
ವಾಷಿಂಗ್ಟನ್(ಜ.11): ಕ್ಷುದ್ರಗ್ರಹಗಳಿಂದ ಭೂಮಿಯನ್ನು ರಕ್ಷಿಸುತ್ತದೆ ಎಂದು ನಂಬಲಾಗಿದ್ದ ಗುರು ಗ್ರಹ, ಅಸಲಿಗೆ ಕ್ಷುದ್ರಗ್ರಹಗಳು ಭೂಮಿಯತ್ತ ತಿರುಗುವಂತೆ ಮಾಡುತ್ತದೆ ಎಂಬುದು ಹೊಸ ಸಂಶೋಧನೆಗಳಿಂದ ಬಹಿರಂಗವಾಗಿದೆ.
ಜುಪಿಟರ್ ಶೀಲ್ಡ್ ಥಿಯರಿ(ಗುರು ಕವಚ ಸಿದ್ಧಾಂತ) ಅನ್ವಯ, ಮಂಗಳ ಮತ್ತು ಗುರು ಗ್ರಹದ ನಡುವೆ ಇರುವ ಕ್ಷುದ್ರಗ್ರಹಗಳ ಪಟ್ಟಿ(Asteriod Belt)ಯಿಂದ ಕ್ಷುದ್ರಗ್ರಹಗಳು ಭೂಮಿಗೆ ಬರದಂತೆ ಗುರು ಗ್ರಹ ತಡೆಯುತ್ತದೆ ಎಂದು ನಂಬಲಾಗಿತ್ತು.
ಸುತ್ತುವೆ ನಿನ್ನನು ಹಗಲಿರುಳು: ಗುರುವಿನ ಮೇಲೆ ಬಿತ್ತು ಐಯೋ ನೆರಳು!
ಆದರೆ ಈ ಸಿದ್ಧಾಂತವನ್ನು ಅಲ್ಲಗಳೆದಿರುವ ಖಗೋಳಶಾಸ್ತ್ರಜ್ಞ ಕೆವಿನ್ ಗ್ರೆಜಿಯರ್, ಅಗಾಧ ಗುರುತ್ವಾಕರ್ಷಣೆ ಬಲ ಹೊಂದಿರುವ ಗುರು ಗ್ರಹ ಕ್ಷುದ್ರಗ್ರಹಗಳನ್ನು ಭೂಮಿಯತ್ತ ಚಿಮ್ಮಿಸುತ್ತದೆ ಎಂದು ಹೇಳಿದ್ದಾರೆ.
ಗುರುವಿನ ಗುರುತ್ವ ಬಲದಿಂದ ಖಾಲಿ ಪ್ರದೇಶದಲ್ಲಿ ಹಾರುವ ಕ್ಷುದ್ರಗ್ರಹಗಳು, ಭೂಮಿಯತ್ತ ನುಗ್ಗುವ ಸಂಭವ ಹೆಚ್ಚು ಎಂದು ಕೆವಿನ್ ವಾದಿಸಿದ್ದಾರೆ.
ತನ್ನತ್ತ ಬರುವ ಕ್ಷುದ್ರಗ್ರಹಗಳನ್ನು ಸ್ನೈಪರ್ ಗನ್ನಂತೆ ಶೂಟ್ ಮಾಡಿ ಭೂಮಿಯತ್ತ ತಿರುಗಿಸುವಲ್ಲಿ ಗುರು ಗ್ರಹ ನಿಸ್ಸೀಮ ಎಂದು ಕೆವಿನ್ ಹೇಳಿದ್ದಾರೆ.
ನಡುಗಿ ಹೋದ ಗುರು ಗ್ರಹ: ಡಿಕ್ಕಿ ಹೊಡೆಯಿತೊಂದು ಕ್ಷುದ್ರಗ್ರಹ!
ಈ ವಿದ್ಯಮಾನ ಮಂಗಳ ಗ್ರಹಕ್ಕೂ ಗಂಡಾಂತರಕಾರಿ ಎಂದಿರುವ ಕೆವಿನ್ ನೇತೃತ್ವದ ಸಂಶೋಧನಾ ತಂಡ, ಗುರುವಿನ ಅಗಾಧ ಗುರುತ್ವ ಬಲ ಕ್ಷುದ್ರಗ್ರಹಗಳನ್ನು ಭೂಮಿಯವರೆಗೂ ತಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.