ಮೊದಲ ಸಂಬಳದಲ್ಲಿ ಗೌತಮ್​ ಜೊತೆ ಡೇಟಿಂಗ್! ಕಣ್ಣು ಹೊಡೆದು ಗಂಡನನ್ನು ಬೋಲ್ಡ್​ ಮಾಡೋದಾ ಭೂಮಿಕಾ?

Published : Jul 02, 2024, 04:04 PM ISTUpdated : Jul 03, 2024, 06:05 PM IST
ಮೊದಲ ಸಂಬಳದಲ್ಲಿ ಗೌತಮ್​ ಜೊತೆ ಡೇಟಿಂಗ್!  ಕಣ್ಣು ಹೊಡೆದು ಗಂಡನನ್ನು ಬೋಲ್ಡ್​  ಮಾಡೋದಾ ಭೂಮಿಕಾ?

ಸಾರಾಂಶ

ಭೂಮಿಕಾಳಿಗೆ  ಮೊದಲ ಸಂಬಳ ಸಿಕ್ಕಿದೆ. ಗಂಡ ಗೌತಮ್​ನನ್ನು ಡೇಟಿಂಗ್​ಗೆ ಕರೆದುಕೊಂಡು ಹೋಗಿದ್ದಾಳೆ. ಕ್ರಿಕೆಟ್​ ಆಡುವಾಗ ಏನು ಮಾಡಿದ್ದಾಳೆ ನೋಡಿ...  

ಕೋಟಿ ಕೋಟಿ ಎಂದರೂ ಲೆಕ್ಕಕ್ಕೇ ಇಲ್ಲದ ಆಗರ್ಭ ಶ್ರೀಮಂತರ ಮನೆಯ ಸೊಸೆಯಾಗಿರುವ ಸ್ವಾಭಿಮಾನಿ ಭೂಮಿಕಾಗೆ ಮೊದಲ ಸಂಬಳ ಬಂದಿದೆ. ಈ ಸಂಬಳದಲ್ಲಿ ಗಂಡನನ್ನು ಡೇಟಿಂಗ್​ಗೆ ಕರೆದುಕೊಂಡು ಹೋಗಿದ್ದಾಳೆ. ಅದೂ ಅವಳು ಕಲಿತಿರುವ ಶಾಲೆಗೆ ಹೋಗಿದ್ದಾಳೆ. ಅಲ್ಲಿರುವ ಮಕ್ಕಳ ಜೊತೆ ತಾನೂ ಆಟ ಆಡುವುದಾಗಿ ಗೌತಮ್​ ಜಿದ್ದು ಹಿಡಿದಿದ್ದಾನೆ. ತಾನೊಬ್ಬ ಆಗರ್ಭ ಶ್ರೀಮಂತ ಎನ್ನುವುದನ್ನು ಮರೆತು, ತನ್ನೊಳಗೊಬ್ಬ ಮಗು ಇದ್ದಾನೆ ಎನ್ನುವುದನ್ನು ಆಗಲೇ ಅರಿತಿದ್ದಾನೆ ಗೌತಮ್​. ದುಡಿಮೆ, ದುಡ್ಡು ಸಂಪಾದನೆ, ಮೀಟಿಂಗು, ಬಿಜಿಸನು ಎಂದು 24 ಗಂಟೆ ವರ್ಕೋಹಾಲಿಕ್​ ಆಗಿರುವ ಗೌತಮ್​ಗೆ ಈಗ ನಿಜವಾದ ಜೀವನದ ಅರಿವು ಮೂಡಿಸುತ್ತಿದ್ದಾಳೆ ಭೂಮಿಕಾ. ಇವನು ದುಡಿದರೆ, ಮಜಾ ಮಾಡುತ್ತಿದ್ದ ಕುಟುಂಬದವರನ್ನು ಟೈಟ್​ ಮಾಡಿದ್ದಾಳೆ ಭೂಮಿ ಮಿಸ್ಸು. ಇದೀಗ ಮೊದಲ ಸಂಬಳದಲ್ಲಿ ಡೇಟಿಂಗ್​ಗೆ ಕರೆದುಕೊಂಡು ಹೋಗಿ ಡುಮ್ಮಾ ಸರ್​ ಅನ್ನೇ ಬೋಲ್ಡ್​ ಮಾಡಿಬಿಟ್ಟಿದ್ದಾಳೆ!

ಹೌದು. ಕ್ರಿಕೆಟ್​ ಆಡುತ್ತೇನೆ ಎಂದು ಗೌತಮ್​ ಬ್ಯಾಟ್​ ಹಿಡಿದಾಗ ತಾವು ಬೌಲಿಂಗ್​ ಮಾಡುವುದಾಗಿ ಹೇಳಿದ ಭೂಮಿಕಾ ಕಣ್ಣು ಹೊಡೆದಿದ್ದಾಳೆ. ಇದನ್ನು ನೋಡುತ್ತಿದ್ದಂತೆಯೇ ಗೌತಮ್​ ಬೋಲ್ಡ್​ ಆಗಿದ್ದಾನೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ನಿಮ್ಮಿಬ್ಬರ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಿ ಎಂದು ಹಾರೈಸುತ್ತಿದ್ದಾರೆ. ಅಷ್ಟಕ್ಕೂ ಅಮೃತಧಾರೆಯ ಸೊಸೆ ಎಂದ್ರೆ ಸೀರಿಯಲ್​ ಪ್ರೇಮಿಗಳಿಎ ಹಬ್ಬವೋ ಹಬ್ಬ. ಈ ಸೊಸೆ ಉಳಿದ ಬಹುತೇಕ ಸೀರಿಯಲ್​ ಸೊಸೆಯಂತೆ ಅಳುಮುಂಜಿಯಲ್ಲ.

ಸಾಧನೆ ಮುಂದೆ ಅಕ್ಷರ, ವಿದ್ಯೆ, ಭಾಷೆ ಎಲ್ಲವೂ ಗೌಣ... ಶ್ರೀನಾಥ್​ ಮಾತಲ್ಲಿ ಎಷ್ಟು ಅರ್ಥವಿದೆಯಲ್ವೆ?

ಇಲ್ಲಿ ವಿಲನ್​ಗಳ ಕೈ ಮೇಲಾಗಲ್ಲ. ಬದಲಿಗೆ ವಿಲನ್​ಗಳನ್ನು ಹಂತಹಂತಕ್ಕೂ ವಿಲವಿಲ ಆಗಿಸೋಳು ಸೀರಿಯಲ್​ ಹೀರೋಯಿನ್ನು. ವಿಲನ್​ಗಳು ಕೆಟ್ಟವರು ಎನ್ನುವುದನ್ನು ಅರಿಯದ ಮುಗ್ಧ ಗಂಡನನ್ನೂ ಎದುರು ಹಾಕಿಕೊಳ್ಳದೇ, ಅವರನ್ನು ಒಳ್ಳೆಯವರೆಂದು ನಂಬಿರುವ ಮನೆಯ ಇತರರಿಗೂ ಯಾವುದೇ ಸಂದೇಹ ಮೂಡದಂತೆ ನಗುನಗುತ್ತಲೇ ಅವರ ಬುಡಕ್ಕೆ ಕತ್ತರಿ ಹಾಕುವಲ್ಲಿ ಈ ಸೊಸೆ ಸಿಕ್ಕಾಪಟ್ಟೆ ಎಕ್ಸ್​ಪರ್ಟ್​. ಅವಳೇ ಅಮೃತಧಾರೆಯ ಭೂಮಿಕಾ. ಇದೀಗ ಯಾರಿಗೂ ಅರಿವಿಗೆ ಬಾರದೇ ಖಳನಾಯಕರ ಬುಡಕ್ಕೇ ತಂದಿಟ್ಟಿದ್ದಾಳೆ ಈ ಭೂಮಿ ಮಿಸ್ಸು.   

 


 ಆಗರ್ಭ ಶ್ರೀಮಂತರ ಮನೆಯಲ್ಲಿ ಕೋಟಿಯೂ ಕಸಕ್ಕೆ ಸಮ. ಅದೇ ಮಧ್ಯಮ ವರ್ಗದ ಕುಟುಂಬದವರಲ್ಲಿ ನೂರು ರೂಪಾಯಿನೂ ಕೋಟಿಗೆ ಸಮ. ಇದೀಗ ಆಗರ್ಭ ಮನೆಯ ಸೊಸೆಯಾಗಿರುವ ಭೂಮಿಕಾಗೆ ಆ ಮನೆಯನ್ನು ಬ್ಯಾಲೆನ್ಸ್​ ಮಾಡುವುದು ಕಷ್ಟವೇ. ಶ್ರೀಮಂತಿಕೆಯಲ್ಲಿ ಬೆಳೆದ ಹೆಣ್ಣುಮಕ್ಕಳು ಮಧ್ಯಮ ವರ್ಗದ ಮನೆಗೆ ಮದುವೆಯಾಗಿ ಹೋದರೆ ಪಡುವ ಕಷ್ಟ ಒಂದೆಡೆಯಾದರೆ, ಸ್ವಾಭಿಮಾನದ ಮಧ್ಯಮ ವರ್ಗದ ಹೆಣ್ಣು ಶ್ರೀಮಂತರ ಮನೆಗೆ ಸೊಸೆಯಾಗಿ ಹೋದರೂ ಅದೇ ರೀತಿ ಆಗುತ್ತದೆ. ಇದಕ್ಕೆ ಉದಾಹರಣೆ ಅಮೃತಧಾರೆ. ಮಿಡ್ಲ್​ಕ್ಲಾಸ್​ ಭೂಮಿಕಾ ಆಗರ್ಭ ಶ್ರೀಮಂತನ ಮನೆಯ ಸೊಸೆಯಾಗಿದ್ದೂ ಅಲ್ಲದೇ ಮನೆಯ ಯಜಮಾನಿ ಪಟ್ಟ ಬೇರೆ ಸಿಕ್ಕಿಬಿಟ್ಟಿದೆ. ಆ ಮನೆಯವರ ಖರ್ಚಿಗೆ ಕಡಿವಾಣ ಹಾಕುವ ಪಣ ತೊಟ್ಟಿದ್ದಾಳೆ ಭೂಮಿಕಾ. ಆದರೆ ವಿಲನ್​ಗಳೇ ಮನೆಯಲ್ಲಿ ತುಂಬಿದ್ದರೂ ಎಲ್ಲರನ್ನೂ ಒಳ್ಳೆಯವರು ಎಂದು ಬಗೆಯುತ್ತಿರುವ ಪತಿಗೆ ತಿಳಿಯದಂತೆ ಮನೆಯವರಿಗೆಲ್ಲಾ ಬುದ್ಧಿ ಕಲಿಸುವುದು ಅಷ್ಟು ಸುಲಭದ ಮಾತಲ್ಲ. ಆದರೂ ಭೂಮಿಕಾ ಗಂಡನ ಪ್ರೀತಿ ಗೆಲ್ಲುತ್ತಲೇ ಮನೆಯವರಿಗೆ ಬುದ್ಧಿ ಕಲಿಸುತ್ತಿದ್ದಾಳೆ. 

ಫಲಿಸಿತು ತಂತ್ರ- ಕೊನೆಗೂ ಅಪ್ಪ ಎಂದ ಮಗ! ಮಾಧವನ ನಟನೆಗೆ ಕಣ್ಣೀರಾದ ಅಭಿಮಾನಿಗಳು


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ