ಮಿಲೇನಿಯರ್​ ಮನೆಯಲ್ಲಿ UPS ಇಲ್ಲ ಅಂತ ಗೊತ್ತಿತ್ತು, ಸಿಸಿಟಿವಿನೂ ಇಲ್ವಾ? ಕಾಲೆಳೀತಿರೋ ನೆಟ್ಟಿಗರು

Published : Nov 17, 2024, 03:45 PM IST
ಮಿಲೇನಿಯರ್​ ಮನೆಯಲ್ಲಿ UPS ಇಲ್ಲ ಅಂತ ಗೊತ್ತಿತ್ತು, ಸಿಸಿಟಿವಿನೂ ಇಲ್ವಾ? ಕಾಲೆಳೀತಿರೋ ನೆಟ್ಟಿಗರು

ಸಾರಾಂಶ

ಅಮೃತಧಾರೆ ಸೀರಿಯಲ್​ನಲ್ಲಿ ಫೋನ್​ನಲ್ಲಿ ಬಾಂಬ್​ ಇಟ್ಟು ಹೋಗಿರೋದು ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ನೆಟ್ಟಿಗರ ಚರ್ಚೆಯೇ ಬೇರೆ!  

ಸೀರಿಯಲ್​ಗಳಲ್ಲಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಕೆಲವೊಂದು ಕಪೋಕಲ್ಪಿತ ಘಟನೆಗಳನ್ನು ಸೃಷ್ಟಿ ಮಾಡುವುದು ಸಹಜವೇ. ಒಂದು ದೃಶ್ಯಕ್ಕೆ ಅನುಗುಣವಾಗಿ ಕೆಲವೊಮ್ಮೆ ವಾಸ್ತವಕ್ಕೆ ಹತ್ತಿರವಾಗಿರೋದನ್ನು ತೋರಿಸುವುದು ಉಂಟು. ಅದೇ ರೀತಿ ಇದೀಗ ಅಮೃತಧಾರೆ ಸೀರಿಯಲ್​ ವೀಕ್ಷಕರೂ ಆಡಿಕೊಳ್ಳುವಂತಾಗಿದೆ. ಮಧ್ಯಮ ವಯಸ್ಕರ ಪ್ರೀತಿಯ ಕಥಾಹಂದರವನ್ನು ತುಂಬಾ ನವೀರಾಗಿ ತೋರಿಸುತ್ತಿರೋ ಅಮೃತಧಾರೆ ಸೀರಿಯಲ್​ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಈ ಸೀರಿಯಲ್​ ಇಂದಿಗೂ ಸದಾ ಟಾಪ್​ನ ಟಿಆರ್​ಪಿ ಉಳಿಸಿಕೊಂಡಿದ್ದು, ಇದೀಗ ರೋಚಕ ಘಟ್ಟವನ್ನು ತಲುಪಿದೆ.

ಮನೆಯೊಳಕ್ಕೆ ಇರುವ ಲ್ಯಾಂಡ್​ಲೈನ್​ನಲ್ಲಿ ಯಾರೋ ಬಾಂಬ್​ ಇಟ್ಟು ಹೋಗಿದ್ದಾರೆ. ಬೆದರಿಕೆ ಕರೆ ಇದಾಗಲೇ ಜೈದೇವ್​ ಮತ್ತು ಗೌತಮ್​ಗೆ ಬಂದಿದೆ. ಗೌತಮ್​ ಇದನ್ನು ತಮಾಷೆ ಎಂದುಕೊಂಡು ಸುಮ್ಮನಾಗಿದ್ದ. ಆದರೆ ಜೈದೇವ್​ ಕಳ್ಳನನ್ನು ಹಿಡಿದಿದ್ದಾನೆ. ಆತ ಫೋನ್​ನಲ್ಲಿ ಬಾಂಬ್​ ಇರುವ ವಿಷಯ ಬಾಯಿ ಬಿಟ್ಟಿದ್ದಾನೆ. ಅಷ್ಟೊತ್ತಿಗಾಗಲೇ ಭೂಮಿಕಾಗೆ ಅದೇ ಲ್ಯಾಂಡ್​ಲೈನ್​ಗೆ ಕರೆ ಬಂದಿದೆ.  ಆಕೆ ಅದನ್ನು ರಿಸೀವ್​ ಮಾಡಿದ್ದಾಳೆ. ಅಷ್ಟರಲ್ಲಿ ಬಂದಿರೋ ಜೈದೇವ್​ ಭೂಮಿಕಾಗೆ ವಿಷಯ ತಿಳಿಸಿ ಫೋನ್​ನಿಂದ ಕೈಯನ್ನು ತೆಗೆಯದಂತೆ ಎಚ್ಚರಿಸಿದ್ದಾನೆ. ಭೂಮಿಕಾ ಆತನಿಗೆ ದೂರ ಹೋಗುವಂತೆ ಹೇಳಿದರೂ, ಜೈದೇವ್​ ಅತ್ತಿಗೆಯ ಪ್ರಾಣವನ್ನು ಕಾಪಾಡುವುದಕ್ಕಾಗಿ ರಿಸ್ಕ್​ ತೆಗೆದುಕೊಂಡಿದ್ದಾನೆ. ನಂತರ ಜೈದೇವ್​ ಮತ್ತು ಭೂಮಿಕಾ ಸೇರಿ ಫೋನ್​ ಅನ್ನು ದೂರ ಎಸೆದು ಎಲ್ಲರನ್ನೂ ಕಾಪಾಡಿದ್ದಾನೆ. ಭೂಮಿಕಾ ಆಯ ತಪ್ಪಿ ಬಿದ್ದು ಏಟು ಮಾಡಿಕೊಂಡಿದ್ದಾಳೆ. ಮುಂದೇನಾಗುವುದೋ ಎನ್ನುವುದು ಸದ್ಯಕ್ಕಿರುವ ಕುತೂಹಲ.

ವಿಮೆಯ ಹಣಕ್ಕಾಗಿ ವಾಹನಗಳ ಮೇಲೆ ದಾಳಿ ಮಾಡ್ತಿತ್ತು ಈ ವಿಚಿತ್ರ ಕರಡಿ! ಹೀಗೊಂದು ಕುತೂಹಲದ ಘಟನೆ...

ಇದು ಸೀರಿಯಲ್​ ವಿಷಯವಾದ್ರೆ, ಮನೆಯೊಳಗೇ ಇದನ್ನೆಲ್ಲಾ ಮಾಡಿರುವವರು ಯಾರು ಎಂಬ ಬಗ್ಗೆ ತಿಳಿದುಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ.  ಆದರೆ ಮಿಲೇನಿಯರ್​ ಮನೆಯಲ್ಲಿ ಸಿಸಿಟಿವಿ ಇಲ್ವಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ಆಗಿತ್ತು. ಗೌತಮ್​ಗೆ ಕತ್ತಲು ಎಂದರೆ ಭಯ. ಆದ್ದರಿಂದ ಕರೆಂಟ್​ ಹೋದಾಗ ಹೆದರಿ ಭೂಮಿಕಾ ಹತ್ತಿರ ಹೋಗುತ್ತಿದ್ದ. ಭೂಮಿಕಾ ಮತ್ತು ಗೌತಮ್​ನನ್ನು ಒಂದು ಮಾಡಲು ಈ ದೃಶ್ಯ ತುರುಕಿದ್ದರೂ, ಹಾಸ್ಯಾಸ್ಪದ ಎನ್ನಿಸಿದ್ದು ಉಂಟು. ಮಿಲೇನಿಯರ್​ ಮನೆಯಲ್ಲಿ ಯುಪಿಎಸ್​ ಇಲ್ವಾ ಎಂದು ಹಲವರು ಪ್ರಶ್ನಿಸಿದ್ದರು. ಈಗಲೂ ಸಿಸಿಟಿವಿ ನೋಡಿದ್ರೆ ಯಾರು ಮಾಡಿದ್ದು ಎಂದು ಸುಲಭದಲ್ಲಿ ಗುರುತು ಹಿಡಿಯಬಹುದಲ್ವಾ ಎನ್ನುವುದು ಪ್ರಶ್ನೆ.

ಏಕೆಂದ್ರೆ, ಈ ಹಿಂದೆ ಗೌತಮ್​ ಭೂಮಿಕಾ ಅಕೌಂಟ್​ಗೆ 10 ಕೋಟಿ ರೂಪಾಯಿ ಹಾಕಿದ್ದ. ಇದನ್ನು ನೂರು ರೂಪಾಯಿ ಎನ್ನುವಂತೆ ಮಾತನಾಡಿದ್ದ. ಇಂಥ ಕೋಟ್ಯಧಿಪತಿ ಮನೆಯ ವಿಷಯದ ಶೂಟಿಂಗ್​ ಮಾಡುವಾಗ ನಿರ್ದೇಶಕರು ಸ್ವಲ್ಪ ತಲೆ ಉಪಯೋಗಿಸಿದರೆ ಒಳ್ಳೆಯದು ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 

ನನ್ನ ಅಕ್ಕನಿಗೆ ಬೆಂಕಿ ಹಚ್ಚಿ ಕೊಲ್ಲಲು ನೋಡಿದ್ರು: ಜಯಪ್ರದಾ ಕುಟುಂಬದ ಶಾಕಿಂಗ್ ವಿಷ್ಯ ಬಿಚ್ಚಿಟ್ಟ ನಟಿ ವಿಜಯಲಕ್ಷ್ಮಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!