
ಫೈರ್ ಬ್ರ್ಯಾಂಡ್ ಭಾಷಣಗಾರ್ತಿ ಎಂದೇ ಫೇಮಸ್ ಆಗಿರೋ ಚೈತ್ರಾ ಕುಂದಾಪುರ ಬಿಗ್ಬಾಸ್ ಮನೆಯಲ್ಲಿ 105 ದಿನಗಳ ಪ್ರಯಾಣ ಮುಗಿಸಿ ಇದೀಗ ಹೊರಕ್ಕೆ ಬಂದಿದ್ದಾರೆ. ಇದಾಗಲೇ ಹಲವಾರು ಯೂಟ್ಯೂಬ್ ಚಾನೆಲ್ ಜೊತೆ ಅವರು ಮಾತನಾಡಿದ್ದಾರೆ. ಇದೀಗ ಅವರು ನಿರಿಕ್ (ನಿರಂಜನ್ ದೇಶ್ಪಾಂಡೆ ಮತ್ತು ಕಿರಿಕ್ ಕೀರ್ತಿ) ಯೂಟ್ಯೂಬ್ ಚಾನೆಲ್ ಜೊತೆ ಒಂದಿಷ್ಟು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಕಿರಿಕ್ ಕೀರ್ತಿ ಅವರು ತಮ್ಮ ಮತ್ತು ಚೈತ್ರಾ ಅವರ ಜೊತೆಗಿನ ಹಲವು ವರ್ಷಗಳ ದ್ವೇಷಗಳ ಬಗ್ಗೆ ಈ ಸಂದರ್ಶನದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಏಳು ವರ್ಷಗಳ ಹಿಂದೆ ನಾನು ಬಿಗ್ಬಾಸ್ನಿಂದ ಹೊರಗೆ ಬಂದಾಗ ನನಗೂ ಚೈತ್ರಾಗೂ ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಆಗಿತ್ತು... ಆಮೇಲೆ ಸಂಧಾನವಿಲ್ಲದೇ ಸಮಾಧಾನದಲ್ಲಿ ಮುಗಿದಿತ್ತು... ಈಗ ಚೈತ್ರಾ ಬಿಗ್ಬಾಸ್ನಿಂದ ಹೊರಗೆ ಬಂದಾಗ ಮೊದಲ ಭೇಟಿ... ಒಂದೊಳ್ಳೆ ಹರಟೆ ಹೊಡೆದಿದ್ದೇವೆ... ಸದ್ಯದಲ್ಲೇ Mr.Nirik YouTube channelನಲ್ಲಿ interview telecast ಆಗುತ್ತೆ... ನೋಡಿ... ಎಂದು ಕೀರ್ತಿ ಹೇಳಿದ್ದರು. ಕೊನೆಗೂ ಆ ಸಂದರ್ಶನದ ವಿಡಿಯೋ ಶೇರ್ ಮಾಡಲಾಗಿದೆ.
ಈ ಸಂದರ್ಶನದಲ್ಲಿ ತಮ್ಮ ಭಾವಿ ಪತಿ ಹೇಗೆ ಇರಬೇಕು ಎನ್ನುವ ಬಗ್ಗೆ ಚೈತ್ರಾ ಕುಂದಾಪುರ ಮಾತನಾಡಿದ್ದಾರೆ. ತಲೆ ಕೂದಲಿನಿಂದ ಶುರು ಮಾಡಿ, ಎಐನಲ್ಲಿ ನಾನು ಚಿತ್ರ ರಚಿಸುತ್ತೇನೆ ಎಂದು ನಿರಂಜನ್ ಹೇಳಿದ್ದರಿಂದ ಚೈತ್ರಾ ಅವರು, ತಮ್ಮ ಭಾವಿ ಪತಿಯ ಮುಖಚೆಹರೆ ಹೇಗಿರಬೇಕು ಎಂದು ಹೇಳಿದ್ದಾರೆ. ಅದರಲ್ಲಿ ಅವರು ಹೇಳಿದ್ದು ಇಷ್ಟು: ಸಿಲ್ಕಿ ಹೇರ್ ಇರಬೇಕು, ಉದ್ದ ಕೂದಲು ಬೇಕು, ಅಷ್ಟು ಶಿಖೆ ಕಟ್ಟುವಷ್ಟು ಉದ್ದ ಇರಬೇಕು, ಕೂದಲು ಸ್ಟ್ರೇಟ್ ಆಗಿರಬೇಕು ಎಂದಿದ್ದಾರೆ. ಇನ್ನು ಹಣೆ ಅಗಲ ಬೇಕು, ಹಣೆಯಲ್ಲಿ ವಿಭೂತಿ, ಕುಂಕುಮ ಇಟ್ಟಿರಬೇಕು. ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಇರಬೇಕು ಎಂದು ಚೈತ್ರಾ ಹೇಳಿದ್ದಾರೆ. ಭಾವಿ ಪತಿಯ ಮುಖ ಗೋಲು ಆಗಿರಬೇಕು. ಚಿಕ್ಕ ಕಣ್ಣು, ಚಿಕ್ಕ ಕಿವಿ ಇರಬೇಕು, ಹುಬ್ಬು ದಪ್ಪ ಇರಬೇಕು ಎಂದಿದ್ದಾರೆ. ಇದಕ್ಕೆ ವಿವರಣೆ ನೀಡಿರುವ ಚೈತ್ರಾ ಅವರು, ನಾನು ಯಾವಾಗಲೂ ದೊಡ್ಡ ಕಣ್ಣು ಬಿಡ್ತೇನಲ್ಲ, ಅದಕ್ಕೇ ಅವರ ಕಣ್ಣು ಚಿಕ್ಕದು ಇರಬೇಕು ಎಂದಿದ್ದಾರೆ.
ಇನ್ನು ಮೀಸೆಯ ಬಗ್ಗೆ ಬಹಳ ತಮಾಷೆಯ ಮಾತಾಗಿದೆ. ದಪ್ಪ ಮೀಸೆ ಇರಬೇಕು, ಬಾಯಿ ಚಿಕ್ಕದಿರಬೇಕು. ಅದು ಹೇಗೆ ಎಂದರೆ, ಮೀಸೆಯಲ್ಲಿ ಬಾಯಿ ಕಾಣಿಸಬಾರದು ಎಂದಿದ್ದಾರೆ. ಟೀ ಕುಡಿಯುವಾಗ ಕೆನೆ ಮೀಸೆಗೆ ಸಿಕ್ಕಾಕ್ಕೋಬೇಕು, ಗಡ್ಡ ಗುಂಗುರು ಆಗಿರಬೇಕು, ಸಾಧುಗಳ ರೀತಿ ಗಡ್ಡ ಇರಬೇಕು ಎಂದಿದ್ದಾರೆ. ಗಡ್ಡದಲ್ಲಿ ಕೆನೆ ಸಿಕ್ಕಾಕ್ಕೊಂಡ್ರೆ ತೆಗೆಯುವವರು ಯಾರು ಎಂದಾಗ ಚೈತ್ರಾ ಜೋರಾಗಿ ನಕ್ಕು, ಯಾರಾದ್ರೂ ತೆಗೆಯಲಿ ಬಿಡಿ ಎಂದಿದ್ದಾರೆ. ಇಷ್ಟು ಹೇಳುತ್ತಿದ್ದಂತೆಯೇ ನಿರಂಜನ್ ಅವರು ತಾವು ಬಿಡಿಸಿದ ಚಿತ್ರವನ್ನು ಪ್ರದರ್ಶನ ಮಾಡಿದ್ದಾರೆ. ಇವರೇ ನೋಡಿ ಚೈತ್ರಾ ಮದುವೆಯಾಗಲಿರುವ ಹುಡುಗ. ಹೀಗೆ ಯಾರಾದರೂ ಇದ್ದರೆ ಅಪ್ಲೈ ಮಾಡಬಹುದು ಎಂದಿದ್ದಾರೆ! ಇದೇ ಸಂದರ್ಶನದಲ್ಲಿ ಚೈತ್ರಾ ಅವರು ತಮ್ಮ ಜೀವನದ ಸಾಕಷ್ಟು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಚೈತ್ರಾ ಕುಂದಾಪುರ ಮೊದಲೇ ಗುರುತಿಸಿಕೊಂಡಿದ್ದರಿಂದ ಬಿಗ್ಬಾಸ್ ಮನೆಯಲ್ಲಿ ಮತ್ತೊಂದಿಷ್ಟು ಕಾಂಟ್ರವರ್ಸಿಗಳಾಗಿ ಈಗ ಮತ್ತೆ ಫೇಮಸ್ ಆಗಿದ್ದಾರೆ. ಬಿಗ್ಬಾಸ್ನಿಂದ ಹೊರಬರುತ್ತಿದ್ದಂತೆಯೇ ಹೊಸ ಹೊಸ ವಿಷಯಗಳನ್ನು ಲಿತಿರುವ ಬಗ್ಗೆ ತಿಳಿಸಿದ್ದಾರೆ. 'ಹೊಸ ಹೊಸ ಅನುಭವ ಹೊತ್ತುಕೊಂಡು ಹೊರಗೆ ಬಂದಿದ್ದೇನೆ. ಬಿಗ್ಬಾಸ್ ನನಗೆ ಸುಂದರ ಅನುಭವ ನೀಡಿದೆ. ಇದು ವಿಭಿನ್ನ ಆಗಿರುವಂಥ ಅನುಭವ. ಬದುಕಿನಲ್ಲಿ ಬಹಳ ಕಡಿಮೆ ಜನರಿಗೆ ಇಂಥದ್ದೊಂದು ಅವಕಾಶ ಸಿಗುತ್ತದೆ. ಅನಿರೀಕ್ಷಿತವಾಗಿ ನರಕಕ್ಕೆ ಹೋಗಬೇಕಾಯ್ತು. ಅಲ್ಲಿಂದ ನನ್ನ ಬಿಗ್ಬಾಸ್ ಪ್ರಯಾಣ ಆರಂಭವಾಯಿತು. ಹೊಡೆದಾಟ, ಕಡಿಮೆ ಮೂಲಭೂತ ಸೌಕರ್ಯ ಇವುಗಳನ್ನೆಲ್ಲಾ ಎದುರಿಸಿದೆ. ಆಗ ಅನ್ನದ ಬೆಲೆ, ಒಗ್ಗಟ್ಟಿನ ಬೆಲೆ, ಜೀವನದಲ್ಲಿ ಸರ್ವೈವ್ ಆಗುವುದು ಹೇಗೆ ಎನ್ನುವ ಬಹುದೊಡ್ಡ ಪಾಠವನ್ನು ಇದರಿಂದ ಕಲಿತೆ ಎಂದಿದ್ದಾರೆ ಚೈತ್ರಾ. ಅಲ್ಲಿಂದ ನೇರವಾಗಿ ಸ್ವರ್ಗಕ್ಕೆ ಹೋದೆ. ಅಲ್ಲಿಯೂ ಹೊಸ ಹೊಸ ಅನುಭವ ಸಿಕ್ಕಿತು. ಬದುಕಿನಲ್ಲಿ ಯಾವುದೇ ರೀತಿಯ ಏರುಪೇರು ಬಂದರೂ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವ ಅನುಭವ ಈ ಅವಧಿಯಲ್ಲಿ ಬಿಗ್ಬಾಸ್ ನನಗೆ ಕೊಟ್ಟಿತು ಎಂದಿದ್ದಾರೆ.
7 ವರ್ಷದ ಹಿಂದೆ ಕಿರಿಕ್ ಕೀರ್ತಿ- ಚೈತ್ರಾ ಕುಂದಾಪುರ ನಡುವೆ ಅಂಥದ್ದೇನು ನಡೆದಿತ್ತು? ಸಂದರ್ಶನದಲ್ಲಿ ರಿವೀಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.