ಗೆಳೆಯ ಗೆಳೆಯ ಎನ್ನುತ್ತಿದ್ದ ಮಂಜುಗೆ 'ಇದೆಲ್ಲ ನನ್ನ ಹತ್ರ ಇಟ್ಕೋಬೇಡ' ಎಂದು ಖಡಕ್ ವಾರ್ನಿಂಗ್ ಕೊಟ್ಟ ಗೌತಮಿ!

Published : Dec 12, 2024, 10:29 AM ISTUpdated : Dec 12, 2024, 10:30 AM IST
ಗೆಳೆಯ ಗೆಳೆಯ ಎನ್ನುತ್ತಿದ್ದ ಮಂಜುಗೆ 'ಇದೆಲ್ಲ ನನ್ನ ಹತ್ರ ಇಟ್ಕೋಬೇಡ' ಎಂದು ಖಡಕ್ ವಾರ್ನಿಂಗ್ ಕೊಟ್ಟ ಗೌತಮಿ!

ಸಾರಾಂಶ

ಇಷ್ಟು ದಿನ ಕಿತ್ತರೂ ಬಿಡದಂತೆ ಅಂಟುಕೊಂಡಿದ್ದ ಉಗ್ರಂ ಮಂಜುಗೆ ವಾರ್ನಿಂಗ್ ಕೊಟ್ಟ ಮೋಕ್ಷಿತಾ. ಗೆಳೆಯನ್ನು ಪರಿಸ್ಥಿತಿ ನೋಡಿ ನಕ್ಕಿದ ಮನೆ.....  

ಬಿಗ್ ಬಾಸ್ ಸೀಸನ್ 11ರ 11ನೇ ವಾರದ ಕ್ಯಾಪ್ಟನ್ ಆಗಿ ಗೌತಮಿ ಜಾದವ್ ಮಿಂಚುತ್ತಿದ್ದಾರೆ. ಗೌತಮಿ ಕ್ಯಾಪ್ಟನ್ಸಿಯಲ್ಲಿ ಗೌತಮಿ ಮಾತ್ರ ನಿರ್ಧಾರ ತೆಗೆದುಕೊಳ್ಳ ಬೇಕು ಮಂಜು ಅಲ್ಲ ಎಂದು ಮನೆ ಮಂದು ಹಾಸ್ಯ ಮಾಡುತ್ತಿದ್ದರು. ಇದೀಗ ಮಂಜು ಅದೇ ರೀತಿ ನಡೆದುಕೊಳ್ಳುತ್ತಿರುವ ಕಾರಣ ಗೌತಮಿ ಕೊಂಚ ಗರಂ ಆಗಿದ್ದಾರೆ. ಮಾತಿಗೆ ಮಾತು ಬೆಳೆದು ವಾರ್ನಿಂಗ್ ಕೊಟ್ಟು ಸ್ನೇಹವನ್ನು ಮುರಿದುಕೊಂಡಿದ್ದಾರೆ. ಮೋಕ್ಷಿತಾ ಹೊರ ಬಂದಿರುವುದು ಆಕೆ ತೆಗೆದುಕೊಂಡಿರುವ ಬೆಸ್ಟ್‌ ನಿರ್ಧಾರ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. 

'ಇದು ಹೀಗೆ ಕಂಟಿನ್ಯೂ ಆದರೆ ಇದು ನನ್ನ ಕ್ಯಾಪ್ಟನ್ಸಿ ವೀಕ್ ಆಗಿರೋದ್ರಿಂದ ನನಗೆ ನನ್ನದೇ ಆದ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ನಾನಿಲ್ಲದೆ ಕ್ಯಾಪ್ಟನ್ ಆಗಿ ನೇನೇನು ಮಾಡಬೇಕು? ನನ್ನ ಸ್ಪೇಸ್ ಅನ್ನೋದನ್ನು ಮರೆತು ನೀವು ಮಾತಾಡೋಕೆ ಶುರು ಮಾಡ್ತೀರಾ. ಇದರ ಬಗ್ಗೆ ತಲೆ ಕೆಡಿಸಿಕೊಂಡು ಕೂರೋಕೆ ನಾನು ಬಂದಿಲ್ಲ. ಇದು ಸರಿ ಆಗುತ್ತಿಲ್ಲ' ಎಂದು ಲಿವಿಂಗ್ ಏರಿಯಾದಲ್ಲಿ ಮಂಜುಗೆ ಗೌತಮಿ ಈ ರೀತಿ ಹೇಳಿದ್ದಾರೆ. 

ಕೂತ್ಕೊಂಡಿದ್ದಾಗ ಒಂದೇ ಸಮ ಕಾಲು ಅಲುಗಾಡಿಸುತ್ತಿದ್ದರೆ ಈ ರಾಶಿಯವರಿಗೆ ಹಣ ಸಮಸ್ಯೆ ಗ್ಯಾರಂಟಿ!

ಮೋಕ್ಷಿತಾ ವಿಷಯಕ್ಕೂ ಜಗಳ:

ಮೋಕ್ಷಿತಾ ಡವ್ ರಾಣಿ ಮತ್ತು ಬಕೆಟ್ ರಾಣಿ ಎನ್ನುವ ಪಟ್ಟವನ್ನು ಮಂಜು ನೀಡಿದ್ದರು. ಯಾವ ಪಟ್ಟವನ್ನು ನೀಡದಿದ್ದರೂ ಜಗಳವನ್ನು ನಾನು ಸ್ವೀಕರಿಸಬೇಕು ಎಂದು ಗೌತಮಿ ಬೇಸರ ಮಾಡಿಕೊಂಡಿದ್ದಾರೆ. 'ಡಿಸ್ಟರ್ಬ್‌ ನಾನು ಯಾವತ್ತೂ ಆಗಿದ್ದಲ್ಲ. ನಿಮಗೆ ನಿಭಾಯಿಸೋದಕ್ಕೆ ಬರೋದಿಲ್ಲ. ನನಗೆ ಗೊತ್ತಿಲ್ಲ. ನನಗೆ ಯಾಕಿದು? ಆಟದ ಮಧ್ಯೆ? ನಾನು ಸ್ಯಾಂಡ್‌ವಿಚ್ ಆಗಿದ್ದೆ. ನಾನು ಕೊಡದೇ ಇರುವ ಅಭಿಪ್ರಾಯಗಳು ಗೆಳೆತನದಿಂದ ನನ್ನ ಮೇಲೆ ಬರ್ತಾ ಇದೆ. ಇದು ಆಟಕ್ಕೆ ನನಗೆ ತೊಂದರೆ ಆಗ್ತಿದೆ. ಇದು ಎಲ್ಲವೂ ಗೊತ್ತು'ಎಂದು ಗೌತಮಿ ಕೋಪದಲ್ಲಿ ಮಾತನಾಡಿದ್ದಾರೆ. 

'ಇದು ಬಿಗ್ ಬಾಸ್‌ಗಾ? ಓವರ್‌ ಆಲ್‌ ಲೈಫ್‌ಗಾ? ಸರಿ ಗೆಳತಿ. ನಾನು ಇನ್ಮೇಲೆ ಡಿಸ್ಟರ್ಬ್‌ ಮಾಡಲ್ಲ ಗೆಳತಿ. ನಿನ್ನ ಅಟಕ್ಕಾಗಲಿ ಗೆಳತನಕ್ಕಾಗಲಿ ಡಿಸ್ಟರ್ಬ್ ಮಾಡಲ್ಲ' ಎಂದು ಮಂಜು ಉತ್ತರಿಸಿ ಸುಮ್ಮನಾಗಿದ್ದಾರೆ. 

ಮೂಲ ನಕ್ಷತ್ರದ ಹುಡ್ಗೀರು ಯಾಕೆ ಪಳಪಳ ಅಂತಾರೆ; 'ಲಕ್ಷ್ಮಿ ನಿವಾಸ' ಭಾವನ ಲುಕ್ ನೋಡಿ

ಗೌತಮಿ ವಾರ್ನಿಂಗ್:

ಗೌತಮಿ ಮಾತುಗಳನ್ನು ಕೇಳಿ ಮಂಜು 'ಫ್ರೆಂಡ್‌ಶಿಪ್‌ನ ನಿಭಾಯಿಸೋದಕ್ಕೆ ನನ್ನ ಕೈಯಲ್ಲಿ ಆಗ್ತಿಲ್ಲ ಅಲ್ಲದೆ ನನಗೆ ಬರ್ತಾನೂ ಇಲ್ಲ. ಹೀಗಾಗಿ ಅದನ್ನು ಒಪ್ಪಿಕೊಂಡು ನಿಭಾಯಿಸೋದನ್ನು ಕಲಿತಾಗ ಹೇಳ್ತೀನಿ' ಎಂದು ಮಂಜು ಹೇಳಿದ್ದಾಗ.....'ನನ್ನನ್ನು ನೀವು ಏನು ಅಂದುಕೊಂಡಿದ್ದೀರಾ? ನೀವು ನಿಭಾಯಿಸೋದಕ್ಕೆ ಕಲಿತಾಗ ನಾನು ಒಂದು ಫ್ರೆಂಡ್‌ಶಿಪ್ ಮಾಡ್ಬೇಕಾ ನಿಭಾಯಿಸಬೇಕಾ? ಇದೆಲ್ಲಾ ಇಟ್ಟಿಕೊಳ್ಳಬೇಡಿ..ಇದು ವರ್ಕ್ ಅಗಲ್ಲ ನನ್ನನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳಬೇಡಿ ನಾನು ನಿಮ್ಮ ವಾಕ್ಯವನ್ನು ವಾಪಸ್‌ ತಗೋಳಿ. ಗೆಳೆಯ ಗೆಳತಿ ಗೆಳೆತನ ಇರಲ್ಲ. ನನ್ನ ಕಡೆಯಿಂದ ಇರೋದಿಲ್ಲ. ಮುಗಿಸ್ತಾ ಇದ್ದೀನಿ. ನೋಡೋಣ ಒಳ್ಳೆದಾಗಲಿ' ಎಂದು ಸಾರಿ ಹೇಳುತ್ತಾ ಗೌತಮಿ ಹೊರಟು ಬಿಟ್ಟರು. 

ವಯಸ್ಸು ಮೀರುತ್ತಿದೆ ಮದುವೆ ಸೆಟ್ ಆಗ್ತಿಲ್ಲ ಅಂದ್ರೆ ಈ ಮಂತ್ರ ಪಠಿಸಿ; 21 ದಿನಗಳಲ್ಲಿ ನಡೆಯಲಿದೆ ಅಚ್ಚರಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಪಘಾತದಲ್ಲಿ ಪ್ರತಿಭಾವಂತ ಮಗಳು ನಿಧನ; ಜಾತಕದಲ್ಲಿ ಏನಿತ್ತು? Nanda Gokula Serial ನಟಿ ಮಾತು
Sankeerthana Movie: ಈ ವಯಸ್ಸಿನಲ್ಲೂ ಸಿನಿಮಾ ಮಾಡಿ ಯಶಸ್ವಿಯಾದ ಸೀತಾರಾಮ ಧಾರಾವಾಹಿ ಅಜ್ಜಿ