ಕರ್ನಾಟಕದ ಹಲವೆಡೆ ಭಾರೀ ಮಳೆ, ಸಿಡಿಲು ಬಡಿದು ಮಹಿಳೆ ಸಾವು

Published : Sep 03, 2023, 08:00 AM IST
ಕರ್ನಾಟಕದ ಹಲವೆಡೆ ಭಾರೀ ಮಳೆ, ಸಿಡಿಲು ಬಡಿದು ಮಹಿಳೆ ಸಾವು

ಸಾರಾಂಶ

ಕಲ​ಬು​ರ​ಗಿ, ಚಾಮ​ರಾ​ಜ​ನ​ಗರ, ಬೆಂಗ​ಳೂರು ಮತ್ತು ಚಿತ್ರ​ದು​ರ್ಗ​ದಲ್ಲಿ ಕೆಲ​ಕಾಲ ಉತ್ತಮ ಮಳೆ ಸುರಿ​ದಿ​ದೆ. ಕಲ​ಬು​ರ​ಗಿ​ ಜಿಲ್ಲೆ​ಯಾ​ದ್ಯಂತ ಗುಡುಗು ಸಹಿತ ಸಾಧಾ​ರಣ ಮಳೆ​ಯಾ​ಗಿದ್ದು, ಸಿಡಿಲು ಬಡಿ​ದು ಅಫ​ಜ​ಲ್ಪುರ ತಾಲೂ​ಕಿನ ಸಿದ​ನೂರ ಗ್ರಾಮ​ದಲ್ಲಿ ಹೊಲ​ದಲ್ಲಿ ಕೆಲಸ ಮಾಡು​ತ್ತಿದ್ದ ಕಲಾ​ವತಿ ಎಂಬ ಮಹಿಳೆ ಸ್ಥಳ​ದಲ್ಲೇ ಮೃತ​ಪ​ಟ್ಟಿ​ದ್ದಾಳೆ. 

ಬೆಂಗ​ಳೂ​ರು(ಸೆ.03): ರಾಜ್ಯದ ನಾಲ್ಕು ಜಿಲ್ಲೆ​ಗ​ಳ​ಲ್ಲಿ ಶನಿ​ವಾ​ರವೂ ಮಳೆ ಮುಂದು​ವ​ರಿ​ದಿದ್ದು, ಕಲ​ಬು​ರ​ಗಿ​ಯಲ್ಲಿ ಸಿಡಿ​ಲಿಗೆ ಮಹಿ​ಳೆ​ಯೊ​ಬ್ಬರು ಬಲಿ​ಯಾ​ಗಿ​ದ್ದಾ​ರೆ.

ಕಲ​ಬು​ರ​ಗಿ, ಚಾಮ​ರಾ​ಜ​ನ​ಗರ, ಬೆಂಗ​ಳೂರು ಮತ್ತು ಚಿತ್ರ​ದು​ರ್ಗ​ದಲ್ಲಿ ಕೆಲ​ಕಾಲ ಉತ್ತಮ ಮಳೆ ಸುರಿ​ದಿ​ದೆ. ಕಲ​ಬು​ರ​ಗಿ​ ಜಿಲ್ಲೆ​ಯಾ​ದ್ಯಂತ ಗುಡುಗು ಸಹಿತ ಸಾಧಾ​ರಣ ಮಳೆ​ಯಾ​ಗಿದ್ದು, ಸಿಡಿಲು ಬಡಿ​ದು ಅಫ​ಜ​ಲ್ಪುರ ತಾಲೂ​ಕಿನ ಸಿದ​ನೂರ ಗ್ರಾಮ​ದಲ್ಲಿ ಹೊಲ​ದಲ್ಲಿ ಕೆಲಸ ಮಾಡು​ತ್ತಿದ್ದ ಕಲಾ​ವತಿ ಎಂಬ ಮಹಿಳೆ ಸ್ಥಳ​ದಲ್ಲೇ ಮೃತ​ಪ​ಟ್ಟಿ​ದ್ದಾಳೆ. ಇದೇ ವೇಳೆ ಸವಿತಾ ಎಂಬ ಮಹಿ​ಳೆಗೆ ಗಂಭೀರ ಗಾಯ​ಗ​ಳಾ​ಗಿದ್ದು, ಆಸ್ಪತ್ರೆಗೆ ದಾಖ​ಲಿ​ಸ​ಲಾ​ಗಿ​ದೆ.

ಚಿಕ್ಕಮಗಳೂರು: ಕೈಕೊಟ್ಟ ವರುಣದೇವ, ಮಳೆಗಾಗಿ 37 ವರ್ಷದ ಹಿಂದಿನ ಆಚರಣೆಗೆ ಮುಂದಾದ ಮಲೆನಾಡಿಗರು..!

ಇನ್ನು ಚಾಮ​ರಾ​ಜ​ನ​ಗ​ರ ಜಿಲ್ಲೆಯ ಯಳಂದೂರಿನ​ಲ್ಲಿ ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾ​ಕಾರ ಮಳೆ​ಯಿಂದಾಗಿ ಹಲವು ಮನೆ​ಗ​ಳಿಗೆ ನೀರು ನುಗ್ಗಿ ಜನ​ಜೀ​ವನ ಅಸ್ತ​ವ್ಯ​ಸ್ತ​ಗೊಂಡಿ​ದೆ. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆಯಿಂದಾಗಿ ಪಟ್ಟಣದ ಬಸ್‌ ನಿಲ್ದಾಣ ಮತ್ತು ಸಂತೆ ಮಾರುಕಟ್ಟೆ ಬಳಿ ಕೆಲ​ಕಾಲ ಕೃತಕ ಪ್ರವಾಹ ಸೃಷ್ಟಿ​ಯಾ​ಗಿ​ತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೈಸೂರು ರನ್‌ವೇಯಲ್ಲಿ ಸಿದ್ದು, ಡಿಕೆ ಜತೆ ರಾಗಾ ಪ್ರತ್ಯೇಕ ಚರ್ಚೆ
ಸಂಕ್ರಾಂತಿ ದಿನ ನಮ್ಮ ಮೆಟ್ರೋಗೆ ಮತ್ತೊಂದು ರೈಲು ಸೇರ್ಪಡೆ, ಪ್ರಯಾಣಿಕರಿಗೆ ಗುಡ್ ನ್ಯೂಸ್