
ಕೊಪ್ಪಳ (ಆ.30): ರಾಜ್ಯಾದ್ಯಂತ ಮರಳು ಸಮಸ್ಯೆ ಹೋಗಲಾಡಿಸಿ, ಮರಳು ಅಕ್ರಮವನ್ನು ತಡೆಯಲು ಹೊಸ ಮರಳು ನೀತಿಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 45 ಲಕ್ಷ ಟನ್ ಮರಳಿಗೆ ಬೇಡಿಕೆ ಇದೆ. ಎಂ.ಸ್ಯಾಂಡ್ನಿಂದ 30 ಲಕ್ಷ ಟನ್, ನೈಸರ್ಗಿಕವಾಗಿ ನಾಲ್ಕಾರು ಲಕ್ಷ ಟನ್ ಲಭ್ಯವಿದೆ. ಕೊರತೆ ಇರುವ 8-10 ಲಕ್ಷ ಟನ್ ಮರಳನ್ನು ನೀಡುವಲ್ಲಿ ಅಕ್ರಮಗಳು ನಡೆಯುತ್ತಿವೆ. ಇದನ್ನು ನಿಯಂತ್ರಿಸಲು ನೂತನ ಮರಳು ನೀತಿ ಜಾರಿಗೆ ಕರಡು ಸಿದ್ಧವಾಗಿದೆ. ಅದನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಸೂಕ್ತ ಮಾರ್ಪಾಡುಗಳೊಂದಿಗೆ ಶೀಘ್ರದಲ್ಲಿಯೇ ಜಾರಿ ಮಾಡಲಾಗುವುದು ಎಂದರು.
ಗಣಿ ಸಚಿವರ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಬೀಳುವುದೇ ಕಡಿವಾಣ..!
ಮರಳು ಹಂತಗಳನ್ನು ಗುರುತಿಸಿ, ಕೆಲವೊಂದು ಹಂತಗಳನ್ನು ಹಟ್ಟಿಗೋಲ್ಡ್ ಮೈನ್ಸ್ ಕಂಪನಿಗೆ ನೀಡುವ ಪ್ರಸ್ತಾಪ ಇದೆ. ಹೀಗಾಗಿ, ಹೇರಳವಾಗಿ ದೊರೆಯುವ ಮರಳಿನ ಬ್ಲಾಕ್ ನಿರ್ಮಾಣ ಮಾಡಿ, ಹೆಚ್ಚು ಹೆಚ್ಚು ಪೂರೈಕೆಯಾಗುವಂತೆ ಮಾಡಲಾಗುತ್ತದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ