ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾದ ಕಾರು ಮಾನಸರನ್ನು ಕರೆದುಕೊಂಡು ಹೋಯ್ತಾ? ಅಥವಾ ಮತ್ಯಾರು ಎಲಿಮಿನೇಟ್

Published : Oct 27, 2024, 04:47 PM IST
ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾದ ಕಾರು ಮಾನಸರನ್ನು  ಕರೆದುಕೊಂಡು ಹೋಯ್ತಾ? ಅಥವಾ ಮತ್ಯಾರು ಎಲಿಮಿನೇಟ್

ಸಾರಾಂಶ

ಬಿಗ್‌ ಬಾಸ್‌ ಕನ್ನಡ 11 ರಲ್ಲಿ ಅಚ್ಚರಿಯ ಎಲಿಮಿನೇಷನ್‌. ಈ ವಾರ ತುಕಾಲಿ ಮಾನಸ ಹೊರ ಹೋಗಿದ್ದಾರೆ ಎನ್ನಲಾಗಿದೆ. ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ಸೃಜನ್ ಲೋಕೇಶ್ ಎಲಿಮಿನೇಷನ್ ಪ್ರಕ್ರಿಯೆ ನಡೆಸಿಕೊಟ್ಟರು.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಅಚ್ಚರಿಯ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಶನಿವಾರದ ಎಪಿಸೋಡ್‌ ನಲ್ಲಿ ಮನೆಯೊಳಗೆ ವಿಕಟ ಕವಿ ಯೋಗರಾಜ್ ಭಟ್‌ ಬಂದಿದ್ರು. ಭಾನುವಾರದ ಎಪಿಸೋಡ್‌ ನಲ್ಲಿ ಬಿಗ್‌ಬಾಸ್ ಮಾಜಿ ಸ್ಪರ್ಧಿ ಸೃಜನ್ ಲೋಕೇಶ್ ಅವರು ಓರ್ವ ಸ್ಪರ್ಧಿಯನ್ನು ಮನೆಯಿಂದ ಕರೆದುಕೊಂಡು ಹೋಗಲು ಬಂದಿದ್ದಾರೆ. ಎಲಿಮಿನೇಟ್ ಆಗಿರುವ ಸ್ಪರ್ಧಿಯನ್ನು ಮನೆಯನ್ನು ಕಾರಿನಲ್ಲಿ ಮನೆಯಿಂದ ಕರೆದುಕೊಂಡು ಹೋಗಲಾಗಿದೆ.

ಮಧುಮೇಹಿಗಳು ತಿನ್ನಲೇ ಬಾರದ ಹಾನಿಕಾರಕವಾದ 9 ಹಣ್ಣುಗಳು!

ಏರು ಧ್ವನಿಯಿಂದಲೇ ಟ್ರೋಲ್‌ ಆಗಿದ್ದ ತುಕಾಲಿ ಮಾನಸ ಅವರು ಈ ವಾರ ಮನೆಯಿಂದ ಹೊರಹೋಗಿದ್ದಾರೆಂದು ಹೇಳಲಾಗುತ್ತಿದೆ. ಇನ್ನು ಕಿಚ್ಚನಿಲ್ಲದ ಕಾರಣಕ್ಕಾಗಿ ಮನೆಯಲ್ಲಿ ವಿಭಿನ್ನವಾಗಿ ಎಲಿಮಿನೇಶನ್‌ ಮಾಡಲಾಗಿದೆ. ಮನೆಯ ಗಾರ್ಡನ್ ಏರಿಯಾಗೆ ಎರಡು ಕಾರುಗಳು ಬಂದಿದ್ದು, ಒಂದೊಂದರಲ್ಲಿ ಅತ್ಯಂತ ಕಡಿಮೆ ಓಟಿಂಗ್ ಪಡೆದಿರುವ ಸ್ಪರ್ಧಿಗಳನ್ನು ಕೂರಿಸಿ ಕಳುಹಿಸಲಾಗಿದೆ. ಎರಡು ಕಾರುಗಳಲ್ಲಿ ಕುಳಿತ ಸ್ಪರ್ಧಿಗಳು ಯಾರು ಎಂಬುದು ಸದ್ಯದ ಕುತೂಹಲವಾಗಿದೆ. ಹೊರಗಡೆ ಹೋದ ಕಾರ್‌ ನಲ್ಲಿ ಸೇಫ್ ಆಗಿ ಮನೆಗೆ ಬಂದವರು ಯಾರು ಅನ್ನೋದು ಕಾದು ನೋಡಬೇಕಿದೆ.

ಮಳೆಗಾಲದಲ್ಲೂ ನಿಮ್ಮ ತುಟಿ ಒಣಗುತ್ತಿದೆಯೇ? ಇಲ್ಲಿದೆ ಆರೈಕೆ ಟಿಪ್ಸ್

ಕಿಚ್ಚ ಸುದೀಪ್ ಅವರ ತಾಯಿಯ ಅಗಲಿಕೆಯ ಕಾರಣದಿಂದ ಈ ವಾರ ಬಾದ್‌ಶಾ ಕಾರ್ಯಕ್ರಮ ನಡೆಸಿಕೊಡುತ್ತಿಲ್ಲ. ಹೀಗಾಗಿ ಶನಿವಾರದ ಎಪಿಸೋಡ್‌ ಗೆ ಯೋಗರಾಜ್ ಭಟ್ ಮತ್ತು ಭಾನುವಾರದ ಎಪಿಸೋಡ್‌ ಗೆ ಸೃಜನ್‌ ಬಂದಿದ್ದಾರೆ. ಮನೆಯೊಳಗೆ ಬಂದ ಸೃಜನ್‌ ಯಾರ್ ಯಾರಿಗೆ ಇಲ್ಲಿ ಸೇಫ್ ಆಗುತ್ತೀನಿ ಅನ್ನೋ ಕಾನ್ಫಿಡೆನ್ಸ್ ಇದೆ ಎಂದು ಸ್ಪರ್ಧಿಗಳ ಬಳಿ ಕೇಳಿದ್ದಾರೆ. ಇದೇ ವೇಳೆ ಇಲ್ಲಿ ಮಾತನಾಡೋದು ನೋಡಿದರೆ ನಾನೇನೂ ಮಾಡಿಲ್ಲವೇನೋ ಎಂದು ಅನ್ನಿಸುತ್ತಿದೆ ಎಂದು ಮಾನಸ ಅತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗ್ಲಾಮರ್‌ನಿಂದ ಆಧ್ಯಾತ್ಮಿಕತೆಯತ್ತ: ಕಾಮಾಕ್ಯ ದೇವಿ ದರ್ಶನ ಪಡೆದ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ!
ನೀರಿನಲ್ಲೇ ಚಿತ್ರೀಕರಣ ಮಾಡಿ ‘ಅಣ್ಣಯ್ಯ’ ತಂಡ ಪಟ್ಟ ಕಷ್ಟ ಎಷ್ಟು?: ಮಾರಿಗುಡಿ ಶಿವು ಪೋಸ್ಟ್ ವೈರಲ್