ಡಾಕ್ಟರ್ ಮುಂದೆ ವಾಂತಿ ಮಾಡಿದ್ದೀನಿ, ನನಗೆ PCOD ಸಮಸ್ಯೆ ಇದೆ; ಆರೋಗ್ಯದ ಬಗ್ಗೆ ಚೈತ್ರಾ ಕುಂದಾಪುರ ಸ್ಪಷ್ಟನೆ

Published : Jan 14, 2025, 05:01 PM IST
ಡಾಕ್ಟರ್ ಮುಂದೆ ವಾಂತಿ ಮಾಡಿದ್ದೀನಿ, ನನಗೆ PCOD ಸಮಸ್ಯೆ ಇದೆ; ಆರೋಗ್ಯದ ಬಗ್ಗೆ ಚೈತ್ರಾ ಕುಂದಾಪುರ ಸ್ಪಷ್ಟನೆ

ಸಾರಾಂಶ

ಬಿಗ್‌ಬಾಸ್‌ನಲ್ಲಿ ಆರೋಗ್ಯ ಸಮಸ್ಯೆ ಅನುಭವಿಸಿದ ಚೈತ್ರಾ ಕುಂದಾಪುರ, UTI, PCOD ಮತ್ತು ಬೆಂಗಳೂರಿನ ವಾತಾವರಣ ಹೊಂದಿಕೊಳ್ಳದೇ ಕಷ್ಟಪಟ್ಟಿದ್ದಾಗಿ ತಿಳಿಸಿದ್ದಾರೆ. ಕಳಪೆ ಕಟ್ಟಡದಲ್ಲಿನ ಬದಲಾಗುವ ತಾಪಮಾನ, ಮಾನಸಿಕ ಒತ್ತಡ ಹಾಗೂ ಆಹಾರ ಪದ್ಧತಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದಾಗಿ ವಿವರಿಸಿದ್ದಾರೆ. ಶೋಭಾ ಕೂಡ ಇದೇ ಕಾರಣದಿಂದ ಮನೆಗೆ ಹೋಗಿದ್ದಾಗಿ ಉಲ್ಲೇಖಿಸಿದ್ದಾರೆ.

ಬಿಗ್ ಬಾಸ್ ಸೀಸನ್ 11ರಲ್ಲಿ ಅತಿ ಹೆಚ್ಚು ಕಳಪೆ ಪಡೆದ ಸ್ಪರ್ಧಿ ಚೈತ್ರಾ ಕುಂದಾಪುರ. ಬಿಗ್ ಬಾಸ್ ಮನೆ ಜೈಲು ನನಗೆ ತವರು ಮನೆ ಇದ್ದಂತೆ ಎಂದು ಹಾಸ್ಯ ಕೂಡ ಮಾಡಿದ್ದರು. ಇದೆಲ್ಲರ ನಡುವೆ ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ಸಾಕಷ್ಟು ಗಾಸಿಪ್ ಹಬ್ಬಿತ್ತು. ಸುಮ್ಮನೆ ಹುಷಾರಿಲ್ಲದಂತೆ ವರ್ತಿಸುತ್ತಾರೆ ಡಾಕ್ಟರ್ ಜೊತೆ ಹೋಗುತ್ತಾರೆ ಹಾಗೆ ಹೀಗೆ ಎಂದು. ಯಾಕೆ ಚೈತ್ರಾ ಆರೋಗ್ಯ ಪದೇ ಪದೇ ಕೈ ಕೊಡುತ್ತಿತ್ತು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. 

'ನಾನು ಡಾಕ್ಟರ್ ಎದುರಿಗೆ ವಾಂತಿ ಮಾಡಿದ್ದೀನಿ, ಡಾಕ್ಟರ್ ಎದುರಿಗೆ ಆರೋಗ್ಯ ಸಮಸ್ಯೆಗಳು ಬಂದೆ, ನನ್ನ UTI ರಿಪೋರ್ಟ್‌ಗಳು ಸಾಕ್ಷಿಯಾಗಿ ಬಂದಿತ್ತು ಹಾಗೂ PCOD ಸಮಸ್ಯೆಗಳ ಇತ್ತು. ಜೈಲಿಗೆ ಹೋದಾಗ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸಮಸ್ಯೆ ಆಗುತ್ತದೆ ಏಕೆಂದರೆ ಅಲ್ಲಿನ ಹೀಟ್‌, ಲೈಟ್, ಎಸಿಗಳಿಂದ ನಮ್ಮ ತಿಂಗಳ ಸೈಕಲ್‌ಗಳಲ್ಲಿ ತುಂಬಾ ಬದಲಾವಣೆ ಆಗುತ್ತಿತ್ತು. ಶೋಭಾ ಕಳೆಪೆ ಪಡೆದು ಜೈಲಿಗೆ ಹೋದ ಮೇಲೆ ಸ್ವಿಇಚ್ಛೆಯಿಂದ ಮನೆಗೆ ಹೋದರು ಏಕೆಂದರೆ ಅವರ ಆರೋಗ್ಯ ಸುಧಾರಿಸಲಿಲ್ಲ. ಪಿಸಿಓಡಿ ಇದ್ದಾಗ ಮಾನಸಿಕವಾಗಿ ಎಷ್ಟು ಮೂಡ್ ಸ್ವಿಂಗ್‌ಗಳನ್ನು ಎದುರಿಸುತ್ತೀವಿ ಅನ್ನೋದು ಬಹುತೇಕರಿಗೆ ಗೊತ್ತಿದೆ' ಎಂದು ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಚೈತ್ರಾ ಮಾತನಾಡಿದ್ದಾರೆ.

ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ಚೈತ್ರಾ ಕುಂದಾಪುರ; ಹುಡುಗ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾನಾ?

'ನಾನು ಮೊದಲೇ ಕರಾವಳಿಯವಳಾಗಿ ನನಗೆ ಬೆಂಗಳೂರಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟ ಆಯ್ತು. ಒಂದು ವಾರ ಪೂರ್ತಿ ಎಪಿ ಮತ್ತು ಲೈಟ್‌ಗಳ ನಡುವೆ ಇರುತ್ತೀವಿ ಆದರೆ ಕಳಪೆಗೆ ಬಂದಾಗ ಏನೂ ಅಂದ್ರೆ ಏನೂ ಇರುವುದಿಲ್ಲ. ನಾರ್ಮಲ್ ವಾತಾವರಣಕ್ಕೆ ಬಾಡಿ ಸೆಟ್ ಆಗಬೇಕು, ರಾತ್ರಿ ಒಮ್ಮೆ ಸಿಕ್ಕಾಪಟ್ಟೆ ಕೋಲ್ಡ್ ಆಗುತ್ತಿತ್ತು ಅದರ ನಡುವೆ ರಾಗಿ ಗಂಜಿ ಮಾತ್ರ ಕಡಿಯಬೇಕು. ಬೇರೆ ಹೆಣ್ಣು ಮಕ್ಕಳು ಹೋಗದೇ ಇರದ ಕಾರಣ ಅವರಿಗೆ ಸಮಸ್ಯೆಗಳು ಏನು ಅನ್ನೋದು ಅರ್ಥವಾಗುತ್ತಿರಲಿಲ್ಲ. ಇಡೀ ದಿನ ಒಬ್ಬರನ್ನು ಕೂಡು ಹಾಕಿದ್ದರೆ ಮಾನಸಿಕವಾಗಿ ಕುಗ್ಗುತ್ತೀವಿ. ಕಳಪೆ ಪಡೆದು ಕಷ್ಟ ಅನುಭವಿಸಿದಾಗ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದದೆ. ಒಂದು ಸಲ ಕಳಪೆ ಪಡೆದ ಭವ್ಯಾ ತುಂಬಾ ಬೇಸರಲ್ಲಿ ಇದ್ದಳು, ಆಕೆಗೆ ಇಡೀ ಮನೆ ಸಪೋರ್ಟ್ ಇದ್ದರೂ ಕೂಡ ಚೇತರಿಸಿಕೊಳ್ಳಲು ಸಮಯ ತೆಗೆದುಕೊಂಡಳು' ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. 

ತ್ರಿವಿಕ್ರಮ್ ಭವ್ಯಾಗೆ ಪ್ರಪೋಸ್ ಮಾಡಿದ್ದು ನಿಜನಾ? ಚೈತ್ರಾ ಕುಂದಾಪುರ ಮಾತುಕೇಳಿ ಕುಟುಂಬಸ್ಥರು ಶಾಕ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ