
ಚಿತ್ರರಂಗದಲ್ಲಿ ಆರೋಪ-ಪ್ರತ್ಯಾರೋಪಗಳು ಹೊಸದೇನಲ್ಲ. ಆದರೆ ಇತ್ತೀಚೆಗೆ ನಟಿ ರೇಣು ಸುಧಿ ಮತ್ತು ನಿರ್ದೇಶಕ ವಿಪಿನ್ ಲಾಲ್ ನಡುವಿನ ಜಗಳ ಬೀದಿಗೆ ಬಂದಿದ್ದು, ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಮೊದಲು ನಿರ್ದೇಶಕರ ಮೇಲೆ "ಕೊಲೆ ಯತ್ನ" ಮತ್ತು "ಅಶ್ಲೀಲ ಚಿತ್ರೀಕರಣ"ದ ಗಂಭೀರ ಆರೋಪ ಮಾಡಿದ್ದ ರೇಣು ಸುಧಿಗೆ, ಈಗ ವಿಪಿನ್ ಲಾಲ್ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. ನಟಿಯ ವರ್ತನೆಯಿಂದ ತನಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಮಾಧ್ಯಮಗಳ ಮುಂದೆ ಬಂದಿದ್ದ ನಟಿ ರೇಣು ಸುಧಿ, ಆಲ್ಬಂ ಶೂಟಿಂಗ್ ವೇಳೆ ನಿರ್ದೇಶಕ ವಿಪಿನ್ ಲಾಲ್ ನನ್ನನ್ನು ಕೆಟ್ಟದಾಗಿ ಚಿತ್ರೀಕರಿಸಿದ್ದಾರೆ, ಕ್ಯಾಮೆರಾ ಆ್ಯಂಗಲ್ ಸರಿ ಇರಲಿಲ್ಲ ಎಂದು ದೂರಿದ್ದರು. ಅಷ್ಟೇ ಅಲ್ಲದೆ, "ಅಲ್ಲಿ ಮೀಡಿಯಾದವರು ಇರದಿದ್ದರೆ ನನ್ನನ್ನು ಕೊಂದು ಹಾಕುತ್ತಿದ್ದರು" ಎಂದು ಗಂಭೀರ ಆರೋಪ ಮಾಡಿದ್ದರು. ಈ ಹೇಳಿಕೆ ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿತ್ತು.
ರೇಣು ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ವಿಪಿನ್ ಲಾಲ್, ಸೆಟ್ನಲ್ಲಿ ನಡೆದ ಅಸಲಿ ಕಥೆಯನ್ನು ಬಿಚ್ಚಿಟ್ಟಿದ್ದಾರೆ. "ನನ್ನ ಹೊಸ ಆಲ್ಬಂನಲ್ಲಿ ನಟಿಸಲು ರೇಣು 17,000 ರೂಪಾಯಿ ಸಂಭಾವನೆ ಕೇಳಿದ್ದರು. ಆದರೆ ಅವರ ಅಶಿಸ್ತಿನಿಂದಾಗಿ ನನಗೆ ಸುಮಾರು 80,000 ರೂಪಾಯಿ ನಷ್ಟವಾಗಿದೆ. ಸೆಟ್ಗೆ ಬಂದ ತಕ್ಷಣ ರೇಣು ನನ್ನ ಬಳಿ ಮದ್ಯ ಮತ್ತು ಸಿಗರೇಟ್ ತಂದುಕೊಡುವಂತೆ ಬೇಡಿಕೆ ಇಟ್ಟರು" ಎಂದು ಆರೋಪಿಸಿದ್ದಾರೆ.
ವಿಪಿನ್ ಅವರ ಪ್ರಕಾರ, ರೇಣು ಸುಧಿ ತಮಗೆ 'ಮ್ಯಾಜಿಕ್ ಮೊಮೆಂಟ್ಸ್' ಮದ್ಯ ಮತ್ತು 'ಐದು ಕಿಂಗ್ಸ್' ಸಿಗರೇಟ್ ಬೇಕೆಂದು ಹಠ ಮಾಡಿದ್ದರು. ನಾನು ಕಳೆದ ಒಂಬತ್ತು ವರ್ಷಗಳಿಂದ ಮದ್ಯಪಾನ ಮಾಡದಿದ್ದರೂ, ಶೂಟಿಂಗ್ಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅಸಿಸ್ಟೆಂಟ್ ಮೂಲಕ ಅವುಗಳನ್ನು ತರಿಸಿಕೊಟ್ಟಿದ್ದೆ ಎಂದು ವಿಪಿನ್ ವಿವರಿಸಿದ್ದಾರೆ.
ಶೂಟಿಂಗ್ ಸೆಟ್ಗೆ ರೇಣು ಸುಧಿ ಅವರೇ ಕೆಲವು ಆನ್ಲೈನ್ ಮೀಡಿಯಾದವರನ್ನು ಕರೆಸಿದ್ದರು. "ರೇಣು ಮತ್ತು ಆ ಮೀಡಿಯಾದವರ ನಡುವೆ ಒಪ್ಪಂದ ಇತ್ತು ಎಂಬುದು ನನಗೆ ಆಮೇಲೆ ತಿಳಿಯಿತು. ಅವರು ಆಲ್ಬಂನ ಪ್ರಚಾರ ಮಾಡುವ ಬದಲಿಗೆ, ರೇಣು ಅವರ ವೈಯಕ್ತಿಕ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದರು. ಮೀಡಿಯಾದವರ ಜೊತೆ ಹೊರಗೆ ಹೋಗಿ ಬಂದ ನಂತರ ರೇಣು ಅವರ ವರ್ತನೆ ವಿಚಿತ್ರವಾಗಿತ್ತು. ಯಾವುದೋ ಅಮಲಿನಲ್ಲಿದ್ದವರಂತೆ ಅವರು ಜೋರಾಗಿ ಕಿರುಚಾಡಲು ಮತ್ತು ಗಲಾಟೆ ಮಾಡಲು ಆರಂಭಿಸಿದರು" ಎಂದು ವಿಪಿನ್ ಲಾಲ್ ಹೇಳಿದ್ದಾರೆ.
ವಿಪಿನ್ ಈ ಹಿಂದೆ 'ಕುಣುಂಗಿ ಕುಣುಂಗಿ' ಎಂಬ ಆಲ್ಬಂ ಮಾಡಿದ್ದರು. ಅದರಲ್ಲಿ ರೇಣು ಸುಧಿ ಮತ್ತು ದಾಸೇಟ್ಟನ್ ಕೋಯಿಕ್ಕೋಡ್ ನಟಿಸಿದ್ದರು. "ಆ ಆಲ್ಬಂ ಹಿಟ್ ಆದ ಕಾರಣಕ್ಕೇ ರೇಣುಗೆ ಬಿಗ್ ಬಾಸ್ ಹೋಗುವ ಅವಕಾಶ ಸಿಕ್ಕಿತು ಎಂದು ನಾನು ನಂಬಿದ್ದೇನೆ. ಆದರೆ ಈಗ ಅವರ ವರ್ತನೆ ಬದಲಾಗಿದೆ. ದಾಸೇಟ್ಟನ್ ಕೂಡ ಸೆಟ್ನಲ್ಲಿ ಹೆಣ್ಣುಮಕ್ಕಳ ನಂಬರ್ ಪಡೆದು ಮೆಸೇಜ್ ಮಾಡುವ ಅಬ್ಯಾಸ ಹೊಂದಿದ್ದರು" ಎಂದು ವಿಪಿನ್ ಬೇಸರ ವ್ಯಕ್ತಪಡಿಸಿದ್ದಾರೆ.
ಗಲಾಟೆ ಅತಿಯಾದಾಗ ಮತ್ತು ರೇಣು ಅವರ ವರ್ತನೆ ಮಿತಿ ಮೀರಿದಾಗ, ನಿರ್ದೇಶಕರು ತಮ್ಮ ಸ್ವಂತ ಊರಿನಲ್ಲಿ ಗೌರವ ಉಳಿಸಿಕೊಳ್ಳಲು ಶೂಟಿಂಗ್ ಪ್ಯಾಕಪ್ ಮಾಡಿದ್ದಾರೆ. "ಒಂದು ದೃಶ್ಯ ಚಿತ್ರೀಕರಿಸುವಷ್ಟರಲ್ಲಿ 80 ಸಾವಿರ ಖರ್ಚಾಗಿತ್ತು. ಆದರೆ ಅಂತಹ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಿರಲಿಲ್ಲ. ದುಡ್ಡಿಗಿಂತ ಜೀವನ ಮತ್ತು ಮಾನ ಮುಖ್ಯ ಎಂದು ನಾನು ಶೂಟಿಂಗ್ ನಿಲ್ಲಿಸಿದೆ" ಎಂದು ವಿಪಿನ್ ಲಾಲ್ ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ, ಈ ವಿವಾದ ಈಗ "ಅವಳ ಆರೋಪ-ಇವನ ಸತ್ಯ" ಎಂಬಂತಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜನ ಯಾರ ಪರವಾಗಿ ನಿಲ್ಲಬೇಕು ಎಂಬ ಗೊಂದಲದಲ್ಲಿದ್ದಾರೆ. ಕಾನೂನು ರೀತ್ಯಾ ಈ ಪ್ರಕರಣ ಯಾವ ಹಂತ ತಲುಪಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.