ಅಲ್ಲೇ ಡ್ರಾ ಅಲ್ಲೇ ಬಹುಮಾನ: ಅತ್ತೆ ಚಾಪೆ ಕೆಳಗೆ ನುಸುಳಿದ್ರೆ ಈ ಸೊಸೆಗೆ ರಂಗೋಲಿ ಕೆಳಗೆ ನುಸುಳೋದು ಗೊತ್ತಿಲ್ವಾ?

Published : May 28, 2024, 11:14 AM IST
ಅಲ್ಲೇ ಡ್ರಾ ಅಲ್ಲೇ ಬಹುಮಾನ: ಅತ್ತೆ ಚಾಪೆ ಕೆಳಗೆ ನುಸುಳಿದ್ರೆ ಈ ಸೊಸೆಗೆ ರಂಗೋಲಿ ಕೆಳಗೆ ನುಸುಳೋದು ಗೊತ್ತಿಲ್ವಾ?

ಸಾರಾಂಶ

ಗಂಡ-ಹೆಂಡತಿಯನ್ನು ದೂರ ಮಾಡಲು  ಶಕುಂತಲಾ ದೇವಿ ಚಾಪೆ ಕೆಳಗೆ ನುಸುಳಿದ್ರೆ, ಸೊಸೆ ಭೂಮಿಕಾಗೆ ರಂಗೋಲಿ ಕೆಳಗೆ ತೂರುವುದು ಗೊತ್ತಿಲ್ವಾ?  

ಅಮೃತಧಾರೆ ಸೀರಿಯಲ್​ ಇದೀಗ ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ.   ಐ ಲವ್​ ಯೂ ಎಂದು ಹೇಳಲು, ಪ್ರೀತಿಯ ನಿವೇದನೆ ಮಾಡಿಕೊಳ್ಳಲು ಹಿಂಜರಿಯುತ್ತಿದ್ದ ಗೌತಮ್​ ಮತ್ತು ಭೂಮಿಕಾ ಜೋಡಿ ಕೊನೆಗೂ ಪ್ರೀತಿಯನ್ನು ಪರಸ್ಪರ ಹಂಚಿಕೊಂಡೇ ಬಿಟ್ಟಿದ್ದಾರೆ. ಇವರನ್ನು ಬೇರೆ ಬೇರೆ ಮಾಡಲು ಅತ್ತೆ ಶಕುಂತಲಾ ದೇವಿ ಹೂಡುತ್ತಿರುವ ಪ್ಲ್ಯಾನೇ ಗಂಡ-ಹೆಂಡತಿಯನ್ನು ಮತ್ತಷ್ಟು, ಇನ್ನಷ್ಟು ಹತ್ತಿರ ಮಾಡುತ್ತಿದೆ. ಶಕುಂತಲಾದೇವಿ ಏನೇ ಪ್ಲ್ಯಾನ್​ ಮಾಡಿದ್ರೂ ಅದು ಉಲ್ಟಾ ಹೊಡೆಯುತ್ತಲೇ ಇದೆ. ಹನಿಮೂನ್​ಗೆ ಕಳುಹಿಸಿ ಭೂಮಿಕಾಳನ್ನು ಕೊಲೆ ಮಾಡಿಸುವ ಪ್ಲ್ಯಾನ್​ ಮಾಡಿದ್ದಳು ಶಕುಂತಲಾದೇವಿ. ಆದರೆ ಅದು ಕೂಡ ಉಲ್ಟಾ ಹೊಡೆದಿದೆ. ಅದರ ಬದಲು, ಪ್ರೀತಿಯ ನಿವೇದನೆ ಮಾಡಿಕೊಳ್ಳಲು ಒದ್ದಾಡುತ್ತಿದ್ದ ಈ ಎರಡು ಜೀವಗಳು ಇನ್ನಷ್ಟು ಹತ್ತಿರವಾಗಲು ಕುತಂತ್ರದ ಈ ಪ್ಲ್ಯಾನ್​ ಸಹಾಯ ಮಾಡಿದೆ.

ಒಟ್ಟಿನಲ್ಲಿ ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎನ್ನುವ ಹಾಗೆ, ಶಕುಂತಲಾ ದೇವಿ ಸ್ಥಿತಿಯಾಗಿದೆ. ಆದರೂ ಆಕೆ ಗಂಡ-ಹೆಂಡತಿಯನ್ನು ದೂರ ಮಾಡಲು ಸಂಚು ರೂಪಿಸುತ್ತಳೇ ಇದ್ದಾಳೆ. ಪತಿ-ಪತ್ನಿ ಇಬ್ಬರೂ ಒಟ್ಟಾಗಿ ಆನಂದದಿಂದ ಕಾಲ ಕಳೆಯುತ್ತಿರುವ ಸಂದರ್ಭದಲ್ಲಿ ತನಗೆ ಹುಷಾರಿಲ್ಲ ಎಂದು ಸಹೋದರನ ಬಳಿ ಹೇಳಿಸಿ ಗೌತಮ್​ನನ್ನು ವಾವಪ್​ ಕರೆಸಿಕೊಂಡಿದ್ದಾಳೆ ಶಕುಂತಲಾ. ಈ ದಡ್ಡ ಗೌತಮ್​ಗೋ ಈ ಕುತಂತ್ರಿ ಚಿಕ್ಕಮ್ಮನ ಪ್ಲ್ಯಾನ್​ ತಿಳಿಯುತ್ತಲೇ ಇಲ್ಲ. ಬಹುತೇಕ ಸೀರಿಯಲ್​ಗಳಂತೆಯೇ ಈ ವಿಷಯದಲ್ಲಿ ಇಲ್ಲಿಯೂ ನಾಯಕನನ್ನು ದಡ್ಡನನ್ನಾಗಿಯೇ ಬಿಂಬಿಸಲಾಗಿದೆ. ಅಮ್ಮನ ಸ್ಥಾನದಲ್ಲಿರೋ ಚಿಕ್ಕಮ್ಮ ತುಂಬಾ ಒಳ್ಳೆಯವಳು ಎಂದೇ ಅಂದುಕೊಂಡಿದ್ದಾನೆ. ಅಮ್ಮನಿಗೆ ಹುಷಾರಿಲ್ಲ ಎಂದು ತಿಳಿಯುತ್ತಿದ್ದಂತೆಯೇ ಓಡೋಡಿ ಬಂದಿದ್ದಾನೆ.

400 ರೂಪಾಯಿ ಚಾಲೆಂಜ್​ ತೆಗೆದುಕೊಂಡಿರೋ ಸೀತೆಯ ಈ ರಾಮನಿಗೆ ಸಹಾಯ ಮಾಡ್ತೀರಾ?

ಭೂಮಿಕಾಗೆ ಡೌಟ್​ ಶುರುವಾಗಿದೆ. ಅವಳಿಗೆ ಅತ್ತೆಯ ಎಲ್ಲಾ ಸಂಚುಗಳು ಗೊತ್ತಲ್ಲ! ಅದಕ್ಕಾಗಿಯೇ ಅತ್ತೆ ಬೇಕಂತಲೇ ಮಾಡಿರಬೇಕು ಎನ್ನಿಸುತ್ತಿದೆ. ತಡ ಮಾಡದೇ ಆಕೆ ಮನೆಯಲ್ಲಿರುವ ಮಲ್ಲಿಗೆ ಕಾಲ್​  ಮಾಡಿ ಅತ್ತೆಗೆ ಏನಾಯಿತು ಎಂದು ವಿಚಾರಿಸಿದ್ದಾಳೆ. ಅವರಿಗೇನು ಆಗಿದೆ ಆರಾಮಾಗಿಯೇ ಓಡಾಡಿಕೊಂಡು ಇದ್ದಾರಲ್ಲ ಅಂದಿದ್ದಾಳೆ ಮಲ್ಲಿ. ಅಲ್ಲಿಗೆ ಇವೆಲ್ಲಾ ತಂತ್ರ ಎಂದು ಭೂಮಿಗೆ ತಿಳಿಯುತ್ತಿದ್ದಂತೆಯೇ ವೈದ್ಯರನ್ನು ಮನೆಗೆ ಕಳುಹಿಸಿದ್ದಾಳೆ. 

ಡಾಕ್ಟರ್​ ಅನ್ನು ನೋಡಿ ಶಕುಂತಲಾಗೆ ಶಾಕ್​ ಆಗಿದೆ. ಏನಿದು ಎಂದು ಕೇಳಿದ್ದಾಳೆ. ಅದಕ್ಕೆ ಡಾಕ್ಟರ್​ ನಿಮಗೆ ಹುಷಾರು ಇಲ್ವಲ್ಲಾ ಅದಕ್ಕಾಗಿಯೇ ಬಂದಿದ್ದು ಎನ್ನುತ್ತಾಳೆ. ಗಂಡ-ಹೆಂಡತಿಯನ್ನು ಬೇರೆ ಮಾಡಲು ಈ ಅತ್ತೆ ಚಾಪೆ ಕೆಳಗೆ ನುಸುಳಿದ್ರೆ, ಸೊಸೆ ಭೂಮಿಕಾ ರಂಗೋಲಿ ಕೆಳಗೆ ನುಸುಳಿದ್ದಾಳೆ. ಇದನ್ನು ನೋಡಿ ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂತಿದ್ದಾರೆ ಅಭಿಮಾನಿಗಳು. ಬಹುತೇಕ ಸೀರಿಯಲ್​ಗಳಲ್ಲಿ ಸೊಸೆಯನ್ನು ಅಳುಮುಂಜಿ ರೀತಿ ತೋರಿಸಲಾಗುತ್ತದೆ, ಆದರೆ ಇಲ್ಲಿ ಡಿಫರೆಂಟ್​ ಆಗಿ ತೋರಿಸಲಾಗುತ್ತಿದೆ, ಅದಕ್ಕಾಗಿಯೇ ಈ ಸೀರಿಯಲ್​ ಇಷ್ಟವಾಗುವುದು ಅಂತಿದ್ದಾರೆ ಅಭಿಮಾನಿಗಳು. 

ಪುಟ್ಟಕ್ಕನ ಮಕ್ಕಳಿಗೂ ಎಂಟ್ರಿ ಕೊಟ್ಟೇ ಬಿಟ್ಟಳು ಕೊರವಂಜಿ: ನಿಜಕ್ಕೂ ಇವರು ತ್ರಿಕಾಲ ಜ್ಞಾನಿಗಳಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Prema Kavya Serial ವೀಕ್ಷಕರ ನಿಗಿ ನಿಗಿ ಕೋಪಕ್ಕೆ ಗುರಿಯಾಗಿರೋ ಸ್ನೇಹಾ ಯಾರು? ಹಿನ್ನಲೆ ಏನು?
Naa Ninna Bidalaare: ಮಗಳ ರಕ್ಷಣೆಗೆ ಕಾಳಿ ಅವತಾರವೆತ್ತಿದ ಶರತ್​- ಮೈ ಝುಂ ಎನ್ನುವ ರೋಚಕ ಸಂಚಿಕೆ