ರಮೇಶ್ ನನ್ನ ವ್ಯವಹಾರ ನೋಡಿಕೊಳ್ಳುತ್ತಿರಲಿಲ್ಲ: ಮಾಜಿ ಡಿಸಿಎಂ ಪರಮೇಶ್ವರ್

Published : Oct 14, 2019, 08:02 AM ISTUpdated : Oct 14, 2019, 03:18 PM IST
ರಮೇಶ್ ನನ್ನ ವ್ಯವಹಾರ ನೋಡಿಕೊಳ್ಳುತ್ತಿರಲಿಲ್ಲ: ಮಾಜಿ ಡಿಸಿಎಂ ಪರಮೇಶ್ವರ್

ಸಾರಾಂಶ

ಆತ ಆಪ್ತ ಸಹಾಯಕನಾಗಿಯಷ್ಟೇ ಕೆಲಸ ಮಾಡುತ್ತಿದ್ದ| ರಮೇಶ್ ನನ್ನ ವ್ಯವಹಾರ ನೋಡಿಕೊಳ್ಳುತ್ತಿರಲಿಲ್ಲ: ಮಾಜಿ ಡಿಸಿಎಂ ಪರಮೇಶ್ವರ್

ಬೆಂಗಳೂರು[ಅ.14]: ನಮ್ಮ ವ್ಯವಹಾರವನ್ನು ಆಪ್ತ ಸಹಾಯಕ ರಮೇಶ್ ನೋಡಿಕೊಳ್ಳುತ್ತಿದ್ದರು ಎಂಬುದು ಸುಳ್ಳು. ಒಬ್ಬ ಆಪ್ತ ಸಹಾಯಕ ವ್ಯವಹಾರ ನೋಡಿಕೊಳ್ಳಲು ಆಗುತ್ತದೆಯೇ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಭಾನುವಾರ ಸದಾಶಿವನಗರ ದಲ್ಲಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಅವರನ್ನು ವಿಚಾರಣೆಗಾಗಿ ಐಟಿ ಅಧಿಕಾರಿಗಳು ಕರೆದುಕೊಂಡು ಹೊರಗೆ ಹೋದರು. ಎಲ್ಲಿ ಹೋದರು, ಏನು ವಿಚಾರಣೆ ಮಾಡಿದರು ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ.

'ರಮೇಶ್ ಸಾವಿಗೆ ವಿತ್ತ ಸಚಿವೆ ಕಾರಣ, ರಾಜ್ಯಕ್ಕೆ ಬಂದ್ರೆ ಬಹಿಷ್ಕಾರ'

ವಿಚಾರಣೆ ಬಳಿಕ, ವಿಚಾರಣೆ ಮುಗಿದಿದ್ದು ಮನೆಗೆ ಹೋಗುತ್ತಿರುವುದಾಗಿ ರಮೇಶ್ ಕರೆ ಮಾಡಿ ಮನೆಗೆ ಹೋಗಿ ಬರುತ್ತೀನಣ್ಣ ಎಂದಿದ್ದ. ಅದೇ ರಮೇಶ್‌ನ ಕೊನೆ ಮಾತು ಎಂದು ನೋವು ತೋಡಿಕೊಂಡರು.

ಆಪ್ತ ಸಹಾಯಕನಾಗಿದ್ದ ರಮೇಶ್ ತುಂಬಾ ಒಳ್ಳೆಯ ಹುಡುಗ ಹಾಗೂ ಪ್ರಾಮಾಣಿಕ. ನಮ್ಮ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಂದ ವಿಚಾರಣೆ ಆಗುತ್ತಿದ್ದಾಗ ಎರಡು ದಿನ ರಮೇಶ ಹಾಗೂ ಕೇಶವ ಇಬ್ಬರೂ ನಮ್ಮ ಮನೆಯಲ್ಲೇ ಇದ್ದರು. ಆದಾಯ ತೆರಿಗೆ ಅಧಿಕಾರಿಗಳು ರಮೇಶ್ ಅವರನ್ನು ಕರೆದುಕೊಂಡು ಹೋದ ಬಳಿಕವೂ ಧೈರ್ಯ ವಾಗಿರು ಏನೂ ಆಗುವುದಿಲ್ಲ ಎಂದು ಹೇಳಿದ್ದೆ. ರಮೇಶ್ ನಮ್ಮ ಬಳಿ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದನೇ ಹೊರತು ಬೇರೆನೂ ವ್ಯವಹಾರ ನೋಡಿಕೊಳ್ಳುತ್ತಿರಲಿಲ್ಲ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏನು ಪ್ರಶ್ನೆ ಕೇಳಿದರು ಎಂಬುದು ಗೊತ್ತಿಲ್ಲ. ಒಬ್ಬ ಆಪ್ತ ಸಹಾಯಕ ವ್ಯವಹಾರ ನೋಡಿಕೊಳ್ಳುತ್ತಾನೆ ಎಂದರೆ ನಂಬುವುದಕ್ಕೆ ಆಗುತ್ತದೆಯೇ ಎಂದು ಹೇಳಿದರು.

ರಮೇಶ ಆತ್ಮಹತ್ಯೆ ಪ್ರಕರಣ ತಿರುಗಿಸೋ ಹುನ್ನಾರ: ಶೆಟ್ಟರ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ