀತಾ- ರಾಮ ಒಂದಾಗುವ ಕಾಲ ಬಂದಾಗಿದೆ.  ಇವರಿಬ್ಬರನ್ನೂ ಒಂದು ಮಾಡಲು ಅಶೋಕ ಹರಸಾಹಸ ಮಾಡುತ್ತಿರುವ ಕಾಲವು ಕೂಡಿ ಬರುತ್ತಿದೆ.  ಈ ಮೊದಲು ಪ್ರೀತಿಯನ್ನು ಹೇಳಿಕೊಂಡು ಬಂದ ರಾಮ್​ನನ್ನು ಬೈದು ಸೀತಾ ಮನೆಯಿಂದ ಹೊರಕ್ಕೆ ಕಳಿಸಿದ್ದಳು.  ಇದೇ ಅವಮಾನದಲ್ಲಿ ರಾಮ್​ ಏನು ಮಾಡಬೇಕು ಎಂದು ತಿಳಿಯುವಷ್ಟರಲ್ಲಿಯೇ ಭಯಾನಕ ಅಪಘಾತ ಸಂಭವಿಸಿತ್ತು.  ಅಷ್ಟಕ್ಕೂ ಈ ಆ್ಯಕ್ಸಿಡೆಂಟ್​ ಮಾಡಿಸಿದ್ದು, ಖುದ್ದು ಆತನ ಚಿಕ್ಕಮ್ಮ. ಸೀತಾಳಿಗೆ ಮೋಸ ಮಾಡುವ ಉದ್ದೇಶದಿಂದ ಮದುವೆಯಾಗಲು ಹೊರಟಿದ್ದ ರುದ್ರಪ್ರತಾಪ್​ನ ಕೈಜೋಡಿಸಿ ಚಿಕ್ಕಮ್ಮ ಅಪಘಾತ ಮಾಡಿಸಿದ್ದಳು.  ಜೈಲು ಸೇರಿದ್ದ ರುದ್ರಪ್ರತಾಪ್​ನಿಗೆ ಜಾಮೀನು ಕೊಡಿಸಿ ಹೊರಕ್ಕೆ ಕರೆದುಕೊಂಡು ಬಂದಿರುವ ಚಿಕ್ಕಮ್ಮ, ರುದ್ರಪ್ರತಾಪ್​ ಕೈಯಲ್ಲಿ ಅಪಘಾತ ಮಾಡಿಸಿದ್ದಳು.

 ಭೀಕರ ಅಪಘಾತದಲ್ಲಿ ರಾಮ್​ ಆಸ್ಪತ್ರೆಗೆ ಸೇರಿದ್ದ.  ಸೀತಾ ರಕ್ತ ಕೊಟ್ಟು ಪ್ರಾಣ ಕಾಪಾಡಿದ್ದಳು. ನಂತರ ರಾಮ್​ ಚೇತರಿಸಿಕೊಂಡ. ಮನೆಗೆ ಬಂದ ರಾಮ್‌ ಸೀತಾಳಿಗೆ ಮೆಸೇಜ್‌ ಮಾಡಿದ್ದ. ಅದನ್ನು ನೋಡಿ ಸೀತಾಗೆ ಲವ್‌ ಶುರುವಾಗಿದೆ. ರಾಮ್ ಹುಷಾರಾಗಿದ್ದನ್ನು ಕೇಳಿ ಮನಸ್ಸಿನಲ್ಲಿ ಗೊತ್ತಿಲ್ಲದೇ ಪ್ರೀತಿ ಚಿಗುರುತ್ತಿದೆ. ನಾಳೆ ಆಫೀಸ್‌ಗೆ ಬರುವುದಾಗಿ ರಾಮ್‌ ಹೇಳಿದಾಗ, ಈ ಸಂತೋಷವನ್ನು ಹೇಗೆ ವ್ಯಕ್ತಪಡಿಸುವುದು ಎಂದು ಆಕೆಗೆ ತಿಳಿಯದೇ ಚಡಪಡಿಸಿದ್ದಳು. ನಂತರ ಅತ್ತ ರಾಮ್​, ಇತ್ತ ಸೀತಾ ಪ್ರೇಮ ನಿವೇದನೆಗೆ ಹೋಗುವಷ್ಟರಲ್ಲಿಯೇ ಚಾಂದನಿ ಎಂಬ ಮುಳ್ಳಿನ ಎಂಟ್ರಿ ಆಗಿದೆ. ಮುಂದೇನು? 

ನಿವೇದಿತಾ ಕನ್ನಡಕ್ಕೆ ನೆಟ್ಟಿಗರು ಕಿಡಿಕಿಡಿ: 'ನಾಟಕ ಏಕೆ? ಕರ್ನಾಟಕದಲ್ಲಿ ಏಕೆ ಬಾಳ್ತಿದ್ದಿ' ಕೇಳ್ತಿದ್ದಾರೆ ನೆಟ್ಟಿಗರು

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!