ಬಟ್ಟೆ ಮೇಲೆ ಚಿಟ್ಟೆ,ಕಾರ್ಟೂನ್, ಧಾರ್ಮಿಕ ಚಿಹ್ನೆ ಇರ್ಲೇ ಬಾರದು; ಬಿಗ್ ಬಾಸ್ ಸೀಕ್ರೆಟ್ ರಿವೀಲ್ ಮಾಡಿದ ರಜತ್ ಪತ್ನಿ

Published : Jan 14, 2025, 04:13 PM IST
 ಬಟ್ಟೆ ಮೇಲೆ ಚಿಟ್ಟೆ,ಕಾರ್ಟೂನ್, ಧಾರ್ಮಿಕ ಚಿಹ್ನೆ ಇರ್ಲೇ ಬಾರದು; ಬಿಗ್ ಬಾಸ್ ಸೀಕ್ರೆಟ್ ರಿವೀಲ್ ಮಾಡಿದ ರಜತ್ ಪತ್ನಿ

ಸಾರಾಂಶ

ಬಿಗ್‌ಬಾಸ್ ೧೧ರ ವೈಲ್ಡ್‌ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಫಿನಾಲೆ ತಲುಪುವ ಸಾಧ್ಯತೆ ಇದೆ. ಈ ಹಿಂದೆ ರಿಯಾಲಿಟಿ ಶೋಗಳಲ್ಲಿ ಗೆಲುವು ಸಾಧಿಸಿರುವ ರಜತ್, ಹಾಸ್ಯಪ್ರಜ್ಞೆಯಿಂದ ವೀಕ್ಷಕರ ಮನ ಗೆದ್ದಿದ್ದಾರೆ. ಪತ್ನಿ ಅಕ್ಷಿತಾ ರಜತ್‌ಗಾಗಿ ಶಾಪಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಬಿಗ್‌ಬಾಸ್‌ನ ಚಿಟ್ಟೆ, ಪ್ರಾಣಿ, ಧಾರ್ಮಿಕ ಚಿಹ್ನೆಗಳಿರುವ ಬಟ್ಟೆಗಳ ನಿಷೇಧದ ಬಗ್ಗೆ ಬಹಿರಂಗಪಡಿಸಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಫಿನಾಲೆ ವಾರಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಿಡ್ ವೀಕ್‌ ನಾಮಿನೇಷನ್‌ನಿಂದ ಪಾರಾಗಲು ಸಾಕಷ್ಟು ಸರ್ಕಸ್ ಮಾಡುತ್ತಿದ್ದಾರೆ. ಆದರೆ ರಿಯಾಲಿಟಿ ಶೋ ರಜತ್‌ಗೆ ಹೊಸದಲ್ಲ. ಈಗಾಗಲೆ ಒಂದೆರಡು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ವಿನ್ನರ್-ರನ್ನರ್ ಮೆಡಲ್ ಗೆದ್ದಿದ್ದಾರೆ. ಅಲ್ಲದೆ 50ನೇ ದಿನಕ್ಕೆ ಎಂಟ್ರಿ ಕೊಟ್ಟರೂ ರಜತ್ ಕಾಮಿಡಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಈ ಕಾರಣಕ್ಕೆ ಫಿನಾಲೆ ಮುಟ್ಟರೂ ಮುಟ್ಟಬಹುದು. ಸದ್ಯ ರಜತ್ ಪತ್ನಿ ಶಾಪಿಂಗ್ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

ಹೌದು! ಸುಜೀತ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಆಗಿರುವ ವಿಡಿಯೋದಲ್ಲಿ ರಜತ್ ಕಿಶನ್ ಪತ್ನಿ ಅಕ್ಷಿತಾ ಶಾಪಿಂಗ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವ ರಜತ್‌ಗೆ ಡಿಫರೆಂಟ್ ಲುಕ್ ಆಂಡ್ ಹೈಲೈಟಿಂಗ್ ಲುಕ್ ಕೊಡುವ ಔಟ್‌ಫಿಟ್ಸ್‌ಗಳು ಬೇಕಿದೆ. ಅಕ್ಷಿತಾ ಸೆಲೆಕ್ಟ್ ಮಾಡುತ್ತಿರುವುದನ್ನು ರಜತ್ ಚೆನ್ನಾಗಿಲ್ಲ ಎಂದು ರಿಜೆಕ್ಟ್ ಮಾಡುತ್ತಿದ್ದಾರೆ. ಹೀಗಾಗಿ ಪತಿ ಸ್ನೇಹಿತನ ಸಹಾಯ ಪಡೆದು ಶಾಪಿಂಗ್ ಮಾಡಿದ್ದಾರೆ. ಶಾಪಿಂಗ್ ಮಾಡುವ ವೇಳೆ ಇದುವರೆಗೂ ಯಾರಿಗೂ ಗೊತ್ತಿರದ ಬಿಗ್ ಬಾಸ್ ರೂಲ್ಸ್‌ಗಳನ್ನು ರಿವೀಲ್ ಮಾಡಿದ್ದಾರೆ.

ದೊಡ್ಡಮ್ಮ ಬೆಂಕಿ ಹಾಕೊಂಡಾಗ ದರ್ಶನ್ ಬಂದು ನಮ್ಗೆ ಸಹಾಯ ಮಾಡಿದ್ದು; ಯಾರಿಗೂ ಗೊತ್ತಿರದ ಸತ್ಯ ಹೇಳಿದ ರಕ್ಷಿತಾ

ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ಯಾವುದೇ ಕಾರಣಕ್ಕೆ ಚಿಟ್ಟೆ, ಪ್ರಾಣಿ ಪಕ್ಷಿಗಳು ಇರುವೆ ಬಟ್ಟೆ ಧರಿಸುವಂತಿಲ್ಲ. ಇನ್ನೂ ಕಾರ್ಟೂನ್ ಕ್ಯಾರೆಕ್ಟರ್‌ಗಳು ಸೂಪರ್ ಆಗಿ ಕಾಣುತ್ತೆ ಅಂತ ಕುಟುಂಬಸ್ಥರು ಕೊಟ್ಟು ಕಳುಹಿಸಿದರೆ ರಿಜೆಕ್ಟ್‌ ಮಾಡ್ತಾರೆ ಬಿಗ್ ಬಾಸ್ ತಂಡ. ಅಷ್ಟೇ ಯಾಕೆ ಯಾವುದೇ ಧರ್ಮದ ಸಂಕೇತ ಹೊಂದಿರುವ ಉಡುಪುಗಳನ್ನು ಕಳುಹಿಸುವಂತಿಲ್ಲ. ಅಕ್ಷಿತಾ ಮಾತುಗಳನ್ನು ಕೇಳಿ ವೀಕ್ಷಕರು ಶಾಕ್ ಆಗಿದ್ದಾರೆ. ಇಷ್ಟು ದಿನ ತೀರ ಗೆರೆ ಗೆರೆ ಪಟ್ಟಿ ಪಟ್ಟಿ ಇರುವ ಉಡುಪುಗಳನ್ನು ಧರಿಸಬಾರದು ಅಂತ ವೀಕ್ಷಕರಿಗೆ ಗೊತ್ತಿತ್ತು ಆದರೆ ಇದು ನಿಜಕ್ಕೂ ಶಾಕಿಂಗ್. ಹೀಗಾಗಿ ಒಂದಿಷ್ಟು ಬ್ರ್ಯಾಂಡ್‌ ಬಟ್ಟೆಗಳನ್ನು ಅಕ್ಷಿತಾ ಶಾಪಿಂಗ್ ಮಾಡಿ ಬಿಗ್ ಬಾಸ್ ತಂಡಕ್ಕೆ ತಲುಪಿಸಿದ್ದಾರೆ. 

ಹೊಟ್ಟೆಯಲ್ಲಿದ್ದ ಮಗು ಎದೆಬಡಿತ ನಿಂತೋಗಿತ್ತು; ಮಗಳನ್ನು ಕಳೆದುಕೊಂಡು ಮಗನನ್ನು ಪಡೆದ ಘಟನೆ ನೆನೆದು ಅಮೃತಾ ಕಣ್ಣೀರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ